ಬಿಸಿಲ ಧಗೆಗೆ ಹಸಿರು ತಂಬುಳಿಗಳು


Team Udayavani, Mar 24, 2017, 3:50 AM IST

24MAHILA-SAMPADA-6.jpg

ಇನ್ನೇನು ಬೇಸಿಗೆ ಪ್ರಾರಂಭವಾಯಿತು. ತಡೆಯಲಾರದ ಬಿಸಿಲ ಧಗೆಗೆ ದೇಹ ಮನಸ್ಸು ತಂಪಿಗಾಗಿ ಹಪಾಹಪಿಸುವಂತಾಗುತ್ತದೆ. ಹಿತ್ತಲಲ್ಲೇ ಇರುವ ಹಸಿರು ಸೊಪ್ಪುಗಳು, ಜೀರಿಗೆ, ಮಜ್ಜಿಗೆ ಇತ್ಯಾದಿ ಬಳಸಿ ತಯಾರಿಸುವ ಹಸಿರು ತಂಬುಳಿಗಳ ಸೇವನೆ ನಾಲಗೆಯ ರುಚಿಯನ್ನು ವೃದ್ಧಿಸುವುದರ ಜೊತೆಗೆ ಶರೀರವನ್ನೂ ತಂಪಾಗಿಸುತ್ತದೆ.

ಸಾಂಬಾರು ದೊಡ್ಡಪತ್ರೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಹೆಚ್ಚಿದ  ಸೊಪ್ಪು- ಅರ್ಧ ಕಪ್‌, ತೆಂಗಿನ ತುರಿ – ಒಂದು ಕಪ್‌, ಜೀರಿಗೆ – ಒಂದು ಚಮಚ, ಕಾಳುಮೆಣಸು – ಎಂಟು,  ಮಜ್ಜಿಗೆ – ಒಂದು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಬಾಣಲೆಗೆ ಒಂದು ಚಮಚ ತುಪ್ಪಹಾಕಿ ಕಾಳುಮೆಣಸನ್ನು ಹುರಿದುಕೊಂಡು ನಂತರ ಇದೇ ಬಾಣಲೆಯಲ್ಲಿ ಸಾಂಬಾರು ಸೊಪ್ಪನ್ನು  ಬಾಡಿಸಿಕೊಳ್ಳಿ. ಆರಿದ ಮೇಲೆ ಬಾಡಿಸಿದ ಸೊಪ್ಪನ್ನು  ಕಾಳುಮೆಣಸು, ಜೀರಿಗೆ, ತೆಂಗಿನತುರಿ, ಉಪ್ಪು$ ಹಾಗೂ ಸ್ವಲ್ಪ ಮಜ್ಜಿಗೆ ಜೊತೆ ಮಿಕ್ಸಿಜಾರಿನಲ್ಲಿ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ನಲ್ಲಿ ಹಾಕಿ ಬೇಕಷ್ಟು ನೀರು ಹಾಗೂ ಉಳಿದ ಮಜ್ಜಿಗೆ ಸೇರಿಸಿ ತಂಬುಳಿಯ ಹದ ಮಾಡಿಕೊಂಡು ತುಪ್ಪದಲ್ಲಿ ಜೀರಿಗೆ ಒಗ್ಗರಣೆ ನೀಡಿ.

ಕಫ‌ ಕಡಿಮೆ ಮಾಡುವ ಕ್ರಿಮಿಹರವಾದ ಈ ತಂಬುಳಿಯ ಸೇವನೆ ಚಿಣ್ಣರಿಗಂತೂ ಬಹಳ ಉತ್ತಮ.

ನೆಲನೆಲ್ಲಿ ಸೊಪ್ಪು ತಂಬುಳಿ

ಬೇಕಾಗುವ ಸಾಮಗ್ರಿ: ನೆಲನೆಲ್ಲಿ ಸೊಪ್ಪು- ಒಂದು ಹಿಡಿ, ಕಾಳುಮೆಣಸು – ಆರು, ತೆಂಗಿನತುರಿ – ಅರ್ಧ ಕಪ್‌, ಮಜ್ಜಿಗೆ – ಒಂದು ಕಪ್‌, ಉಪ್ಪು ರುಚಿಗೆ. 

ತಯಾರಿಸುವ ವಿಧಾನ: ಸ್ವತ್ಛಗೊಳಿಸಿದ ಸೊಪ್ಪನ್ನು ಹೆಚ್ಚಿಕೊಂಡು ಸ್ವಲ್ಪ$ಮಜ್ಜಿಗೆ, ಉಪ್ಪು , ತೆಂಗಿನ ತುರಿ, ಕಾಳುಮೆಣಸಿನ ಜೊತೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಬೇಕಷ್ಟು ನೀರು ಹಾಗೂ ಉಳಿದ ಮಜ್ಜಿಗೆ ಬೆರೆಸಿ ತುಪ್ಪದಲ್ಲಿ ಕೆಂಪುಮೆಣಸು, ಜೀರಿಗೆ ಸೇರಿಸಿದ ಸಾಸಿವೆ ಒಗ್ಗರಣೆ ನೀಡಿದರೆ ತಂಬುಳಿ ರೆಡಿ.

      ಪಿತ್ತಶಮನಕಾರಿಯಾದ ಇದರ ಸೇವನೆಯಿಂದ ಹಸಿವು ವೃದ್ಧಿಸುವುದು ಹಾಗೂ ಕಾಮಾಲೆಗೆ ಬಹಳ ಉತ್ತಮ.

ದಾಸವಾಳ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ : ದಾಸವಾಳ ಸೊಪ್ಪು- ಒಂದು ಹಿಡಿ, ತೆಂಗಿನ ತುರಿ- ಅರ್ಧ ಕಪ್‌, ಜೀರಿಗೆ- ಒಂದು ಚಮಚ, ಮಜ್ಜಿಗೆ- ಒಂದು ಕಪ್‌, ಉಪ್ಪು  ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿದ ದಾಸವಾಳ ಸೊಪ್ಪನ್ನು ಬಾಣಲೆಯಲ್ಲಿ ಸ್ವಲ್ಪ ತುಪ್ಪಹಾಕಿಕೊಂಡು ಬಾಡಿಸಿಕೊಳ್ಳಿ. ಆರಿದಮೇಲೆ ಇದಕ್ಕೆ ತೆಂಗಿನ ತುರಿ, ಜೀರಿಗೆ, ಉಪ್ಪು ಮತ್ತು ಸ್ವಲ್ಪ ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು, ಮಜ್ಜಿಗೆ ಸೇರಿಸಿ ತಂಬುಳಿ ಹದ ಮಾಡಿಕೊಂಡು ಸಾಸಿವೆ ಒಗ್ಗರಣೆ ನೀಡಿ.

ವಾತ, ಪಿತ್ತಹರವಾದ ತಂಪು ಗುಣದ ಈ ತಂಬುಳಿಯ ಸೇವನೆ ಬೇಸಿಗೆಗೆ ಬಹಳ ಹಿತ ನೀಡುವುದು. ಉಷ್ಣದಿಂದಾಗಿ ಪದೇಪದೆ ಕುರ, ಬೊಕ್ಕೆಗಳು ಬೀಳುವವರಿಗಂತೂ ಇದರ ಸೇವನೆ ಬಹಳ ಉತ್ತಮ

ಕೊತ್ತಂಬರಿ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: ಕೊತ್ತಂಬರಿ ಸೊಪ್ಪು- ಒಂದು ಹಿಡಿ, ತೆಂಗಿನ ತುರಿ – ಅರ್ಧ ಕಪ್‌, ಮಜ್ಜಿಗೆ – ಒಂದು ಕಪ್‌, ಕಾಳುಮೆಣಸು – ಆರು, ಜೀರಿಗೆ- ಒಂದು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿಕೊಂಡ ಸೊಪ್ಪನ್ನು ತೆಂಗಿನ ತುರಿ, ಕಾಳುಮೆಣಸು, ಉಪ್ಪು ಹಾಗೂ ಸ್ವಲ್ಪ ಮಜ್ಜಿಗೆ ಜೊತೆ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಉಳಿದ ಮಜ್ಜಿಗೆ ಸೇರಿಸಿ ಹದ ಮಾಡಿಕೊಂಡು ಜೀರಿಗೆ ಒಗ್ಗರಣೆ ನೀಡಿ.

ಸುವಾಸನಾಯುಕ್ತವಾದ ತಂಪುಗುಣದ ಈ ತಂಬುಳಿಯ ಸೇವನೆ ರಕ್ತಶುದ್ಧಿಗೆ, ಅಜೀರ್ಣಕ್ಕೆ ಬಹಳ ಉತ್ತಮ.

ಗೀತಸದಾ

ಟಾಪ್ ನ್ಯೂಸ್

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.