ಪುಕ್ಕಟ್ಟೆ, ಪ್ರಚಾರ ಬೇಡ, ಆಸ್ಪತ್ರೆ ಅಭಿವೃದ್ದಿ ಮಾಡಿ
Team Udayavani, Jul 7, 2021, 6:52 PM IST
ಚಿಂತಾಮಣಿ: ಸರ್ಕಾರಿ ಆಸ್ಪತ್ರೆ ಯಾರಪ್ಪನ ಸ್ವತ್ತಲ್ಲ,ಸಾಮರ್ಥ್ಯ ಇದ್ದರೆ ಸರ್ಕಾರದಿಂದ ಅನುದಾನತಂದು ಅಭಿವೃದ್ಧಿ ಪಡಿಸಲಿ, ಅದು ಬಿಟ್ಟುಅಧಿಕಾರಿಗಳ ಮೇಲೆ ದರ್ಪ ತೋರಿಸಿ,ಕಾರ್ಯಕ್ರಮಕ್ಕೆಬರದಂತೆ ತಡೆಯುವುದು ಸರಿಯಲ್ಲ ಎಂದು ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕಎಂ.ಸಿ.ಸುಧಾಕರ್ ವಾಗ್ಧಾಳಿ ನಡೆಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಆಶ್ರಯ ಹಸ್ತ ಟ್ರಸ್ಟ್ನಿಂದ ನಿರ್ಮಿಸಿದ್ದ 300 ಎಲ್ಪಿಎಂ ಆಮ್ಲಜನಕ ತಯಾರಿಕ ಘಟಕ ಸೇವೆಗೆಹಸ್ತಾಂತರಿಸಿ ಮಾತನಾಡಿ, ಡೀಸಿ, ಡಿಎಚ್ಒಅವರನ್ನು ಆಹ್ವಾನಿಸಿ ಆಮ್ಲಜನಕ ಘಟಕಹಸ್ತಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಡಿಎಚ್ಒ ಕೂಡ ಕಾರ್ಯಕ್ರಮಕ್ಕೆ ಬರುವುದಾಗಿತಿಳಿಸಿ, ಸಮಯ ನಿಗದಿ ಮಾಡುವಂತೆಸೂಚಿಸಿದ್ದರು. ಆದರೆ, ಶಾಸಕರು ಒತ್ತಡ ಹಾಕಿಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿದ್ದಾರೆಎಂದು ದೂರಿದರು.ಪುಕ್ಕಟ್ಟೆ ಪ್ರಚಾರ ಬೇಡ:ಯಾರೋ ಕೊಡುವದಿನಸಿ, ಇತರೆ ಕಿಟ್ಗಳನ್ನು ವಿತರಿಸಿ ಪುಕ್ಕಟ್ಟೆ ಪ್ರಚಾರಪಡೆಯುವುದು ನಮಗೆ ಬೇಡ, ಅಂತಹ ಚಿಲ್ಲರೆಕೆಲಸ ಬೇಕಾಗಿಲ್ಲ,
ಶಾಸಕರು ಮೊದಲು ಸರ್ಕಾರಿಕಾರ್ಯಕ್ರಮ ಯಾವುದು, ಖಾಸಗಿ ಯಾವುದು ಎಂಬಜ್ಞಾನ ಇಟ್ಟುಕೊಳ್ಳಬೇಕು. ಸರ್ಕಾರದಿಂದಅನುದಾನ ತಂದು ಆಸ್ಪತ್ರೆ ಅಭಿವೃದ್ಧಿ ಮಾಡಲಿ,ಶಾಸಕರ ಕೈಲಾಗದ ಕೆಲಸ ನಾವು ಮಾಡುತ್ತಿದ್ದೇವೆ.ಆಸ್ಪತ್ರೆಯ ಕಮಿಟಿಯಅಧ್ಯಕ್ಷರಾಗಿರುವ ಶಾಸಕರು,ಎಷ್ಟು ಬಾರಿ ಸಭೆ ಮಾಡಿದ್ದಾರೆ, ಆಸ್ಪತ್ರೆಯ ಎಷ್ಟುಸಮಸ್ಯೆ ಬಗೆಹರಿಸಿದ್ದಾರೆ ಎಂದು ಸುಧಾಕರ್ ಪ್ರಶ್ನಿಸಿದರು.
ಸರ್ಕಾರಿ ಆಸ್ಪತ್ರೆ ಶಾಸಕರ ಸ್ವತ್ತಲ್ಲ, ವೈದ್ಯರಿಗೆಫೋನ್ ಕರೆ ಮಾಡಿ ಬೆದರಿಕೆ ಹಾಕುವುದನ್ನುಬಿಡಬೇಕು ಎಂದು ಹೇಳಿದರು.ಹೆದರುವ ಅಗತ್ಯ ಇಲ್ಲ: ಆಸ್ಪತ್ರೆಯ ವೈದ್ಯರುನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಂತಹವರಿಗೆ ಬೆದರಿಕೆ ಹಾಕುವವರಿಂದ ಏನುಪ್ರಾಯೋಜನವಾಗುವುದಿಲ್ಲ.
ಈ ಆಸ್ಪತ್ರೆಅಲ್ಲದಿದ್ದರೆ, ಮತ್ತೂಂದಕ್ಕೆ ಹೋಗಬಹುದು.ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ಧೈರ್ಯವಾಗಿಕಾರ್ಯನಿರ್ವಹಿಸಿ ಎಂದು ತಿಳಿಸಿದರು.ದಾನಿಗಳಿಗೆ ಕೃತಜ್ಞತೆ: ಇನ್ನು ಆಸ್ಪತ್ರೆಗೆ 300 ಎಲ್ಪಿಎಂ ಆಮ್ಲಜನಕ ತಯಾರಿ ಘಟಕವನ್ನು ನೀಡಿದಆಶ್ರಯ ಹಸ್ತ ಟ್ರಸ್ಟ್ನ ಅಧ್ಯಕ್ಷರಿಗೆ ಹಾಗೂಕೊರೊನಾ ಸಂಕಷ್ಟದಲ್ಲಿ ತಮ್ಮೊಂದಿಗೆ ಕೈಜೋಡಿಸಿದ ಎಲ್ಲಾ ದಾನಿಗಳಿಗೆಕೃತಜ್ಞತೆ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ,ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ ಕುಮಾರ್, ನಗರಸಭೆ ಅಧ್ಯಕ್ಷೆ ರೇಖಾಉಮೇಶ್, ಉಪಾಧ್ಯಕ್ಷೆ ಸುಹಾಸಿನಿ ಶೇಷು,ಆಶ್ರಯ ಹಸ್ತಟ್ರಸ್ಟ್ನ ರಾಜೇಂದ್ರ, ಮುಖಂಡರಾದ ಮುನಿಶ್ಯಾಮಿರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿರೆಡಿª, ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಪ್ಪ,ನಗರಸಭೆ ಹಾಲಿ, ಮಾಜಿ ಸದಸ್ಯರು, ಗ್ರಾಪಂಸದಸ್ಯರು, ಬೆಂಬಲಿಗರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Karnataka ರಾಜ್ಯದಲ್ಲಿ ಆರ್ಟಿಇ ಸೀಟಿಗಿಲ್ಲ ಕಿಮ್ಮತ್ತು!
Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ
Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!
Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.