ಇಂಗ್ಲೆಂಡ್‌ ವಿರುದ್ಧ ಪಂತ್‌/ಕಾರ್ತಿಕ್‌ ಕಣಕ್ಕೆ?

ಭಾರತದ 4ನೇ ಕ್ರಮಾಂಕಕ್ಕೆ ಸರ್ಜರಿ ಸಮಯ

Team Udayavani, Jun 29, 2019, 10:09 AM IST

vijay-shankar

ಮ್ಯಾಂಚೆಸ್ಟರ್‌: ಈ ವಿಶ್ವಕಪ್‌ ಪಂದ್ಯಾವಳಿಯ ಏಕೈಕ ಅಜೇಯ ತಂಡವಾಗಿರುವ ಭಾರತವೀಗ ಸೆಮಿಫೈನಲ್‌ ಅಂಚಿಗೆ ಬಂದು ನಿಂತಿದೆ. ಉಳಿದ 3 ಪಂದ್ಯಗಳಲ್ಲಿ ಕೇವಲ ಒಂದಂಕ ಗಳಿಸಿದರೂ ಕೊಹ್ಲಿ ಪಡೆಯ ನಾಕೌಟ್‌ ಪ್ರವೇಶ ಅಧಿಕೃತಗೊಳ್ಳಲಿದೆ.

ಗುರುವಾರ ರಾತ್ರಿ ವೆಸ್ಟ್‌ ಇಂಡೀಸ್‌ ವಿರುದ್ಧ ಸಾಧಿಸಿದ 125 ರನ್‌ ಜಯಭೇರಿ ಭಾರತದ ಯಶಸ್ಸಿನ ಓಟಕ್ಕೆ ಸಾಕ್ಷಿ. ಅಂದಮಾತ್ರಕ್ಕೆ ಟೀಮ್‌ ಇಂಡಿಯಾದಲ್ಲಿ ಎಲ್ಲವೂ ಸುಸೂತ್ರವಾಗಿದೆ, ಯಾವುದೇ ಸಮಸ್ಯೆ ಇಲ್ಲ ಅಂದರೆ ತಪ್ಪಾದೀತು. ಇದಕ್ಕೆ 4ನೇ ಕ್ರಮಾಂಕದ ವೈಫ‌ಲ್ಯವೇ ಸಾಕ್ಷಿ.

ಮಿಡ್ಲ್ ಆರ್ಡರ್‌ ಅತ್ಯಂತ ದುರ್ಬಲ ಉಳಿದೆಲ್ಲ ತಂಡಗಳ 4ನೇ ಕ್ರಮಾಂಕವನ್ನು ಗಮನಿಸಿ… ಇಯಾನ್‌ ಮಾರ್ಗನ್‌, ಸ್ಟೀವನ್‌ ಸ್ಮಿತ್‌, ರಾಸ್‌ ಟೇಲರ್‌, ಮೊಹಮ್ಮದ್‌ ಹಫೀಜ್ , ಮುಶ್ಫಿಕರ್‌ ರಹೀಂ ಅವರಂಥ ಸಮರ್ಥ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳು ಇಲ್ಲಿ ಬ್ಯಾಟ್‌ ಹಿಡಿದು ಬರುತ್ತಿದ್ದಾರೆ.
ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲೂ ತಂಡವನ್ನು ಮೇಲೆತ್ತುತ್ತಾರೆ. ಆದರೆ ಭಾರತ ಮಾತ್ರ ಯಾವುದೇ ಅನುಭವ ಹೊಂದಿಲ್ಲದ, ತೀರಾ ಸಾಮಾನ್ಯ ಆಟಗಾರ ನಾಗಿರುವ ವಿಜಯ್‌ ಶಂಕರ್‌ ಅವರನ್ನು ಆಡಲಿಳಿಸುತ್ತಿದೆ. ವಿಶ್ವಕಪ್‌ನಂಥ ದೊಡ್ಡ ಕೂಟದಲ್ಲಿ ಇದನ್ನು ಗ್ಯಾಂಬ್ಲಿಂಗ್‌ ಎಂದೇ ಹೇಳಬೇಕಾಗುತ್ತದೆ. ಇದರ ವ್ಯತಿರಿಕ್ತ ಪರಿಣಾಮ ಈಗಾಗಲೇ ತಂಡದ ಮೇಲೆ ಉಂಟಾಗಿದೆ. ಅಫ್ಘಾನ್‌ ಮತ್ತು ವಿಂಡೀಸ್‌ ವಿರುದ್ಧ ಚಡಪಡಿಸಿದ್ದೇ ಇದಕ್ಕೆ ಸಾಕ್ಷಿ.

ವಿಜಯ್‌ ಶಂಕರ್‌ ಪ್ರತಿಭಾನ್ವಿತ ಆಲ್‌ರೌಂಡರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ವರ್ಷ ಈ ತಮಿಳುನಾಡು ಕ್ರಿಕೆಟಿಗನ ಪ್ರತಿಭೆ ದೊಡ್ಡ ಮಟ್ಟದಲ್ಲೇ ಅನಾವರಣಗೊಂಡಿತ್ತು. ಆದರೆ ವಿಶ್ವಕಪ್‌ ನಲ್ಲಿ ಇದು ಫ‌ಲ ಕೊಟ್ಟಿಲ್ಲ. ಮುಖ್ಯವಾಗಿ, ಮೊದಲೆರಡು ವಿಕೆಟ್‌ ಬೇಗನೆ ಬಿದ್ದಾಗ ಇನ್ನಿಂಗ್ಸ್‌ ಬೆಳಸಿಕೊಂಡು ಹೋಗುವ ಸಾಮರ್ಥ್ಯ ಶಂಕರ್‌ ಅವರಲ್ಲಿ ಇನ್ನೂ ಕಂಡು ಬಂದಿಲ್ಲ. ಹೀಗಾಗಿ ಮಿಡ್ಲ್ ಆರ್ಡರ್‌ ಮೇಲೀಗ ವಿಪರೀತ ಒತ್ತಡ ಬಿದ್ದಿದೆ.

ಆರಂಭಕಾರ ಶಿಖರ್‌ ಧವನ್‌ ಇದ್ದಾಗ ರಾಹುಲ್‌ 4ನೇ ಕ್ರಮಾಂಕಕ್ಕೆ
ಸೂಕ್ತವಾಗಿದ್ದರು. ಆದರೆ ರಾಹುಲ್‌ಗೆ ಭಡ್ತಿ ಲಭಿಸಿದ ಬಳಿಕ ಅವಕಾಶ ಪಡೆದ ಶಂಕರ್‌ ಇದರ ಲಾಭವೆತ್ತಲು ವಿಫ‌ಲರಾಗಿದ್ದಾರೆ. ಐಪಿಎಲ್‌ ವೇಳೆ ಸ್ಪಿನ್‌ ವಿರುದ್ಧ ಶಂಕರ್‌ ಅವರ ವೈಫ‌ಲ್ಯ ಗೋಚರಕ್ಕೆ ಬಂದಿತ್ತು. ಇಲ್ಲೀಗ ಉತ್ತಮ ಮಟ್ಟದ ಪೇಸ್‌ ಬೌಲಿಂಗ್‌ ವಿರುದ್ಧ ಸ್ಟ್ರೈಕ್‌ ರೊಟೇಟ್‌ ಮಾಡುವಲ್ಲಿ ವಿಫ‌ಲರಾಗುತ್ತಿದ್ದಾರೆ.

ಬೌಲಿಂಗ್‌ನಿಂದಲೂ ಹಿಂದೆ
ಆಲ್‌ರೌಂಡರ್‌ ಅಂದಮೇಲೆ ಆತನ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸಿ
ಕೊಳ್ಳಬೇಕಾಗುತ್ತದೆ. ಆದರೆ ಕಳೆದೆರಡು ಪಂದ್ಯಗಳಲ್ಲಿ ಶಂಕರ್‌ ಅವರನ್ನು ಬೌಲಿಂಗಿಗೇ ಇಳಿಸುತ್ತಿಲ್ಲ. 5ನೇ ಬೌಲರ್‌ ಆಗಿ ಪಾಂಡ್ಯ ಅವರೇ ಅವಕಾಶ ಬಾಚಿಕೊಳ್ಳುತ್ತಿದ್ದಾರೆ. ಪಾಕಿಸ್ಥಾನ ವಿರುದ್ಧ ಭುವನೇಶ್ವರ್‌ಕುಮಾರ್‌ ಓವರ್‌ ಪೂರ್ತಿಗೊಳಿಸಲು ಬಂದ ಶಂಕರ್‌ ಮೊದಲ ಎಸೆತದಲ್ಲೇ ಇಮಾಮ್‌ ಉಲ್‌ ಹಕ್‌ ವಿಕೆಟ್‌ ಕಿತ್ತು ಮಿಂಚಿದ್ದರು. ಬಳಿಕ ನಾಯಕ ಸಫ‌ರಾಜ್‌ ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದ್ದರು. ಬ್ಯಾಟಿಂಗಿಗಷ್ಟೇ ಮೀಸಲಾದ ಶಂಕರ್‌ ಇದರಲ್ಲಿ ಯಶಸ್ಸು ಕಾಣುತ್ತಿಲ್ಲ. ಅವರ ಗಳಿಕೆ 15, 29 ಮತ್ತು 14 ರನ್‌ ಮಾತ್ರ

ಸಮಸ್ಯೆಗೆ ಪರಿಹಾರ ಅಗತ್ಯ
ಇಂಗ್ಲೆಂಡ್‌ ಎದುರಿನ ರವಿವಾರದ “ಬಿಗ್‌ ಮ್ಯಾಚ್‌’ ಸಮೀಪಿಸುತ್ತಿರುವಂತೆಯೇ ತಂಡದ ಆಡಳಿತ ಮಂಡಳಿ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿಯಲ್ಲಿ ಯೋಚಿಸುತ್ತಿದೆ. ಇಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ರಿಷಭ್‌ ಪಂತ್‌ ರೇಸ್‌ನಲ್ಲಿದ್ದಾರೆ. ಅನುಭವದ ದೃಷ್ಟಿಯಲ್ಲಿ ಕಾರ್ತಿಕ್‌ ಓಕೆ. ಆದರೆ ಎಡಗೈ ಬ್ಯಾಟ್ಸ್‌ಮನ್‌ ಲೆಕ್ಕಾಚಾರದಲ್ಲಿ ಪಂತ್‌ ಮುಂದಿದ್ದಾರೆ. ಧವನ್‌ ಹೊರಬಿದ್ದ ಬಳಿಕ ಭಾರತ ಸ್ಪೆಷಲಿಸ್ಟ್‌ಎಡಗೈ ಬ್ಯಾಟ್ಸ್‌ಮನ್‌ ಕೊರತೆ ಅನುಭವಿಸುತ್ತಿದೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.