ಹೊನ್ನೆಎಣ್ಣೆಯಿಂದ ಹೊನ್ನು ಬಂತು !


Team Udayavani, Nov 18, 2017, 10:51 AM IST

07-Honavar-02.jpg

ಒಂದಾನೊಂದು ಕಾಲದಲ್ಲಿ ಗಾಣದಿಂದ ಹೊನ್ನೆ ಎಣ್ಣೆ ತೆಗೆಯುತ್ತಿದ್ದರು. ಇದು ರಥ ಮೊದಲಾದ ಕಟ್ಟಿಗೆಯ ನಿರ್ಮಾಣಕ್ಕೆ ಗೆದ್ದಲು ಹಿಡಿಯದಂತೆ ಹಚ್ಚಲು, ದೀಪ ಉರಿಸಲು, ದನಗಳ ಮೈಗೆ ಹಚ್ಚಲು, ಬಡವರ ನೆತ್ತಿ ತಂಪಾಗಿಸಲು ಬಳಕೆಯಾಗುತ್ತಿತ್ತು.  ಇವತ್ತು ಇದನ್ನು ಬೆಲ್ಜಿಯಂಗೆ ರಫ್ತು ಮಾಡುತ್ತಿದ್ದಾನೆ ಈ ಯುವಕ.

ಕರಾವಳಿಯಲ್ಲಿ ಹೊಳೆ, ಸಮುದ್ರದ ಬದಿಯ ಹೊಯ್ಗೆಯಲ್ಲಿ ಆರೈಕೆ ಇಲ್ಲದೆ ಬೆಳೆಯುವುದು ಹೊನ್ನೆಮರದ ಕಾಯಿ.  ಇದರಿಂದ ತಯಾರಾಗುವ ಎಣ್ಣೆ ಬೆಲ್ಜಿಯಂ ದೇಶದ ಜನರ ಚರ್ಮ ಸೌಂದರ್ಯಕ್ಕೆ ಬಳಕೆಯಾಗುತ್ತಿದೆ.

ನಂಬಿದರೆ ನಂಬಿ, ಬಿಟ್ರೆಬಿಡಿ;
ಚರ್ಮದ ಅಂಗಾಂಶದ (ಟಿಶ್ಯು) ಚಿಗುರುವಿಕೆ, ಚರ್ಮದ ನೆರಿಗೆ, ಬಿಸಿಲಿನಿಂದ ಚರ್ಮ ಸುಟ್ಟಾಗ, ಸೊಳ್ಳೆ ಮತ್ತು ಕ್ರಿಮಿಗಳು ಕಚ್ಚಿದಾಗ, ವಯಸ್ಸಾಗುತ್ತಿದ್ದಂತೆ ಜೊತೆಯಾಗುವ ನೆರಿಗೆಗಳು, ಮೊಡವೆ ಮೊದಲಾದವುಗಳಿಗೆ ಈ ಎಣ್ಣೆ ಹಚ್ಚಿದರೆ ಗುಣವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯಿಂದ ಖಚಿತಪಡಿಸಿದ ಮೇಲೆ ಹೊನ್ನೆ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ.

ಅಭಿವೃದ್ಧಿಯ ನೆಪದಲ್ಲಿ ಗಿಡಮರಗಳು ಕಣ್ಮರೆಯಾದವಲ್ಲ; ಅದರ ಮುಂದುವರಿದ ಭಾಗದಂತೆ, ಕರಾವಳಿಯಲ್ಲಿ ಹೊನ್ನೆಗಿಡಗಳು ಮಾಯವಾಗುತ್ತಾ ಬಂದಿವೆ. ಇದೇ ಕಾರಣದಿಂದ ಗಾಣಗಳು ನಿಂತು ಹೋಗಿವೆ. ಹೊನ್ನಾವರ ತಾಲೂಕು,  ಮಾಗೋಡಿನ ಯುವಕ ತಿಮ್ಮಣ್ಣ ನರಸಿಂಹ ಹೆಗಡೆ, ವಿನಾಯಕ ಗಂಗಾ ತಮನು ಆಯಿಲ್‌ ಪ್ರಾಡಕ್ಟ್ ಎಂಬ ಗೃಹ ಕೈಗಾರಿಕೆ ಆರಂಭಿಸಿ, ನೆರೆ-ಹೊರೆಯ ತಾಲೂಕುಗಳಿಂದ ಹೊನ್ನೆಕಾಯಿ ತಂದು ಎಣ್ಣೆ ಮಾಡಿ, ಶುದ್ಧ ಎಣ್ಣೆಯನ್ನು ಬೆಲ್ಜಿಯಂಗೆ ಕಳಿಸುತ್ತಿದ್ದಾರೆ.

ಆಯುರ್ವೇದದಲ್ಲಿ ತ್ವಚೆಯ ರೋಗ ನಿವಾರಣೆಗೆ ಹೊನ್ನೆಣ್ಣೆ ಬಳಕೆಯ ಬಗ್ಗೆ ಹೇಳಲಾಗಿದೆ. ಗಾಂಧೀಜಿಗೆ ಚಿಕಿತ್ಸೆ ಮಾಡಿದ ಅಂಕೋಲಾ ಬೆಳಂಬಾರದ ವಾತದ ಔಷಧಿಗೆ ದೊಡ್ಡ ಪ್ರಮಾಣದಲ್ಲಿ ಹೊನ್ನೆಣ್ಣೆ ಬಳಕೆಯಾಗುತ್ತದೆ. ಈ ಎಣ್ಣೆಯೊಂದಿಗೆ ಗಿಡಮೂಲಿಕೆ ಸೇರಿಸಿ ಬೆಳಂಬಾರದ ಗೌಡರು ಸಿದ್ಧಪಡಿಸುವ ಔಷಧ ದೇಶದಲ್ಲಿ ಪ್ರಸಿದ್ಧವಾಗಿದೆ. ಸೂಕ್ಷ್ಮ ಜೀವಕಣಗಳಿಂದ ರಚನೆಯಾಗಿರುವ ಚರ್ಮಕ್ಕೆ ಇದು ಸಿದೌœಷಧ, ಇದರ ಕಡುಕಹಿಗುಣ ವಿಶೇಷ ಎನ್ನುತ್ತಾರೆ ಹೆಸರಾಂತ ಆಯುರ್ವೇದ ವೈದ್ಯ ಡಾ.ಮಹೇಶ ಪಂಡಿತ.

ಒಂದಾನೊಂದು ಕಾಲದಲ್ಲಿ ಗಾಣದಿಂದ ಹೊನ್ನೆ ಎಣ್ಣೆ ತೆಗೆಯುತ್ತಿದ್ದರು. ಇದು ರಥ ಮೊದಲಾದ ಕಟ್ಟಿಗೆಯ ನಿರ್ಮಾಣಕ್ಕೆ ಗೆದ್ದಲು ಹಿಡಿಯದಂತೆ ಹಚ್ಚಲು, ದೀಪ ಉರಿಸಲು, ದನಗಳ ಮೈಗೆ ಹಚ್ಚಲು, ಬಡವರ ನೆತ್ತಿ ತಂಪಾಗಿಸಲು ಬಳಕೆಯಾಗುತ್ತಿತ್ತು. ಹೊನ್ನೆಕಾಯಿ ಸುಟ್ಟಾಗ ಸಿಗುತ್ತಿದ್ದ ಭಸ್ಮದಿಂದ ಹುಣ್ಣುಗಳನ್ನು ಗುಣಪಡಿಸಲಾಗುತ್ತಿತ್ತು. ಇದರ ಹೊರತು ಯಾರಿಗೂ ಬೇಡವಾಗಿದ್ದ, ಬಳಸದೆ ತಿರಸ್ಕೃತವಾಗುತ್ತಿದ್ದ ಹೊನ್ನೆಣ್ಣೆಯನ್ನು ಬಡ ಗಾಣಿಗರು ಕೊಡದಲ್ಲಿ ತಂದು ಸಂತೆಯಲ್ಲಿ ಮಾರುತ್ತಿದ್ದರು.

ಈಗ, ಕಾಲ ಬದಲಾಗಿದೆ. ಶೋಧಿಸಿ ಶುದ್ಧಗೊಳಿಸಿದ ಹೊನ್ನೆಣ್ಣೆ (ತಮನು ಆಯಿಲ್‌) ಈಗ ಹಡಗನ್ನೇರಿ ವಿದೇಶಕ್ಕೆ ಹೋಗಿ ಬಿಳಿಜನ ಹಲವು ವಿಧದಲ್ಲಿ ಬಳಸುತ್ತಿದ್ದಾರೆ. 

ಈ ಎಣ್ಣೆ ಕಿಲೋಗೆ 100-150 ರೂ. ವರೆಗೆ ಮಾರಾಟವಾಗುತ್ತದೆ. ಈಗ ಕಲಬೆರಕೆ ಎಣ್ಣೆ ಪೇಟೆಯಲ್ಲಿ ಚಲಾವಣೆಯಲ್ಲಿದೆ. ನಾವು ಹೊನ್ನೆಕಾಯಿ ಖರೀದಿಸಿ, ಎಣ್ಣೆಮಾಡಿ, ಶುದ್ಧಗೊಳಿಸಿದರೆ ಕಿಲೋಗೆ 500 ರೂ.ಗೆ ಇಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಶುದ್ಧತೆಯ ಗ್ಯಾರಂಟಿಯೊಂದಿಗೆ ವಿದೇಶದಲ್ಲಿ ಈ ಎಣ್ಣೆಗೆ ಅಪಾರ ಬೇಡಿಕೆ ಇದೆ ಎನ್ನುತ್ತಾರೆ ತಿಮ್ಮಣ್ಣ ಹೆಗಡೆ.

ಕರಾವಳಿಯಲ್ಲಿ ಖಾಲಿ ಇರುವ ಜಾಗದಲ್ಲಿ ಹೊನ್ನೆಗಿಡವನ್ನು ನೆಟ್ಟು ಬೆಳೆಸಬಹುದು. ನೀರು, ಗೊಬ್ಬರ ಹಾಕಬೇಕಿಲ್ಲ. ಮತ್ತೂಂದು ಅತಿ ಮುಖ್ಯ ವಿಚಾರವೆಂದರೆ ಈ ಗಿಡಕ್ಕೆ ರೋಗಬರುವುದಿಲ್ಲ. ಗೇರುಗಿಡಗಳಿಗಿಂತ ಹೆಚ್ಚಿನ ಆದಾಯವನ್ನೂ ಗಳಿಸಬಹುದು ಎನ್ನತ್ತಾರೆ ತಿಮ್ಮಣ್ಣ ಹೆಗಡೆ. 

ಜಿ.ಯು. ಭಟ್‌

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.