ಜೀವನ-ಪರೀಕ್ಷೆ


Team Udayavani, Apr 7, 2017, 3:45 AM IST

exam-result759.jpg

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ’ ಆಹಾ…! ಬಾಲ್ಯದ ತುಂಟಾಟಗಳನ್ನು ನೆನಪು ಮಾಡಿಕೊಡುವಂತಹ ಎಷ್ಟೊಂದು ಸುಂದರ ಸಾಲುಗಳು.

ಇಂದಿನ ಜಂಜಾಟದ ಜೀವನದ ನಡುವೆ ಒಮ್ಮೆ ಬಿಡುವು ಮಾಡಿಕೊಂಡು ನಾವು ಸಾಗಿಬಂದ ಬಾಳ ಪಯಣವನ್ನೊಮ್ಮೆ ತಿರುಗಿ ನೋಡಿದರೆ ಎಷ್ಟೊಂದು ಸುಂದರ ಆ ಬಾಲ್ಯದ ನೆನಪುಗಳು.

ಮುಂಜಾನೆ ಬೇಗನೆ ಎಚ್ಚರವಾಗಿದ್ದರೂ, ಶಾಲೆಗೆ ಹೊರಡುವ ಸಮಯವಾಯಿತೆಂದು ತಿಳಿದಿದ್ದರೂ, ತಿಳಿಯದಂತೆ ನಟಿಸಿ, ಅಮ್ಮನ ಕರೆಗಾಗಿಯೇ ಕಾಯುತ್ತಾ ನಿದ್ರೆಯ ನಾಟಕವಾಡಿ ಹಾಸಿಗೆಯಲ್ಲೇ ಮಲಗಿಕೊಂಡಿರುತ್ತಿದ್ದ ಆ ಸುಂದರ ನೆನಪುಗಳ ಅನುಭವ ಎಷ್ಟೊಂದು ಮಧುರ. ಇಂದಿನ ಕಾರು-ಬಸ್ಸುಗಳಲ್ಲಿ ಮನೆಯಿಂದ ಎಲ್ಲೋ ದೂರ ಇರುವ ಶಾಲೆಗಳಿಗೆ ಪ್ರಯಾಣವಾಗಿರಲಿಲ್ಲ ಅಂದು. ಮನೆಯ ಅತೀ ಸಮೀಪವಿರುವ ಶಾಲೆಗಳಿಗೆ ಅಚ್ಚುಮೆಚ್ಚಿನ ಸ್ನೇಹಿತರೊಂದಿಗೆ ಕೂಡಿಕೊಂಡು ಒಂದಿಷ್ಟು ತರಲೆ ಮಾಡಿಕೊಂಡು, ಯಾರದೋ ತೋಟಕ್ಕೆ  ಕಲ್ಲೆಸೆದು ಅವರಿಂದ ಒಂದಷ್ಟು ಬೈಗುಳಗಳ ಸುರಿಮಳೆಯನ್ನೇ ಸುರಿಸಿಕೊಂಡರೂ ಅದನ್ನೆಲ್ಲ ಲೆಕ್ಕಿಸದೇ ಕದ್ದು ತಂದ ಹಣ್ಣುಗಳನ್ನು ಗೆಳೆಯರೆಲ್ಲಾ ಸೇರಿ ತಿನ್ನುವುದೇ ಏನೋ ಒಂದು ರೀತಿಯ ಖುಷಿಯ ಅನುಭವ. ಅಂತಹ ಅನುಭವಗಳಿಂದಲೇ ಸಿಕ್ಕಿದ್ದನ್ನು ಒಬ್ಬರಿಗೊಬ್ಬರು ಹಂಚಿ ತಿನ್ನುವ ಮತ್ತು ನಮ್ಮ ತುಂಟಾಟಗಳಿಂದ ಇನ್ನೊಬ್ಬರ ಮನಸ್ಸಿಗೆ ಆಗುವ ನೋವುಗಳನ್ನು ಅರಿತುಕೊಳ್ಳುವಂತಹ ಎಷ್ಟೋ ಜೀವನದ ಪಾಠಗಳನ್ನು ಕಲಿತುಕೊಂಡ ನಿದರ್ಶನಗಳೂ ಇವೆ.

ಅಂದು ನಮ್ಮ ಪಾಲಿಗೆ ಶಾಲೆಯ ಪರೀಕ್ಷೆಗಳೆಂದರೆ ಮೌಲ್ಯಾಧಾರಿತ ಜೀವನ ಶೈಲಿಯನ್ನು ಎಷ್ಟರಮಟ್ಟಿಗೆ ಬದುಕಲು ಕಲಿತಿದ್ದೇವೆ ಎಂಬುವುದನ್ನು ಅಳೆಯುವ ಒಂದು ಸಾಧನ ಮಾತ್ರವಾಗಿತ್ತು. ಹಾಗಾಗಿ ಅಂಕಗಳ ಕಡೆಗೆ ಅಷ್ಟೊಂದು ಗಮನಹರಿಸದೇ “ಉತ್ತೀರ್ಣ’ ಎಂಬ ಒಂದೇ ಪದದ ನಿರೀಕ್ಷೆಯೊಂದಿಗೆ ಪರೀಕ್ಷೆಯ ನಂತರದ ರಜೆಯ ಸವಿಯನ್ನು ಸವಿಯುವ ದಿನಗಳಿಗಾಗಿ ಮನಸ್ಸು ಕಾಯುತ್ತಿತ್ತು.

ಆದರೆ ಇಂದು…
ಶಾಲೆಯ ಪರೀಕ್ಷೆಗಳು ಶುರುವಾಗುವುದಕ್ಕಿಂತ ಮೊದಲೇ ಪರೀಕ್ಷೆಯ ಭೀತಿಯಲ್ಲಿ ಮಕ್ಕಳು ಅತ್ಯಮೂಲ್ಯವಾದ ಜೀವನವನ್ನೇ ಕೊನೆಗೊಳಿಸುವ ಆತ್ಮಹತ್ಯೆಯೆಂಬ ಹಾದಿಯನ್ನು ತುಳಿಯುತ್ತಾರೆಂದರೆ, ಇಂದಿನ ಮಕ್ಕಳ ಮನಃಸ್ಥಿತಿ ಎಲ್ಲಿಯವರೆಗೆ ಯಾಂತ್ರಿಕ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಚಿಂತಿಸಲೇಬೇಕು.

ಇನ್ನೂ ಮನೆಯವರೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ ಬೆರೆತು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಪಾಠಗಳನ್ನು ಕಲಿಯಬೇಕಾದ ಮುಗ್ಧ ಮನಸ್ಸುಗಳು ಯಾವುದೋ ಒಂದು ಸಣ್ಣ ಪರೀಕ್ಷೆಯ ನೆಪದಿಂದ ಇಡೀ ಜೀವನವನ್ನೇ ಕೊನೆಗೊಳಿಸುವ ಮಟ್ಟಕ್ಕೆ ಚಿಂತಿಸುತ್ತಿದೆಯೆಂದರೆ ಇದು ನಮ್ಮ ಇಂದಿನ ಪೀಳಿಗೆ ಎಷ್ಟು ದುರ್ಬಲ ಮನಃಸ್ಥಿತಿಯನ್ನು ಹೊಂದಿದೆ ಎಂಬುವುದಕ್ಕೆ ಒಂದು ಉದಾಹರಣೆಯಷ್ಟೇ. 

ಒಂದು ರೀತಿಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಷ್ಟಗಳ ಅರಿವೇ ಇಲ್ಲದಂತೆ ಬೆಳೆಸುವ ಇಂದಿನ ತಂದೆ-ತಾಯಿಯರ ಅತಿಯಾದ ಪ್ರೀತಿ ಮತ್ತು ಮಕ್ಕಳ ಬಗೆಗಿನ ಅತಿಯಾದ ನಿರೀಕ್ಷೆಗಳು, ಮಕ್ಕಳ ಮಾನಸಿಕ ಒತ್ತಡವನ್ನು ಅಧಿಕಗೊಳಿಸುತ್ತಿವೆಯೇ? ಇನ್ನೂ ಜೀವನವೆಂದರೆ ಏನೆಂದು ಅರಿಯದ ಮನಸ್ಸುಗಳು ಶಾಲೆಯ ಪರೀಕ್ಷೆಗಳನ್ನೇ ಮುಂದಿನ ಇಡೀ ಜೀವನವನ್ನು ನಿರ್ಧರಿಸುವ ಮಾಪಕಗಳೆಂದುಕೊಂಡಿರುವರೇ?- ಈ ಬಗ್ಗೆ ನಾವಿಂದು ಚಿಂತಿಸಲೇಬೇಕು. ಜೀವನವೆಂಬುದು ಪರೀಕ್ಷೆಯ ಅಂಕಗಳಿಗಷ್ಟೇ ಸೀಮಿತವಲ್ಲ ಅದರಾಚೆಗೂ ಸುಂದರವಾದ ಬದುಕಿದೆ ಎಂಬುದನ್ನು ಇಂದಿನ ಯುವ ಮನಸ್ಸುಗಳಿಗೆ ತಿಳಿಯಪಡಿಸಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ. ಇಲ್ಲವಾದಲ್ಲಿ ಮುಂದೊಂದು ದಿನ ದುರ್ಬಲ ಮನಃಸ್ಥಿತಿಯ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಶಮೀನಾ ಎಸ್‌., ಬೈಲೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.