ಪ್ಲಾಸ್ಟಿಕ್‌ ತಿನ್ನುವ ಬ್ಯಾಕ್ಟಿರೀಯಾ ತಳಿಗಳನ್ನು ಪತ್ತೆ ಹಚ್ಚಿದ ಭಾರತೀಯ ವಿಜ್ಞಾನಿಗಳು


Team Udayavani, Oct 11, 2019, 5:10 PM IST

Plastic-Symbolic-01-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಇಡೀ ವಿಶ್ವವನ್ನೇ ಕಂಗೆಡಿಸಿರುವ ಪ್ಲಾಸ್ಟಿಕ್‌ ಎಂಬ ಆಧುನಿಕ ರಾಕ್ಷಸನ ನಿಯಂತ್ರಣ ಮತ್ತು ನಿರ್ಮೂಲನೆಗೆ ಜಗತ್ತಿನಾದ್ಯಂತ ವಿಭಿನ್ನ ಪ್ರಯತ್ನಗಳು ಹಾಗೂ ಅಭಿಯಾನಗಳು ನಡೆಯುತ್ತಲೇ ಇವೆ. ಇಷ್ಟೆಲ್ಲಾ ಆದರೂ ಪ್ಲಾಸ್ಟಿಕ್ ಸಮಸ್ಯೆಗೊಂದು ಮುಕ್ತಿಯೇ ಸಿಕ್ಕಿಲ್ಲ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲೊಂದು ಶುಭ ಸಮಾಚಾರ ಸಿಕ್ಕಿದೆ.

ಪ್ಲಾಸ್ಟಿಕ್ ಎಂಬ ವಿಷಮಾರಿಯನ್ನುತಿಂದು ಜೀರ್ಣೀಸಿಕೊಳ್ಳಬಹುದಾಗಿರುವ ಎರಡು ಬ್ಯಾಕ್ಟಿರಿಯಾ ತಳಿಗಳು ಗ್ರೇಟರ್ ನೋಯ್ಡಾದ ಜೌಗು ನೆಲದಲ್ಲಿ ಪತ್ತೆಯಾಗಿದೆ. ಗ್ರೇಟರ್‌ ನೋಯಿಡಾದ ಶಿವ ನಾಡಾರ್‌ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಸಂಶೋಧಕರ ತಂಡವೊಂದು ಈ ಬ್ಯಾಕ್ಟೀರಿಯಾ ತಳಿಗಳನ್ನು ಪತ್ತೆ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ ವಸ್ತುಗಳಲ್ಲಿರುವ ಪ್ರಮುಖ ಅಂಶವಾಗಿರುವ ಪಾಲಿಸ್ಟಿರೇನ್ ಅನ್ನು ವಿಭಜಿಸುವ ಸಾಮರ್ಥ್ಯವನ್ನು ಈ ಬ್ಯಾಕ್ಟೀರಿಯಾಗಳು ಹೊಂದಿವೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ವಿಶ್ವವಿದ್ಯಾನಿಲಯದ ಸಮೀಪದಲ್ಲೇ ಇರುವ ಜೌಗು ಪ್ರದೇಶದಲ್ಲಿ ಪತ್ತೆಯಾಗಿರುವ ಈ ಬ್ಯಾಕ್ಟೀರಿಯಾಗಳ ಎರಡು ತಳಿಗಳಿಗೆ ಇಲ್ಲಿನ ವಿಜ್ಞಾನಿಗಳು ಎಕ್ಸಿಗ್ಯೂಬ್ಯಾಕ್ಟೀರಿಯಂ ಸಿಬಿರಿಕಂ ಸ್ಟ್ರೈನ್ ಡಿ.ಆರ್.11 ಮತ್ತು ಎಕ್ಸಿಗ್ಯೂಬ್ಯಾಕ್ಟೀರಿಯಂ ಅನ್ ಡ್ಯಾ ಸ್ಟ್ರೈನ್ ಡಿ.ಆರ್.14 ಎಂದು ಹೆಸರನ್ನಿರಿಸಿದ್ದಾರೆ.

ಪಾಲಿಸ್ಟಿರೇನ್ ನಲ್ಲಿ ಅಣುಗಳ ತೂಕ ಹೆಚ್ಚಾಗಿರುವುದರಿಂದ ಮತ್ತು ದೀರ್ಘ ಪಾಲಿಮರ್ ಸಂರಚನೆಯನ್ನು ಇದು ಹೊಂದಿರುವುದರಿಂದ ಇದನ್ನು ವಿಭಜಿಸುವುದು ಅತೀ ಕಷ್ಟಸಾಧ್ಯವಾಗಿದೆ. ಹಾಗಾಗಿ ಪಾಲಿಸ್ಟಿರೇನ್ ಅಂಶ ಹೊಂದಿರುವ ಪ್ಲಾಸ್ಟಿಕ್ ಉತ್ಪನ್ನಗಳು ಅದೆಷ್ಟೋ ಸಮಯಗಳವರೆಗೆ ಮಣ್ಣಿನಲ್ಲಿ ಕರಗದೇ ಹಾಗೆಯೇ ಉಳಿದುಕೊಂಡಿರುತ್ತದೆ. ಈ ಎಲ್ಲಾ ಅಂಶಗಳನ್ನು ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಪ್ರತೀ ವರ್ಷ 16.5 ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವ ನಮ್ಮ ದೇಶದಲ್ಲಿ, ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ನಿರ್ಮೂಲನೆಗೆ ಬಹುದೊಡ್ಡ ಸವಾಲಾಗಿರುವ ಈ ಪಾಲಿಸ್ಟಿರೇನ್ ಅನ್ನು ಕರಗಿಸಿಕೊಳ್ಳಬಲ್ಲ ಬ್ಯಾಕ್ಟೀರಿಯಾಗಳು ಪತ್ತೆಯಾಗಿರುವುದು ಪ್ಲಾಸ್ಟಿಕ್ ಮುಕ್ತ ದೇಶದ ಕನಸನ್ನು ಕಾಣುತ್ತಿರುವ ಭಾರತಕ್ಕೆ ಬಹುದೊಡ್ಡ ಲಾಭವೆಂದೇ ವಿಶ್ಲೇಷಿಸಲಾಗುತ್ತಿದೆ.

ಈ ಬ್ಯಾಕ್ಟೀರಿಯಾಗಳು ಹೀಗೆ ಕಾರ್ಯಾಚರಿಸುತ್ತವೆ:
– ಪ್ಲಾಸ್ಟಿಕ್‌ ನಲ್ಲಿನ ಇಂಗಾಲದ ಅಣುಗಳನ್ನು ಇವು ಬಳಸಿಕೊಳ್ಳುತ್ತವೆ.

– ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ ಅನ್ನು ಈ ಬ್ಯಾಕ್ಟೀರಿಯಾಗಳು ಸಂತಾನಾಭಿವೃದ್ಧಿಗೆ ಬಳಸಿಕೊಳ್ಳುತ್ತವೆ.

– ಪಾಲಿಸ್ಟಿರೇನ್ ಜೈವಿಕವಾಗಿ ಕರಗುವಂತೆ ಈ ಬ್ಯಾಕ್ಟೀರಿಯಾಗಳು ಮಾಡುತ್ತವೆ.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.