ಚೇಸ್ ಮಾಡಲು ರೆಡಿ
ಕರಾವಳಿಗರ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ
Team Udayavani, Jan 3, 2020, 5:34 AM IST
“ಚೇಸ್…’
– ಸಾಮಾನ್ಯವಾಗಿ ಯಾವುದೇ ಸಿನಿಮಾ ಇರಲಿ. “ಚೇಸ್’ ಆನ್ನೋ ಸೀನ್ ಕಾಮನ್ ಆಗಿ ಇದ್ದೇ ಇರುತ್ತೆ. ಈಗ ಇಲ್ಲೇಕೆ “ಚೇಸ್’ ವಿಷಯ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣ, “ಚೇಸ್’ ಎಂಬ ಹೆಸರಿನ ಸಿನಿಮಾ ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದೆ. ಇದೊಂದು ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಹೊಸ ಬಗೆಯ ಕಥೆ ಹೊಂದಿರುವ ಈ ಚಿತ್ರಕ್ಕೆ ವಿಲೋಕ್ ಶೆಟ್ಟಿ ನಿರ್ದೇಶಕರು. ಅವರಿಗೆ ಇದು ಮೊದಲ ಅನುಭವ. ಕಥೆ, ಚಿತ್ರಕಥೆ ಜೊತೆ ಸಂಭಾಷಣೆಯ ಜವಾಬ್ದಾರಿಯನ್ನೂ ವಿಲೋಕ್ ಶೆಟ್ಟಿ ಹೊತ್ತಿದ್ದಾರೆ. ಹೊಸ ವರ್ಷಕ್ಕೆ ದರ್ಶನವಾಗಲಿರುವ “ಚೇಸ್’ ಕಮರ್ಷಿಯಲ್ ಅಂಶಗಳೊಂದಿಗೆ ಮೂಡಿಬರುತ್ತಿರುವ ಸಿನಿಮಾ ಆಗಿದ್ದು, ಲವ್, ಎಮೋಷನ್ಸ್, ಥ್ರಿಲ್ ಹಾಗು ಫ್ಯಾಮಿಲಿ ಅಂಶಗಳು ತುಂಬಿವೆ. ಸಿಂಫ್ಲಿಫನ್ ಮೀಡಿಯ ನೆಟ್ವರ್ಕ್ ಪ್ರೈ. ಲಿಮಿಟೆಡ್ ಸಂಸ್ಥೆ ಮೂಲಕ ತಯಾರಾಗಿರುವ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಹಾಗು ಪ್ರಶಾಂತ್ ಶೆಟ್ಟಿ ನಿರ್ಮಾಪಕರು.
ಇಲ್ಲಿ ಕಥೆಯೇ ನಾಯಕ, ನಾಯಕಿ ಎಂದು ನಂಬಿರುವ ಚಿತ್ರತಂಡ, ಹೊಸ ಆಶಯಗಳೊಂದಿಗೆ ಒಂದಷ್ಟು ವಿಷಯಗಳನ್ನು ಹೇಳುವ ಮೂಲಕ ಪ್ರೇಕ್ಷಕರಿಗೊಂದು ಹೊಸ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡಿದೆ. ಇನ್ನು, ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು ವಿಶೇಷ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಒಂದು ತನಿಖೆ ವಿಷಯ ಇಟ್ಟುಕೊಂಡು ಮಾಡಿರುವ ಕಥೆಯಲ್ಲಿ ಅವಿನಾಶ್ ನರಸಿಂಹರಾಜು ಅವರಿಗೆ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಅವಿನಾಶ್ ನರಸಿಂಹರಾಜು ಅವರು, ಚಿತ್ರದಲ್ಲಿ ನಟನೆಯ ಜೊತೆಯಲ್ಲಿ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಕೊಡಲಾಗಿದೆ.
ಚಿತ್ರದಲ್ಲಿ ರಾಧಿಕಾ ನಾರಾಯಣ್, ಶೀತಲ್ಶೆಟ್ಟಿ, ಅರ್ಜುನ್ ಯೋಗೇಶ್ ರಾಜ್, ಸುಶಾಂತ್ ಪೂಜಾರಿ, ಶ್ವೇತಾ ಸಂಜೀವುಲು, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ಶೆಟ್ಟಿ, ರೆಹಮಾನ್ ಹಾಸನ್, ಪ್ರಿಯಾ ಷಟಮರ್ಷನ್, ವೀಣಾ ಸುಂದರ್, ಅರವಿಂದ್ ಬೋಳಾರ್, ಸುಂದರ್,ಸತೀಶ್ ಮಾಧ್ಯಮಿಕ, ಉಷಾ ಭಂಡಾರಿ, ರಾಗಶ್ರೀ, ನಾಗಾರ್ಜುನ, ಡಾ.ಕಿಂಗ್ ಮೋಹನ್, ಸಂತೋಷ್ ಶೆಟ್ಟಿ, ಪ್ರಶಾಂತ್ ಮಲ್ಲೂರು, ಕು.ಜಸ್ವಿತಾ ಮತ್ತು ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಶಿವ್ ಶೆಟ್ಟಿ ಕೆಲಸ ಮಾಡಿದ್ದು, ಕಾರ್ತಿಕ್ ಆಚಾರ್ಯ ಅವರ ಸಂಗೀತವಿದೆ. ಅನಂತರಾಜ್ ಅರಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಮಾಡಿದ್ದಾರೆ. ಸಂತೋಷ್ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ. ಡಿಫರೆಂಟ್ ಡ್ಯಾನಿ, ಚೇತನ್ ರಂಶಿ ಡಿಸೋಜಾ, ವಿನೋದ್ ಅವರು ಭರ್ಜರಿ ಮೂರು ಫೈಟ್ಸ್ಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜಿ ಸತೀಶ್ ಹಾಗು ಸುಶಾಂತ್ ಪೂಜಾರಿ ಅವರು ನೃತ್ಯ ಸಂಯೋಜನೆ ಇದೆ. ಮಂಗಳೂರು, ಬೆಂಗಳೂರು, ಹಿಮಾಚಲ ಪ್ರದೇಶ, ಉಡುಪಿ ಹಾಗು ಕೊಚ್ಚಿನ್ ಸೇರಿದಂತೆ ಇತರೆಡೆ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಚಿತ್ರದ ನಾಲ್ಕು ಹಾಡುಗಳಿಗೆ ವಿಜಯ ಪ್ರಕಾಶ್, ಸಂಚಿತ್ ಹೆಗ್ಡೆ, ಅನುರಾಧ ಭಟ್ ಧ್ವನಿಯಾಗಿದ್ದಾರೆ. ನಿರ್ದೇಶಕ ವಿಲೋಕ್ ಶೆಟ್ಟಿ, ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?