ಕರೆಂಟೇ ಇಲ್ಲದ ಆ ಊರಲ್ಲಿ, ಸೀಮೆಎಣ್ಣೆ ದೀಪವೂ ಬೆಳಗುವುದಿಲ್ಲ!
Team Udayavani, May 20, 2017, 2:52 PM IST
ಅಲ್ಲಿ ಕರೆಂಟೇ ಇಲ್ಲ! ಕರೆಂಟಿಲ್ಲ ಅಂತ ಸೀಮೆಎಣ್ಣೆಯ ದೀಪವನ್ನು ಅಲ್ಲಿ ಉರಿಸುವ ಹಾಗೆಯೇ ಇಲ್ಲ! ಏಕೆಂದರೆ, ಆ ಊರಿನಲ್ಲಿ ಸೀಮೆಎಣ್ಣೆ ನಿಷೇಧ! ಗೋವಾಕ್ಕೆ ಅಂಟಿಕೊಂಡಿರುವ ನಮ್ಮ ಕಾರವಾರ ಜಿಲ್ಲೆಯ ಹಿರೇಮನೆ ಮತ್ತು ಮಲೆಗದ್ದೆ ಎಂಬ ಹಳ್ಳಿಗಳ ಸ್ಥಿತಿ ಇದು. ಹಾಲಕ್ಕಿ ಒಕ್ಕಲಿಗರೇ ಅಧಿಕ ಸಂಖ್ಯೆಯಲ್ಲಿರುವ ಎರಡು ಅವಳಿ ಹಳ್ಳಿಗಳನ್ನು ತಲುಪಲು ಬೃಹತ್ ಅರಣ್ಯವನ್ನು ದಾಟಬೇಕು. ದೊಡ್ಡ ಬೆಟ್ಟಗಳನ್ನೇ ಹತ್ತಬೇಕು. ಇಲ್ಲಿಗೆ ಕರೆಂಟನ್ನು ತಲುಪಿಸುವುದೂ ಕಷ್ಟದ ಮಾತೇ. ಹಿಂದೊಮ್ಮೆ ಊರಿಗೆ ಸೀಮೆಎಣ್ಣೆ ತಂದು, ಯಾರೋ ದೀಪ ಹಚ್ಚಿದಾಗ ಗುಡಿಸಲಿಗೆ ಬಂಕಿ ಹೊತ್ತಿಕೊಂಡು ಅನಾಹುತ ಆಗಿತ್ತಂತೆ. ಈ ಕಾರಣದಿಂದ ಹಿರಿಯರು ಇಲ್ಲಿಗೆ ಸೀಮೆಎಣ್ಣೆಗೆ ನಿಷೇಧ ಹೇರಿದ್ದರು. ಅಡುಗೆ ಮನೆಯೊಳಗಿನ ಒಲೆಯ ಬೆಂಕಿಯ ಬೆಳಕಿನಲ್ಲೇ ಇವರ ರಾತ್ರಿ ಕಳೆಯುತ್ತದೆ!
ಇಲ್ಲಿವರು ನಿತ್ಯ ಸೂರ್ಯನನ್ನೇ ನಂಬಿ ಬದುಕುತ್ತಾರೆ. ಬೆಳಗ್ಗೆ ಸೂರ್ಯ ಏಳುವಾಗಲೇ ಎದ್ದು, ಮುಳುಗುವುದರೊಳಗೆ ಎಲ್ಲ ಕೆಲಸ ಮುಗಿಸಿ, ಸಂಜೆ 7ರ ವೇಳೆಗೆ ನಿದ್ರೆಗೆ ಜಾರುತ್ತಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು