ಅಜ್ಜನ ಮದುವೆಯ ಆಲ್ಬಮ್ಮು

ಸುದೀರ್ಘ‌ ದಾಂಪತ್ಯದ ಗುಟ್ಟು ಗೊತ್ತೇ?

Team Udayavani, Apr 17, 2019, 11:30 AM IST

Avalu—Ajji

ಬಹಳ ಹಿಂದೆ ಮೊಬೈಲುಗಳೇ ಇಲ್ಲದ ಕಾಲದಲ್ಲಿ ದಾಂಪತ್ಯದಲ್ಲಿ ಸಂಗಾತಿಯ ಬರ್ತ್‌ ಡೇ, ಮೊದಲ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟಿದ ಹಬ್ಬ… ಈ ರೀತಿಯ ಯಾವ ಆಚರಣೆಗಳೂ ಇರುತ್ತಿರಲಿಲ್ಲ, ಯಾರನ್ನೋ ಮೆಚ್ಚಿಸಬೇಕೆಂಬ ಒತ್ತಡಗಳೂ ಇರುತ್ತಿರಲಿಲ್ಲ. ಹಾಗಿದ್ದೂ ಸಂಸಾರಗಳು ಸಧೃಢವಾಗಿದ್ದವು. ಆಗಿನ್ನೂ ಮದುವೆ ಎನ್ನುವುದು ಹಾಟ್‌ ಸೀಟ್‌ ಆಗಿರಲಿಲ್ಲ!

ಮೊದಲೆಲ್ಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆಗಳು ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿವೆ. ಪ್ರತಿವರ್ಷವೂ ಕೇಕ್‌ ಕತ್ತರಿಸಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಈಗಿನ ಟ್ರೆಂಡ್‌. ಬದಲಾಗುತ್ತಿರುವ ಕಾಲದಲ್ಲಿ ಈ ವಿದ್ಯಮಾನ ಅವಶ್ಯ ಮತ್ತು ಅನಿವಾರ್ಯ ಕೂಡ. ಏಕೆಂದರೆ, ಇದು ದಂಪತಿಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಆದರೆ ಹಿಂದೆಲ್ಲಾ ಸಂಗಾತಿಯ ಬರ್ತ್‌ ಡೇ, ಮೊದಲ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟಿದ ಹಬ್ಬ… ಈ ರೀತಿಯ ಯಾವ ಆಚರಣೆಗಳೂ ಇರುತ್ತಿರಲಿಲ್ಲ, ಹಾಗಿದ್ದೂ ಸಂಸಾರಗಳು ಸದೃಢವಾಗಿದ್ದವು.

ಮನೆಯಲ್ಲಿ ಕಾರ್ಪೊರೆಟ್‌ ಸಂಸ್ಕೃತಿ
ಇತ್ತೀಚಿಗಷ್ಟೆ ನನ್ನ ಅಜ್ಜನೂ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಅದು ಭರ್ತಿ ಐವತ್ತು ವರ್ಷದ ಗೋಲ್ಡನ್‌ ಜುಬಿಲಿ. 50 ವರ್ಷಗಳ ಕಾಲ, ನಾಲ್ಕಾರು ಮಕ್ಕಳನ್ನು ಹೆತ್ತು, ಅವರಿಗೆ ಉತ್ತಮ ಶಿಕ್ಷಣ ನೀಡಿ ಬಂದದ್ದೆಲ್ಲವನ್ನೂ ಅದು ಹೇಗೆ ಸರಿದೂಗಿಸಿಕೊಂಡು ಹೋದರು ಎನ್ನುವುದು ಅಚ್ಚರಿಯೇ ಸರಿ. ಇಂದು ಒಂದೇ ಒಂದು ಸಣ್ಣ ಮನಸ್ತಾಪಕ್ಕೆ ಕುಟುಂಬಗಳು ತರಗಲೆಗಳಂತೆ ಹಾರಿಹೋಗುತ್ತಿವೆ. ಅಷ್ಟು ದುರ್ಬಲ ಪರಿಸ್ಥಿತಿ ತಂದುಕೊಂಡುಬಿಟ್ಟಿದ್ದೇವೆ. ‘ಸಾರಿ’, ‘ಥ್ಯಾಂಕ್ಸ್‌’ಗಳಿಂದಲೇ ಸಂಸಾರ ನಡೆಯುತ್ತಿದೆ. ನಮ್ಮದೇ ಮನೆಯಲ್ಲಿದ್ದಾಗಲೂ ನೂರಾರು ಫಾರ್ಮಾಲಿಟಿಗಳು. ಎಷ್ಟೋ ಸಲ ಅನ್ನಿಸುವುದಿದೆ; ಇದು ಸಂಸಾರವೋ ಇಲ್ಲಾ ಕಾರ್ಪೊರೆಟ್‌ ಸಂಸ್ಥೆಯೋ ಎಂದು. ಏಕೆಂದರೆ, ಕಂಪನಿಗಳಲ್ಲಿರುವಂತೆಯೇ ಸಂಸಾರದಲ್ಲೂ ಹಲವು ನಿಯಮಾವಳಿ, ಕಟ್ಟಳೆಗಳು! ಅದಕ್ಕೇ ಹಳೆಯ ತಲೆಮಾರಿನವರನ್ನು ಕಂಡಾಗ ಅಚ್ಚರಿಯಾಗುತ್ತದೆ, ಗೌರವ ಮೂಡುತ್ತದೆ.

ಹುಡುಗಿ ನೋಡಿದ್ದು ಮದುವೆ ಮನೆಯಲ್ಲಿ!
ಅಜ್ಜನ ಕಾಲದಲ್ಲಿ ಮದುವೆಗಳು ಹೇಗಿರುತ್ತಿ­ದ್ದವು ಎಂದು ಕೇಳಿದಾಗ ನಾಚಿಕೊಳ್ಳುತ್ತಲೇ ನೆನಪಿನ ಬುತ್ತಿಯನ್ನು ಬಿಚ್ಚಿದರು. ಅಜ್ಜನಿಗೆ ಅಜ್ಜಿಯನ್ನು ನೋಡಲು ಹೋಗುವ ವಿಷಯವೇ ಗೊತ್ತಿರಲಿಲ್ಲವಂತೆ. ಹಿರಿಯರು ಅವರವರೇ ಮಾತಾಡಿಕೊಂಡು ಅಜ್ಜಿಯನ್ನು ಮೊದಲೇ ನೋಡಿ ಇಷ್ಟಪಟ್ಟು ನನ್ನಜ್ಜನಿಗೆ ಮದುವೆ ಮಾಡಿಸಿದ್ದರಂತೆ. ಅಜ್ಜ, ಅಜ್ಜಿಯನ್ನು ನೋಡಿದ್ದು ತಾಳಿಕಟ್ಟು­ವಾಗಲೇ. ಆಗ ಕಾಲವೇ ಹಾಗಿತ್ತು ಮನೆಯಲ್ಲಿನ ಹಿರಿಯರೇ ಕನ್ಯಾನ್ವೇಷಣೆಗೆ ತೆರಳುತ್ತಿದ್ದರು. ಅವರು ಹೇಳಿದ್ದೇ ವೇದವಾಕ್ಯ! ವಧು- ವರರದ್ದು ಕಣ್ಣುಮುಚ್ಚಿ ತಾಳಿ ಕಟ್ಟಿ ಸಂಸಾರ ತೂಗಿಸಿಕೊಂಡು ಹೋಗುವುದೊಂದೇ ಕೆಲಸ.

ಆಗೆಲ್ಲಾ ದಂಪತಿಗಳು ಬರ್ತ್‌ ಡೇ ಆಚರಿಸುತ್ತಿರಲಿಲ್ಲ, ಮದುವೆ ವಾರ್ಷಿಕೋತ್ಸವ ಆಚರಿಸುತ್ತಿರಲಿಲ್ಲ, ಅಪರೂಪಕ್ಕೆ ಜಾತ್ರೆಗೋ ಹಬ್ಬಕ್ಕೋ ಸೀರೆ ಕೊಡಿಸಿದರೆ ಮುಗಿಯಿತು. ದಂಪತಿಗಳು ಸದಾ ಸಂಪರ್ಕದಲ್ಲಿರಲು ಮೊಬೈಲುಗಳಿರಲಿಲ್ಲ. ಕೆಲಸಗಳು ತಮ್ಮ ಪಾಡಿಗೆ ಸಾಗುತ್ತಿದ್ದವು. ಯಾರನ್ನೋ ಮೆಚ್ಚಿಸಬೇಕೆಂಬ ಒತ್ತಡಗಳಿರುತ್ತಿರಲಿಲ್ಲ. ಇದ್ಯಾವುದರ ಆಡಂಬರವಿಲ್ಲದೆ ಅಜ್ಜ ಅಜ್ಜಿ ಪೂರಾ ಐವತ್ತು ವರ್ಷಗಳ ಸಂಸಾರ ಬಂಡಿ ಎಳೆದಿದ್ದರು. ಅವೆಲ್ಲಾ ಇಲ್ಲದೇ ಇದ್ದುದಕ್ಕೇ ಅ ಸಾಧನೆ ಸಾಧ್ಯವಾಯಿತೇನೋ?

— ಅಂಜನಾ ಎಸ್‌.ಎಚ್‌.

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.