ನಿರ್ಮಲ ಪ್ರೇಮದ ಆಲಯದಲ್ಲಿ ದೇವರು ಉಳಿದುಕೊಂಡ…


Team Udayavani, May 10, 2021, 3:31 PM IST

life story

ಒಬ್ಬ ರಾಜನಿಗೆ ದೇವಾಲಯವೊಂದನ್ನು ಕಟ್ಟಿಸಬೇಕೆಂಬ ಆಸೆಯಾಯಿತು. ಒಂದು ಶುಭಮುಹೂರ್ತದಲ್ಲಿ ಖ್ಯಾತ ಶಿಲ್ಪಿಗಳು ದೇಗುಲ ನಿರ್ಮಾಣದ ಕೆಲಸ ಆರಂಭಿಸಿದರು. ವರ್ಷದ ನಂತರ ಭವ್ಯ-ದಿವ್ಯ ಅನ್ನುವಂಥ ದೇಗುಲ ನಿರ್ಮಾಣವಾಯಿತು.

ದೇವಮೂರ್ತಿಯ ಪ್ರತಿಷ್ಠಾಪನೆಯೂ ಆಯಿತು. ಲಕ್ಷಾಂತರ ಜನರು ‌ ಅದನ್ನು ನೋಡಿ ಕಣ್ತುಂಬಿಕೊಂಡು, ಧನ್ಯತೆ ಪಡೆದರು. ಪಂಡಿತರು ದೇವಾಲಯದ ಚೆಂದವನ್ನು, ರಾಜನ ಘನಕಾರ್ಯವನ್ನು ಹಾಡಿ ಹೊಗಳಿದರು. ಭಗವಂತನಿಗೆ ಮಹಾಮನೆ ನಿರ್ಮಿಸಿದ ಹಮ್ಮಿನಲ್ಲಿ ರಾಜನೂ ಸಂಭ್ರಮಿ ಸಿದ.

ಅವತ್ತು ರಾತ್ರಿ ರಾಜನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡ. ರಾಜ ಕೇಳಿದ: “”ಸ್ವಾಮೀ, ನಿನಗಾಗಿ ಭವ್ಯವಾದ ಆಲಯವನ್ನು ಕಟ್ಟಿಸಿದೆ. ಶಾಸ್ತ್ರೋಕ್ತವಾಗಿ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಿಸಿದೆ. ನಿನಗೆ ಅದು ಹಿಡಿಸಿತು ತಾನೇ?”ಭಗವಂತ ಹೇಳಿದ: “”ದೊರೆಯೇ, ನೀನು ಕಟ್ಟಿಸಿದ ದೇಗುಲವನ್ನು ನಾನು ನೋಡಲೇ ಇಲ್ಲ. ಒಬ್ಬ ಭಕ್ತ ನನಗಾಗಿ ಮೇರೆಯೇ ಇರದಷ್ಟು ವಿಶಾಲವಾದ ಮಂದಿರವನ್ನು ಕಟ್ಟಿಸಿದ್ದ. ನನಗೆ ಅಲ್ಲಿಂದ ಹೊರಬರಲಾಗಲಿಲ್ಲ…”ಈ ಮಾತು ಕೇಳಿ ರಾಜನಿಗೆ ಬೆರಗಾಯಿತು.

ಆತ ಕುತೂಹಲ ದಿಂದ ಕೇಳಿದ. ‘ಭಗವಂತಾ,ಅಂಥದೊಂದು ದೇವಾಲಯದ ಬಗ್ಗೆ ನಾನು ಎಲ್ಲಿಯೂ ಕೇಳಿಲ್ಲವಲ್ಲ…ಎಲ್ಲಿದೆ ಆ ದೇಗುಲ?’ದೇವರು ಹೇಳಿದ: “”ದೊರೆಯೇ, ಅದು ಭಕ್ತನ ಹೃದಯದಲ್ಲಿದೆ. ಆತ ನಿರ್ಮಲ ಪ್ರೇಮವೆಂಬ ಗಾರೆಯಿಂದ ಅದನ್ನು ಕಟ್ಟಿದ್ದಾನೆ. ಅಲ್ಲಿ ತೋರಿಕೆಯಿಲ್ಲ. ಶ್ರೀಮಂತಿಕೆಯ ಪ್ರದರ್ಶನವಿಲ್ಲ. ಆ ದೇಗುಲಕ್ಕೆ ಗೋಡೆಗಳೂ ಇಲ್ಲ. ಅಂಥದೊಂದು ಮಂದಿರಕ್ಕಾಗಿ ನಾನು ಶತಮಾನಗಳಿಂದ ಕಾಯುತ್ತಿದ್ದೆ. ಗುಡಿಸಲಿನಲ್ಲಿರುವ ಭಕ್ತನೊಬ್ಬ ಅಂಥದೊಂದು ಆಲಯವನ್ನು ಮೊನ್ನೆಯಷ್ಟೇ ನಿರ್ಮಿಸಿದ. ನಾನು ಅಲ್ಲಿಗೆ ಹೋಗಿದ್ದು ಮಾತ್ರವಲ್ಲ, ಅಲ್ಲಿಯೇ ಉಳಿದುಬಿಟ್ಟೆ ನೀನು ನಿರ್ಮಿಸಿದ ಮಂದಿರಕ್ಕೆ ಬರಲು ಆಗಲಿಲ್ಲ. ಬಹುಶಃಮುಂದೆಯೂ ಆಗುವುದಿಲ್ಲ…”

ಟಾಪ್ ನ್ಯೂಸ್

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.