ವೃಶ್ಚಿಕ; ಇವರ ಪಾಲಿಗೆ ಶನೈಶ್ಚರ ಕ್ರೂರಿ, ಉತ್ತಮ ಯೋಗಗಳು ಧ್ವಂಸ  


Team Udayavani, Aug 27, 2016, 11:29 AM IST

289.jpg

ವೃಶ್ಚಿಕ ರಾಶಿಯವರಿಗೆ ಪ್ರಧಾನವಾದ ಕಾಟ ನೀಚ ಚಂದ್ರನದ್ದೆ ಆಗಿರುತ್ತದೆ. ಇದರಿಂದಾಗಿ ನೀಚತ್ವ ಪಡೆದ ಚಂದ್ರ ಭಾಗ್ಯಕ್ಕೆ ಕುಂದು ತರುತ್ತಿರುತ್ತಾನೆ. ಈ ರಾಶಿಯ ಅಧಿಪತಿ ಅತಿರೇಕದ‌ ವಿಚಾರದಲ್ಲಿ ಕೆಟ್ಟ ಗ್ರಹಗಳಾದ ಶನೈಶ್ಚರ ರಾಹು ಕೇತು ಅಥವಾ ಸೂರ್ಯರ ನಕಾರಾತ್ಮಕ ಪ್ರಭಾವ ಇದ್ದರಂತೂ ಮಾನಸಿಕ ಸ್ಥೈರ್ಯದ ವಿಚಾರದಲ್ಲಿ ಅನೇಕ ಏರಿಳಿತಗಳು ಸಂಭವನೀಯ. ಮಂಗಳನ ಸ್ವಭಾವ ಧೈರ್ಯ. ಮುನ್ನುಗ್ಗುವುದರಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿ ಯಾರಿಗೂ ಡೊಗ್ಗು ಸಲಾಮು ಹಾಕಲಾರೆ ಎಂಬ ಬಿರುಸು ತಲೆ ಗಟ್ಟಿಯಾಗಿದೆ ಎಂಬ ಕಾರಣಕ್ಕಾಗಿ ಬಂಡೆಯ ಮೇಲೆ ತಲೆ ಬಡಿದುಕೊಳ್ಳುವ ವೈಪರೀತ್ಯಗಳನ್ನು ಪ್ರದರ್ಶಿಸಬಲ್ಲರು.

ಗುರುಗ್ರಹದ ಪ್ರಭಾವಳಿ ಉತ್ತಮವಾಗಿ ದೊರಕಿದಲ್ಲಿ ಈ ವೈಪರೀತ್ಯತಗಳೇ ಉತ್ತಮ ಫ‌ಲಗಳನ್ನು ಒದಗಿಸಿ ಕೊಡುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತದೆ.  ಒಂದೊಮ್ಮೆ ಗುರುವಿನ ಫ‌ಲಾವಳಿ ದೊರಕದಿದ್ದಲ್ಲಿ ಚಂದ್ರನಿಗೆ ನೀಚಭಂಗದಂತಾ ವೈಶಿಷ್ಟ್ಯ ಹೊಂದಿ ಬಂದಾಗಲೂ ರಾಜಯೋಗವನ್ನೇ ಚಂದ್ರನ ಕಾರುಣ್ಯದಿಂದ ಪಡೆಯುವಲ್ಲಿ ಹೇರಳವಾದ ಅವಕಾಶಗಳನ್ನು ವೃಶ್ಚಿಕ ರಾಶಿಯವರು ಪಡೆದಿರುತ್ತಾರೆ. ಇದೊಂದು ಅನುಪಮವಾದ ಸಂಪನ್ನವಾದ ಅದೃಷ್ಟವೇ ಸರಿ.  ಪ್ರಪಂಚ ಕಂಡ ಮಹೋನ್ನತ ಕ್ರಿಕೆಟ್‌ ಆಲ್‌ ರೌಂಡರ್‌ ಸರ್‌ ಗ್ಯಾರ್‌ ಫೀಲ್ಡ್‌ ಸೋಬರ್ಸ್‌ ಚಂದ್ರನ ನೀಚತ್ವಕ್ಕೆ ಭಂಗ ಪಡೆದ ಕಾರಣದಿಂದಲೂ ವೃಶ್ಚಿಕ ರಾಶಿಯಲ್ಲಿ ಚಂದ್ರನ ಜೊತೆ ಉತ್ತಮವಾದ ಗುರುಗ್ರಹದ ಪ್ರಭಾವದಿಂದ ಗಜಕೇಸರಿ ಯೋಗ ಪಡೆದು ಬಹು ದೊಡ್ಡ ಹೆಸರನ್ನು ಸಂಪಾದಿಸಿದರು. ಇಮ್ರಾನ್‌ ಖಾನ್‌  ಕಪಿಲ್‌ ದೇವ್‌ ಜಾಕ್‌ ಕಾಲೀಸ್‌ ಮುಂತಾದ ಇತ್ತೀಚಿನ ಆಲ್‌ ರೌಂಡರ್‌ಗಳಿಗಿಂತ ಸೋಬರ್ಸ್‌ ದಾಖಲೆ ಕ್ರಿಕೆಟ್ನಲ್ಲಿ ಬಹು ದೊಡ್ಡದು. ಜೊತೆಗೆ ಕ್ರೀಡಾ ಸ್ಫೂರ್ತಿ ಅತ್ಯುತ್ತಮ ನಡವಳಿಕೆ ಬಿರುಸಿನ ಆಟದ ವೈಖರಿ ಒತ್ತಡದಲ್ಲೂ ನಿಂತು ಎದುರಾಳಿಯ ಅಬ್ಬರವನ್ನು ಎದುರಿಸುವ ಸ್ಥೈರ್ಯ ಸೋಬರ್ಸ್‌ ರಲ್ಲಿ ಅಮೋಘವಾಗಿತ್ತು. 

ಕ್ಲೆವ್‌ ಲಾಯ್ಡ ಎರಡುಬಾರಿ ವಿಶ್ವ ಕ್ರಿಕೆಟ್‌ ಚಾಂಪಿಯನ್‌ ಗರಿಯನ್ನು ವಿಂಡೀಸ್‌ಗೆ ತಂದರಾದರೂ ಈ ಗರಿಯ ಸಾಧನೆಗೂ ಮುನ್ನ ಸೋಬರ್ಸ್‌ ವಿಂಡೀಸ್‌ ತಂಡವನ್ನು ಒಂದು ಇಡಿಯಾದ ನಿಗಿನಿಗಿ ಶಕ್ತಿಯನ್ನಾಗಿ ರೂಪಿಸಿದ ತಳಹದಿಯೊಂದನ್ನು ಹಾಕಿಕೊಟ್ಟ ಮಹಾನ್‌ ನಾಯಕ ಎಂಬುದು ಈಗ ಇತಿಹಾಸ.  ಕೆರೆಬಿಯನ್‌ ದೇಶಗಳ ಸಮುತ್ಛಯವೇ ವಿಂಡೀಸ್‌ ತಂಡ. ಇದು ಹಲವು ದೇಶಗಳನ್ನು ಒಳಗೊಂಡ ಭಿನ್ನತೆಯಿಂದಲೂ ಏಕತೆ ಪಡೆದ ತಂಡ. ಈ ತಂಡವನ್ನು ಬಲಾಡ್ಯವನ್ನಾಗಿಸಿದ ಬಹುದೊಡ್ಡ ಖ್ಯಾತಿ ಸೋಬರ್ಸ್‌ ನಾಯಕತ್ವಕ್ಕೆ ದಕ್ಕುತ್ತದೆ.

ಆದರೆ ಸದ್ಧಾಂ ಹುಸೇನ್‌ ಇಲ್ಲವೇ ಕೊಂಚ ಭಿನ್ನ. ತನ್ನ ಅಂಗ, ಆಕಾರ, ದಾಡ್ಯìತೆ ವ್ಯಕ್ತಿತ್ವಗಳ ಕಾರಣದಿಂದ ಇರಾಕ್‌ ದೇಶದ ನಿರಂಕುಶಪ್ರಭುವಾಗಿ ಆಳಿ, ಇಪ್ಪತ್ತು ವರ್ಷಗಳ ಕಾಲ ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದರೂ ಚಂದ್ರನಿಗೆ ಒದಗಿದ ನೀಚ ಭಂಗದಿಂದಾಗಿ ರಾಜಯೋಗದ ಬಹುದೊಡ್ಡ ಸಿದ್ಧಿ ಅ ಪಡೆದವನಾದರೂ ಎದುರಾಳಿಗಳನ್ನು ನಿರ್ದಯವಾಗಿ ಮುಗಿಸುವ ಕ್ರಮೇಣ ಇಡೀ ಇರಾಕನ್ನು ವೈರಿಗಳಿಂದ ಆವೃತವಾಗಿಸಿದ ಬೆಂಕಿಯ ಕುಂಡವನ್ನಾಗಿ ಪರಿವರ್ತಿಸುವಲ್ಲಿ ಕೂಡಾ ಪ್ರಧಾನವಾದ ಹಠಮಾರಿತ್ವವನ್ನು ಪಡೆದ.  ಬೇಕಿರದ ಯುದ್ದಗಳನ್ನು ಗಂಟು ಹಾಕಿಕೊಂಡ.  ದೇಶದ ಬೊಕ್ಕಸದ  ದ್ರವ್ಯವನ್ನು ತನ್ನ ಐಷಾರಾಮಿಗೆ ಒಣಪ್ರತಿಷ್ಟೆಗಳಿಗೆ ಬಳಸಿಕೊಂಡ. ವೈರಿಗಳಾದ ಅಮೆರಿಕಾ ಸೈನ್ಯದ ಕಣ್ತಪ್ಪಿಸಿಕೊಂಡು ಅಡಗಿ ಕುಳಿತ.  ನಂತರ ನೇಣಿನ ಶಿಕ್ಷೆ ಕೂಡಾ ಪಡೆದ. ಇತಿಹಾಸಲ್ಲಿ ಕುಖ್ಯಾತನಾದ.  ಸ್ವಂತ ಅಳಿಯಂದಿರನ್ನು ನಿರ್ದಯವಾಗಿ ಕೊಂದ. ಸಾವಿರಾರು ಜನರಿಗೆ ಸ್ಫೂರ್ತಿಯ ಕೇಂದ್ರಬಿಂದುವೂ ಆದ. 

ವೃಶ್ಚಿಕರಾಶಿಯವರ ಪಾಲಿಗೆ ಶನೈಶ್ಚರ ಕ್ರೂರಿಯಾಗಿರುತ್ತಾನೆ. ಅನೇಕ ಉತ್ತಮ ಯೋಗಗಳನು ಶನೈಶ್ಚರ ಸ್ವಾಮಿ  ಧ್ವಂಸ ಮಾಡುತ್ತಾನೆ. ಶನೈಶ್ಚರನ ಕಾಟದ ಸಂದರ್ಭದಲ್ಲಿ ಚಂದ್ರನೂ ತನ್ನ ಸಮತೋಲನ ಕಳೆದುಕೊಂಡು ಶನಿಕಾಟದ ಸಂದರ್ಭದ ಮಾನಸಿಕ ತೊಳಲಾಟಗಳಿಗೆ ತನ್ನ ಪಾಲನ್ನೂ ಒದಗಿಸುತ್ತಾನೆ. ಪಂಚಮ ಶನಿಕಾಟದ ಸಂದರ್ಭದಲ್ಲಿ ಪಡಬಾರದ ಬಾಧೆಯನ್ನು ಜರ್ಮನ್‌ ನ ಸರ್ವಾಧಿಕಾರಿ ಹಿಟ್ಲರ್‌ ಸೈನ್ಯದಿಂದ ಜಗತ್ತಿನ ಮಹೋನ್ನತ ವಿಜಾnನಿ ಸರ್‌ ಅಲ್ಬರ್ಟ್‌ ಐನ್‌ಸ್ಟಿನ್‌ ಕರ್ಮಸ್ಥಾನದಲ್ಲಿ ಇರುವ ಶನೈಶ್ಚರನ ಕಾರಣದಿಂದ ಅನುಭಸಿದ ಯಾತನೆ ಹೇಳತೀರದು. ಆದರೆ ಬುಧಶುಕ್ರ ಯುತಿಯು ಅವರನ್ನು ದೊಡ್ಡ ವಿಜಾnನಿಯನ್ನಾಗಿಸಿತು. ನೀಚಭಂಗ ರಾಜಯೋಗ ಪಡೆದ ಚಂದ್ರನ ಕಾರಣದಿಂದಲೂ ಕಷ್ಟವನ್ನು ಎದುರಿಸುವ ಶಕ್ತಿ ಪಡೆದರು. 

ಬೇಗನೆ ತಾಳ್ಮೆ ಕಳೆದುಕೊಳ್ಳುವ ಪ್ರವೃತ್ತಿ ವೃಶ್ಚಿಕ ರಾಶಿಯವರದ್ದು.  ನೀರಿನ ಕುರಿತು ನೀರಿನ ಸಂಬಂಧವಾದ ಅಲರ್ಜಿಗಳ ಕುರಿತು ಎಚ್ಚರವಿರಲಿ. ಅಬುìದ ರೋಗ ತಡೆಯುವುದಕ್ಕಾಗಿ ಶ್ರೀ ರಾಜರಾಜೇಶ್ವರಿ, ಮಾರುತಿ, ಈಶ್ವರ ಆರಾಧನೆ, ಸ್ತುತಿ, ಕವಚ, ಶ್ಲೋಕ ಪಠಣ ಮಾಡಿ. ಸ್ಥೈರ್ಯ ಹಾಗೂ ಧೈರ್ಯ ತೂಕ ತಪ್ಪದ ನಿಶ್ಚಲ ಹಾಗೂ ಸಮತೋಲನ ಭಾವದಲ್ಲಿರಲಿ. ಅತಿಯಾದ ಆತ್ಮಶ್ವಾಸ ಅತಿಯಾದ ಅಧೈರ್ಯ ಕೈಬಿಡಿ. ವೈವಾಹಿಕ ಜೀವನದಲ್ಲಿ ಬಾಳ ಸಂಗಾತಿಗಳ ಕುರಿತು ನಿರ್ಲಕ್ಷ್ಯ ಕೊಂಕು ಮಾತು ಬೇಡ.  ಎಂಜಿನಿಯರಿಂಗ್‌ ಸಂಗೀತ ಸಿದ್ಧಿ ಇವುಗಳಿಂದ ಧನಾರ್ಜನೆಗೆ ವಿಪುಲ ಅವಕಾಶಗಳಿರುತ್ತವೆ. ಗುರುಗ್ರಹ ಸಂಪನ್ನತೆ ಯುಕ್ತವಾದ ರೀತಿಯಲ್ಲಿ ಶಕ್ತಿ ಪಡೆದಾಗ ವಿಜಾnನ ಮೇಧಾವಿತನ ಪಾಂಡಿತ್ಯ ಹಾಗೂ ವಿದ್ವತ್ತುಗಳು ನಿರಾಯಾಸವಾಗಿ ಒದಗಿ ಬರುತ್ತದೆ.

ಎಪಿಜೆ ಅಬ್ದುಲ್‌ ಕಲಾಂ ಕಂಚಿ ಗುರುಪೀಠದ ಚಂದ್ರಶೇಖರ ಸಂಸ್ಕೃತಿ ಸ್ವಾಮಿಗಳು ಸಿಖ್‌ ಗುರು ಗುರುಗೋಂದ ಸಿಂಗ್‌ ವರ್ಣಕಲಾದ ಪ್ಯಾಬ್ಲೋ, ಪಿಕಾಸೋ, ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌, ಲೇಖಕ ಹಾಗೂ ವರ್ಣ ಕಲಾದ ಖಲೀಲ್‌ ಗಿಬ್ರಾನ್‌ ಪಾಂಡಿತ್ಯ ಹಾಗೂ ಸಂಗೀತ ಸಿದ್ಧಿಗಳಲ್ಲಿ ಹೆಸರು ಮಾಡಿದ ವೃಶ್ಚಿಕ ರಾಶಿಯ ಪ್ರಸಿದ್ಧರು. ಭಾರತದಲ್ಲಿ ಪ್ರಧಾನಿಯಾಗಲು ಭವಿಷ್ಯದಲ್ಲಿ ಅವಕಾಶ ಇರುವ ರಾಹುಲ್‌ ಗಾಂಧಿ, ಅವರ ಸೋದರಿ ಪ್ರಿಯಾಂಕ, ಅದ್ಭುತ ಪ್ರತಿಭೆಯ ನಟ ಕಮಲ್‌ ಹಾಸನ್‌, ವೈರುಧ್ಯಗಳ ನಡುವೆಯೂ ಪ್ರಸಿದ್ಧ ಅಂಕಣಗಾರ್ತಿಯಾದ ಶೋಭಾ ಡೇ,  ತನ್ನ ಸೌಂದರ್ಯದಿಂದ ಎಲ್ಲರನ್ನೂ  ಹುಚ್ಚೆಬ್ಬಿಸಿದ್ದ ನಟಿ ಎಲಿಜಿಬಿತ್‌ ಟೇಲರ್‌, ಕ್ರಿಕೆಟ್‌ಕಲಿ ಕಪಿಲ್‌ ದೇವ್‌, ಕುಬj ಕಾಯ ಆದರೆ ಆಕರ್ಷಕ ವ್ಯಕ್ತಿತ್ವದ ನಟ ಸಂಜೀವ್‌ ಕುಮಾರ್‌ ಪ್ರಸ್ತುತ ಶನಿಕಾಟದಲ್ಲಿ ಒದ್ದಾಡುತ್ತಿರುವ ಹಿಂದೆ ಸುಮಾರು ಒಂದು ದಶಕದ ಕಾಲ ಪಾಕಿಸ್ತಾನವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಜನರಲ್‌ ಪರ್ವೇಜ್‌ ಮುಶ್ರಫ್, ಇತ್ಯಾದಿ ಇತ್ಯಾದಿ ವೃಶ್ಚಿಕರಾಶಿಯವರ ಪಟ್ಟಿ ಇದೆ. ಆರ್ಮನಿಯ ಸಂಗೀತ ದಿಗ್ಗಜ ಬಿಥೋನ್‌ ಕೂಡಾ ಈ ರಾಶಿಯವರೇ.

ಮಿಲಿಯನ್ನ ಡಾಲರ್‌ ಪ್ರಶ್ನೆ ಎದುರಾಗುತ್ತಿದೆ. ಪ್ರಸ್ತುತ ಶನಿಕಾಟ ಎದುರಿಸುತ್ತಿರುವ ರಾಹುಲ್‌ ಗಾಂಧಿ 2019 ರ ಚುನಾವಣೆಯನ್ನು  ಹೇಗೆ ಎದುರಿಸಬಹುದು? ರಾಹುಲ್‌ ಅವರು ಸಾಗಬೇಕಾದ ದೂರ ಸುಲಭದ ಗೆಲುವಲ್ಲಿ ಕೈ ಜೋಡಿಸುವ ಮಟ್ಟದ್ದಲ್ಲ. ಅಪ್ರಸ್ತುತ ಆಗಲಾರದು. ಆದರೆ ಪ್ರಧಾನಿ ಪಟ್ಟದ ಪ್ರಶ್ನೆ ಇದ್ದೇ ಇರುತ್ತದೆ. ಈಗ ಚಂದ್ರ ದಶಾಕಾಲ ಕೂಡಾ ನಡೆಯುತ್ತಿದೆ.  ಶನಿಕಾಟವೂ ನೀಚ ಚಂದ್ರನ ದಶಾಕಾಲವೂ ರಾಹುಲರನ್ನು ಅತ್ಯಂತ ಬಿಗಿ ಬಂದೋಬಸ್ತಿನಲ್ಲಿ ಇರಿಸಿದೆ. ಕಾಯಬೇಕಾದವನು  ಶನೈಶ್ಚರನೇ ಆಗಿದ್ದಾನೆ. ಕಾಯುವ,  ಕಾಯ ಬೇಕಾದ ಶನೈಶ್ಚರ ನೀಚ ಚಂದ್ರನ ಬಿಗಿ ತಪ್ಪಿಸಿಕೊಳ್ಳಲು ರಾಹುಲ್‌ ಅಸಾಧಾರಣ  ಮಾತಿನ ಚೈತನ್ಯ ಸಮಯ, ವ್ಯವಧಾನಗಳ ಸೂಕ್ತ ಉಕ್ತಿಗಳಿಂದ ಎದುರಾಳಿಗಳನ್ನು ಎದುರಿಸಬೇಕು. ಬಿಗಿ ಭದ್ರತೆಯೂ ಮುಖ್ಯ. 

ಅನಂತ ಶಾಸ್ತ್ರೀ 

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.