ಆ್ಯಪಲ್‌ ಐಪ್ಯಾಡ್‌ನ‌ಲ್ಲಿ ಸ್ಯಾಮ್‌ಸಂಗ್‌ !


Team Udayavani, Nov 25, 2019, 5:15 AM IST

pocket

ಆ್ಯಪಲ್‌ ಉತ್ಪನ್ನಗಳ ಅಭಿಮಾನಿಯಾದವರಿಗೆ “ರೆಟಿನಾ ಡಿಸ್‌ಪ್ಲೇ’ ತುರಿತು ತಿಳಿದೇ ಇರುತ್ತದೆ. ಆ್ಯಪಲ್‌ನ ಜನಪ್ರಿಯ ಉಪಕರಣವಾದ ಐಪ್ಯಾಡ್‌ನ‌ಲ್ಲಿ ಇರುವ ಸ್ಕ್ರೀನ್‌, “ರೆಟಿನಾ ಡಿಸ್‌ಪ್ಲೇ’ ಎಂದೇ ಹೆಸರುವಾಸಿ. ಸಾಮಾನ್ಯವಾಗಿ ಫ‌ುಲ್‌ ಎಚ್‌.ಡಿ ಸ್ಕ್ರೀನ್‌ನಲ್ಲಿ 1920×1440 ಪಿಕ್ಸೆಲ್‌ಗ‌ಳಿರುತ್ತವೆ. ಪಿಕ್ಸೆಲ್‌ಗ‌ಳ ಸಂಖ್ಯೆ ಹೆಚ್ಚಿದಷ್ಟೂ ಸ್ಕ್ರೀನ್‌ನ ಗುಣಮಟ್ಟ ಮತ್ತು ಅದು ತೋರಿಸುವ ವಿಡಿಯೋ ಗುಣಮಟ್ಟ ಹೆಚ್ಚುತ್ತದೆ.

“ರೆಟಿನಾ ಡಿಸ್‌ಪ್ಲೇ’ ಎಂಬ ಹೆಸರು ಇಡಲು ಕಾರಣ ಮನುಷ್ಯನ ಕಣ್ಣಿಗೆ ಇರುವಷ್ಟೇ ಶಕ್ತಿ ಸ್ಕ್ರೀನ್‌ನಲ್ಲಿದೆ ಎಂದು ತೋರ್ಪಡಿಸಿಕೊಳ್ಳುವುದು. ಇದುವರೆಗೂ ಯಾವುದೇ ಸ್ಕ್ರೀನ್‌ ಮನುಷ್ಯನ ಕಣ್ಣಿನಲ್ಲಿ ಇರುವಷ್ಟು ಸಾಮರ್ಥ್ಯವನ್ನು ಪಡೆದಿಲ್ಲ.ಮನುಷ್ಯನ ಕಣ್ಣು ಕೋಟ್ಯಂತರ ಬಣ್ಣದ ಶೇಡ್‌ಗಳನ್ನು ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದುವರೆಗೂ ಮಾರುಕಟ್ಟೆಯಲ್ಲಿರುವ ಸ್ಕ್ರೀನ್‌ಗಳಲ್ಲಿ ಇದಕ್ಕೆ ಸಮೀಪ ಬರುವಂಥವಿದ್ದರೆ ರೆಟಿನಾ ಡಿಸ್‌ಪ್ಲೇ ಕೂಡಾ ಅವುಗಳಲ್ಲಿ ಒಂದು. ಆ್ಯಪಲ್‌ ಸಂಸ್ಥೆಯ ಟ್ರೇಡ್‌ ಮಾರ್ಕ್‌ ಆಗಿರುವ “ರೆಟಿನಾ ಡಿಸ್‌ಪ್ಲೇ’ ಸ್ಕ್ರೀನನ್ನು ತಯಾರಿಸಿದ್ದು ಮಾತ್ರ ಆ್ಯಪಲ್‌ ಅಲ್ಲ ಎನ್ನುವ ಸಂಗತಿ ಅನೇಕರಲ್ಲಿ ಅಚ್ಚರಿ ತರಬಹುದು. ಅದನ್ನು ಆ್ಯಪಲ್‌ಗೆ ಸರಬರಾಜು ಮಾಡುವುದು ಸ್ಯಾಮ್‌ಸಂಗ್‌. ಅದಷ್ಟೇ ಅಲ್ಲದೆ ಆ್ಯಪಲ್‌ ಉತ್ಪನ್ನಗಳಲ್ಲಿ ಬಳಕೆಯಾಗುವ ಬಹುಮುಖ್ಯವಾದ ಭಾಗ ಮೆದುಳು ಎಂದೇ ಕರೆಯಲ್ಪಡುವ ಪ್ರಾಸೆಸರ್‌ಅನ್ನು ಒದಗಿಸುವುದು ಕೂಡಾ ಸ್ಯಾಮ್‌ಸಂಗ್‌. ಆ್ಯಪಲ್‌ನ ಉತ್ಪನ್ನಗಳಲ್ಲಿ ಇರುವ ಬಿಡಿಭಾಗಗಳೆಲ್ಲವೂ ಈ ರೀತಿಯಾಗಿ ಬೇರೆ ಬೇರೆ ಕಂಪನಿಗಳಿಂದ ಬಂದವೇ ಆಗಿವೆ. ಹೀಗಾಗಿ ಆ್ಯಪಲ್‌, ತನ್ನ ಉತ್ಪನ್ನವನ್ನು ಡಿಸೈನ್‌ ಮಾಡುತ್ತವೆ. ಇನ್ನುಳಿದ ಬಿಡಿಭಾಗಗಳೆಲ್ಲವನ್ನೂ(ಹಾರ್ಡ್‌ವೇರ್‌) ತರಿಸಿಕೊಂಡು ಅಸೆಂಬಲ್‌(ಜೋಡಣೆ) ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತದೆ. ಇದರ ಹಿಂದೆ ಕಂಪನಿಯ ಖರ್ಚನ್ನು ಉಳಿಸುವ, ಜೊತೆಗೇ ಲಾಭವನ್ನು ಹೆಚ್ಚಿಸುವ ಉದ್ದೇಶ ಅಡಗಿದೆ. ಬಿಡಿಭಾಗಗಳ ಮೇಲೆ ಸಂಶೋಧನೆ ನಡೆಸಿ ಉತ್ಪನ್ನವನ್ನು ತಯಾರಿಸುವುದರ ಜೊತೆಗೇ, ಮಾರುಕಟ್ಟೆಯಲ್ಲಿ ಇರುವುದರಲ್ಲಿ ಅತ್ಯುತ್ತಮವಾದುದನ್ನು ಆರಿಸಿಕೊಂಡು ಬಳಸಿಕೊಳ್ಳುವುದರಲ್ಲಿ ಜಾಣ್ಮೆಯೂ ಇದೆ. ಜಗತ್ತಿನ ಅತಿ ಶ್ರೀಮಂತ ಕಂಪನಿಗಳಲ್ಲೊಂದು ಎಂಬ ಹೆಸರು ಬಂದಿರುವುದು ಸುಮ್ಮನೆಯೇ ಅಲ್ಲ. ಆ್ಯಪಲ್‌ ಎಷ್ಟು ಬೆಲೆ ಬಾಳುತ್ತೆ ಗೊತ್ತಾ 1 ಟ್ರಿಲಿಯನ್‌ ಡಾಲರ್‌. ಅಂದರೆ 1ರ ಮುಂದೆ 12 ಸೊನ್ನೆ! ಸರಳವಾಗಿ ಹೇಳುವುದಾದರೆ ಸುಮಾರು 71 ಲಕ್ಷ ಕೋಟಿ ರೂ.!

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.