ತಟ್ಟೆ ಲೋಟ ಹಿಡಿದು ಪ್ರತಿಭಟನಾ ಮೆರವಣಿಗೆ
Team Udayavani, Apr 13, 2021, 3:42 PM IST
ಚನ್ನಪಟ್ಟಣ: 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮತ್ತಷ್ಟುತೀವ್ರಗೊಂಡಿದೆ. ಚನ್ನಪಟ್ಟಣ ಉಪವಿಭಾಗದ ನೌಕರರು ಮತ್ತು ಅವರ ಕುಟುಂಬದವರು ಸೋಮವಾರ ತಾಲೂಕು ಕಚೇರಿ ಮುಂಭಾಗ ತಟ್ಟೆ, ಲೋಟ ಬಡಿದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಸಾರಿಗೆ ಸಂಸ್ಥೆ ಘಟಕದಿಂದ ಸಾತನೂರು ರಸ್ತೆ, ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿ ಮುಂಭಾಗ ಸಮಾವೇಶ ಗೊಂಡು ಪ್ರತಿಭಟಿಸಿದರು.
ನೈತಿಕ ಬೆಂಬಲ: ಒಂದೆಡೆ ತಮ್ಮ ನ್ಯಾಯಯುತ ಬೇಡಿಕೆಈಡೇರಿಕೆಗಾಗಿ ನೌಕರರು ಶಾಂತಿಯುತವಾಗಿ ಮುಷ್ಕರನಡೆಸುತ್ತಿದ್ದಾರೆ, ನಾವು ಅವರಿಗೆ ನೈತಿಕ ಬೆಂಬಲ ನೀಡಿ,ಮುಷ್ಕರದಲ್ಲಿ ಪಾಲ್ಗೊಂಡಿದ್ದೇವೆ ಎಂದು ಸಾರಿಗೆ ಸಂಸ್ಥೆ ನೌಕರರ ಕುಟುಂಬದವರು ತಿಳಿಸಿದರು.
ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ, ಕೆಎಸ್ಸಾರ್ಟಿಸಿ “ಸಿ’ ವರ್ಗದನೌಕರರ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡಿ ಸಾರಿಗೆ ನೌಕರರ ಲಕ್ಷಾಂತರ ಕುಟುಂಬ ನೆಮ್ಮದಿ ಯಾಗಿ ಯುಗಾದಿ ಹಬ್ಬ ಆಚರಣೆ ಮಾಡಲು ಅನುವು ಮಾಡಿಕೊಡಬೇಕು. ಅಲ್ಲದೇ, ವರ್ಗಾವಣೆ, ವಜಾ ಆದೇಶ ರದ್ದುಗೊಳಿಸಬೇಕೆಂದು ತಹಶೀಲ್ದಾರ್ ನಾಗೇಶ್ ಅವರಮೂಲಕ ಮನವಿ ಸಲ್ಲಿಸಿದರು. ಚನ್ನಪಟ್ಟಣ ಸಾರಿಗೆ ಸಂಸ್ಥೆ ಘಟಕದ ನೌಕರರ ಸಂಘದ ಮುಖಂಡರು, ಕುಟುಂಬದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Magadi: ಹೇಮಾವತಿ ಕುಡಿಯುವ ನೀರು ಹೋರಾಟ; ಕೋಡಿಹಳ್ಳಿ ಚಂದ್ರಶೇಖರ್ ಸೇರಿ ರೈತರ ಬಂಧನ
Road potholes: ಪ್ರವಾಸಿಗರ ಪ್ರಾಣ ಹಿಂಡುವ ಗುಂಡಿ ಬಿದ್ದ ರಸ್ತೆ!
Ramanagara: ಬೈಕ್-ಸರ್ಕಾರಿ ಬಸ್ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು
Crime: 4 ತಿಂಗಳಿನಲ್ಲಿ 1646 ಅಪರಾಧ ಪ್ರಕರಣ
ಡ್ರಾ ಮಾಡಿದ್ದು 5000 ಬಂದಿದ್ದು 4040; ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್
MUST WATCH
ಹೊಸ ಸೇರ್ಪಡೆ
Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ
Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ
Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ
TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್