ಒಳ್ಳೆಯ ಚಿತ್ರವಷ್ಟೇ ನನ್ನ ಉದ್ದೇಶ

ಗೋವಿಂದ ಸ್ಮರಣೆಯಲ್ಲಿ ಸುಮಂತ್‌

Team Udayavani, Mar 20, 2020, 10:40 AM IST

ಗೋವಿಂದ ಸ್ಮರಣೆಯಲ್ಲಿ ಸುಮಂತ್‌

ನಟ ಸುಮಂತ್‌ ಶೈಲೇಂದ್ರ ಬಾಬು ಇದೀಗ “ಗೋವಿಂದ’ನ ಜಪದಲ್ಲಿದ್ದಾರೆ. ಹೌದು, “ಆಟ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಅವರು, ಅದಾದ ಬಳಿಕ “ದಿಲ್‌ವಾಲ’, “ತಿರುಪತಿ ಎಕ್ಸ್‌ಪ್ರೆಸ್‌’,”ಬೆತ್ತನಗೆರೆ’ ಹೀಗೆ ಒಂದಷ್ಟು ಹೊಸ ಜಾನರ್‌ ಸಿನಿಮಾಗಳಲ್ಲಿ ಕಾಣಿಸಿ­ಕೊಂಡರು. ತಕ್ಕಮಟ್ಟಿಗೆ ಗುರುತಿಸಿ­ಕೊಂಡರಾ­ದರೂ, ಇಲ್ಲಿ ಹೇಳಿ­ಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಬಳಿಕ ತೆಲುಗು ಇಂಡಸ್ಟ್ರಿ ಕಡೆಗೂ ಮುಖ ಮಾಡಿದ್ದಾಯ್ತು. ಅಲ್ಲಿ “ಬ್ರಾಂಡ್‌ ಬಾಬು’ ಎಂಬ ಚಿತ್ರ ಮಾಡಿ ಸೈ ಎನಿಸಿ­ಕೊಂಡರು. ಆ ನಂತರ ಒಂದು ನೇಮು, ಫೇಮು ಬಂದಿದ್ದೇನೋ ನಿಜ. ಅತ್ತ ತೆಲುಗು ಇಂಡಸ್ಟ್ರಿಯಲ್ಲೂ ಜನ ಸುಮಂತ್‌ ಅವರನ್ನು ಗುರುತಿಸಿದರು. ಅದೇ ಉತ್ಸಾಹದಲ್ಲಿ ಅವರು “ಮಿಸ್‌ ಇಂಡಿಯಾ’ ಎಂಬ ಮತ್ತೂಂದು ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅದರೊಂದಿಗೆ ಇನ್ನೊಂದು ತೆಲುಗು ಚಿತ್ರಕ್ಕೂ ಸಹಿ ಹಾಕಿದ್ದಾರೆ. ಇವೆಲ್ಲದರ ಜೊತೆಯಲ್ಲೂ ಸುಮಂತ್‌ ಶೈಲೇಂದ್ರಬಾಬು, ಕನ್ನಡದಲ್ಲಿ “ಗೋವಿಂದ ಗೋವಿಂದ’ ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಐಟಂ ಸಾಂಗ್‌ವೊಂದರ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಕೊರೊನಾ ಎಫೆಕ್ಟ್ನಿಂದಾಗಿ, ಆ ಹಾಡಿನ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಅಷ್ಟಕ್ಕೂ ಸುಮಂತ್‌ ಅವರು “ಗೋವಿಂದ ಗೋವಿಂದ’ ಸಿನಿಮಾ ಮಾಡೋಕೂ ಒಂದು ಕಾರಣವಿದೆ. ಆ ಬಗ್ಗೆ ಅವರೇ ಹೇಳ್ಳೋದು ಹೀಗೆ.

“ನನಗೆ ಸಿನಿಮಾ ನಿರ್ಮಾಣ ಮಾಡುವ ಆಸೆ ಇತ್ತು. ಆದರೆ, ತೆಲುಗು ಚಿತ್ರರಂಗದಲ್ಲಿ ಅವಕಾಶ ಸಿಕ್ಕಾಗ, ನಟನೆಯತ್ತ ಗಮನಹರಿಸಿದೆ ಈ ಕಡೆ “ಗೋವಿಂದ ಗೋವಿಂದ’ ಚಿತ್ರದಲ್ಲಿ ನಟಿಸುವ ಅವಕಾಶವೂ ಹುಡುಕಿ ಬಂತು. ನಿರ್ಮಾಣ ಮಾಡುವ ತಯಾರಿಯಲ್ಲಿದ್ದಾಗ, ರವಿಗರಣಿ ಅವರು ತಮ್ಮ ನಿರ್ಮಾಣದಲ್ಲಿ ನಟಿಸಬೇಕು ಅಂತ “ಗೋವಿಂದ ಗೋವಿಂದ’ ಚಿತ್ರ ಕೊಟ್ಟರು. ಹಾಗಾಗಿ ಒಪ್ಪಿಕೊಂಡು ಚಿತ್ರ ಮಾಡುತ್ತಿದ್ದೇನೆ. “ಗೋವಿಂದ ಗೋವಿಂದ’ ಒಂದು ಮನರಂಜನೆಯ ಚಿತ್ರ. ಪಕ್ಕಾ ಕಂಟೆಂಟ್‌ ಇರುವ ಚಿತ್ರವದು. ಸ್ಕ್ರೀನ್‌ಪ್ಲೇ ಚಿತ್ರದ ಹೈಲೈಟ್‌. ಚಿತ್ರದಲ್ಲಿ ನಾನು ಹೀರೋ ಅಂತೇನೂ ಇಲ್ಲ. ಕಥೆಯೇ ನಾಯಕ. ನಾಲ್ಕು ಪಾತ್ರಗಳ ಮೂಲಕ ಸಾಗುವ ಕಥೆ ಅದು. ನಾನು ಪವನ್‌, ವಿಜಯ್‌ ಚೆಂಡೂರ್‌ ಹಾಗು ಕವಿತಾ ಗೌಡ ಚಿತ್ರದ ಆಕರ್ಷಣೆಯಾಗಿದ್ದರೂ, “ಜಾಕಿ’ ಭಾವನಾ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಯಲ್ಲಿ ರೂಪೇಶ್‌ ಶೆಟ್ಟಿ ಕೂಡ ನಟಿಸಿದ್ದಾರೆ. ಅದೊಂದು ಹೊಸ ಬಗೆಯ ಕಥೆ ಎನ್ನುವ ಸುಮಂತ್‌, ನನ್ನ ಮದುವೆ ನಂತರ ನಾನು ಮಾಡಿದ ಚಿತ್ರಗಳ ಕಥೆಗಳೇ ಬಂದಿದ್ದವು. ಪದೇ ಪದೇ ಅದೇ ರೀತಿಯ ಕಥೆ ಒಪ್ಪಿಕೊಂಡು ಮಾಡಿದರೆ, ಜನರಿಗೆ ಬೋರ್‌ ಆಗೋದು ಬೇಡ ಅಂತ ನಾನೇ ಸುಮ್ಮನಿದ್ದೆ. ನನಗೆ ಕಥೆ ಇಷ್ಟವಾಗಬೇಕು ಪ್ಯಾಷನ್‌ ಇದೆ ಅಂತ ಏನೇನೋ ಕಥೆ ಒಪ್ಪಿಕೊಂಡು ಮಾಡೋಕ್ಕಾಗೋದಿಲ್ಲ. ಹಿಟ್‌ ಅಥವಾ ಫ್ಲಾಪ್‌ ಸೆಕೆಂಡರಿ. ಒಳ್ಳೆಯ ಚಿತ್ರ ಮಾಡೋದು ನನ್ನ ಉದ್ದೇಶವಷ್ಟೇ. ನಾನು ಮಾಡುವ ಚಿತ್ರ ಜನರಿಗೆ ಇಷ್ಟ ಆಗಬೇಕು. ಆ ಬಗ್ಗೆ ಮಾತಾಡುವಂತಾಗಬೇಕು. ಒಟ್ಟಾರೆ, ಸಿನಿಮಾದಲ್ಲಿ ಜನರಿಗೆ ಇಷ್ಟವಾಗುವ ಅಂಶಗಳಿರಬೇಕಷ್ಟೇ. “ಗೋವಿಂದ ಗೋವಿಂದ’ ಸಿನಿಮಾದಲ್ಲಿ ಆ ಎಲ್ಲಾ ಅಂಶಗಳೂ ಇರಲಿವೆ’ ಎನ್ನುತ್ತಾರೆ ಸುಮಂತ್‌ ಶೈಲೇಂದ್ರಬಾಬು.

ಟಾಪ್ ನ್ಯೂಸ್

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.