ಬಾಸ್ ಅಂದ್ರೆ ಭಯಾನಾ?
Team Udayavani, Oct 19, 2017, 11:42 AM IST
ಉದ್ಯೋಗಂ ಪುರುಷ ಲಕ್ಷಣಂ… ಈ ಮಾತು ಹಳಸಿ, ಬಹಳ ಕಾಲವೇ ಆಯಿತು. ಈಗ ಮಹಿಳೆಯರೂ ಉದ್ಯೋಗ ಹೊಂದುವ ಮೂಲಕ, ಕೆಲಸ ಅವರ ಬದುಕಿನ ಭಾಗವೂ ಆಗಿ ಬಿಟ್ಟಿದೆ. ಹೀಗೆ ಕೆಲಸ ಅಂತ ಅರಸಿ ಹೊರಟ ಮಹಿಳೆಗೆ ಸದಾ ಒಂದಿಲ್ಲೊಂದು ಅಡೆತಡೆಗಳು ಎದುರಾಗುತ್ತವೆ. ಅಲ್ಲಿ ಆಕೆಯ ಅಡೆತಡೆಗಳನ್ನು ನಿವಾರಿಸುವ ಗೋಜಿಗೆ ಯಾರೂ ಹೋಗುವವರಲ್ಲ.
ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಮುಖ್ಯಸ್ಥರಿಗೆ ಹೇಳಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎನ್ನಿ. ಆದರೆ, ಮುಖ್ಯ ಸ್ಥಾನದಲ್ಲಿರುವ ವ್ಯಕ್ತಿಯೇ ಕಂಟಕನಾದರೆ,ಮುಂದಿನ ಕತೆಯೇನು ಹೇಳಿ? ಆಕೆ ಒಂದೋ ಸಹನಾಮಣಿ ಆಗಬೇಕು, ಇಲ್ಲಾ ಕೆಲಸ ಬಿಟ್ಟು ಹೊರಡಬೇಕು. ಆದರೆ, ಮೊದಲೇ ಹೇಳಿದಂತೆ ಸುಲಭವಾಗಿ ಕೆಲಸ ಬಿಟ್ಟು ಹೊರನಡೆಯುವುದು ಅಂದುಕೊಂಡಷ್ಟೇನೂ ಸುಲಭವಲ್ಲ.
ಮೊನ್ನೆಯಷ್ಟೇ ಗೆಳತಿಯೊಬ್ಬಳ ಜತೆ ಮಾತಾಡುತ್ತಿದ್ದೆ. “ಹೇಗಿದೆ ಕೆಲಸ?’ ಎಂದು ಕೇಳಿದೆ. “ಎಲ್ಲಾ ಚೆನ್ನಾಗಿದೆ. ಆದರೆ, ನಮ್ ಬಾಸ್ ಸ್ವಲ್ಪ ಕಿರಿಕ್ ಮಾರಾಯ್ತಿ’ ಎಂದಳು ಮೆಲ್ಲನೆ. “ಅದು ಎಲ್ಲಾ ಕಡೆ ಇದ್ದಿದ್ದೇ ಕಣೇ ’ ಎಂದೇ ಸಮಾಧಾನದ ದನಿಯಲ್ಲಿ. “ಹೌದು, ಎಲ್ಲ ಕಡೆ ಇರುತ್ತೆ. ಆದರೆ, ಇದು ಸ್ವಲ್ಪ ಭಿನ್ನ ಕತೆ’ ಎಂದಳಾಕೆ. ಅವಳ ಕತೆ ಕೇಳಿ, ಬೆವರಿಬಿಟ್ಟೆ!”ನಿಮ್ಮ ಮನೆ ಆಫೀಸಿನಿಂದ ದೂರ ಇದೆ ಅಲ್ವಾ? ನೈಟ್ ಒಬ್ಬರೇ ಹೋಗ್ತಿರಿ. ಯಾವುದಕ್ಕೂ ನನ್ನ ನಂಬರ್ ಇಟ್ಕೊಂಡಿರಿ. ನಾ ಹೆಲ್ಪ…ಮಾಡ್ತಿನಿ…’ ಎನ್ನುತ್ತಾ ಸಹಾಯದ ಸೋಗಿನಲ್ಲಿ ಆ ಬಾಸ್ ಏನೇನೋ ಹೇಳಿಬಿಟ್ಟನಂತೆ.
ಆಫೀಸಲ್ಲಿ ಏನಾಗುತ್ತೆ?
ಇದು ಎಲ್ಲ ಕಚೇರಿಯ ಕತೆಯಲ್ಲ. ಕೆಲವೇ ಆಫೀಸುಗಳ ಕತೆ. ಅಂತೂ ಇಂತೂ ಹೇಗೋ ಕೆಲಸ ಗಿಟ್ಟಿಸಿಕೊಂಡ ರೂ ಆಕೆಗೆ ಬಾಸ್ ಕಾಡುತ್ತಲೇ ಇರುತ್ತಾನೆ. ಆತನ ಮುಂದೆ ತಗ್ಗಿ ಬಗ್ಗಿಯೇ ನಡೆಯಬೇಕು. ಕೊಂಚ ಎದುರಾಡಿದರೆ ಮುಗಿಯಿತು, ಮರುದಿನದಿಂದಲೇ ಟಾರ್ಗೆಟ್ ಟಾರ್ಚರ್ ಶುರು. ತನ್ನ ಬತ್ತಳಿಕೆಯಲ್ಲಿನ ಎಲ್ಲ ಅಸ್ತ್ರವನ್ನೂ ಪ್ರಯೋಗಿಸಿ, ಆಕೆಗೆ ಕೆಲಸ ಬಿಟ್ಟು ಹೊರನಡೆಯುವ ಸನ್ನಿವೇಶ ಸೃಷ್ಟಿಸಿಬಿಡುತ್ತಾರೆ. ಈ ಸಮಸ್ಯೆಗೆ ಗುರಿಯಾಗಿಬಿಟ್ಟ ರೆ, ಕಚೇರಿಯಲ್ಲಿ ಆಕೆಯನ್ನು ಯಾರೂ ಮಾತಾಡಿಸುವುದಿಲ್ಲ.
ವಾಶ್ ರೂಮ್ ಸಾಂತ್ವನ…
ಇನ್ನು ಮಹಿಳೆಯರಿಗೆ ವಾಶ್ರೂಂ ಒಂಥರಾ ತವರು ಮನೆ ಇದ್ದಹಾಗೆ. ಕಷ್ಟ ಎದುರಾಗಲೆಲ್ಲ ಹೋಗಿ ಒಂದು ಬಕೆಟ… ಕಣ್ಣೀರು ಸುರಿಸಿ, ತನ್ನಷ್ಟಕ್ಕೆ ತಾನು ಸಮಾಧಾನಿಸಿಕೊಂಡು ಹಿಂದಿರುಗುವ ತಾಣ. “ನನ್ನಿಂದ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇವರಿಗೆಲ್ಲ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೋ, ಇಲ್ಲವೋ ಗೊತ್ತಾಗುತ್ತಿಲ್ಲ. ಸುಖಾಸುಮ್ಮನೆ ಎಗರಾಡುತ್ತಾರೆ.
ಯಾವುದೇ ಕಾರಣಕ್ಕೂ ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ’ ಎಂದು ಬಿಕ್ಕಳಿಸುವ ಆಕೆಯ ನೋವಿನ ದನಿವಾಶ್ ರೂಮಿನಗೋಡೆಗಳಷ್ಟೇ ಕೇಳಿಸಿಕೊಳ್ಳುತ್ತವೆ. ಮುಂಜಾನೆ ಮತ್ತದೇ ಆಫೀಸಿಗೆ ಬಂದಾಗ ನಿನ್ನೆ ಏನೂ ಆಗಿಯೇ ಇಲ್ಲವೆಂದು ಆಕೆ ಕೆಲಸದಲ್ಲಿ ಮುಳುಗಿದರೂ, ಮತ್ತದೇ ಕಾಮುಕ ಬಾಸ್ ಕಾಡುತ್ತಲೇ ಇರುತ್ತಾನೆ.
* ರಮ್ಯ ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ