ಸಾವಿನಿಂದ ಪಾರಾದ ಶುನಃಶೇಪ!


Team Udayavani, Apr 27, 2019, 6:05 AM IST

Bahu-Pallavi

“ಹಿರಿಯ ಮಗನನ್ನು ಯಾವ ತಂದೆಯೂ ಬಿಟ್ಟು ಕೊಡಲಾರ’ ಎಂದು ಋಚೀಕ ಮುನಿ ಹೇಳಿದನು. ಕಿರಿಯ ಮಕ್ಕಳೆಂದರೆ ಎಲ್ಲ ಅಮ್ಮಂದಿರಿಗೂ ಅತಿಯಾದ ಪ್ರೀತಿ ಎಂದು ಋಚೀಕನ ಪತ್ನಿ ನುಡಿದಳು. ಮಧ್ಯದವನಾಗಿದ್ದ ಶುನಃಶೇಪ, ಅಪ್ಪ-ಅಮ್ಮ ಇಬ್ಬರಿಗೂ ಬೇಡವಾದವ ನಾನು ಎಂದು ನೊಂದುಕೊಂಡ…

ವಿಶ್ವಾಮಿತ್ರರು ತಮ್ಮ ತಪಸ್ಸಿನ ಬಲದಿಂದ ತ್ರಿಶಂಕುವಿನ ಇಚ್ಛೆಯನ್ನು ಪೂರ್ಣಗೊಳಿಸಿದ ಬಳಿಕ, ದಕ್ಷಿಣ ದಿಕ್ಕಿನಲ್ಲಿ ಮಾಡಿದ ತಪಸ್ಸಿಗೆ ವಿಘ್ನಗಳು ಉಂಟಾದವು. ಇದರಿಂದ ಚಿಂತಿತರಾದ ಅವರು ಬೇರೆ ದಿಕ್ಕಿಗೆ ಹೋಗಿ ತಪಸ್ಸನ್ನು ಪೂರ್ಣಗೊಳಿಸುವ ಬಗ್ಗೆ ಚಿಂತಿಸಿದರು. ಅದರಂತೆ ಪತ್ನಿ , ಪುತ್ರ, ಶಿಷ್ಯರಿಂದ ಕೂಡಿಕೊಂಡು, ಪುಷ್ಕರದ ಕಡೆಗೆ ಹೋಗಿ ಕೇವಲ ಫ‌ಲ, ಜಲಾದಿಗಳನ್ನು ಸ್ವೀಕರಿಸುತ್ತಾ ಕಠಿಣವಾದ ತಪಸ್ಸನ್ನು ಮಾಡಲು ಪ್ರಾರಂಭಿಸಿದರು.

ಇದೇ ಸಮಯದಲ್ಲಿ ಅಯೋಧ್ಯೆಯ ಮಹಾರಾಜನಾದ ಅಂಬರೀಷನು ಒಂದು ಯಜ್ಞದ ಸಿದ್ಧತೆಯಲ್ಲಿ ತೊಡಗಿದ್ದನು. ಆಗ ಇಂದ್ರನು ಅಂಬರೀಷನ ಯಜ್ಞದ ಪಶುವನ್ನು ಕದ್ದುಬಿಟ್ಟನು. ಆಗ ಪುರೋಹಿತರು- “ಎಲೈ ರಾಜನೇ ! ನಿನ್ನ ದುರ್ನೀತಿಯಿಂದಾಗಿ ಇಲ್ಲಿದ್ದ ಯಜ್ಞ ಪಶುವು ಕಳೆದುಹೋಗಿದೆ. ಯಾವ ರಾಜನು ತನ್ನ ಯಜ್ಞ ಪಶುವನ್ನು ಬೇಕಾದ ರೀತಿಯಲ್ಲಿ ಸಂರಕ್ಷಿಸಲು ಅಸಮರ್ಥನಾಗುವನೋ ಅವನನ್ನು ಅನೇಕ ದೋಷಗಳು ನಾಶ ಮಾಡಿ ಬಿಡುತ್ತವೆ. ಯಜ್ಞದ ಕರ್ಮವು ಪ್ರಾರಂಭವಾಗುವ ಮೊದಲೇ, ಕಾಣೆಯಾಗಿರುವ ಯಜ್ಞ ಪಶುವನ್ನು ಹುಡುಕಿ ಬೇಗನೆ ಇಲ್ಲಿಗೆ ತೆಗೆದು ಕೊಂಡು ಬಾ. ಅದು ಸಾಧ್ಯವಾಗದಿದ್ದಲ್ಲಿ ಅದರ ಪ್ರತಿನಿಧಿಯಾಗಿ ಒಬ್ಬ ಬಾಲಕನನ್ನು ಖರೀದಿಸಿ ಕರೆದುಕೊಂಡು ಬಾ’ ಎಂದು ಸೂಚಿಸಿದರು.

ಪುರೋಹಿತರ ಮಾತಿನಂತೆ ರಾಜ, ಸಹಸ್ರಾರು ಗೋವುಗಳನ್ನೂ, ಮುತ್ತು, ರತ್ನ, ಸ್ವರ್ಣಾದಿಗಳನ್ನೂ ಕೊಟ್ಟು ಬಾಲಕನನ್ನು ಖರೀದಿಸಲು ಹೊರಟನು. ಆದೇ ಪ್ರಕಾರ, ಬೇರೆ ಬೇರೆ ದೇಶ, ನಗರಗಳಲ್ಲಿ, ವನಗಳಲ್ಲಿ ಹಾಗೂ ಪವಿತ್ರವಾದ ಆಶ್ರಮಗಳಲ್ಲಿ ತಮಗೆ ಬೇಕಾದ ಬಾಲಕನನ್ನು ಹುಡುಕುತ್ತಾ, ಋಚೀಕ ಮುನಿಗಳು ತಪಸ್ಸು ಮಾಡುತ್ತಿರುವ ಬೃಗುತುಂಗ ಪರ್ವತದ ತಪ್ಪಲಿಗೆ ಬಂದನು. ಅಲ್ಲಿ, ಪತ್ನಿ ಹಾಗೂ ಪುತ್ರರಿಂದ ಕೂಡಿ ಧ್ಯಾನದಲ್ಲಿರುವ ಋಚೀಕ ಮುನಿಯನ್ನು ಕಂಡು, ಅವರಿಗೆ ನಮಸ್ಕರಿಸಿ, ತಾನು ಬಂದ ಉದ್ದೇಶವನ್ನು ತಿಳಿಸಿದನು.

ಹತ್ತಾರು ದೇಶಗಳನ್ನು ಸುತ್ತಿಬಂದರೂ ಯಜ್ಞಕ್ಕೆ ಬಲಿಯಾಗಲು ಒಪ್ಪುವ ಒಬ್ಬನೇ ಒಬ್ಬ ಬಾಲಕನೂ ನನಗೆ ಗೋಚರಿಸಲಿಲ್ಲ. ಪರಮ ಸಾತ್ವಿಕರಾದ ತಾವು ನನ್ನ ಮೇಲೆ ದಯೆಯನ್ನು ತೋರಿ ಒಂದು ಲಕ್ಷ ಗೋವುಗಳನ್ನು ,ಅಮಿತವಾದ ಮುತ್ತು , ರತ್ನ, ಸ್ವರ್ಣಾದಿಗಳನ್ನೂ ಸ್ವೀಕರಿಸಿ ತಮ್ಮ ಒಬ್ಬ ಪುತ್ರನನ್ನು ನನಗೆ ದಯಪಾಲಿಸಬೇಕೆಂದು ವಿನಮ್ರವಾಗಿ ಬೇಡಿದನು.

ಆಗ ಋಚೀಕನು, “ನರಶ್ರೇಷ್ಠನೇ ! ನಾನು ನನ್ನ ಜೇಷ್ಠ ಪುತ್ರನನ್ನು ಎಂದಿಗೂ ಮಾರುವುದಿಲ್ಲ’ ಎಂದರು. ಋಷಿ ಪತ್ನಿಯು ಬಂದು, “ರಾಜನೇ ! ಜೇಷ್ಠಪುತ್ರನನ್ನು ಯಾವುದೇ ಕಾರಣಕ್ಕೂ ಮಾರುವುದು ಯೋಗ್ಯವಲ್ಲವೆಂದು ಭಾರ್ಗವರು ಹೇಳಿದ್ದಾರೆ. ಅದೇ ಪ್ರಕಾರ, ಎಲ್ಲರಿಗಿಂತ ಕಿರಿಯ ಪುತ್ರನು ನನಗೆ ಬಹಳ ಪ್ರಿಯನಾಗಿರುವುದರಿಂದ ಆತನನ್ನು ನಿಮಗೆ ಕೊಡಲಾರೆನು’ ಎಂದು ಹೇಳಿದಳು.

ಆಗ ನಡುವಣ ಪುತ್ರನಾದ ಶುನಃಶೇಪನು-ರಾಜನೇ, ತಂದೆಯು ಹಿರಿಯವನನ್ನೂ, ತಾಯಿಯು ಕಿರಿಯವನನ್ನೂ ಮಾರಲು ಒಪ್ಪದಿರುವುದರಿಂದ ಇವರಿಬ್ಬರ ದೃಷ್ಟಿಯಲ್ಲಿ ಮಧ್ಯದವನಾದ ನಾನು ಕ್ರತುಪಶುವಾಗಲು ಯೋಗ್ಯನಾಗಿದ್ದೇನೆ. ಆದ್ದರಿಂದ ನೀನು ನನ್ನನ್ನೇ ಕರೆದುಕೊಂಡು ಹೋಗು’ ಎಂದು ಅಸಹಾಯಕನಾಗಿ ಹೇಳಿದನು.

ಇದನ್ನು ಕೇಳಿದ ಮಹಾರಾಜನು ಸಂತೋಷಗೊಂಡು, ಅಪರಿಮಿತವಾದ ಸ್ವರ್ಣ, ಮುತ್ತು, ರತ್ನಾದಿಗಳನ್ನೂ, ಸಹಸ್ರಾರು ಗೋವುಗಳನ್ನೂ ಋಷಿದಂಪತಿಗಳಿಗೆ ಒಪ್ಪಿಸಿ, ಅವರ ಒಪ್ಪಿಗೆಯೊಂದಿಗೆ ಶುನಃಶೇಪನನ್ನು ಕರೆದುಕೊಂಡು ಹೊರಟನು. ಬಹಳ ದೂರದ ಪ್ರಯಾಣದ ಬಳಿಕ ಮಧ್ಯಾಹ್ನದ ಸಮಯಕ್ಕೆ ಅಂಬರೀಷನು ಪುಷ್ಕರ ತೀರ್ಥದ ಬಳಿಗೆ ಬಂದು ಅಲ್ಲಿ ವಿಶ್ರಾಂತಿ ಪಡೆಯತೊಡಗಿದನು.

ಆಗ ಶುನಃಶೇಪನು ಜ್ಯೇಷ್ಠ ಪುಷ್ಕರದಲ್ಲಿ ಋಷಿಗಳೊಂದಿಗೆ ತಪಸ್ಸನ್ನಾಚರಿಸುತ್ತಿದ್ದ ವಿಶ್ವಾಮಿತ್ರರನ್ನು ಕಂಡು, ಹಸಿವು ಬಾಯಾರಿಕೆಯಿಂದ ಬಳಲಿ ಅವರ ತೊಡೆಯ ಮೇಲೆ ಬಿದ್ದುಬಿಟ್ಟನು. ಆಗ ಮುನಿಗಳು ಅವನನ್ನು ಉಪಚರಿಸಲು, ಶುನಃಶೇಪನು ನನಗೆ ತಂದೆ, ತಾಯಿ ಬಂಧು ಬಾಂಧವರು ಯಾರೂ ಇಲ್ಲ, ನೀವೇ ನನ್ನ ರಕ್ಷಿಸಬೇಕು ಎಂದು ಕೇಳಿಕೊಂಡನು.

ಶುನಃಶೇಪನ ಮಾತುಗಳನ್ನು ಕೇಳಿದ ವಿಶ್ವಾಮಿತ್ರರು ಅವನನ್ನು ಸಾಂತ್ವನಗೊಳಿಸಿ, ತನ್ನ ಮಕ್ಕಳನ್ನು ಕುರಿತು “ಮಕ್ಕಳಿರಾ ! ಈ ಮುನಿಕುಮಾರನು ನನ್ನಿಂದ ರಕ್ಷಣೆಯನ್ನು ಬಯಸುತ್ತಿದ್ದಾನೆ. ನೀವು ನಿಮ್ಮ ಜೀವ ಕೊಟ್ಟು ಇವನನ್ನು ರಕ್ಷಿಸಿ’ ಎಂದು ಹೇಳಿದನು. ಆಗ ಮಧುತ್ಛಂದಾದಿ ವಿಶ್ವಾಮಿತ್ರರ ಮಕ್ಕಳು ತಂದೆಯನ್ನು ಕುರಿತು -“ನೀವು ನಿಮ್ಮ ಪುತ್ರರನ್ನು ಬಲಿಕೊಟ್ಟು ಬೇರೆಯವರ ಮಗನನ್ನು ಹೇಗೆ ರಕ್ಷಿಸುವಿರಿ ?’ ಎಂದು ಅವಹೇಳನಕಾರಿಯಾಗಿ ಮಾತನಾಡಿದರು. ಇದನ್ನು ಕೇಳಿದ ವಿಶ್ವಾಮಿತ್ರರು ಸಿಟ್ಟಿನಿಂದ “ನನ್ನ ಆಜ್ಞೆಯನ್ನು ಉಲ್ಲಂಘಿಸಿದ ನೀವೆಲ್ಲರೂ ವಸಿಷ್ಠರ ಪುತ್ರರಂತೆ ನಾಯಿಯ ಮಾಂಸ ತಿನ್ನುವ ಮುಷ್ಟಿಕ ಜಾತಿಯಲ್ಲಿ ಹುಟ್ಟಿ ಸಹಸ್ರಾಬ್ದ ಸಮಯ ಭೂಮಿಯಲ್ಲಿ ಇರಿ’ ಎಂದು ಶಪಿಸಿಬಿಟ್ಟರು.

ನಂತರ ವಿಶ್ವಾಮಿತ್ರರು-“ಎಲೈ ಶುನಃಶೇಪನೇ ! ಅಂಬರೀಷನು ಯಜ್ಞದಲ್ಲಿ ನಿನ್ನನ್ನು ದರ್ಭಾದಿ ಪವಿತ್ರ ಪಾಶಗಳಿಂದ ಬಂಧಿಸಿ ರಕ್ತ ಪುಷ್ಪ ಹಾಗೂ ರಕ್ತ ಚಂದನದಿಂದ ಅಲಂಕರಿಸುತ್ತಾನೆ. ಆಗ ನೀನು ಯೂಪದ ಬಳಿಗೆ ಹೋಗಿ ಇಂದ್ರ ಹಾಗು ವಿಷ್ಣುವನ್ನು ಸ್ತುತಿಸುವ ಎರಡು ದಿವ್ಯ ಸ್ತುತಿಗಳನ್ನು ಗಾನ ಮಾಡಿದರೆ ನಿನ್ನ ಇಷ್ಟಾರ್ಥ ಸಿದ್ಧಿಯಾಗುವುದು’ ಎಂದು ಹೇಳಿ ಆ ಎರಡು ದಿವ್ಯ ಸ್ತುತಿಗಳನ್ನು ಉಪದೇಶಿಸಿದರು.

ತದನಂತರ ಶುನಃಶೇಪನು ಅಂಬರೀಶನೊಂದಿಗೆ ಹೊರಟು ಯಜ್ಞ ಶಾಲೆಗೆ ಬಂದನು. ಅಲ್ಲಿ ರಾಜನು ಪುರೋಹಿತರ ನಿರ್ದೇಶನದಂತೆ ಮುನಿಕುವರನನ್ನು ಕುಶಗಳಿಂದ ಬಂಧಿಸಿ ಯಜ್ಞ ಪಶುವಿನಂತೆ ಅಲಂಕರಿಸಿ ಯೂಪಕ್ಕೆ ಕಟ್ಟಿಹಾಕಿದನು. ಆಗ ಮುನಿಪುತ್ರನು ಇಂದ್ರ ಹಾಗೂ ಉಪೇಂದ್ರನನ್ನು ಯಥಾವತ್ತಾಗಿ ಸ್ತುತಿಸಿದನು. ಆಗ ಸಹಸ್ರಾಕ್ಷ ಇಂದ್ರನು ಬಹಳ ಸಂತೋಷಗೊಂಡು, ಶುನಃಶೇಪನಿಗೆ ದೀರ್ಘಾಯುಷ್ಯವನ್ನು ಕರುಣಿಸಿದನು. ಅಂಬರೀಷ ಮಹಾರಾಜನು ದೇವೇಂದ್ರನ ಕೃಪೆಯಿಂದ ಉತ್ತಮ ಸಮೃದ್ಧಿಯನ್ನು ಹೊಂದಿದನು.

— ಪಲ್ಲವಿ

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.