ಹಬ್ಬಕ್ಕಾಗಿ ಖಾರ, ಸಿಹಿ ಖಾದ್ಯಗಳು


Team Udayavani, Aug 30, 2019, 5:42 AM IST

f-23

ಶ್ರಾವಣ, ಭಾದ್ರಪದ, ಆಶ್ವಯುಜ ಮಾಸಗಳಲ್ಲಿ ವಿವಿಧ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಈ ತಿಂಗಳುಗಳಲ್ಲಿ ದೊರೆಯುವ ವಿವಿಧ ಸೊಪ್ಪು , ತರಕಾರಿಗಳ ಸಿಹಿ-ಖಾರ ಖಾದ್ಯಗಳನ್ನು ತಯಾರಿಸುವರು. ದೇವರಿಗೆ ನೈವೇದ್ಯ ಮಾಡಿ ಹಬ್ಬದಡುಗೆ ಹಂಚಿ ತಿನ್ನುವ ಪದ್ಧತಿ ಇದೆ. ಹೋಳಿಗೆ, ಕಡುಬು, ಪಡ್ಡು , ಚುರ್ಮಿ ಲಾಡು, ಎಳ್ಳುಂಡೆ ಇತ್ಯಾದಿ ಆರೋಗ್ಯದಾಯಕ ಖಾದ್ಯಗಳನ್ನು ಹಿತಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಬಹುದು.

ಕಾಡು ಹಾಗಲ/ ಫಾಗಿಳ ಪೋಡಿ
ಬೇಕಾಗುವ ಸಾಮಗ್ರಿ: ಕಾಡುಹಾಗಲ 6-7, ಒಣ ಮೆಣಸಿನಕಾಯಿ ಹುಡಿ 4-5 ಚಮಚ, ರುಚಿಗೆ ಉಪ್ಪು, ಇಂಗಿನ ನೀರು- 1 ಚಮಚ, ಅರಸಿನ ಹುಡಿ- 1/4 ಚಮಚ, ಅಕ್ಕಿಹಿಟ್ಟು 4-5 ಚಮಚ, ಕರಿಯಲು ಎಣ್ಣೆ , ಬೊಂಬಾಯಿ ರವೆ 4-5 ಚಮಚ.

ತಯಾರಿಸುವ ವಿಧಾನ: ಕಾಡು ಹಾಗಲ ತೊಳೆದು ಉದ್ದಕ್ಕೆ ತುಂಡರಿಸಿ ಪಾತ್ರೆಯಲ್ಲಿ ಅರಸಿನ ಹುಡಿ, ಒಣಮೆಣಸಿನ ಹುಡಿ, ಅಕ್ಕಿಹಿಟ್ಟು , ಉಪ್ಪು , ಇಂಗಿನ ನೀರು ಹಾಕಿ ಚೆನ್ನಾಗಿ ಕಲಸಿ ತುಂಡರಿಸಿದ ಕಾಡು ಹಾಗಲಕ್ಕೆ ಸವರಿ ಹದಿನೈದು ನಿಮಿಷ ಇಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಕಾಡು ಹಾಗಲವನ್ನು ರವೆಯಲ್ಲಿ ಹೊರಳಿಸಿ ಐದಾರು ತುಂಡು ಹಾಕಿ ಹೊಂಬಣ್ಣ ಬರುವವರೆಗೆ ಕಾಯಿಸಿ ತೆಗೆಯಿರಿ.

ಗೋಧಿ ಗುಳಿ ಅಪ್ಪ / ಪಡ್ಡು
ಬೇಕಾಗುವ ಸಾಮಗ್ರಿ: ಗೋಧಿ- 1 ಕಪ್‌, ತೆಂಗಿನತುರಿ- 1 ಕಪ್‌, ಬೆಲ್ಲ- 1/2 ಕಪ್‌, ಅವಲಕ್ಕಿ- 1 ಕಪ್‌, ತುಪ್ಪ ಪಡ್ಡು ತೆಗೆಯಲು, ಚಿಟಿಕೆ ಉಪ್ಪು , ಏಲಕ್ಕಿ ಹುಡಿ.

ತಯಾರಿಸುವ ವಿಧಾನ: ಗೋಧಿಯನ್ನು ಹಿಂದಿನ ರಾತ್ರಿ ನೀರಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ತೊಳೆದು ನೀರು ಬಸಿದು ತೆಂಗಿನತುರಿ, ಬೆಲ್ಲ, ತೊಳೆದ ಅವಲಕ್ಕಿ ಹಾಕಿ ನಯವಾಗಿ ರುಬ್ಬಿ ಉಪ್ಪು ಏಲಕ್ಕಿ ಹುಡಿ ಬೆರೆಸಿರಿ. ಪಡ್ಡು ಕಾವಲಿ ಕಾದ ಮೇಲೆ ತುಪ್ಪ ಹಾಕಿ ಸೌಟಿನಿಂದ ಹಿಟ್ಟು ಹಾಕಿ ಹದ ಉರಿಯಲ್ಲಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಅವಲಕ್ಕಿಯ ಬದಲು ಹೊದಲು ಹಾಕಬಹುದು.

ಎಳ್ಳುಂಡೆ
ಬೇಕಾಗುವ ಸಾಮಗ್ರಿ: ಎಳ್ಳು- 1 ಕಪ್‌, ಬೆಲ್ಲ- 1/2 ಕಪ್‌, ತುಪ್ಪ- 2 ಚಮಚ.

ತಯಾರಿಸುವ ವಿಧಾನ: ಎಳ್ಳನ್ನು ಮಣ್ಣು ಇಲ್ಲದಂತೆ ನೀರಿನಲ್ಲಿ ಗಾಳಿಸಿ ತೆಗೆದು ಬಟ್ಟೆಯ ಮೇಲೆ ಹರಡಿ ಒಣಗಿಸಿರಿ. ಬಾಣಲೆಯಲ್ಲಿ ಎಳ್ಳು ಹಾಕಿ ಹುರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಹದ ಪಾಕ ಮಾಡಿ ಕೂಡಲೆ ಎಳ್ಳು ಬೆರೆಸಿರಿ. ಅಂಗೈಗೆ ತುಪ್ಪ ಹಚ್ಚಿ ಚಿಕ್ಕ ಚಿಕ್ಕ ಉಂಡೆ ಕಟ್ಟಿರಿ. ಆರೋಗ್ಯದಾಯಕ ಎಳ್ಳುಂಡೆ ಮಕ್ಕಳಿಗೂ, ಮಹಿಳೆಯರಿಗೂ ಉತ್ತಮ ಸಿಹಿ ಖಾದ್ಯ.
ಚುರ್ಮಿ ಲಾಡು/ಚುರ್ಮುಂಡೊ

ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 1 ಕಪ್‌, ಬೊಂಬಾಯಿ ರವೆ- 4 ಚಮಚ, ಕಡಲೆಹಿಟ್ಟು- 2 ಚಮಚ, ಸಕ್ಕರೆ ಹುಡಿ- 3/4 ಕಪ್‌, ತುಪ್ಪ- 1/2 ಕಪ್‌, ಏಲಕ್ಕಿ ಹುಡಿ- 1 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಕಿ ಗೋಧಿಹಿಟ್ಟು , ರವೆ, ಕಡಲೆಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದು ಸಕ್ಕರೆ ಹುಡಿ, ಏಲಕ್ಕಿ ಹಾಕಿ ಮಗುಚಿರಿ. ಅಂಗೈಗೆ ತುಪ್ಪ ಸವರಿ ಉಂಡೆ ಕಟ್ಟಿರಿ. ಕಟ್ಟಲು ಕಷ್ಟವಾದರೆ ತುಪ್ಪ ಜಾಸ್ತಿ ಹಾಕಬಹುದು ಇಲ್ಲವೆ ಬಿಸಿಹಾಲು ಹಾಕಬಹುದು. ಘಮ ಘಮ ಚುರ್ಮಿಲಾಡು ತಯಾರ್‌.

ಎಸ್‌. ಜಯಶ್ರೀ ಶೆಣೈ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.