ಶೀರ್ಷಿಕೆಗಳು ಕಥೆಯಾದ ಕಥೆ!

ಏಕ್‌ ಚಿತ್ರ ಕಥಾ

Team Udayavani, Mar 20, 2020, 10:42 AM IST

ಶೀರ್ಷಿಕೆಗಳು ಕಥೆಯಾದ ಕಥೆ!

ಯಾವುದೇ ಚಿತ್ರವಿರಲಿ ಅದಕ್ಕೊಂದು ಕಥೆ ಇರುತ್ತದೆ. ಆ ಕಥೆ ಮತ್ತು ಚಿತ್ರಕ್ಕೆ ಹೊಂದುವಂಥ ಹೆಸರನ್ನು ಕೊನೆಗೆ ಚಿತ್ರದ ಶೀರ್ಷಿಕೆ ಆಗಿ ಇಡಲಾಗುತ್ತದೆ. ಆದರೆ ಕನ್ನಡದಲ್ಲಿ ಕೆಲವೊಂದು ಚಿತ್ರಗಳ ಶೀರ್ಷಿಕೆಯಲ್ಲೇ “ಕಥೆ’ ಸೇರಿಕೊಂಡಿರುತ್ತದೆ. ಹೌದು, ಕನ್ನಡದಲ್ಲಿ ಚಿತ್ರದ ಟೈಟಲ್‌ನಲ್ಲಿ “ಕಥೆ’ ಎಂದು ಸೇರಿಕೊಂಡ ಚಿತ್ರಗಳ ದೊಡ್ಡ ಸಂಖ್ಯೆಯೇ ಸಿಗುತ್ತದೆ. ಇನ್ನು ತಮ್ಮ ಚಿತ್ರದ ಟೈಟಲ್‌ನಲ್ಲಿ “ಕಥೆ’ ಎಂದು ಹೆಸರು ಸೇರಿಸಿಕೊಂಡು ಬರುತ್ತಿರುವುದಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವೇ ಇದೆ.

ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದರೆ, ಇಂಥ ಶೀರ್ಷಿಕೆಗಳ ಸಾಲಿನಲ್ಲಿ “ಒಂದು ಹೆಣ್ಣಿನ ಕಥೆ’ ಚಿತ್ರ ಮೊದಲಿಗೆ ಸಿಗುತ್ತದೆ. 1972ರಲ್ಲಿ ಬಿ.ಆರ್‌ ಪಂತುಲು ನಿರ್ದೇಶನದಲ್ಲಿ “ಒಂದು ಹೆಣ್ಣಿನ ಕಥೆ’ ಚಿತ್ರದಲ್ಲಿ ಎಂ.ವಿ ರಾಜಾ ರಾಮಣ್ಣ, ಜಯಂತಿ, ಬಿ.ವಿ ರಾಧಾ, ರಾಜೇಶ್‌, ಸುದರ್ಶನ್‌, ನರಸಿಂಹರಾಜು, ಪದ್ಮಾ, ಇಂದ್ರಾಣಿ ಮೊದಲಾದ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆನಂತರ ವಿಷ್ಣುವರ್ಧನ್‌, ದ್ವಾರಕೀಶ್‌ ಕಾಂಬಿನೇಶನ್‌ನ “ಮನೆ ಮನೆ ಕಥೆ’, ಶಂಕರ್‌ ನಾಗ್‌ ನಿರ್ದೇಶನದ “ಒಂದು ಮುತ್ತಿನ ಕಥೆ’, ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ತಬರನ ಕಥೆ’ ಚಿತ್ರಗಳು 80ರ ದಶಕದಲ್ಲಿ ಇಂಥ ಶೀರ್ಷಿಕೆ ಚಿತ್ರಗಳ ಪೈಕಿ ಸಾಕಷ್ಟು ಜನಪ್ರಿಯತೆ ಪಡೆದಿದ್ದವು.

80ರ ದಶಕದ ನಂತರವೂ ತಮ್ಮ ಚಿತ್ರದ ಶೀರ್ಷಿಕೆಯಲ್ಲಿ “ಕಥೆ’ ಎಂಬ ಪದವನ್ನು ಇಟ್ಟುಕೊಂಡು ತೆರೆಗೆ ಬಂದ ಚಿತ್ರಗಳ ಸಂಖ್ಯೆಯಲ್ಲಿ ಏನೂ ಕಡಿಮೆ ಇಲ್ಲ. “ಒಂದು ಸಿನಿಮಾ ಕಥೆ’, “ಒಂದು ಪ್ರೀತಿಯ ಕಥೆ’, “ಕಟ್ಟುಕಥೆ’, “ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ’, “ಒಂದು ಮೊಟ್ಟೆಯ ಕಥೆ’, “ಕಥೆಯೊಂದು ಶುರುವಾಗಿದೆ’, “ಅದೇ ಹಳೇ ಕಥೆ’, “ಒಂದ್‌ ಕಥೆ ಹೇಳಾÉ’, “ಕಥಾ ಸಂಗಮ’, “ಗಿಣಿ ಹೇಳಿದ ಕಥೆ’, “ಮಾತುಕಥೆ’, “ನಮ್‌ ಕಥೆ ನಿಮ್‌ ಜೊತೆ’, “ಒಂದು ರೊಮ್ಯಾಂಟಿಕ್‌ ಕ್ರೈಂ ಕಥೆ’, “ನನ್ನ ನಿನ್ನ ಪ್ರೇಮಕಥೆ’, “ಸ್ಟೋರಿ-ಕಥೆ’, “ನಮ್‌ ಹುಡುಗ್ರು ಕಥೆ’, “ಒಂದು ಶಿಕಾರಿಯ ಕಥೆ’ ಸದ್ಯ ಬಿಡುಗಡೆಗೆ ರೆಡಿಯಾಗಿರುವ “ಓಬಿರಾಯನ ಕಥೆ’, “ಒಂದು ಗಂಟೆಯ ಕಥೆ’ ಚಿತ್ರದವರೆಗೆ ಹೀಗೆ ಇಂಥ ಶೀರ್ಷಿಕೆ ಹೊತ್ತು ಹೊರಬಂದ ಚಿತ್ರಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ಸಿಗುತ್ತವೆ. ಇಷ್ಟೇ ಅಲ್ಲದೆ ವಾಣಿಜ್ಯ ಮಂಡಳಿಯಲ್ಲಿ ತಮ್ಮ ಶೀರ್ಷಿಕೆ ನೊಂದಾಯಿಸಿರುವ ಆದರೆ ಇನ್ನೂ ತೆರೆಗೆ ಬರದ ಚಿತ್ರಗಳನ್ನು ತೆಗೆದುಕೊಂಡರೆ, ಈ ಸಂಖ್ಯೆ ಕೂಡ ಸಾಕಷ್ಟು ದೊಡ್ಡದಿದೆ. ಇಷ್ಟೇ ಅಲ್ಲದೆ “ಕಥೆ’ ಎಂಬ ಪದದ ಇಂಗ್ಲಿಷ್‌ ಶೀರ್ಷಿಕೆ ಇಟ್ಟುಕೊಂಡು ಬಂದ ಸಾಕಷ್ಟು ಚಿತ್ರಗಳ ಉದಾಹರಣೆಗಳು ಸಿಗುತ್ತವೆ. “ಪೊಲೀಸ್‌ ಸ್ಟೋರಿ’, “ಪೊಲೀಸ್‌ ಸ್ಟೋರಿ-2′, “ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’, “ಕೃಷ್ಣನ್‌ ಲವ್‌ ಸ್ಟೋರಿ’, “ಸಿಂಪಲ್ಲಾಗ್‌ ಇನ್ನೊಂದು ಲವ್‌ಸ್ಟೋರಿ’, “ಒನ್‌ ಲವ್‌ ಟೂ ಸ್ಟೋರಿ’, “ಕಿರಿಕ್‌ ಲವ್‌ಸ್ಟೋರಿ’ ಹೀಗೆ ಹುಡುಕುತ್ತ ಹೋದರೆ ಇವುಗಳ ಪಟ್ಟಿ ಕೂಡ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಸಿಗುತ್ತದೆ.

ಈ ತರಹ ಶೀರ್ಷಿಕೆ ಇಡುವುದರಿಂದ ಸಿನಿಮಾಕ್ಕೇನಾದರೂ ಲಾಭವಿದೆಯೇ ಎಂದರೆ ಖಂಡಿತಾ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರಷ್ಟೇ ಟೈಟಲ್‌ನಲ್ಲಿರುವ ಕಥೆ ವಕೌìಟ್‌ ಆಗುತ್ತದೆಯಷ್ಟೇ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.