ಹಾರುವ ಓತಿಯ ಬೆನ್ನು ಕಚ್ಚಿದ ವಿಜ್ಞಾನಿಯ ಕಥೆ ಕರ್ವಾಲೋ


Team Udayavani, Jun 13, 2021, 7:07 PM IST

Karvalo, Udayavani, College Camopus

ನಮ್ಮ ಸುತ್ತ ಮುತ್ತಲಿನ ಪರಿಸರ ಎಷ್ಟೊಂದು ಅದ್ಭುತ ಜೀವ ವೈವಿಧ್ಯತೆಗಳನ್ನು ತನ್ನ ಭೂ ಗರ್ಭದೊಳಗೆ ಅಡಗಿಸಿಕೊಂಡಿದೆ ಅಲ್ಲವೇ? ನಮ್ಮ ಕಲ್ಪನೆಗೂ ನಿಲುಕದ ಸಸ್ಯ ಹಾಗೂ ಪ್ರಾಣಿ ಸಂಪತ್ತು ಪಕೃತಿಯ ಒಡಲಾಳದಲ್ಲಿ ರಾರಾಜಿಸುತ್ತಿದೆ. ಇಂಥಹ ಅಗೋಚರ ಜೀವ ಜಗತ್ತಿನ ಮಹತ್ವವನ್ನು ತಿಳಿಯಬೇಕಾದರೆ ನೀವು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಓದಲೇಬೇಕು.

ಇದು ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಅವರು ಹೇಗೆ ಯಶಸ್ವಿಯಾದರೂ ಎಂಬುದೇ ಈ ಕಾದಂಬರಿಯ ಕಥಾವಸ್ತು. ಇಲ್ಲಿ ತೇಜಸ್ವಿಯವರು ಕಥೆಯ ನಿರೂಪಕ ಹಾಗೂ ಪಾತ್ರದಾರನೂ ಆಗಿ ಎರಡೂ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಮಹೇಶ್ವರಯ್ಯ ಇನ್ನಿಲ್ಲ

‘ಕರ್ವಾಲೋ’ ಕಾದಂಬರಿಯು ಮೂಡುಗೆರೆಯ ಕಗ್ಗಾಡಿನ ಹಳ್ಳಿಯಲ್ಲಿ ನಡೆಯುವ ಘಟನೆ. ಮೂಡುಗೆರೆಯ ಜೇನು ಸೊಸೈಟಿಯಲ್ಲಿ ಲೇಖಕರಿಗೆ ಆಕಸ್ಮಿಕವಾಗಿ ಪರಿಚಯವಾದ ಮಂದಣ್ಣ ಹಳ್ಳಿ ಗಮಾರನಂತೆ ಕಂಡರೂ ಅವನ ಮುಖಾಂತರ ಪರಿಚಯ ಆಗುವ ವಿಜ್ಞಾನಿ ಕರ್ವಾಲೋ ಲೇಖಕರಿಗೆ ಮಂದಣ್ಣ ಎಂಥ ಅದ್ಭುತ ಪ್ರಕೃತಿತಜ್ಞ ಎಂದು ತಿಳಿಸುವ ಮೂಲಕ ನಿರೂಪಕರನ್ನು ನಿಬ್ಬೆರಗಾಗಿಸುತ್ತಾರೆ. ಹಾಗೂ ಮಂದಣ್ಣನಿಗೆ ಪ್ರಕೃತಿಯಲ್ಲಿರುವ ಜೀವ ಜಂತುಗಳ ಬಗ್ಗೆ ಇರುವ ಅಪಾರ ಜ್ಞಾನವೇ ಕರ್ವಾಲೋ ಅಂತಹ ವಿಜ್ಞಾನಿಯ ಶಿಷ್ಯನಾಗಲೂ ಸಾಧ್ಯವಾಯಿತು ಎಂದು ಲೇಖಕರು ಅರ್ಥ ಮಾಡಿಕೊಂಡಾಗ ಅವರ ಮನದಲ್ಲಿ ಇದ್ದ ಜಿಜ್ಞಾಸೆ ದೂರವಾಯಿತು.

ಕಥೆಯನ್ನು ಓದುತ್ತಾ ಹೋದ ಹಾಗೆ ನಾವು ಯಾವುದೊ ಕಾಡಿನಲ್ಲಿ ಸಾಗುತ್ತಿದ್ದೇವೆ ಅನಿಸುತ್ತದೆ. ಕಾಲಗರ್ಭದೊಳಗೆ ಅಡಗಿರುವ ಇನ್ನೊಂದು ಜಗತ್ತಿನ ಕುರಿತು ಸಂಶೋಧನೆ ಮಾಡಲು ಹೊರಟ ವಿಜ್ಞಾನಿಯ ಗಂಭೀರ ಕಥೆಯಾದರೂ ಲೇಖಕರು ತಮ್ಮ ಮಾಂತ್ರಿಕ ಸ್ಪರ್ಶದಿಂದ ಓದುಗನಿಗೆ ಇತರೆ ಪಾತ್ರಗಳ ಮೂಲಕ ಹಾಸ್ಯವನ್ನು ಉಣಬಡಿಸಿದ್ದಾರೆ.

ಮದುವೆಯಾಗಲು ಹಪಹಪಿಸುತ್ತಿರುವ ಮಂದಣ್ಣ, ಕರ್ವಾಲೋ ಅವರ ಶಿಷ್ಯನಾಗಿ ಅವರಿಗೆ ಫೋಟೋಗ್ರಫಿ ಕೆಲಸ ಮಾಡಿಕೊಡುತ್ತಿದ್ದ ಪ್ರಭಾಕರ, ಮರ ಹತ್ತುವುದರಲ್ಲಿ ನಿಸ್ಸಿಮನಾದ ಎಂಗ್ಟ, ಬಿರಿಯಾನಿ ಮಾಡುವುದರಲ್ಲಿ ಸೈ ಎನಿಸಿಕೊಂಡ ಕರಿಯಪ್ಪ, ತನ್ನ ಹುಡುಗಾಟಿಕೆ ಬುದ್ಧಿಯಿಂದ ಎಡವಟ್ಟು ಮಾಡಿಕೊಳ್ಳುವ ಲೇಖಕರ ಮನೆಕೆಲಸದವ ಪ್ಯಾರ ಈ ಎಲ್ಲಾ ಪಾತ್ರಗಳು ಸೀರಿಯಸ್ ವಿಷಯಗಳಿಂದ ವಿರಾಮ ನೀಡುತ್ತದೆ. ಕಥೆ ಓದುತ್ತಾ ಕೊನೆಗೆ ಬೇಟೆಯಲ್ಲಿ ನಿಪುಣನಾದ ಲೇಖಕರ ನಾಯಿ ‘ಕಿವಿ’ಯೂ ನಮ್ಮ ಆತ್ಮೀಯ ಗೆಳೆಯನಾಗುತ್ತನೆ.

ಈ ಕಥೆ ಮಲೆನಾಡಿನ ಜೀವನ, ಜೇನುಸಾಕಣಿಕೆ, ಕಳ್ಳಭಟ್ಟಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ತತ್ವ ವಿಚಾರಗಳ ಅನ್ವೇಷಣೆ ಮುಂತಾದ ವಿಚಾರಗಳ ಮೂಲಕ ಓದುಗನ ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಮಂದಣ್ಣ ಹಾಗೂ ಕರ್ವಾಲೋ  ನಡುವಿನ ಸಂಬಂಧ ಎಷ್ಟರ ಮಟ್ಟಿಗೆ ಇರುತ್ತೆ ಅಂದರೆ ಕಳ್ಳ ಭಟ್ಟಿಯಲ್ಲಿ ಸಿಕ್ಕಿಹಾಕಿಕೊಂಡ ಮಂದಣ್ಣನ ಬಿಡಿಸಲು ಸಾಕ್ಷಿ ಹೇಳಲು ಕೋರ್ಟ್ಗೆ ಸ್ವತಃ ಕರ್ವಾಲೋ ಅವರೇ ಬರುತ್ತಾರೆ. ಇದು ಜನರ ಇರಿಸುಮುರಿಸಿಗೆ ಕಾರಣವಾದರೂ ಅವರ ಬಗ್ಗೆ ಅಪಹಾಸ್ಯದ ಮಾತುಗಳು ಜನರು ಆಡಿದರೂ ಕರ್ವಾಲೊ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ.  ಕೊನೆಗೆ ವಿಜ್ಞಾನಿ ಕರ್ವಾಲೋ ಇವರೆಲ್ಲರ ದೆಸೆಯಿಂದ ಹಾರುವ ಓತಿಯನ್ನು ಕಂಡುಹಿಡಿಯುವಲ್ಲಿ ಯಶಸ್ವೀಯಾಗಿ ಒಬ್ಬ ಕಾಲಜ್ಞಾನಿಯಾಗಿ ರೂಪುಗೊಳ್ಳುತ್ತಾರೆ.

ಕರ್ವಾಲೋ ಕಾದಂಬರಿ 1980ರಿಂದ 2010ರವರೆಗೆ ಒಟ್ಟು ಇಪ್ಪತ್ತೇಳು ಬಾರಿ ಮರು ಮುದ್ರಣಗೊಂಡಿದೆ. ಜೀವ ಜಗತ್ತಿನ ಮಹತ್ವ ಸಾರುವ ಈ ಕೃತಿ ಇಂಗ್ಲೀಷ್, ಹಿಂದಿ, ಮರಾಠಿ, ಮಲಯಾಳಂ, ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿ ಯಶಸ್ವೀಯಾಗಿರುವ ಇಂಥಹ ಅದ್ಭುತ ಕೃತಿಗೆ ಈಗ ಯಾವುದೇ ಪ್ರಚಾರದ ಅವಶ್ಯಕತೆ ಇಲ್ಲದ್ದಿದ್ದರೂ ಒಮ್ಮೆಯೂ ಓದದ ಜನರು ಈ ಕೃತಿಯ ಮೇಲೆ ಒಂದು ಕ್ಷಣ ಕಣ್ಣಾಡಿಸಿದರೆ ನಮಗೆ ನಿಜಕ್ಕೂ ನಮ್ಮ ಪ್ರಕೃತಿಯಲ್ಲಿರುವ ಅದ್ಭುತ ಸಂಗತಿಗಳ ಅರಿವಾಗುವುದು, ನಾವು ಪ್ರತೀ ದಿನ ಈ ಜೀವಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತಗಳ ಮುಖಾಮುಖಿಯಾದರೂ ಅವುಗಳ ಮಹತ್ವವನ್ನು ಅರಿಯುವುದರಲ್ಲಿ ವಿಫಲರಾಗುತ್ತೆವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿನಾಶದಿಂದಾಗಿ ಇಂತಹ ಸ್ಪೇಷಿಸ್ ಮರೆಯಾಗುತ್ತಿದೆ. ಈ ಸ್ಪೇಷಿಸ್ ಮಹತ್ವವನ್ನು ತೇಜಸ್ವಿಯವರು ಸರಳ ಭಾಷೆಯಲ್ಲಿ ಈ ಕಾದಂಬರಿ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ.

-ಪೂಜಶ್ರೀ ತೋಕೂರು

ಇದನ್ನೂ ಓದಿ : ಡೀಸಿಯಾಗಿ ಮತ್ತೆ ರೋಹಿಣಿ ಸಿಂಧೂರಿ ನೇಮಿಸಲು ಸಹಿ ಸಂಗ್ರಹ ಅಭಿಯಾನ

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.