ಭೀಮಣ್ಣನ ಹಿಂದೆ ಬರಗೂರು

ಬಯಲಾಟದ ಕಲಾವಿದನ ಏಳು-ಬೀಳಿನ ಸುತ್ತ

Team Udayavani, Aug 2, 2019, 5:00 AM IST

k-25

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರಕ್ಕೆ “ಬಯಲಾಟದ ಭೀಮಣ್ಣ’ ಎಂದು ಹೆಸರಿಡಲಾಗಿದೆ. ಅದು ಅವರೇ ಬರೆದ ಕಥೆ. ರಂಗ ಕಲಾವಿದನ ಯಶೋಗಾಥೆ ಕುರಿತಾದ ಚಿತ್ರವದು. ಇತ್ತೀಚೆಗೆ ರವಿಚಂದ್ರನ್‌ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ “ಬಯಲಾಟದ ಭೀಮಣ್ಣ’ ಕುರಿತು ಹೇಳಿದ್ದಿಷ್ಟು. “ಇದು ನಾನೇ ಬರೆದ ಕಥೆಯೊಂದನ್ನು ಆಧರಿಸಿದ ಚಿತ್ರ. ಯಕ್ಷಗಾನ ಮತ್ತು ಬಯಲಾಟ ದೊಡ್ಡ ಕಲೆ. ಬಯಲಾಟದ ಕಲಾವಿದನೊಬ್ಬ ಸಾಮಾಜಿಕ ನಾಟಕದಲ್ಲೊಮ್ಮೆ ನಟಿಸಬೇಕು ಎಂಬ ಆಸಕ್ತಿ ಉಳ್ಳವನು. ಆದರೆ, ಅದನ್ನು ಮಾಡದಂತಹ ಸ್ಥಿತಿ ಎದುರಾಗುತ್ತದೆ. ಬಯಲಾಟ ಕಲಾವಿದನ ಬದುಕಿನ ಏಳು-ಬೀಳು, ನಿರಾಸೆ, ಹತಾಶೆ ಕುರಿತಾದ ವಿಷಯಗಳು ಇಲ್ಲಿವೆ. ಇದೊಂದು ಹಳ್ಳಿ ಕಥೆಯಾಗಿದ್ದರೂ, ದೇಶದ ಕಲಾವಿದನ ಆಶೋತ್ತರ ಇಲ್ಲಿದೆ. ಹಳ್ಳಿಕಥೆಯಾಗಿದ್ದರೂ, ದೇಶದ ಕಥೆಯೇ ಎನ್ನುವಷ್ಟರ ಮಟ್ಟಿಗೆ ರೂಪಕವಾಗಿರಲಿದೆ’ ಎಂದು ಹೇಳಿದ ಬರಗೂರು, ರವಿಚಂದ್ರನ್‌ ಅವರ ಗುಣಗಾನ ಮಾಡಿದ್ದು ಹೀಗೆ, “ರವಿಚಂದ್ರನ್‌ ನೇರ ಮಾತುಗಾರ. ಭಾರತೀಯ ಚಿತ್ರರಂಗದಲ್ಲಿ ತೆರೆಯ ಮೇಲೆ ಹಾಡುಗಳ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಡುವ ಇಬ್ಬರು ಅದ್ಭುತ ಪ್ರತಿಭೆಗಳೆಂದರೆ ಅದು ರವಿಚಂದ್ರನ್‌ ಹಾಗೂ ರಾಜ್‌ಕಪೂರ್‌. ಹಾಡಿನ ಸಂದರ್ಭದ ಭಾವ ತೀವ್ರತೆಯನ್ನು ಚೆನ್ನಾಗಿ ಕಟ್ಟಿಕೊಡುತ್ತಾರೆ. ಹಾಡಲ್ಲಿ ಸೌಂದರ್ಯ ಪ್ರಜ್ಞೆ, ಭಾವ ಪ್ರಜ್ಞೆ ವಿಶೇಷವಾಗಿ ಕಾಣಬಹುದು. ನನ್ನ ಪ್ರಕಾರ, ಸಾಲ ಮಾಡಿಯೂ ಸಂಭ್ರಮ ಪಡುವ ಕಲಾವಿದ ಅಂದರೆ ಅದು ರವಿಚಂದ್ರನ್‌. ದಿನದ 24 ಗಂಟೆ ಸಿನಿಮಾ ಬಿಟ್ಟು ಬೇರೆ ಏನೂ ಯೋಚಿಸಲ್ಲ. ರವಿಚಂದ್ರನ್‌ ಅವರ ಸರಳ ಮಾತುಗಳ ಹಿಂದೆ ಫಿಲಾಸಫಿ ಇರುತ್ತದೆ. ಅದು ಸಿನಿಮಾ ಬದುಕಿಗೆ ಸಂಬಂಧಿಸಿದಂತೆ ಸೀಮಿತವಾಗಿರುತ್ತೆ. ಅವರ ಚಿತ್ರಗಳ ಕುರಿತು ಗಂಭೀರ ಅಧ್ಯಯನ ಆಗಬೇಕು’ ಎಂಬುದು ಬರಗೂರು ಮಾತು.

ಈ ವೇಳೆ ರವಿಚಂದ್ರನ್‌ ಕೂಡ, ಬಯಲಾಟದ ಭೀಮಣ್ಣ ಕುರಿತು ಮಾತನಾಡಿದರು. “ಬರಗೂರು ಅವರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಮೂಲಕ ಅವರ ಮೊಗದಲ್ಲಿ ನಗುವಿಗೆ ಕಾರಣರಾಗಿದ್ದಾರೆ. ಅವರು ನನಗೂ ಮೇಷ್ಟ್ರು ಇದ್ದಂತೆ. ಅವರ ನನ್ನ ಸ್ನೇಹ ಹಳೆಯದು. ಆ ಪ್ರೀತಿಗೆ ನಾನು ಬಂದಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು ರವಿಚಂದ್ರನ್‌.

ಸಂಗೀತ ನಿರ್ದೇಶಕಿ ಶಮಿತಾ ಮಲಾ°ಡ್‌ ಅವರಿಗೆ ಬರಗೂರು ರಾಮಚಂದ್ರಪ್ಪ ಅವರ ಚಿತ್ರಕ್ಕೆ ಸಂಗೀತ ನೀಡಿದ್ದು ಹೆಮ್ಮೆಯಂತೆ. ಆ ಬಗ್ಗೆ ಹೇಳುವ ಶಮಿತಾ ಮಲಾ°ಡ್‌, “ಚಿತ್ರದಲ್ಲಿ ಎಲ್ಲಾ ಗೀತೆಗಳಿಗೆ ಬರಗೂರು ಅವರ ಸಾಹಿತ್ಯವಿದೆ. ಇನ್ನು, ಚಿತ್ರಕ್ಕೆ ಪೊಲೀಸ್‌ ಅಧಿಕಾರಿ ರೂಪಾ, ಸುಂದರ್‌ರಾಜ್‌, ಸಂಚಾರಿ ವಿಜಯ್‌ ಹಾಡಿರುವುದು ವಿಶೇಷ. ಪ್ರತಿ ಹಾಡಲ್ಲೂ ವಿಶೇಷ ಅರ್ಥವಿದೆ. ಈ ಚಿತ್ರ ನನ್ನ ಬದುಕಿನ ಮೈಲಿಗಲ್ಲು’ ಎಂದರು ಶಮಿತಾ.

ಚಿತ್ರಕ್ಕೆ ಹಾಡಿರುವ ಪೊಲೀಸ್‌ ಅಧಿಕಾರಿ ರೂಪಾ, ಸಂಚಾರಿ ವಿಜಯ್‌, ಸುಂದರ್‌ರಾಜ್‌, ಕುರಿಗಾಹಿ ಹನುಮಂತ ಬಟ್ಟೂರು ತಮ್ಮ ಹಾಡುಗಳ ಬಗ್ಗೆ ಮಾತನಾಡಿದರು. ರಂಜಿತ್‌ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಚಿತ್ರವನ್ನು ನಂಜಪ್ಪ ಕಾಳೇಗೌಡ, ಕೃಷ್ಣವೇಣಿ, ಧನಲಕ್ಷ್ಮಿ, ಕೃಷ್ಣಪ್ಪ ನಿರ್ಮಾಣ ಮಾಡಿದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್‌ ಅರಸ್‌ ಸಂಕಲನವಿದೆ. ಚಿತ್ರದಲ್ಲಿ “ಸ್ಪರ್ಶ’ ರೇಖಾ, ಪ್ರಮೀಳಾ ಜೋಷಾಯ್‌, ರಾಧಾ, ಮಾ.ಆಕಾಂಕ್ಷ್, ವತ್ಸಲಾ ಮೋಹನ್‌, ಶಾಂತರಾಜ್‌, ಬಸವರಾಜ್‌, ರಂಗಾರೆಡ್ಡಿ , ಅರುಣ್‌ ಇತರರು ನಟಿಸಿದ್ದಾರೆ.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.