ಬೂದು ತಲೆಯ ಹುಳಗುಳಕ 


Team Udayavani, Mar 24, 2018, 2:26 PM IST

36699.jpg

 ಈ ಪಕ್ಷಿಯನ್ನು ನೀಲಿತಲೆ ಪಚ್ಚೆಹಸಿರು ಬೆನ್ನಿನ ಹುಳ ಹಿಡುಕ ಎಂದೂ ಕರೆಯುತ್ತಾರೆ. GRAY -headed  Flaycatcher (Culicicipa  ceylonensis)  ( Swainson) R Sparrow +
 ಬೂದು ತಲೆಯ ಕೆನರೀ ಪ್ಲಾಯ್‌ ಕ್ಯಾಚರ್‌ ಎಂಬ ಹೆಸರೂ ಈ ಪಕ್ಷಿಗಿದೆ.  ಕೆನರೀ ಎಂದರೆ ಸುಂದರ ಹಾಡು ಹಕ್ಕಿ ಎಂದು ಅರ್ಥ. ಉತ್ತರ ಕನ್ನಡ ಪಶ್ಚಿಮ ಘಟ್ಟದ ಬೆಟ್ಟದ ಭಾಗವನ್ನು ಕೆನರಾ ವೃತ್ತ , ಕಾನಾಡಾ ವೃತ್ತ ಎಂದು ಹಳ್ಳಿಗರು ಕರೆಯುವುದಿದೆ. ಈ ಭಾಗದ ಎತ್ತರದ ದೊಡ್ಡ ಹಸಿರು ಮರಗಳಿಂದ ಕೂಡಿದ ಭಾಗದಲ್ಲಿ ಈ ಹಕ್ಕಿ ಹೆಚ್ಚಾಗಿ ತನ್ನ ಇರುನೆಲೆ ಮಾಡಿಕೊಂಡಿದೆ ಎಂಬ ಅರ್ಥದಲ್ಲೂ ಈ ಹಕ್ಕಿಗೆ  ಬೂದು ತಲೆಯ ಕೆನರೀ ಹಕ್ಕಿ ಎಂಬ ಹೆಸರು ಒಪ್ಪುವುದು. ಇದು ಬೂದು ತಲೆ, ಎದೆ, ಇರುವ ಹಕ್ಕಿ . ರೆಕ್ಕೆ ಬೆನ್ನು,  ಬಾಲ -ಪಾಚಿ ಹಸಿರು ಬಣ್ಣವಿದೆ. ತಿಳಿ ಹಳದಿ ಬಣ್ಣ ಹೊಟ್ಟೆಯ ಭಾಗದಲ್ಲಿದೆ. ಚಿಕ್ಕ ತಿಳಿ ಗುಲಾಬಿ ಬಣ್ಣದ ಕಾಲು ಇರುವುದರಿಂದ ಇತರ ಹುಳ ಗುಳಕ ಹಕ್ಕಿಯ ಗುಂಪಿನಲ್ಲಿ ಇದನ್ನು ಪ್ರತ್ಯೇಕವಾಗಿ ಗುರುತಿಸುವುದು ಸುಲಭ. ಇದು  ‘ಸ್ಟೆನೋಸ್ಟಿರಿಡಿಯಾ’ ಕುಟುಂಬಕ್ಕೆ ಸೇರಿದ ಹಕ್ಕಿ.  9 ಸೆಂ.ಮೀ ದೊಡ್ಡದಿರುತ್ತದೆ.  ಇದರ ತಲೆ ಸ್ವಲ್ಪ ಚಪ್ಪಟೆಯಾಗಿಯೂ -ಚೌಕಾಕಾರ ಆಗಿಯೂ ಇರುತ್ತದೆ.  

ಪಶ್ಚಿಮ ಘಟ್ಟದ ಭಾಗ, ನೀಲಗಿರಿ ಬೆಟ್ಟ, ಮಧ್ಯ ಹಾಗೂ ಪೂರ್ವ ಭಾಗದಲ್ಲಿ- ಸ್ವಲ್ಪ ಬಣ್ಣದಲ್ಲಿ ವ್ಯತ್ಯಾಸ ಇರುವ ಮತ್ತು ಆಕಾರದಲ್ಲೂ ಸ್ವಲ್ಪ ದೊಡ್ಡದು ಚಿಕ್ಕದು ಇರುವ ಪ್ರಬೇಧ ಕಂಡಿದೆ. ಇವುಗಳ ಸ್ವಭಾವ , ಕೂಗು, ಕುಳಿತುಕೊಳ್ಳುವ ರೀತಿ ಒಂದೇ ಇರುತ್ತದೆ.  

ಇವೆಲ್ಲಕ್ಕಿಂತಲೂ ಬೇರೆ ರೀತಿ ಬಣ್ಣ ಬೂದು ತಲೆಯ ಪಾಚಿ ಹಸಿರನ ಮೈ ಬಣ್ಣ ಇರುವುದರಿಂದ- ಬೂದು ತಲೆಯ ಕೆನರೀ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದು. ಇದೊಂದು ಹಾಡು ಹಕ್ಕಿ. ಸುಮಾರು 18 ರೀತಿಯ ಹುಳ ಹಿಡುಕ ಹಕ್ಕಿಯನ್ನು ಗುರುತಿಸಲಾಗಿದೆ. ಇವೆಲ್ಲ ನಿತ್ಯ ಹರಿದ್ವರ್ಣ ಕಾಡು, ಇಲ್ಲವೇ ದೊಡ್ಡ ಮರಗಳಿರುವ ಎತ್ತರದ ಪರ್ವತ ಪ್ರದೇಶ,  ಅಂದರೆ ಕರ್ನಾಟಕದ ಕುಮಟಾದ ಮೇದಿನಿ, ಹೊನ್ನಾವರದ ಕರಿಕಾನ ಪರಮೇಶ್ವರಿ ಗುಡ್ಡದ ಬೆಟ್ಟದ ಪ್ರದೇಶ ಮತ್ತು ಚಿಕ್ಕ ಝರಿ ಹರಿವಲ್ಲಿ ಕಾಣಿಸುತ್ತವೆ. ದೊಡ್ಡ ಮರಗಳಿರುವ ಬೆಟ್ಟ ಪ್ರದೇಶವನ್ನು ಈ ಹಕ್ಕಿ ಇರುನೆಲೆ ಮಾಡಿಕೊಂಡಿರುತ್ತದೆ.  ತಂತಿ, ಟೆಲಿಗ್ರಾಪ್‌ ಅಥವಾ ಎತ್ತರದ ಮರದ ತುಟ್ಟ ತುದಿಯ ಟೊಂಗೆಯಲ್ಲಿ ಕುಳಿತಿರುವುದು. ಅಲ್ಲಿಂದಲೇ ಹಾರಿ-ಹಾರಿಕೆಯಲ್ಲೆ ರೆಕ್ಕೆ ಹುಳ ಹಿಡಿದು- ತಿರುಗಿ ಬಂದು ಮರದ ಟೊಂಗೆ ,ಇಲ್ಲವೇ ಕಲ್ಲು ಬಂಡೆಗೆ ಬೇಟೆಯನ್ನು ಹಿಡಿದು ಚಚ್ಚಿ ಸಾಯಿಸಿ ತಿನ್ನುವುದು ಇದರ ಬೇಟೆಯ ಪರಿ. ಹಿಮಾಲಯದ ಪೂರ್ವ ಭಾಗ, ಮೈನಾವರಗಳಲ್ಲಿ ಮರಿ ಮಾಡಿ ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುವ ಈ ಜಾತಿಯ ಉಪತಳಿ ಸಹ ಇರುವುದು ದಾಖಲಾಗಿದೆ. ಈ ಹಕ್ಕಿಯ ಬಣ್ಣ ಹೆಚ್ಚು ಡಾರ್ಕ್‌ ಇರುವುದರಿಂದ ಇದನ್ನು ಭಾರತದ ಪ್ರಾದೇಶಿಕ ಹಕ್ಕಿಗಿಂತ ಬೇರೆ ಎಂದು ಗುರುತಿಸಬಹುದು. ಥೈಲಾಂಡಿನಿಂದ ಬರುವ ಹಕ್ಕಿಯನ್ನು ಅದರ ದೇಹ ಲಕ್ಷಣ ಆಧರಿಸಿ ಇದು ಉಪ ತಳಿ ಎಂದು ಹೆಸರಿಸಲಾಗಿದೆ. 

 ಸೆಪ್ಟೆಂಬರ್‌, ಮಾರ್ಚ್‌ ಮರಿಮಾಡುವ ಸಮಯ. ಈ ಹಕ್ಕಿಗಳು ಸಮತಟ್ಟಾದ ಕಾಡು -ಕಾಡಿನ ತಪ್ಪಲಿನಲ್ಲಿ ಕಾಣುತ್ತವೆ. ಸಾಮಾನ್ಯವಾಗಿ ನೀರಿನ ಝರಿ, ಚಿಕ್ಕಹಳ್ಳ ಪ್ರದೇಶದಲ್ಲಿ ರೆಕ್ಕೆ ಹುಳಗಳಾದ ಇರುವೆ, ಗೊದ್ದ, ಕಪ್ಪಿರುವೆ, ಕೊಣಜ, ಇವುಗಳ ಮೊಟ್ಟೆ ಇಲ್ಲವೇ ರೆಕ್ಕೆ ಹುಳಗಳನ್ನು ಹಿಡಿಯುತ್ತಾ ಇರುತ್ತವೆ. ರೆಕ್ಕೆ ಹುಳ, ಮರಕೊರೆವ ಹುಳುಗಳನ್ನು ನಿಯಂತ್ರಿಸುವಲ್ಲಿ ಇವುಗಳ ಪಾತ್ರ ಹಿರಿದು. ಇದರಿಂದ ಕಾಡಿನ ಮರಗಳನ್ನು ಉಳಿಸುವಲ್ಲಿ ಇವುಗಳ ಪಾತ್ರ ಮುಖ್ಯವಾಗುತ್ತದೆ.  ತನ್ಮೂಲಕ ಮಾನವನಿಗೆ ಹಣ್ಣು ನೀಡುವ ಅನೇಕ ಮರಗಳ ಉಳಿಯುವಿಕೆಗೂ ಇವು ಉಪಕಾರ ಮಾಡುತ್ತವೆ. ಈ ಹಕ್ಕಿ ಒಂದೇ ಗಂಡಿನ ಜೊತೆ ಸಂಸಾರ ಮಾಡುವುದು ಈ ಹಕ್ಕಿಯ ವಿಶೇಷ.  ಪ್ರಣಯ ಸಮಯದಲ್ಲಿ ಗಂಡು 30 ಮೀ ವರೆಗೆ ವೃತ್ತಾಕಾರದಲ್ಲಿ ಹಾರುತ್ತಾ, ತಿರುಗುತ್ತಾ, ಭಿನ್ನ ಆಕಾರದಲ್ಲಿ ಗಿರಕಿ ಹೊಡೆಯುತ್ತ ಪ್ರಣಯದ ಆಟ ಪ್ರದರ್ಶಿಸುತ್ತದೆ.  2500 ಮೀ ಎತರದ ಕಾಡಿನ ಭಾಗದಲ್ಲಿ ಚಿಕ್ಕ ಅರ್ಧ ಕಪ್ಪಿನ ಆಕಾರದದಲ್ಲಿ ಗೂಡು ಮಾಡಿ -ಅದಕ್ಕೆ ಜೇಡದ ಬಲೆ ಸುತ್ತಿ ಬಿಗಿಮಾಡಿ ಟೊಂಗೆಗೆ ಅಂಟಿಸುತ್ತದೆ. 

 ಮೊಟ್ಟೆಯ ದಪ್ಪ ಭಾಗದಲ್ಲಿ -ಬೂದು ಮಿಶ್ರಿತ ಹಳದಿ ಬಣ್ಣದ ಬಳೆಯಂತೆ ಮಚ್ಚೆ ಇರುತ್ತದೆ.  ಬೂದು-ಕ್ರೀಂ ಬಣ್ಣದ 3-4 ಮೊಟ್ಟೆ ಇಡುವುದು. 5 ನೊಟ್‌ ಇರುವ ಸುಂದರ ಸಿಳ್ಳೆ ದನಿ ಸಹ ಈ ಸಮಯದಲ್ಲಿ ಹೊಡೆಯುತ್ತದೆ. ಇದರ ದನಿಯ ಭಿನ್ನತೆ, ಗಂಡು ಹೆಣ್ಣು ಸಂಭಾಷಣೆ ಮಾಡುವ ಬಗೆ, ಮರಿಗಳಿಗೆ ಅಪಾಯ ಬಂದಾಗ ಹೊಡಿಸುವ ದನಿ, ಈ ಹಕ್ಕಿಯ -ದನಿಯಿಂದ ಪರಿಸರದ ಮೇಲೆ, ಮಾನವನ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುವುದು ಎಂಬುದರ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. 

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.