ನಾನಾ ಬೆಳೆ,ಭಲೇ ಆದಾಯ


Team Udayavani, Aug 14, 2017, 6:20 AM IST

IMG_20170620_124114.jpg

23 ರ ಹರೆಯದಲ್ಲಿ ಬ್ಯಾಟ್‌ ಹಿಡಿದು ಬಯಲಿನಲ್ಲಿ ಆಟ ಆಡುವ ವಯಸ್ಸಿನಲ್ಲಿ ಇವರು ಗುದ್ದಲಿ ಸೆನೆಕೆಗಳನ್ನು ಗಿಡಿದು ಗುಣಿ ತೆಗೆಯಲು ತೊಡಗಿದರು. 

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕೊಂಡಳ್ಳಿಯ ಬೀರಣ್ಣ ವೆಂಕಟ್ರಮಣ ನಾಯಕ ಅವರು ಬಗೆ ಬಗೆಯ ಬೆಳೆ ತೆಗೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬೋಳು ಗುಡ್ಡಗಳನ್ನು ಕೃಷಿಗೆ ಪಳಗಿಸಿಕೊಂಡು ಬುದ್ಧಿವಂತಿಕೆಯ ಬೆಳೆ ಹಂಚಿಕೆಯಿಂದ ಕೃಷಿಯಲ್ಲಿ ಗೆದ್ದಿದ್ದಾರೆ.

ಇವರು ಕೃಷಿಗಿಳಿದ ಕಥೆಯೂ ಆಸಕ್ತಿದಾಯಕವಾಗಿದೆ. ಇವರ ಗ್ರಾಮ, ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿದೆ. ಸಾರಿಗೆ ಸೌಕರ್ಯ ಕಡಿಮೆ ಇರುವ ಪ್ರದೇಶವಿದು. ಎರಡು ದಶಕಗಳ ಹಿಂದೆ ಈಗಿರುವ ಸೌಲಭ್ಯಗಳೂ ಇರಲಿಲ್ಲ. ತಮ್ಮ ಮಗನನ್ನು ಉತ್ತಮ ಉದ್ಯೋಗಕ್ಕೆ ಸೇರಿಸಬೇಕೆಂಬುದು ಇವರ ತಂದೆಯ ಕನಸು. ಇದಕ್ಕೋಸ್ಕರವೇ ಅಂಕೋಲ ಶಾಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಬಿ. ಎ. ಪದವಿ ಓದುತ್ತಿರುವಾಗ ಇವರ ಗಮನ ಸರಕಾರಿ ಉದ್ಯೋಗದ ಕಡೆಗಿತ್ತು.  ಒಂದೊಮ್ಮೆ ಪೊಲೀಸ್‌ ಇಲಾಖೆಯ ಉದ್ಯೋಗಕ್ಕೆ ಅರ್ಜಿ ಹಾಕಿದಾಗ ಸಣ್ಣ ಕೊರತೆಯ ಕಾರಣದಿಂದಾಗಿ ಇವರನ್ನು ಕಡೆಗಣಿಸಲಾಗಿತ್ತು. ಪದವಿ ಶಿಕ್ಷಣದ ಕೊನೆಯ ವರ್ಷದಲ್ಲಿದ್ದ ಇವರಿಗೆ ಅದು ಬಹಳ ನೋವನ್ನುಂಟು ಮಾಡಿತ್ತು. ನೊಂದುಕೊಂಡು ಉದ್ಯೋಗ ಅರಸುವ ಪ್ರಯತ್ನ ಮಾಡುವುದಿಲ್ಲ
ವೆಂದುಕೊಂಡು ಶಿಕ್ಷಣ ತ್ಯಜಿಸಿ ಮನೆಯೆಡೆಗೆ ಬಂದಿದ್ದರು. ಜಮೀನಿನಲ್ಲಿ ಭತ್ತದ ಹೊರತಾಗಿ ಬೇರೆ ಬೆಳೆ ಇರಲಿಲ್ಲ. ಆಗ 200 ಗೇರು ಗಿಡಗಳನ್ನು ತಂದು ನಾಟಿ ಮಾಡಿದರು. 23 ರ ಹರೆಯದಲ್ಲಿ ಬ್ಯಾಟ್‌ ಹಿಡಿದು ಬಯಲಿನಲ್ಲಿ ಆಟ ಆಡುವ ವಯಸ್ಸಿನಲ್ಲಿ ಇವರು ಗುದ್ದಲಿ ಸೆನೆಕೆಗಳನ್ನು ಗಿಡಿದು ಗುಣಿ ತೆಗೆಯಲು ತೊಡಗಿದರು. ಅಡ್ಡಿಪಡಿಸುತ್ತಿದ್ದ ಕುರುಚಲು ಗಿಡಗಳನ್ನು ಸವರಿದರು. ಕಸಿ ಗಿಡಗಳನ್ನು ಗುಣಿಯೊಳಗೆ ಕುಳ್ಳರಿಸಿ ನೀರೆರೆದು ಪೋಷಿಸಿದರು.

ಕೃಷಿಯಲ್ಲಿ ಏನಿದೆ?
ಇವರದು ಒಂಬತ್ತು ಎಕರೆ ಜಮೀನು. ಎರಡು ಎಕರೆಯಲ್ಲಿ ಭತ್ತ, ಒಂದು ಎಕರೆಯಲ್ಲಿ ಅಡಿಕೆ, ಕಾಲೆಕರೆ ಕಬ್ಬು, ಎರಡು ಎಕರೆಯಲ್ಲಿ ಮಾವು ಹಾಗೂ ಮೂರು ಎಕರೆಯಲ್ಲಿ  ಗೇರು ಕೃಷಿ ಮಾಡಿದ್ದಾರೆ. ಒಂದೆಕರೆಯಲ್ಲಿನ ಅಡಿಕೆ ಮರಗಳು ಫ‌ಸಲು ನೀಡುತ್ತಿವೆ.  300 ಗೇರು ಇಳುವರಿ ನೀಡುತ್ತಿದೆ. 300 ಬಾಳೆ, 200 ಕಾಳುಮೆಣಸು ಗಿಡಗಳಿವೆ. ಜಮೀನಿನ ಸುತ್ತಲೂ 40 ತೆಂಗಿನ ಮರಗಳಿದ್ದು ಕಾಯಿ ಕೊಯ್ಲಿಗೆ ಸಿಗುತ್ತಿದೆ. ರತ್ನಗಿರಿ, ಆಪೂಸು, ಮಲ್ಲಿಕಾ ಸೇರಿದಂತೆ 200 ಕ್ಕೂ ಅಧಿಕ ಮಾವಿನ ಗಿಡಗಳಿವೆ. ಮುಂದಿನ ವರ್ಷ ಫ‌ಸಲಿನ ನಿರೀಕ್ಷೆಯಲ್ಲಿದ್ದಾರೆ. ಹಲಸಿನ ಮರಗಳು ಕಾಯಿಗಳನ್ನು ಹೊತ್ತು ನಿಲ್ಲುತ್ತಿವೆ.

ಕಾಲೆಕರೆಯಲ್ಲಿ ಕಬ್ಬು ಬೆಳೆಯುವುದು ಬಹಳ ಹಿಂದಿನಿಂದಲೂ ಬೆಳೆಸಿಕೊಂಡು ಬಂದ ರೂಢಿ. ಫೆಬ್ರವರಿ ತಿಂಗಳಿನಲ್ಲಿ ಕಬ್ಬಿನ ಬೀಜಗಳನ್ನು ನಾಟಿ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿಯೇ ಕಬ್ಬು ಹತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದು ನಿಂತಿದೆ. ಕಬ್ಬಿನಿಂದ 50-60 ಡಬ್ಬಿ ಬೆಲ್ಲ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ. ಎರಡು ವರ್ಷಕ್ಕೊಮ್ಮೆ ಕಬ್ಬು ಬೆಳೆಯುವ ಸ್ಥಳ ಬದಲಾವಣೆ ರೂಢಿ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಕಬ್ಬಿನಿಂದ 50 ಡಬ್ಬಿಯಷ್ಟು ಬೆಲ್ಲ ದೊರತಿದೆ. ಪ್ರತಿ ಡಬ್ಬಿಗೆ 2,500ರಂತೆ ದರ ಸಿಕ್ಕಿದೆ. ಬೆಲ್ಲವನ್ನು ವ್ಯಾಪಾರಸ್ಥರಿಗೆ ಮಾರುವುದಿಲ್ಲ. ತಮ್ಮದೇ ಗ್ರಾಹಕರನ್ನು ಸೃಷ್ಟಿಸಿಕೊಂಡಿದ್ದಾರೆ. ಅಂಕೋಲಾ ಪಟ್ಟಣದಲ್ಲಿರುವ ನೌಕರಸ್ಥರು ಇವರ ಖಾಯಂ ಗ್ರಾಹಕರು. ಪ್ರತೀ ವರ್ಷ ಅವರುಗಳ ಮನೆಗೆ ತಲುಪಿಸಿ ನಗದನ್ನು ಪಡೆದುಕೊಳ್ಳುತ್ತಾರೆ. 

ಈ  ಫೆಬ್ರವರಿಯಲ್ಲಿ 550 ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ. ದಿನವೊಂದಕ್ಕೆ ಪ್ರತಿ ಗಿಡಕ್ಕೆ 15 ಲೀಟರ್‌ ನೀರು ಡ್ರಿಪ್‌ ಮೂಲಕ ಉಣಿಸುವುದು ರೂಢಿ. ಅಡಿಕೆಗೆ ಎರಡು ಅಡಿ ಘನ ಗಾತ್ರದ ಗುಂಡಿಯನ್ನು ತೆಗೆದು ನಾಟಿ ಮಾಡಿದ್ದಾರೆ. ಗುಂಡಿಯ ಮಣ್ಣನ್ನು ಪಕ್ಕದಲ್ಲಿ ರಾಶಿ ಹಾಕಿದ್ದು ಮುಂದೊಮ್ಮೆ ಬುಡಕ್ಕೆ ಮಣ್ಣು ಏರಿಸುವಾಗ ಬೇರೆಡೆಯಿಂದ ಮಣ್ಣು ತರದೆ, ಇದನ್ನೇ ಬಳಕೆ ಮಾಡಿಕೊಳ್ಳಬಹುದು ಎನ್ನುವ ಆಲೋಚನೆ ಇವರದು. ಪ್ರತಿ ಗಿಡಕ್ಕೆ ದಿನವೊಂದಕ್ಕೆ ಒಂದು ಲೀಟರ್‌ ಗೋಮೂತ್ರ ನೀರಿನೊಂದಿಗೆ ಸೇರಿಸಿ ಬಿಡುತ್ತಾರೆ. ‘ಗಿಡಗಳ ಹೊಳಪಿನ ಗುಟ್ಟು ಇದೇ ನೋಡಿ’ ಎನ್ನುತ್ತಾ ಅಡಿಕೆ ತೋಟ ಸುತ್ತು ಹಾಕಿಸಿದರು ಬೀರಣ್ಣ ನಾಯಕ.ನಾಟಿಗೆ ಬೇಕಾದ ಗಿಡಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಕಸಿಯ ಜಾಣ್ಮೆ ಇವರಲ್ಲಿ ಕರಗತವಾಗಿದೆ. 

ಹೈನುಗಾರಿಕೆಯಲ್ಲಿಯೂ ಮುಂದು:
ನಿರಂತರ ಆದಾಯ ಪಡೆಯುವ ಉತ್ಕಟ ಆಸಕ್ತಿ ಇವರದು. ಇದಕ್ಕಾಗಿ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮೂರು ಜೆರ್ಸಿ, ನಾಲ್ಕು ಹೆಚ್‌. ಎಫ್ ತಳಿಯ ಆಕಳಿವೆ. ದಿನವೊಂದಕ್ಕೆ 50-60 ಲೀಟರ್‌ ಹಾಲು ಪಡೆಯುತ್ತಿದ್ದಾರೆ. ಹೈನು ರಾಸುಗಳಿಗೆ ಎದುರಾಗುವ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಮಾಡುವ ನೈಪುಣ್ಯತೆ ಇವರಲ್ಲಿದೆ. ಕೃತಕ ಗರ್ಭಧಾರಣೆಗೂ ವೈದ್ಯರನ್ನು ಅವಲಂಬಿಸುವುದಿಲ್ಲ. ಪ್ರತೀ ಲೀಟರ್‌ ಹಾಲಿಗೆ 30 ರೂ. ದರ ಸಿಗುತ್ತಿದೆ. ತಿಂಗಳಿಗೆ ಹೈನುಗಾರಿಕೆಯಿಂದಲೇ 30,000ರೂ. ಆದಾಯವಿದೆ. 15,000 ಖರ್ಚು ತಗುಲಿದರೂ ಅಷ್ಟೇ ಮೊತ್ತದ ಉಳಿಕೆಯಾಗುತ್ತಿದೆ. ಅಲ್ಲದೇ ಯತೇಚ್ಚ ಗೊಬ್ಬರ, ಗೋಮೂತ್ರ ದೊರಕುತ್ತಿದ್ದು ತೋಟಗಳಿಗೆ ಬಳಸಿಕೊಳ್ಳುತ್ತಾರೆ. ರಸಗೊಬ್ಬರದ ಅವಲಂಬನೆಯಿಂದ ಮುಕ್ತರಾಗಿದ್ದಾರೆ.

– ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.