ರಾಯರು ಕೊಟ್ಟ ಕಾಣಿಕೆ!


Team Udayavani, Sep 29, 2017, 6:20 AM IST

rayaru.jpg

ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂದರ್ಭದಲ್ಲಿ ಮಂತ್ರಾಲಯದಲ್ಲಿದ್ದರಂತೆ ಜಗ್ಗೇಶ್‌. ಬೃಂದಾವನದ ಎದುರು ಕೂತು, “ಬಣ್ಣದ ಹಸಿವಿದೆ, ಒಂದೊಳ್ಳೆಯ ಪಾತ್ರ ಬೇಕು ಗುರುಗಳೇ’ ಎಂದು ಕೇಳಿಕೊಂಡರಂತೆ. ಅದಾಗಿ ಕೆಲವೇ ದಿನಗಳ ನಂತರ ಅವರ ಮನೆಗೆ ಒಬ್ಬ ಹುಡುಗ ಬಂದು ಕಥೆ ಹೇಳಿದ್ದಾನೆ. ಕಥೆ ಕೇಳಿ ಜಗ್ಗೇಶ್‌ ಮೈಯಲ್ಲಿ ವೈಬ್ರೇಷನ್‌ ಆಯಿತಂತೆ. ತಕ್ಷಣವೇ ಆ ಚಿತ್ರ ಒಪ್ಪಿಕೊಂಡಿದ್ದಾರೆ. ಈಗ ಆ ಚಿತ್ರ ಶುರುವೂ ಆಗಿದೆ.

“8 ಎಂಎಂ’ ಮುಹೂರ್ತದ ಹಿಂದಿನ ದಿನವೇ ಮಾಧ್ಯಮದರೆದುರು ಮೋಷನ್‌ ಪೋಸ್ಟರ್‌ ಬಿಡಗುಡೆ ಮಾಡಿ, ಮಾತಿಗೆ ಕುಳಿತಿತು ಚಿತ್ರತಂಡ. ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನೆ#ಂಟ್‌ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ.
ಎಲ್ಲರೂ ಅಂದುಕೊಂಡಂತೆ, ಇದು ತಮಿಳಿನ “8 ತೊಟ್ಟಕ್ಕಲ್‌’ ಚಿತ್ರದ ರೀಮೇಕ್‌ ಅಲ್ಲ ಎಂದು ಹೇಳಿದರು ಜಗ್ಗೇಶ್‌. “ಇದು ಜಪಾನೀಸ್‌ ಚಿತ್ರ “ಸ್ಟ್ರೇ ಡಾಗ್‌’ ಅಂತ. ಅದರಿಂದ ಸ್ಫೂರ್ತಿ ಪಡೆದು ಈ ಹುಡುಗ ಚಿತ್ರಕಥೆ ಮಾಡಿದ್ದಾರೆ. ಒಬ್ಬ ಕ್ರಿಮಿನಲ್‌ ಮತ್ತು ಪೊಲೀಸ್‌ ನಡುವಿನ ಮೈಂಡ್‌ ಗೇಮ್‌ ಕುರಿತ ಚಿತ್ರ ಇದು. 

ವಿಶೇಷ ಎಂದರೆ, ನನ್ನನ್ನ ನನ್ನ ವಯಸ್ಸಿನಲ್ಲೇ ತೋರಿಸುತ್ತಿದ್ದಾರೆ. ನೆಗೆಟಿವ್‌ ಪಾತ್ರವಾದರೂ ಅಂತಾರಾತ್ಮದಲ್ಲಿ ಮಾನವೀಯ ಮೌಲ್ಯವಿರುವಂತಹ ಪಾತ್ರವದು. ಕೊನೆಯ ಸೀನ್‌ ಮಾತ್ರ ಬಹಳ ಸೂಪರ್‌ ಆಗಿದೆ. ನೋಡಿ ಫಿದಾ ಆಗಿಬಿಟ್ಟೆ. ಬಹಳ ದಿನಗಳ ನಂತರ ವಿಭಿನ್ನವಾದ ಪಾತ್ರ ಸಿಕ್ಕಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ನನಗೆ ಒಂದು ಬದಲಾವಣೆ ಸಿಕ್ಕಿದೆ’ ಎನ್ನುತ್ತಾರೆ ಜಗ್ಗೇಶ್‌. ಇಲ್ಲಿ ಜಗ್ಗೇಶ್‌ ಅವರ ಹಳೆಯ ಬಾಡಿ ಲಾಂಗ್ವೇಜ್‌ ಹುಡುಕಿಕೊಂಡು ಹೋದರೆ ನಿರಾಶೆ ಖಂಡಿತ. ಏಕೆಂದರೆ, ಇಲ್ಲಿ ಜಗ್ಗೇಶ್‌ ಅವರ ಬಾಡಿ ಲಾಂಗ್ವೇಜ್‌ ಬದಲಾಗಲಿದೆ.

ಅವರು ಗಮನಿಸಿರುವಂತೆ, ಅವರು ಪಂಜರದ ಗಿಳಿಯಾಗಿಬಿಟ್ಟಿದ್ದರಂತೆ. “ನನಗೆ ಈಗಲೂ ಒಳ್ಳೆಯ ಪಾತ್ರ ಮಾಡಬೇಕು ಎಂಬ ಹಸಿವಿದೆ. ಆದರೆ, ಪಾತ್ರಗಳು ಮಾತ್ರ ಒಂದೇ ತರಹ ಸಿಗುತ್ತವೆ. ನಾನು ಈಗಲೂ ಅದೇ ತರಹ ಪಾತ್ರಗಳನ್ನು ಮಾಡಿದರೆ, ಜನ ಉಗೀತಾರೆ. ಹಾಗಾಗಿ ನನಗೆ ಒಂದು ಚೇಂಜ್‌ಓವರ್‌ನ ಅವಶ್ಯಕತೆ ಇದೆ ಮತ್ತು ಆ ಬದಲಾವಣೆ ಈ ಚಿತ್ರದಲ್ಲಿ ಸಿಕ್ಕಿದೆ. ಈ ಹುಡುಗ ನನ್ನಿಂದ ಏನನ್ನೋ ಮಾಡಿಬೇಕು ಅಂದ ಬಂದಿದ್ದಾನೆ. ಇನ್ನು ನಮ್ಮ ನಿರ್ಮಾಪಕರು ಸಹ, ಈ ಚಿತ್ರದಲ್ಲಿ ಜಗ್ಗೇಶ್‌ ಅವರು ಮಾಡಿದರೆ ಮಾತ್ರ ಚಿತ್ರ ನಿರ್ಮಿಸುತ್ತೇವೆ ಅಂತ ಹೇಳಿದರಂತೆ. ಇವರೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಮೋಸವಾಗದಂತೆ ಚೆನ್ನಾಗಿ ನಟಿಸುವುದೇ ನನ್ನ ಆದ್ಯತೆ’ ಎಂದರು ಜಗ್ಗೇಶ್‌. ನಿರ್ದೇಶಕ ಹರಿಕೃಷ್ಣಗೆ ಬಹಳಷು ಜನ, ಜಗ್ಗೇಶ್‌ ಒಪ್ಪುವುದಿಲ್ಲ ಎಂದು ಹೇಳಿದರಂತೆ. “ನಿರ್ಮಾಪಕರು ಸಹ ಜಗ್ಗೇಶ್‌ ಅವರು ಡೇಟ್‌ ಕೊಟ್ಟರೆ, ಚಿತ್ರ ನಿರ್ಮಿಸುವುದಕ್ಕೆ ಸಿದ್ಧ ಎಂದಿದ್ದರು. ಹೋಗಿ ಕಥೆ ಹೇಳಿದೆ. ಕಥ ಹೇಳುವಾಗ ಬಹಳ ನರ್ವಸ್‌ ಆಗಿದ್ದೆ. ಅವರು ಒಪ್ಪಿಕೊಂಡರು. ಅಕಿರಾ ಕುರೋಸಾವಾ ಅವರ “ಸ್ಟ್ರೇ ಡಾಗ್‌’ ಸ್ಫೂರ್ತಿ ಪಡೆದು ಈ ಚಿತ್ರ ಮಾಡುತ್ತಿದ್ದೇನೆ. ಬೇರೆ ಯಾವುದೇ ಸ್ಫೂರ್ತಿ ಇಲ್ಲ. ಇಲ್ಲಿ ಜಗ್ಗೇಶ್‌ ಅವರ ಜೊತೆಗೆ ವಸಿಷ್ಠ ಸಿಂಹ, ಅತುಲ್‌ ಕುಲಕರ್ಣಿ ಮುಂತಾದವರು ನಟಿಸುತ್ತಿದ್ದಾರೆ. ಜಗ್ಗೇಶ್‌ ಅವರಿಗೆ ನಾಯಕಿ ಇರುವುದಿಲ್ಲ ಎಂದರು. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತದಂತೆ. ಅಮರ್‌-ಅಕºರ್‌-ಆ್ಯಂಟೋನಿ ತರಹ ಇರುವ ನಿರ್ಮಾಪಕರು ಚಿತ್ರ ಮಾಡುತ್ತಿರುವುದುಕ್ಕೆ ಜಗ್ಗೇಶ್‌ ಅವರು ಕಾರಣವೆಂದರು. ಅಷ್ಟೇ ಅಲ್ಲ, ತಮ್ಮ ಮೊದಲ ಪ್ರಯತ್ನಕ್ಕೆ ಸಹಕಾರ ಮತ್ತು ಪ್ರೋತ್ಸಾಹಗಳನ್ನು ಕೇಳಿದರು.

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.