ಗಂಗವ್ವ ಸ್ಟಾರ್‌ @ 60


Team Udayavani, Sep 11, 2019, 5:20 AM IST

t-31

ಯಶಸ್ಸು ಯಾರನ್ನು, ಯಾವ ಹೊತ್ತಿನಲ್ಲಿ ಹುಡುಕಿಕೊಂಡು ಬರುತ್ತದೋ ಹೇಳಲಾಗದು ಅಂತಾರೆ. ಆ ಮಾತಿಗೆ ತೆಲಂಗಾಣದ ಗಂಗವ್ವ ಅವರನ್ನು ಉದಾಹರಣೆಯಾಗಿ ಕೊಡಬಹುದು. ಅರವತ್ತು ವರ್ಷದ ಗಂಗವ್ವ ಈಗ ತೆಲಂಗಾಣದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌! ಜನ ಆಕೆಯ ನಟನೆ, ಭಾಷೆಯ ಶೈಲಿಗೆ ಫಿದಾ ಆಗಿದ್ದಾರೆ.

ಯೂ ಟ್ಯೂಬ್‌ ಚಾನೆಲ್‌ ಮೂಲಕ ಮನೆಮಾತಾಗಿರುವ ಗಂಗವ್ವ, ಮೂಲತಃ ಬಡ ರೈತ ಕುಟುಂಬದ ಮಹಿಳೆ. ಯೂ ಟ್ಯೂಬ್‌ ಬಿಡಿ, ಮೊಬೈಲ್‌ ಬಳಸಲು ಕೂಡಾ ಗೊತ್ತಿರದ ಅನಕ್ಷರಸ್ಥ ಮಹಿಳೆ. ತನ್ನೊಳಗೊಬ್ಬ ಕಲಾವಿದೆ ಇದ್ದಾಳೆಂಬ ವಿಷಯ ಸ್ವತಃ ಆಕೆಗೇ ಗೊತ್ತಿರಲಿಲ್ಲ. ಮನೆಗೆಲಸ, ಹೊಲದಲ್ಲಿ ದುಡಿತ, ಕೆಲವೊಮ್ಮೆ ಹೊಟ್ಟೆಪಾಡಿಗಾಗಿ ಕೂಲಿ, ಬೀಡಿ ಕಟ್ಟುವುದು… ಹೀಗೆ, ಉದರ ನಿಮಿತ್ತ ನಾನಾ ರೀತಿಯಲ್ಲಿ ದುಡಿದು ಹೈರಾಣಾಗಿದ್ದ ಗಂಗವ್ವಳ ಪ್ರತಿಭೆ ಜಗತ್ತಿಗೆ ಪರಿಚಯವಾಗಿದ್ದು 2016ರಲ್ಲಿ. ಮೈ ವಿಲೇಜ್‌ ಶೋ ಎಂಬ ಯೂ ಟ್ಯೂಬ್‌ ಚಾನೆಲ್‌, ಗಂಗವ್ವಳನ್ನು ಗುರುತಿಸಿ, ತನ್ನ ಚಾನೆಲ್‌ಗೆ ಸೇರಿಸಿಕೊಂಡಿತು. ಆ ಚಾನೆಲ್‌ನ ಮುಖ್ಯ ಉದ್ದೇಶ, ಹಳ್ಳಿಯ ಜನಜೀವನ ಮತ್ತು ಭಾಷೆಯ ಸೊಗಡನ್ನು ಬಿಚ್ಚಿಡುವುದು. ದಿನ ಕಳೆದಂತೆ ಆ ಚಾನೆಲ್‌ ಮೂಲಕ ಗಂಗವ್ವ ಎಷ್ಟು ಜನಪ್ರಿಯರಾದರು ಎಂದರೆ, ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಅವರಿಗೆ ಸಿಕ್ಕಿತು. ಅವರ ನೈಜ ನಟನೆ, ಹೊಸತನ್ನು ಕಲಿಯಲು ಅವರು ತೋರಿಸುವ ಶ್ರದ್ಧೆಯೇ ಈ ಯಶಸ್ಸಿಗೆ ಕಾರಣ ಅನ್ನುತ್ತದೆ ಯೂಟ್ಯೂಬ್‌ ಚಾನೆಲ್‌. ಜೀವನದಲ್ಲಿ ಬಹಳ ನೋವುಂಡಿರುವ ಗಂಗವ್ವ, ಒಂದು ಕಾಲದಲ್ಲಿ ಕುಡುಕ ಗಂಡನಿಂದ ದೈಹಿಕ-ಮಾನಸಿಕ ಹಿಂಸೆಗೆ ಒಳಗಾದವರಂತೆ. ಕೆಲ ವರ್ಷಗಳ ಹಿಂದೆ ಗಂಡ ತೀರಿಕೊಂಡಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.

ಟಾಪ್ ನ್ಯೂಸ್

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.