ಸಮಸ್ಯೆ ಯಾರಿಗಿಲ್ಲ ಹೇಳಿ !


Team Udayavani, Nov 30, 2018, 6:00 AM IST

13.jpg

ಈ ಭೂಮಿ ಮೇಲಿರೋ ಪ್ರತಿಯೊಂದು ಜೀವಿಯೂ ತನ್ನದೇ ಆದ ಸಮಸ್ಯೆಯನ್ನು ದಿನನಿತ್ಯ ಎದುರಿಸುತ್ತಿರುತ್ತದೆ. ಅಂತಹುದರಲ್ಲಿ ಮನುಷ್ಯನಿಗೆ ಸಮಸ್ಯೆ ಬರುವುದು ಆಶ್ಚರ್ಯವಲ್ಲ. ಸಮಸ್ಯೆ ಬಂದಾಗ ಅದನ್ನು ಎದುರಿಸುವುದೇ ಎಲ್ಲಾ ಸಮಸ್ಯೆಗಳ ಮೊದಲ ಪರಿಹಾರ. ಆದರೆ, ಈಗಿನ ಜನಾಂಗದವರಿಗೆ ಎಲ್ಲ ಸಮಸ್ಯೆಗಳಿಗೂ ಸಾವೊಂದೇ ಪರಿಹಾರವಾಗಿಬಿಟ್ಟಿದೆ. ಇದು ನನ್ನ ಪ್ರಕಾರ ಅಕ್ಷರಶಃ ತಪ್ಪು. ಕೋಟಿಗಟ್ಟಲೆ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಶ್ರೀಮಂತನಿಂದ ಹಿಡಿದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡೋ ಕೂಲಿ ಕಾರ್ಮಿಕನಿಗೂ ಸಮಸ್ಯೆಯಿರುತ್ತದೆ. 

ನಾನು ಮೊದಲೇ ಹೇಳಿದ ಹಾಗೆ ಸಮಸ್ಯೆಯೇ ಸಾಧನೆಯ ಮೊದಲ ಮೆಟ್ಟಿಲು. ಇವತ್ತು ಒಬ್ಬ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿದನೆಂದರೆ ಅದಕ್ಕೆ ಕಾರಣ ಅವನ ಸಮಸ್ಯೆಯೇ. ಇದಕ್ಕೆ ಮಾದರಿಯಾಗಿ ನಮ್ಮ ನೆಚ್ಚಿನ ವಿಜ್ಞಾನಿ ಅಬ್ದುಲ್‌ ಕಲಾಂರನ್ನು ತೆಗೆದುಕೊಳ್ಳೋಣ. ಕಲಾಂ ಅವರ ಬಗ್ಗೆ ತಿಳಿದಿರುತ್ತೀರಿ. ಆದರೆ, ಮತ್ತೆ ವಿವರಿಸಬೇಕಿದೆ. ಕಲಾಂರವರು ಒಂದು ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ಕಿತ್ತು ತಿನ್ನುವ ಬಡತನವಿದ್ದರೂ ಅದನ್ನೆಲ್ಲ ಲೆಕ್ಕಿಸದೆ ಪೇಪರ್‌ ಮಾರಿಯಾದರೂ ವಿದ್ಯಾಭ್ಯಾಸವನ್ನು ಪೂರೈಸಿ ಕೊನೆಗೊಂದು ದಿನ ಭಾರತ ದೇಶ ಕಂಡ ಭಾರತದ ಕನಸುಗಾರರಾದರು. ಒಂದು ವೇಳೆ ಅವರನ್ನು ಆವರಿಸಿದ್ದ ಕಿತ್ತು ತಿನ್ನುವ ಬಡತನದಿಂದ ವಿದ್ಯಾಭ್ಯಾಸವನ್ನು ಬಿಟ್ಟು ಕೂಲಿ ಕೆಲಸಕ್ಕೊ ಅಥವಾ ವ್ಯಾಪಾರವನ್ನು ಮಾಡಿಕೊಂಡಿರುತ್ತಿದ್ದರೆ  ಇವತ್ತು ಅವರ ಹೆಸರು ಭಾರತೀಯರ ಮನದಲ್ಲಿ ಅಜರಾಮರವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ತಾನು  ನನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ತೊಟ್ಟಿದ್ದರಿಂದ ವಿಜ್ಞಾನಿಯಾಗಿ ಹೊರಹೊಮ್ಮಿದರು. ಅದಕ್ಕೇ ಹೇಳಿದ್ದು  ಸಮಸ್ಯೆಗಳೇ ಸಾಧನೆಯ ಮೊದಲ ಮೆಟ್ಟಿಲು ಅಂತ. ಜೀವನವಿಡೀ ಸುಖದಲ್ಲಿದ್ದರೆ ಅದು ನಿಜವಾದ ಜೀವನ ಅಲ್ಲ. ಯಾವಾಗ ಸಮಸ್ಯೆಗಳು ಎದುರಾಗಿ ಅದಕ್ಕೆ ಪರಿಹಾರವನ್ನು ಹುಡುಕಿ ಮುಂದೆ ಸಾಗುತ್ತೇವೆಯೋ ಅದು ನಿಜವಾದ ಜೀವನವಾಗಿರುತ್ತದೆ. 

ಕೆಲವೊಮ್ಮೆ ಸಮಸ್ಯೆ ಬರುವುದಕ್ಕಿಂತ ಮೊದಲು ಪರಿಹಾರ ಬಂದಿರುತ್ತದೆ. ಅದನ್ನು ನಾವು ಗುರುತಿಸಬೇಕು. ಎಲ್ಲ ಸಮಸ್ಯೆಗೆ ಸಾವೇ ಪರಿಹಾರವಲ್ಲ. ಸಮಸ್ಯೆ ಬರುವುದು ಸಾಧನೆಗೆ ಮೆಟ್ಟಿಲಾಗಿಯೇ ಹೊರತು ತೊಂದರೆಯಾಗಿ ಅಲ್ಲ. ಅದನ್ನು ಮೊದಲು ಮನಗೊಳ್ಳಬೇಕಿದೆ.

ಇಫಾಜ್‌
ಪತ್ರಿಕೋದ್ಯಮ ವಿಭಾಗ, ಎಪಿಎಂ ಸರಕಾರಿ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.