ಹಸಿರಿ ಗಿರಿಯ ಮೇಲೆ ಮುಳ್ಳಯ್ಯನ ಓಂಕಾರ
Team Udayavani, Nov 30, 2019, 6:06 AM IST
ಬೆಟ್ಟಗಳು, ಶಿಖರಗಳು ಭೂಮಿಯ ಉತ್ತುಂಗ ತಾಣ. ಆ ತಾಣದಿಂದಲೇ ಬದುಕಿನ ಉತ್ತುಂಗತೆ ಕಂಡುಕೊಳ್ಳುವವರು ಅಧ್ಯಾತ್ಮ ಸಾಧಕರು. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯೂ ಅಂಥದ್ದೇ ಒಂದು ಪುಣ್ಯ ಧ್ಯಾನ ಧಾಮ. ಮುಳ್ಳಯ್ಯ ಎಂಬ ಅಧ್ಯಾತ್ಮ ಸಾಧಕ ಈ ಶಿಖರದ ತುದಿಯಲ್ಲಿ ಬಹಳ ವರ್ಷಗಳ ಕಾಲ ತಪಸ್ಸಿಗೆ ಕುಳಿತಿದ್ದರಂತೆ.
ಜನವಸತಿ ಇಲ್ಲದೆ, ಕೇವಲ ಮುಳ್ಳಯ್ಯ ಮಾತ್ರವೇ ಇಲ್ಲಿ ವಾಸಿಸುತ್ತಿದ್ದರಿಂದ ಮುಳ್ಳಯ್ಯನ ಬೆಟ್ಟ ಅಂತಲೇ ಜನ ಕರೆಯುತ್ತಿದ್ದರಂತೆ. ಕಾಲಕ್ರಮೇಣ ಈ ಬೆಟ್ಟಕ್ಕೆ “ಮುಳ್ಳಯ್ಯನ ಗಿರಿ’ ಎಂಬ ಹೆಸರು ಬಂತು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಈಗಲೂ ಇಲ್ಲಿ ಮುಳ್ಳಯ್ಯ ಸ್ವಾಮಿಯ ದೇಗುಲವನ್ನು ನೋಡಬಹುದು. ದತ್ತಪೀಠದ ಸಾಲಿನಲ್ಲಿ ಬರುವ ಶಿಖರವಿದು.