ಪರಿಸರ ಪ್ರಿಯರ ಅಶೋಕ ವನ


Team Udayavani, Apr 5, 2021, 6:43 PM IST

Untitled-1

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಅಡೇಮನೆ ನಿವಾಸಿ ಪ್ರಕಾಶ ಕೃಷ್ಣ ಭಟ್‌ ಅವರು ತಮ್ಮ ಎರಡು ಎಕರೆಗೂ ಅಧಿಕ ಪ್ರದೇಶದ ಭೂಮಿಯನ್ನು ಪಕ್ಷಿಗಳ, ಪರಿಸರ ಪ್ರಿಯರ ತಾಣವಾಗಿ ರೂಪಿಸಿದ್ದಾರೆ.

ಆಧುನಿಕತೆಯ ಭರಾಟೆಯ ಇಂದಿನ ದಿನಗಳಲ್ಲಿ ಸ್ವಲ್ಪವೇ ಜಾಗಸಿಕ್ಕಿದರೂ ಸಾಕು, ಅಲ್ಲಿ ಬಹುಮಹಡಿಯ ಕಟ್ಟಡಗಳ್ಳೋ ಅಥವಾಕಾರ್ಖಾನೆಯೋ ತಲೆ ಎತ್ತಿ ನಿಲ್ಲುತ್ತವೆ. ಆದರೆ, ಶಿರಸಿಯ ಪ್ರಕಾಶ ಕೃಷ್ಣ ಭಟ್‌ ಅವರ ಆಲೋಚನಾ ಕ್ರಮ ವಿಭಿನ್ನ!

ಹೌದು. ಶಿರಸಿಯ ಅಡೇಮನೆಯಲ್ಲಿ ತಮ್ಮ ಹೆಸರಿನಲ್ಲಿರುವಎರಡು ಎಕರೆಗೂ ಅಧಿಕ ವಿಸ್ತಾರವಾದ ಭೂಮಿಯಲ್ಲಿ ಔಷಧೀಯಸಸ್ಯಗಳನ್ನು ಬೆಳೆಸುವ ಮೂಲಕ ಪಕ್ಷಿಗಳ, ಪರಿಸರ ಪ್ರಿಯರತಾಣವಾಗಿರೂಪಿಸಿದ್ದು ಇದು ಶಿರಸಿಗರ ಗಮನ ಸೆಳೆಯುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ 350 ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಬೇರೆ ಬೇರೆ ಸ್ಥಳಗಳಿಂದ ಸಸ್ಯ ತಂದು, ಹನಿ ನೀರಾವರಿ ವ್ಯವಸ್ಥೆ ಮಾಡಿ ಅಗತ್ಯ ಗೊಬ್ಬರ ನೀಡಿ ಗಿಡಗಳನ್ನು ಬೆಳೆಸಿದ್ದಾರೆ. ಈ ಪ್ರದೇಶಕ್ಕೆ “ಅಶೋಕ ವನ’ ಎಂದು ಹೆಸರಿಟ್ಟಿದ್ದಾರೆ. 8 ವರ್ಷಗಳ ಪರಿಶ್ರಮದ ಫ‌ಲವಾಗಿ ಇಂದು ಅಶೋಕವನ ಎಲ್ಲರನ್ನೂ ಆಕರ್ಷಿಸುತ್ತಿದೆ.

ನಾಲ್ಕು ಹಂತದ ಸಸ್ಯಗಳು:ಪ್ರಕಾಶ ಭಟ್ಟರ “ಅಶೋಕ ವನ’ದಲ್ಲಿ ನಾಲ್ಕುಹಂತದ ಸಸ್ಯಗಳನ್ನು ಕಾಣಬಹುದು. ಗಡ್ಡೆಯ ಮಾದರಿ: ಅರಿಶಿನ, ಶುಂಠಿ, ಶತಾವರಿ ಮತ್ತಿತರ ಸಸ್ಯಗಳು

ಕುಬ್ಜ ಜಾತಿಯ ಸಸ್ಯಗಳು:

ಏಲಕ್ಕಿ, ನೆಲ ನೆಲ್ಲಿ, ಬಳ್ಳಿ ಅರಿಶಿಣ, ಗಳಂಗ ಮುಂತಾದವು.

-ಆರರಿಂದ ಏಳು ಅಡಿ ಎತ್ತರ ಬೆಳೆಯುವ

ಔಷಧೀಯ ಸಸ್ಯಗಳು:

ಕೋಕಂ, ದಾಲಿcನ್ನಿ, ಲವಂಗ

-ಎತ್ತರ ಬೆಳೆಯುವ ಔಷಧೀಯ ಸಸ್ಯಗಳು:

ಅಗರವುಡ್‌, ಅಶೋಕ, ನೇರಳೆ ಮುಂತಾದವು.

ಈ ವನದಲ್ಲಿನ ಪ್ರತಿಯೊಂದು ದೊಡ್ಡ, ಸಣ್ಣ ಮರಗಳಿಗೆ ಕಾಳುಮೆಣಸಿನ ಬಳ್ಳಿಯನ್ನೂ ಹಬ್ಬಿಸಿದ್ದಾರೆ. ಬೇಸಿಗೆಯ ಸಮಯದಲ್ಲಿನೀರಿಲ್ಲದಿದ್ದರೂ ಬದುಕುವ ಕೆಲವು ವಿಶೇಷ ಸಸ್ಯಗಳನ್ನೂಬೆಳೆಸಿರುವುದು ವಿಶೇಷ! ವನದಲ್ಲಿ ಶತಾವರಿ, ದೊಡ್ಡ ನೇರಳೆ,ದಾಲ್ಚಿನ್ನಿ, ಬಜೆ, ಶುಂಠಿ, ಅಂಬೆಕೊಂಬು, ನೆಲ ನೆಲ್ಲಿ, ಅಶೋಕ ಮುಂತಾದ ಸಸ್ಯಗಳಿವೆ. ಅಶೋಕ ವನದಲ್ಲಿ ನವಗ್ರಹವನವೂ ಇದೆ. ಮಾಹಿತಿಗಾಗಿ ಯಾರೇ ಇಲ್ಲಿಗೆ ಭೇಟಿನೀಡಿದರೂ ಭಟ್ಟರು ಪ್ರೀತಿಯಿಂದ ವಿವರಣೆ ನೀಡುತ್ತಾರೆ.

ಯೋಗವನ ನಿರ್ಮಾಣದ ಕನಸು:

ಒಂದು ಆರೋಗ್ಯದಾಯಕ, ಸಂಪ್ರದಾಯ, ಸಂಸ್ಕೃತಿಗೆ ಅನುಗುಣವಾಗಿ ವ್ಯವಸ್ಥಿತವಾದ ಯೋಗ ವನ ನಿರ್ಮಿಸಬೇಕೆಂಬ ಕನಸು ಹೊಂದಿದ್ದಾರೆ ಪ್ರಕಾಶ ಭಟ್‌. ಔಷಧೀಯ ಕೃಷಿ ಮಾಹಿತಿಗಾಗಿ ಅವರನ್ನು

9481651332 ನಲ್ಲಿ ಸಂಪರ್ಕಿಸಬಹುದು.

 

– ಎಂ.ಎಸ್ .ಶೋಭಿತ್‌, ಮೂಡ್ಕಣಿ

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.