ಮೊಬೈಲ್ ಗೇಮ್ ಜಟಾಪಟಿ; ತಾಯಿಯನ್ನೇ ಗುಂಡಿಟ್ಟು ಕೊಂದು, ಶವ ಅಡಗಿಸಿಟ್ಟ ಮಗ!
ತಾಯಿಯ ಶವವನ್ನು ಕೋಣೆಯೊಂದರಲ್ಲಿ ಅಡಗಿಸಿಟ್ಟು ಎರಡು ದಿನಗಳ ಕಾಲ ತನ್ನ 9 ವರ್ಷದ ಸಹೋದರಿ ಜತೆ ಕಳೆದಿದ್ದ.
Team Udayavani, Jun 8, 2022, 1:06 PM IST
ಲಕ್ನೋ: ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ 16 ವರ್ಷದ ಬಾಲಕ ತನ್ನ ತಾಯಿಯನ್ನೇ ಗುಂಡಿಟ್ಟು ಕೊಂದು, ಆಕೆಯ ಶವವನ್ನು ಮನೆಯಲ್ಲೇ ಎರಡು ದಿನಗಳ ಕಾಲ ಅಡಗಿಸಿಟ್ಟ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಟ್ವಿಸ್ಟ್:CM ಪಿಣರಾಯಿ, ಪತ್ನಿ,ಪುತ್ರಿಯೂ ಶಾಮೀಲು; ಸ್ವಪ್ನಾ
ಪೊಲೀಸರ ಮಾಹಿತಿ ಪ್ರಕಾರ, ಈ ಬಾಲಕ ಭಾನುವಾರ ಬೆಳಗ್ಗೆ ತಂದೆಯ ಪರವಾನಿಗೆ ಹೊಂದಿದ್ದ ಪಿಸ್ತೂಲ್ ನಲ್ಲಿ ತಾಯಿಯ ಹಣೆಗೆ ಗುಂಡಿಟ್ಟು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ. ತಾಯಿಯ ಶವವನ್ನು ಕೋಣೆಯೊಂದರಲ್ಲಿ ಅಡಗಿಸಿಟ್ಟು ಎರಡು ದಿನಗಳ ಕಾಲ ತನ್ನ 9 ವರ್ಷದ ಸಹೋದರಿ ಜತೆ ಕಳೆದಿದ್ದ. ಅಷ್ಟೇ ಅಲ್ಲ ಕೊಳೆತ ವಾಸನೆ ಬರದಿರುವಂತೆ ರೂಮ್ ಫ್ರೆಶ್ನರ್ ಅನ್ನು ಬಳಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಘಟನೆ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಕೊಲ್ಲುವುದಾಗಿ ಸಹೋದರ ಬೆದರಿಕೆ ಹಾಕಿರುವುದಾಗಿ ಸಹೋದರಿ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾಳೆ. ಮಂಗಳವಾರ ಶವ ಕೊಳೆತ ವಾಸನೆ ಬರಲಾರಂಭಿಸಿದ ನಂತರ ಬಾಲಕ ತನ್ನ ತಂದೆಗೆ ಕೊಲೆಯಾದ ಘಟನೆ ಬಗ್ಗೆ ತಿಳಿಸಿದ್ದ. ನಂತರ ಆತನ ತಂದೆ ಸ್ಥಳೀಯರಿಗೆ ಕರೆ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ಎಸ್ ಎಂ ಖ್ವಾಸಿಂ ಅಬ್ದಿ ತಿಳಿಸಿದ್ದಾರೆ.
ಬಾಲಕನ ತಂದೆ ಯೋಧರಾಗಿದ್ದು, ಅವರು ಪ್ರಸ್ತುತ ಪಶ್ಚಿಮಬಂಗಾಳದಲ್ಲಿ ಕರ್ತವ್ಯದಲ್ಲಿದ್ದಾರೆ. ಆರಂಭದಲ್ಲಿ ಮಗ ಘಟನೆ ಬಗ್ಗೆ ತಂದೆಗೆ ಕಟ್ಟುಕಥೆ ಹೇಳಿದ್ದ. ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತಾಯಿಯನ್ನು ಗುಂಡಿಟ್ಟು ಕೊಂದಿರುವುದಾಗಿ ತಿಳಿಸಿದ್ದ.
ಪೊಲೀಸರಿಗೂ ಕೂಡಾ ಇದೇ ಕಥೆಯನ್ನು ಹೇಳಿದ್ದ. ಆದರೆ ತೀವ್ರ ವಿಚಾರಣೆ ನಡೆಸಿದಾಗ ಬಾಲಕನ ಕಟ್ಟುಕಥೆ ಬಯಲಾಗಿದ್ದು, ತಾನೇ ತಾಯಿಯನ್ನು ಗುಂಡಿಟ್ಟು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿರುವುದಾಗಿ ಖ್ವಾಸಿಂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone ; ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್: ಭಾನುವಾರ ರಾತ್ರಿ ಅಪ್ಪಳಿಸಲಿರುವ ಚಂಡಮಾರುತ
V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ
MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ
Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ
10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ
MUST WATCH
ಹೊಸ ಸೇರ್ಪಡೆ
“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
Cyclone ; ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್: ಭಾನುವಾರ ರಾತ್ರಿ ಅಪ್ಪಳಿಸಲಿರುವ ಚಂಡಮಾರುತ
Fake ID Card; `ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ
Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ
D. K. Shivakumar ಅಪಪ್ರಚಾರ ಮಾಡುವವರಿಗೆ ನಾಚಿಕೆಯಾಗಬೇಕು