ದಿಢೀರ್‌ ತಿಂಡಿಗಳು


Team Udayavani, Nov 22, 2017, 11:16 AM IST

22-27.jpg

ಮಕ್ಕಳು ಸ್ಕೂಲ್‌ನಿಂದ ಬರುವಾಗ ಅಮ್ಮ ತಿಂಡಿ ಮಾಡಿಟ್ಟುಕೊಂಡು ಕಾಯುವುದು ಸಾಮಾನ್ಯ. ಪ್ರತಿದಿನವೂ ಹೊಸ ಹೊಸ ತಿಂಡಿ ಮಾಡಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಆದರೆ ದಿನಾ ಏನಪ್ಪಾ ಹೊಸದು ಮಾಡುವುದು ಅನ್ನೋದು ಅಮ್ಮಂದಿರ ಚಿಂತೆ. ಅಂಥ ಅಮ್ಮಂದಿರಿಗಾಗಿ ಕೆಲವು ದಿಢೀರ್‌ ತಿಂಡಿಗಳ ರೆಸಿಪಿ ಇಲ್ಲಿವೆ. 

1. ಪನೀರ್‌ ಸ್ಟಿಕ್‌
ಬೇಕಾದ ಸಾಮಗ್ರಿ:
ಪನೀರ್‌-1/4 ಕೆ.ಜಿ, ದೊಣ್ಣೆ ಮೆಣಸಿನ ಕಾಯಿ – 2 ತುಂಡು, ಜೀರಿಗೆ – 1/2 ಚಮಚ, ಟೊಮೆಟೊ, ಮೆಣಸಿನ ಪುಡಿ-1/4 ಚಮಚ, ಕರಿ ಮೆಣಸಿನ ಪುಡಿ -1/4 ಚಮಚ, ಕೊತ್ತಂಬರಿ ಸೊಪ್ಪು ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ ಹಾಕಿ. ಎಣ್ಣೆ ಬಿಸಿಯಾದ ನಂತರ ಟೊಮೆಟೊ ಪೀಸ್‌ಗಳನ್ನು ಹಾಕಿ 2-3 ನಿಮಿಷ ಕುದಿಸಿರಿ. ಪನ್ನೀರ್‌ ತುಂಡು ಮಾಡಿ, ದೊಣ್ಣೆ ಮೆಣಸಿನ ಕಾಯಿ ತುಂಡುಗಳು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದ ನಂತರ 2-3 ನಿಮಿಷ ಬೇಯಿಸಿ. ರುಚಿಗೆ ಉಪ್ಪು ಸೇರಿಸಿ, ಬ್ರೆಡ್‌ ಅಥವಾ ಚಪಾತಿ ಜೊತೆ ತಿನ್ನಲು ಕೊಡಿ.

2. ದಿಢೀರ್‌ ತಿಂಡಿಗಳು
ಬೇಕಾದ ಸಾಮಗ್ರಿ:
ಕೊತ್ತಂಬರಿ ಸೊಪ್ಪು- 1 ಕಟ್ಟು, ಹಸಿ ಮೆಣಸಿನಕಾಯಿ- 10, ಎಳ್ಳು- 2 ಚಮಚ, ಗರಂ ಮಸಾಲ- 1 ಚವåಚ, ಕಡಲೆಹಿಟ್ಟು- 125 ಗ್ರಾಂ, ಶುಂಠಿ- 1 ತುಂಡು, ಜೀರಿಗೆ- 1/2 ಚಮಚ, ಬೆಲ್ಲ ಮತ್ತು ಉಪ್ಪು, ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ರುಬ್ಬಿಟ್ಟುಕೊಳ್ಳಿ. ನಂತರ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು, ಎಳ್ಳು, ಗರಂ ಮಸಾಲ ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಸೇರಿಸಿದ ನಂತರ 3-4 ರೋಲ್‌ ಮಾಡಿ. ಗ್ಯಾಸ್‌ ಮೇಲೆ ಒಂದು ಪಾತ್ರೆಯಲ್ಲಿ ನೀರಿಟ್ಟು, ಅದರ ಮೇಲೆ ಒಂದು ತಟ್ಟೆಗೆ ಎಣ್ಣೆ ಹಚ್ಚಿ ರೋಲ್‌ಗ‌ಳನ್ನು ಹಬೆಯಲ್ಲಿ ಬೇಯಿಸಿ. ಅದು ತಣ್ಣಗಾದ ನಂತರ ಅದನ್ನು ತುಂಡು ತುಂಡು ಮಾಡಿ ಎಣ್ಣೆಯಲ್ಲಿ ಕರಿಯಿರಿ. ಹಬೆಯಲ್ಲಿ ಬೇಯಿಸಿದ ನಂತರ ಕರಿದರೆ ಜಾಸ್ತಿ ಎಣ್ಣೆ ಹೀರಿಕೊಳ್ಳುವುದಿಲ್ಲ. 

3. ಮಿನಿ ಕಟ್ಲೆಟ್‌
ಬೇಕಾದ ಸಾಮಗ್ರಿ:
ಕ್ಯಾಬೇಜ್‌ -1/4 ಕೆಜಿ, ಬಟಾಣಿ-1/4 ಕೆಜಿ, ಆಲೂಗಡ್ಡೆ -1/4 ಕೆಜಿ, ಕ್ಯಾರೆಟ್‌-100ಗ್ರಾಂ, ಸಣ್ಣ ರವೆ-1/4 ಕೆಜಿ, ಬ್ರೆಡ್‌-1, ಚಕ್ಕೆತುಂಡುಗಳು-3, ಬೆಳ್ಳುಳ್ಳಿ ಎಸಳು-4, ಲವಂಗ-3, ಈರುಳ್ಳಿ-1, ಹಸಿಮೆಣಸು-3, ಉಪ್ಪು-3/4 ಚಮಚ, ಕೊತ್ತಂಬರಿ ಸೊಪ್ಪು -1ಕಟ್ಟು.

ತಯಾರಿಸುವ ವಿಧಾನ: ಆಲೂಗೆಡ್ಡೆ ಬೇಯಿಸಿಡಿ. ಎಲ್ಲಾ ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಬೇಯಿಸಿರಿ. ಬ್ರೆಡ್‌ನ್ನು ನೀರಿನಲ್ಲಿ ನೆನೆಸಿ ತೆಗೆಯಿರಿ. ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಡಿ. ಚಕ್ಕೆ, ಲವಂಗ ಪುಡಿ ಮಾಡಿ.ಬೇಯಿಸಿದ ನೀರನ್ನು ಶೋಧಿಸಿ ಒಂದು ಪಾತ್ರೆಯಲ್ಲಿ ಇಡಿ. 

ಇವೆಲ್ಲವನ್ನೂ ಆಲೂಗೆಡ್ಡೆ ಜೊತೆಗೆ ಸೇರಿಸಿ ನಂತರ ಈರುಳ್ಳಿ ಹಾಗೂ ಮಸಾಲೆ ಸೇರಿಸಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಹಿಟ್ಟನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ತಟ್ಟಿ ರವೆಯಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕರಿಯಿರಿ. ತವಾದಲ್ಲಿ ಹಾಕಿಯೂ ಬೇಯಿಸಬಹುದು.

4. ವೆಜಿಟೆಬಲ್‌ ರೋಲ್ಸ್‌
ಬೇಕಾದ ಸಾಮಗ್ರಿ:
ಚಿರೋಟಿ ರವೆ- 1ಕಪ್‌, ಪಾಲಕ್‌- 1 ಕಟ್ಟು, ಕಡಲೆ ಹಿಟ್ಟು- 1/4 ಕಪ್‌, ಗೋಧಿ ಹಿಟ್ಟು- 1/4 ಕಪ್‌, ಮೊಸರು- 1/4 ಕಪ್‌, ಜೀರಿಗೆ ಪುಡಿ- 1/4 ಚಮಚ, ಖಾರದ ಪುಡಿ- 1/2 ಚಮಚ, ಅರಿಶಿನ ಪುಡಿ -ಒಂದು ಚಿಟಿಕೆ, ಶುಂಠಿ -1/2 ತುಂಡು, ಹಸಿಮೆಣಸಿನಕಾಯಿ -3, ಕೊತ್ತಂಬರಿ ಸೊಪ್ಪು -1/2 ಕಟ್ಟು, ಇಂಗು, ಸಕ್ಕರೆ ಹಾಗೂ ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಗೋಧಿ ಹಿಟ್ಟು, ಕಡಲೆ ಹಿಟ್ಟು ಜರಡಿ ಹಿಡಿದು ಹದವಾಗಿ ಕಲಸಿ. ಅದರ ಜೊತೆಗೆ ಚಿರೋಟಿ ರವೆ, ಹಸಿಮೆಣಸಿನಕಾಯಿ, ಖಾರದ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಚೂರು ಮಾಡಿದ ಪಾಲಕ್‌ ಶುಂಠಿ ಸೇರಿಸಿ ರೋಲ್‌ ಮಾಡಿ ಇಡಿ. ಇದನ್ನು ಹಬೆಯ ಮೇಲೆ 10 ನಿಮಿಷ ಬೇಯಿಸಿರಿ. ತಣ್ಣಗಾದ ನಂತರ ಎಲ್ಲವನ್ನೂ ಚೆನ್ನಾಗಿ ಸೇರಿಸಿ. ನಂತರ ಹಿಟ್ಟನ್ನು ಸಮವಾಗಿ ನಾದಿ. ಸ್ವಲ್ಪ ಸ್ವಲ್ಪ ನೀರು ಸೇರಿಸಬಹುದು. 3-4 ರೋಲ್‌ ಮಾಡಿ ಅದನ್ನು ಹತ್ತು ನಿಮಿಷ ಹಬೆಯ ಮೇಲೆ ಬೇಯಿಸಿ. ನಂತರ ಅದನ್ನು ಎಣ್ಣೆಯಲ್ಲಿ ಕರಿಯಿರಿ. ಸಾಸ್‌ ಜೊತೆಗೆ ಮಕ್ಕಳಿಗೆ ಸವಿಯಲು ಕೊಡಿ.

5. ಮಕ್ಕಳ ಡಬ್ಬಿ ಸ್ಪೆಶಲ್‌ 
ಬೇಕಾದ ಸಾಮಗ್ರಿ:
ಬ್ರೆಡ್‌ ತುಂಡು -2, ಚಿರೋಟಿ ರವೆ-1 ಕಪ್‌, ಮೊಸರು -1 ಕಪ್‌, ಹಸಿಮೆಣಸಿನ ಕಾಯಿ-1, ಶುಂಠಿ -1 ಚಿಕ್ಕ ತುಂಡು, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಸಾಸಿವೆ, ಕರಿಬೇವು.

ತಯಾರಿಸುವ ವಿಧಾನ: ಶುಂಠಿ ಹಾಗೂ ಹಸಿಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ. ನಂತರ ರವೆ, ಮೊಸರು, ಉಪ್ಪು ಹಾಗೂ ಬ್ರೆಡ್‌ ಪುಡಿಯನ್ನು ಚೆನ್ನಾಗಿ ಕೈಯಿಂದ ಕಲಸಿರಿ. ಒಗ್ಗರಣೆ ಹಾಕಿ, ಹತ್ತು ನಿಮಿಷ ಹಾಗೇ ಇಡಿ. ಈಗ ಒಂದೊಂದು ಕಟೋರಿಗೆ ಎಣ್ಣೆ ಸವರಿ ಇದನ್ನು ಹಾಕಿ. ಇಡ್ಲಿ ತಟ್ಟೆಯಲ್ಲೂ ಹಾಕಬಹುದು. ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಇದು ಬಲು ರುಚಿ. ಕ್ಯಾರೆಟ್‌ ತುರಿದು, ಪಾಲಕ್‌ ಸೇರಿಸಿದರೂ ಆದೀತು. 

ಹೀರಾ ಆರ್‌.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.