ಕಾಮಿಡಿ ಹಾದಿಯಲ್ಲಿ ಧರ್ಮ ದರ್ಶನ

ಕಡೂರು ಟು ಬೆಂಗಳೂರು

Team Udayavani, Mar 20, 2020, 10:42 AM IST

ಕಾಮಿಡಿ ಹಾದಿಯಲ್ಲಿ ಧರ್ಮ ದರ್ಶನ

2016ರ ಅಕ್ಟೋಬರ್‌ನಲ್ಲಿ ತೆರೆಕಂಡ “ರಾಮಾ ರಾಮಾ ರೇ..’ ಚಿತ್ರದ ಹಾಸ್ಯ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ಪರಿಚಯವಾದವರು ಧರ್ಮಣ್ಣ ಕಡೂರು. ಅಲ್ಲಿಂದ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆಯಿಟ್ಟು ಮುಂದೆ ಸಾಗುತ್ತಿರುವ ಧರ್ಮಣ್ಣ, ನೋಡು-ನೋಡುತ್ತಲೇ ಯಶಸ್ವಿಯಾಗಿ ಮೂರು ವರ್ಷಗಳ ಸಿನಿಯಾನ ಪೂರೈಸಿದ್ದಾರೆ. ಇಲ್ಲಿಯವರೆಗೆ ಸುಮಾರು 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿ, ಕನ್ನಡದ ಭರವಸೆಯ ಹಾಸ್ಯನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಧರ್ಮಣ್ಣ.

“ರಾಮಾ ರಾಮಾ ರೇ..’ ಚಿತ್ರದ ಯಶಸ್ಸು ಧರ್ಮಣ್ಣ ಅವರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿತು. ಆ ನಂತರ ನಿಧಾನವಾಗಿ ಒಂದೊಂದೆ ಚಿತ್ರಗಳ ಪಾತ್ರಗಳು ಧರ್ಮಣ್ಣ ಅವರನ್ನು ಹುಡುಕಿಕೊಂಡು ಬರಲು ಶುರುವಾದವು. “ರಾಮಾ ರಾಮಾ ರೇ..’ ಚಿತ್ರದ ನಂತರ ತೆರೆಗೆ ಬಂದ “ಮುಗುಳು ನಗೆ’, “ಲಂಬೋದರ’, , “ಸ್ಟ್ರೈಕರ್‌’, “ಪಡ್ಡೆಹುಲಿ’, “ಕನ್ನಡ್‌ ಗೊತ್ತಿಲ್ಲ’, “ಭರಾಟೆ’, “ಅಳಿದು ಉಳಿದವರು’, “ಕಾಣದಂತೆ ಮಾಯವಾದನು’ ಹೀಗೆ ಸುಮಾರು ಮೂರು ವರ್ಷಗಳಲ್ಲಿ ಧರ್ಮಣ್ಣ ಅಭಿನಯಿಸಿರುವ 15ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ಸದ್ಯ “ಇನ್ಸ್‌ಪೆಕ್ಟರ್‌ ವಿಕ್ರಮ…’, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’, “ಐ ಯಾಮ್‌ ಪ್ರಗ್ನೆಂಟ್‌’, “ಗ್ರಾಮಾಯಣ’ ಹೀಗೆ ಏಳೆಂಟು ಚಿತ್ರಗಳು ತೆರೆಗೆ ಬರಲು ರೆಡಿಯಾಗುತ್ತಿವೆ. ಈಗಾಗಲೇ ಸುಮಾರು ಐದಾರು ಚಿತ್ರಗಳ ಮಾತುಕತೆ ನಡೆಯುತ್ತಿದ್ದು, ಆ ಚಿತ್ರಗಳು ಕೂಡ ಈ ವರ್ಷದಲ್ಲೇ ಶುರುವಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ತೆರೆಕಂಡ “ಕಾಣದಂತೆ ಮಾಯವಾದನು’ ಚಿತ್ರದಲ್ಲಿ ಧರ್ಮಣ್ಣ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ತೆರೆಕಾಣಲು ರೆಡಿಯಾಗಿರುವ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದಲ್ಲೂ ಧರ್ಮಣ್ಣ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಧರ್ಮಣ್ಣ ಅವರ ಅಭಿನಯವನ್ನು ಕಂಡ ಹಲವರು ಧರ್ಮಣ್ಣ ಅವರಿಗಾಗಿಯೇ ಸಿನಿಮಾ ಮಾಡುವ ಯೋಚನೆಯನ್ನೂ ಮಾಡುತ್ತಿ­ದ್ದಾರೆ. ಈ ಬಗ್ಗೆ ಮಾತನಾಡುವ ಧರ್ಮಣ್ಣ, “ಕಳೆದ ಮೂರು-ನಾಲ್ಕು ವರ್ಷಗಳಿಂದ ಚಿತ್ರರಂಗ, ಪ್ರೇಕ್ಷಕರು ನನ್ನನ್ನು ಗುರುತಿಸುತ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳು, ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಚಾಲೆಂಜಿಂಗ್‌ ಪಾತ್ರಗಳಲ್ಲಿ ನಟಿಸಬೇಕು, ಜನರನ್ನು ನಗಿಸಬೇಕು ಎನ್ನುವ ಆಸೆ ಇದೆ. ಕೆಟ್ಟ ಕಾಮಿಡಿ ಮಾಡಲು ನನಗೆ ಇಷ್ಟವಿಲ್ಲ. ಸಿನಿಮಾ ನೋಡಿದವರಿಗೆ ನೆನಪಿನಲ್ಲಿ ಉಳಿಯುವ ಹಾಗೆ ಆಗಬೇಕು. ನನ್ನ ಮ್ಯಾನರಿಸಂ ಹಾಗೂ ಅಭಿನಯಕ್ಕೆ ತಕ್ಕಂತೆ ಕಥೆ ಇದ್ದರೆ ಮಾತ್ರ ಅಂತಹ ಚಿತ್ರ ಮಾಡುತ್ತೇನೆ’ ಎನ್ನುತ್ತಾರೆ.

ಹೀರೋ ಆಗೋ ಆಸೆ ಇಲ್ಲ
ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟರಾಗಿ ಬಂದವರು ಆನಂತರ ಹೀರೋಗಳಾಗಿ ಮಿಂಚಿದ ಹತ್ತಾರು ಉದಾಹರಣೆಗಳಿವೆ. ಕೋಮಲ್‌, ಶರಣ್‌, ಚಿಕ್ಕಣ್ಣ, ರಂಗಾಯಣ ರಘು, ಸಾಧುಕೋಕಿಲ ಹೀಗೆ ಈ ಸಾಲಿನಲ್ಲಿ ಹಲವು ಹೆಸರುಗಳು ಸಿಗುತ್ತವೆ. ಈ ಸಾಲಿಗೆ ಮುಂದೆ ಏನಾದ್ರೂ ಧರ್ಮಣ್ಣ ಕಡೂರು ಸೇರಿಕೊಳ್ಳುತ್ತಾರಾ? ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ, “ಹೀರೋ ಆಗಿ ಅಲ್ಲ. ಆದ್ರೆ ಒಳ್ಳೆಯ ಪಾತ್ರ ಮಾಡುವ ಆಸೆಯಂತೂ ಖಂಡಿತ ಇದೆ. ನನಗೆ ಪಾತ್ರವಷ್ಟೇ ಮುಖ್ಯ. ನನಗೆ ನನ್ನ ಸಾಮರ್ಥ್ಯ ಹಾಗೂ ವೀಕ್‌ ನೆಸ್‌ ಎರಡೂ ಗೊತ್ತಿದೆ. ಪಾತ್ರ ನನಗೆ ಸೂಟ್‌ ಆದರೆ ಮಾಡುತ್ತೇನೆ. ಕೆಲವು ಸಿನಿಮಾಗಳನ್ನು ಕಥೆ ಹೇಳುವಾಗಲೇ ಓಪನ್‌ ಆಗಿ “ನಾನ್‌ ಮಾಡೋಕ್ಕೆ ಆಗಲ್ಲ’ ಅಂಥ ಹೇಳಿದ್ದು ಇದೆ. ಸದ್ಯಕ್ಕೆ ಒಂದಷ್ಟು ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ಒಂದೆರಡು ಮೈನ್‌ ಲೀಡ್‌ ಕಾಮಿಡಿ ಸಿನಿಮಾಗಳ ಆಫ‌ರ್ ಬಂದರೂ, ಸದ್ಯಕ್ಕೆ ಬೇಡ ಅಂತ ನಾನೇ ಒಪ್ಪಲಿಲ್ಲ. ಡೇಟ್‌ ಕ್ಲಾಶ್‌ ಆದ ಕಾರಣ ಕೆಲವು ಸಿನಿಮಾಗಳನ್ನು ಮಾಡಲಾಗಲಿಲ್ಲ. ಮುಂದೇನಾದ್ರೂ ಆ ಥರದ ಅವಕಾಶ ಬಂದ್ರೆ ನೋಡೋಣ…’ ಎಂದು ಮುಗುಳು ನಗೆ ಬೀರುತ್ತಾರೆ.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.