ಹಿಮ ಸುಂದರಿ ಯಾಮಿ ಗೌತಮ್‌


Team Udayavani, Jan 6, 2017, 3:45 AM IST

Yami-Gautam-Photoshoot-in-P.jpg

ಹಿಮದ ನಾಡಿನ ಹುಡುಗಿ ಯಾಮಿ ಗೌತಮ್‌ ಬಾಲಿವುಡ್‌ನ‌ಲ್ಲೀಗ ದೊಡ್ಡ ಕ್ಯಾನ್ವಾಸ್‌ಗೆ ಪಾದಾರ್ಪಣೆ ಮಾಡುವ ಸನ್ನಾಹದಲ್ಲಿದ್ದಾಳೆ. ಹೃತಿಕ್‌ ರೋಶನ್‌ ನಾಯಕನಾಗಿರುವ ಕಾಬಿಲ್‌ ಯಾಮಿ ಭಾರೀ ನಿರೀಕ್ಷೆಯಿಟ್ಟುಕೊಂಡಿರುವ ಚಿತ್ರ. ವರ್ಷಾರಂಭದಲ್ಲಿ ಬಿಡುಗಡೆಯಾಗಲಿರುವ ಕಾಬಿಲ್‌  ತನಗೆ ಬಾಲಿವುಡ್‌ನ‌ಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು ಎಂದು ಯಾಮಿ ನಿರೀಕ್ಷಿಸುತ್ತಿದ್ದಾಳೆ. 

ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ಯಾಮಿ ಗೌತಮ್‌ ಮೊದಲು ಬಣ್ಣ ಹಚ್ಚಿದ್ದು ಕನ್ನಡ ಚಿತ್ರದಲ್ಲಿ. ಉಲ್ಲಾಸ ಉತ್ಸಾಹ ಎನ್ನುವ ಈ ಚಿತ್ರ ದೊಡ್ಡ ಯಶಸ್ಸು ಕಾಣದಿದ್ದರೂ ಯಾಮಿಗೊಂದು ಪ್ಲ್ರಾಟ್‌ಫಾರ್ಮ್ ಒದಗಿಸಿತು. ಅನಂತರ ತಮಿಳು, ತೆಲುಗು, ಮಲಯಾಳ, ಪಂಜಾಬಿ ಎಂದೆಲ್ಲ ತಿರುಗಾಡಿದ ಯಾಮಿ ವಿಕ್ಕಿ  ಡೋನರ್‌ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಳು. ದೊಡ್ಡ ತಾರೆಯರು ಇಲ್ಲದಿದ್ದರೂ ಸಾಮಾಜಿಕ ಕಳಕಳಿಯ ಸಂದೇಶ ಹೊಂದಿದ್ದ ವಿಕ್ಕಿ  ಡೋನರ್‌ ಅಚ್ಚರಿಯೆಂಬಂತೆ ಸೂಪರ್‌ಹಿಟ್‌ ಆದದ್ದು ಯಾಮಿಯ ಅದೃಷ್ಟದ ಬಾಗಿಲು ತೆರೆಯಲು ಸಹಕಾರಿಯಾಯಿತು. 

ಅನಂತರ ಟೋಟಲ್‌ ಸಿಯಪ್ಪ, ಆ್ಯಕ್ಷನ್‌ ಜಾಕ್ಸನ್‌, ಬದ್ಲಾಪುರ್‌, ಸನಮ್‌ ರೇ, ಜುನೂನಿಯತ್‌ ಮತ್ತಿತರ ಭಿನ್ನ ಅಭಿರುಚಿಯ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಳು. ಇಷ್ಟಾದರೂ ಹಿಂದಿ ಚಿತ್ರರಂಗದಲ್ಲಿ ಆಕೆಗೆ ದೊಡ್ಡ ಮಟ್ಟದ ಬ್ರೇಕ್‌ ಸಿಕ್ಕಿರಲಿಲ್ಲ. ಇದೀಗ ಕಾಬಿಲ್‌ನಲ್ಲಿ ಹೃತಿಕ್‌ ರೋಶನ್‌ಗೆ ನಾಯಕಿಯಾಗುವ ಮೂಲಕ ಈ ಕೊರತೆಯೂ ನೀಗಿದೆ. ಕಾಬಿಲ್‌  ಗೆದ್ದರೆ ಅಗ್ರಪಂಕ್ತಿಯ ನಾಯಕಿಯರ ಸಾಲಿನಲ್ಲಿ ಮೆರೆಯುವ ಅವಕಾಶ ಯಾಮಿಯದ್ದಾಗಲಿದೆ. 

ಹೃತಿಕ್‌ ಜತೆಗೆ ನಟಿಸಿದ ನಟಿಯರೆಲ್ಲ ಅನಂತರ ದೊಡ್ಡ ಮಟ್ಟದಲ್ಲಿ ಮಿಂಚಿರುವುದರಿಂದ ಯಾಮಿಯೂ ಈ ಕನಸು ಕಾಣುತ್ತಿದ್ದಾಳೆ. ಕಾಬಿಲ್‌ ಮುಗಿದ ಬೆನ್ನಿಗೆ ಯಾಮಿ ಸರ್ಕಾರ್‌ 3 ಚಿತ್ರದಲ್ಲಿ ನಟಿಸಲಿದ್ದಾಳೆ. ಇದು ಕೂಡ ದೊಡ್ಡ ಬ್ಯಾನರ್‌ ಚಿತ್ರ. ಸರ್ಕಾರ್‌ನ ಮೊದಲಿನ ಎರಡು ಭಾಗಗಳು ಭಾರೀ ಯಶಸ್ಸು ಕಂಡಿವೆ. ಹೀಗಾಗಿ 3ನೇ ಭಾಗದ ಬಗ್ಗೆ ಕುತೂಹಲವಿದೆ. ರಾಮ್‌ ಗೋಪಾಲ್‌ ವರ್ಮನ ಚಿತ್ರವಾಗಿರುವುದರಿಂದ ಸಹಜವಾಗಿಯೇ ಯಾಮಿ ಸರ್ಕಾರ್‌ 3  ಮೇಲೆ ಅಪಾರ ಭರವಸೆಯಿಟ್ಟಿದ್ದಾಳೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.