ಬಾಸ್‌ ಅಂದ್ರೆ ಭಯಾನಾ?


Team Udayavani, Oct 19, 2017, 11:42 AM IST

boss-Fear.jpg

ಉದ್ಯೋಗಂ ಪುರುಷ ಲಕ್ಷಣಂ… ಈ ಮಾತು ಹಳಸಿ, ಬಹಳ ಕಾಲವೇ ಆಯಿತು. ಈಗ ಮಹಿಳೆಯರೂ ಉದ್ಯೋಗ ಹೊಂದುವ  ಮೂಲಕ, ಕೆಲಸ ಅವರ ಬದುಕಿನ ಭಾಗವೂ ಆಗಿ ಬಿಟ್ಟಿದೆ. ಹೀಗೆ ಕೆಲಸ ಅಂತ ಅರಸಿ ಹೊರಟ ಮಹಿಳೆಗೆ ಸದಾ ಒಂದಿಲ್ಲೊಂದು ಅಡೆತಡೆಗಳು ಎದುರಾಗುತ್ತವೆ. ಅಲ್ಲಿ ಆಕೆಯ ಅಡೆತಡೆಗಳನ್ನು ನಿವಾರಿಸುವ ಗೋಜಿಗೆ ಯಾರೂ ಹೋಗುವವರಲ್ಲ.

ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಮುಖ್ಯಸ್ಥರಿಗೆ ಹೇಳಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎನ್ನಿ. ಆದರೆ, ಮುಖ್ಯ ಸ್ಥಾನದಲ್ಲಿರುವ ವ್ಯಕ್ತಿಯೇ ಕಂಟಕನಾದರೆ,ಮುಂದಿನ ಕತೆಯೇನು ಹೇಳಿ? ಆಕೆ ಒಂದೋ ಸಹನಾಮಣಿ ಆಗಬೇಕು, ಇಲ್ಲಾ ಕೆಲಸ ಬಿಟ್ಟು ಹೊರಡಬೇಕು. ಆದರೆ, ಮೊದಲೇ ಹೇಳಿದಂತೆ ಸುಲಭವಾಗಿ ಕೆಲಸ ಬಿಟ್ಟು ಹೊರನಡೆಯುವುದು ಅಂದುಕೊಂಡಷ್ಟೇನೂ ಸುಲಭವಲ್ಲ.

ಮೊನ್ನೆಯಷ್ಟೇ ಗೆಳತಿಯೊಬ್ಬಳ ಜತೆ ಮಾತಾಡುತ್ತಿದ್ದೆ. “ಹೇಗಿದೆ ಕೆಲಸ?’ ಎಂದು ಕೇಳಿದೆ. “ಎಲ್ಲಾ ಚೆನ್ನಾಗಿದೆ. ಆದರೆ, ನಮ್‌ ಬಾಸ್‌ ಸ್ವಲ್ಪ ಕಿರಿಕ್‌ ಮಾರಾಯ್ತಿ’ ಎಂದಳು ಮೆಲ್ಲನೆ. “ಅದು ಎಲ್ಲಾ ಕಡೆ ಇದ್ದಿದ್ದೇ ಕಣೇ ’ ಎಂದೇ ಸಮಾಧಾನದ ದನಿಯಲ್ಲಿ. “ಹೌದು, ಎಲ್ಲ ಕಡೆ ಇರುತ್ತೆ. ಆದರೆ, ಇದು ಸ್ವಲ್ಪ ಭಿನ್ನ ಕತೆ’ ಎಂದಳಾಕೆ. ಅವಳ ಕತೆ ಕೇಳಿ, ಬೆವರಿಬಿಟ್ಟೆ!”ನಿಮ್ಮ ಮನೆ ಆಫೀಸಿನಿಂದ ದೂರ ಇದೆ ಅಲ್ವಾ? ನೈಟ್‌ ಒಬ್ಬರೇ ಹೋಗ್ತಿರಿ. ಯಾವುದಕ್ಕೂ ನನ್ನ ನಂಬರ್‌ ಇಟ್ಕೊಂಡಿರಿ. ನಾ ಹೆಲ್ಪ…ಮಾಡ್ತಿನಿ…’ ಎನ್ನುತ್ತಾ ಸಹಾಯದ ಸೋಗಿನಲ್ಲಿ ಆ ಬಾಸ್‌ ಏನೇನೋ ಹೇಳಿಬಿಟ್ಟನಂತೆ.

ಆಫೀಸಲ್ಲಿ ಏನಾಗುತ್ತೆ?
ಇದು ಎಲ್ಲ ಕಚೇರಿಯ ಕತೆಯಲ್ಲ. ಕೆಲವೇ ಆಫೀಸುಗಳ ಕತೆ. ಅಂತೂ ಇಂತೂ ಹೇಗೋ ಕೆಲಸ ಗಿಟ್ಟಿಸಿಕೊಂಡ ರೂ ಆಕೆಗೆ ಬಾಸ್‌ ಕಾಡುತ್ತಲೇ ಇರುತ್ತಾನೆ. ಆತನ ಮುಂದೆ ತಗ್ಗಿ ಬಗ್ಗಿಯೇ ನಡೆಯಬೇಕು. ಕೊಂಚ ಎದುರಾಡಿದರೆ ಮುಗಿಯಿತು, ಮರುದಿನದಿಂದಲೇ ಟಾರ್ಗೆಟ್‌ ಟಾರ್ಚರ್‌ ಶುರು. ತನ್ನ ಬತ್ತಳಿಕೆಯಲ್ಲಿನ ಎಲ್ಲ ಅಸ್ತ್ರವನ್ನೂ ಪ್ರಯೋಗಿಸಿ, ಆಕೆಗೆ ಕೆಲಸ ಬಿಟ್ಟು ಹೊರನಡೆಯುವ ಸನ್ನಿವೇಶ ಸೃಷ್ಟಿಸಿಬಿಡುತ್ತಾರೆ. ಈ ಸಮಸ್ಯೆಗೆ ಗುರಿಯಾಗಿಬಿಟ್ಟ ರೆ, ಕಚೇರಿಯಲ್ಲಿ ಆಕೆಯನ್ನು ಯಾರೂ ಮಾತಾಡಿಸುವುದಿಲ್ಲ.

ವಾಶ್‌ ರೂಮ್‌ ಸಾಂತ್ವನ…
ಇನ್ನು ಮಹಿಳೆಯರಿಗೆ ವಾಶ್‌ರೂಂ ಒಂಥರಾ ತವರು ಮನೆ ಇದ್ದಹಾಗೆ. ಕಷ್ಟ ಎದುರಾಗಲೆಲ್ಲ ಹೋಗಿ ಒಂದು ಬಕೆಟ… ಕಣ್ಣೀರು ಸುರಿಸಿ, ತನ್ನಷ್ಟಕ್ಕೆ ತಾನು ಸಮಾಧಾನಿಸಿಕೊಂಡು ಹಿಂದಿರುಗುವ ತಾಣ. “ನನ್ನಿಂದ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇವರಿಗೆಲ್ಲ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೋ, ಇಲ್ಲವೋ ಗೊತ್ತಾಗುತ್ತಿಲ್ಲ. ಸುಖಾಸುಮ್ಮನೆ ಎಗರಾಡುತ್ತಾರೆ.

ಯಾವುದೇ ಕಾರಣಕ್ಕೂ ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ’ ಎಂದು ಬಿಕ್ಕಳಿಸುವ ಆಕೆಯ ನೋವಿನ ದನಿವಾಶ್‌ ರೂಮಿನಗೋಡೆಗಳಷ್ಟೇ ಕೇಳಿಸಿಕೊಳ್ಳುತ್ತವೆ. ಮುಂಜಾನೆ ಮತ್ತದೇ ಆಫೀಸಿಗೆ ಬಂದಾಗ ನಿನ್ನೆ ಏನೂ ಆಗಿಯೇ ಇಲ್ಲವೆಂದು  ಆಕೆ ಕೆಲಸದಲ್ಲಿ ಮುಳುಗಿದರೂ, ಮತ್ತದೇ ಕಾಮುಕ ಬಾಸ್‌ ಕಾಡುತ್ತಲೇ ಇರುತ್ತಾನೆ.

* ರಮ್ಯ ತುಮಕೂರು

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.