ನಡೆದು ಬಂದ ದಾರಿ ನೆನಪಿಸಿದ ಸೈಕಲ್ ರೈಡಿಂಗ್
Team Udayavani, Jul 31, 2020, 11:15 AM IST
ಇತ್ತೀಚೆಗೆ ಕನ್ನಡ ಚಿತ್ರರಂಗದ ಇಬ್ಬರೂ ಗೆಳೆಯರಾದ ಉಪೇಂದ್ರ ಮತ್ತು ಗುರುಕಿರಣ್ ಜತೆಯಾಗಿ ಸೈಕಲ್ ರೈಡಿಂಗ್ ಹೋಗಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ತೆಗೆದ ಪೋಟೋವೊಂದನ್ನು ಗುರುಕಿರಣ್, ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ಈ ಪೋಟೋ ಶೇರ್ ಮಾಡುವುದರ ಜತೆಗೆ, ಒಂದು ಅದ್ಭುತವಾದ ಶೀರ್ಷಿಕೆಯನ್ನು ಸಹ ಕೊಟ್ಟಿದ್ದಾರೆ. “ಮತ್ತೆ ಸೈಕಲ್ಲು ಅಂದು ಗಾಂಧಿನಗರ, ಇಂದು ನಗರ ದಾಚೆ’ ಎಂದು ಅವರು ಬರೆದು ಕೊಂಡಿದ್ದಾರೆ.
ಅಂದಹಾಗೆ, ಗುರುಕಿರಣ್ ಹೀಗೆ ಬರೆದುಕೊಳ್ಳಲು ಬಲವಾದ ಕಾರಣವೂ ಇದೆ. ಏಕೆಂದರೆ, ಉಪೇಂದ್ರ ಮತ್ತು ಗುರುಕಿರಣ್ ಇಬ್ಬರೂ ಸಾಕಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಬಂದವರು.
ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಸಾಕಷ್ಟು ಶ್ರಮಿಸುವುದಕ್ಕೆ, ಹೋರಾಟ ಮಾಡುವುದಕ್ಕೆ ಗಾಂಧಿನಗರದ ವಾಡಿಕೆಯಲ್ಲಿ ಸೈಕಲ್ ಹೊಡೆಯುವುದು ಎನ್ನಲಾಗುತ್ತದೆ. ಹೀಗೆ
ಗಾಂಧಿನಗರದಲ್ಲಿ ಇಬ್ಬರೂ ಸಾಕಷ್ಟು ಸೈಕಲ್ ಹೊಡೆದು, ಕಷ್ಟಪಟ್ಟು , ಸಕ್ಸಸ್ ಕಂಡು ಇದೀಗ ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ. “ಎ’ ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ
ಇಬ್ಬರೂ ಕೆಲಸ ಮಾಡಿದ್ದರು. ಇನ್ನು ಗುರುಕಿರಣ್ ಸಂಗೀತ ನಿರ್ದೇಶಕರಾಗುವ ಮುನ್ನ ಹಲವು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅವರ
ಸಂಗೀತಾಸಕ್ತಿ ಮತ್ತು ಪ್ರತಿಭೆ ನೋಡಿದ್ದ ನಟ ಕಂ ನಿರ್ದೇಶಕ ಉಪೇಂದ್ರ ಅವರನ್ನು “ಎ’ ಚಿತ್ರಕ್ಕೆ ಸಂಗೀತ ನಿರ್ದೇಶಕನನ್ನಾಗಿ ಆಯ್ಕೆ ಮಾಡುತ್ತಾರೆ. ಬಳಿಕ ಈ ಜೋಡಿ
ಮಾಡಿದ ಕಮಾಲ್ ಇಡೀ ಚಿತ್ರರಂಗಕ್ಕೆ ಗೊತ್ತೇ ಇದೆ. ಹೀಗೆ ಚಿತ್ರರಂಗದಲ್ಲಿ ಒಂದು ಗಟ್ಟಿಸ್ಥಾನ ಪಡೆಯುವುದಕ್ಕೆ ಉಪೇಂದ್ರ ಮತ್ತು ಗುರುಕಿರಣ್ ಸಾಕಷ್ಟು ಸೈಕಲ್ ಹೊಡೆದಿದ್ದು, ಈಗಲೂ ಇಬ್ಬರೂ ಮರೆತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ