ವಿಜಯಪುರ ಜಿಲ್ಲೆಯ ಏಕೈಕ ಬಲಿದಾನ ಕುಟುಂಬದ ಕಡೆಗಣನೆ


Team Udayavani, Aug 16, 2022, 5:41 PM IST

13-fam

ವಿಜಯಪುರ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟದಲ್ಲಿ ಹುತಾತ್ಮರನ್ನು ಸರ್ಕಾರ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಕಡೆಗಣಿಸಿದೆ ಎಂದು ಆಕ್ಷೇಪಿಸಿ ಕೊಟ್ನಾಳ-ಜಂಬಗಿ ದೇಶಮುಖ ಹುತಾತ್ಮರ ವಂಶಸ್ಥರ ನಿಯೋಗ ಜಿಲ್ಲಾಡಳಿತದ ಎದುರು ಅಸಮಾಧಾನ ಹೊರಹಾಕಿದೆ.

ಜಿಲ್ಲಾಧಿಕಾರಿ ಡಾ| ವಿ.ಬಿ.ದಾನಮ್ಮನವರ ಅವರನ್ನು ಭೇಟಿ ಮಾಡಿ ಅಸಮಾಧಾನದ ಮನವಿ ಸಲ್ಲಿಸಿದ ಕೊಟ್ನಾಳ-ಜಂಬಗಿ ದೇಶಮುಖ ಬಸಲಿಂಗಪ್ಪ ಹಾಗೂ ವೀರಸಂಗಪ್ಪ ಹುತಾತ್ಮರ ವಂಶಸ್ಥರು, ನಮ್ಮ ಕುಟುಂಬದ ಅಪ್ರತಿಮ ವೀರರಾಗಿದ್ದ ಬಸಲಿಂಗಪ್ಪ ಹಾಗೂ ವೀರಸಂಗಪ್ಪ ಎಂಬ ಮಗ-ತಂದೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟದಲ್ಲಿ ಬಲಿದಾನಗೈದಿದ್ದಾರೆ. ಹುತಾತ್ಮರಾದ ದೇಶಮುಖ ದೇಶಗತಿ ಸಂಸ್ಥಾನದ ಅಮರ ವೀರರ ತ್ಯಾಗ-ಬಲಿದಾನವನ್ನು ಈಚೆಗೆ ಸರ್ಕಾರ ಕಡೆಗಣಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಅಖಂಡ ವಿಜಯಪುರ ಜಿಲ್ಲೆಯಿಂದ ಭಾರತದ ಸ್ವಾತಂತ್ರ್ಯ ಪ್ರಥಮ ಚಳವಳಿಯಲ್ಲಿ ಹುತಾತ್ಮರಾದ ಪ್ರಥಮ ಹಾಗೂ ಏಕೈಕ ಕ್ರಾಂತಿವೀರರು ಬಹಾದ್ದೂರ್‌ ಬಸಲಿಂಗಪ್ಪ ಮತ್ತು ಅವರ ತಂದೆ ಕ್ರಾಂತಿಕಲಿ ವೀರಸಂಗಪ್ಪ ದೇಶಮುಖರು. ಭಾರತ ಸರ್ಕಾರ ಸ್ವಾತಂತ್ರ್ಯದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ವಿಜಯಪುರ ನಗರದ ಹೃದಯ ಭಾಗದಲ್ಲಿ ಈ ಮಗ-ತಂದೆಯ ಬಲಿದಾನದ ಸ್ಮರಣೆಗಾಗಿ ಬಸಲಿಂಗಪ್ಪ ವೀರಸಂಗಪ್ಪ ದೇಶಮುಖ ಹುತಾತ್ಮ ವೃತ್ತ ನಿರ್ಮಿಸಿ ಗೌರವ ಸಲ್ಲಿಸಿದೆ. ಆದರೆ ಸದರಿ ವೃತ್ತವನ್ನು ಮೀನಾಕ್ಷಿ ಚೌಕ್‌ ಎಂದು ಕರೆಯುವ ಮೂಲಕ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಲಿದಾನ ವೀರರಿಗೆ ಅಪಚಾರ ಮಾಡಲಾಗುತ್ತಿದೆ ಎಂದು ದೂರಿದರು.

ಜೋಡು ಬಿಚ್ಚುಗತ್ತಿಯ ಬಹಾದ್ದೂರ್‌ ಬಸಲಿಂಗಪ್ಪ ಮತ್ತು ಅವರ ತಂದೆ ಕ್ರಾಂತಿಕಲಿ ವೀರಸಂಗಪ್ಪ ಅವರು ಜಂಬಗಿ ವಾಡೆದಿಂದ ಆಡಳಿತ ನಡೆಸುತ್ತಿದ್ದು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮದ್ದು-ಗುಂಡು ತಯಾರಿಸಿ ದಕ್ಷಿಣ ಭಾರತದ ಸ್ವಾತಂತ್ರ್ಯ ಯೋಧರಿಗೆ ಸರಬರಾಜು ಮಾಡುತ್ತಿದ್ದರು. ಇದಕ್ಕಾಗಿಯೇ ಕೊಟ್ನಾಳದಲ್ಲಿ ಮೂರು ಸುತ್ತಿನ ಮಣ್ಣು ಕಲ್ಲಿನ ಕೋಟೆ ನಿರ್ಮಿಸಿಕೊಂಡಿದ್ದರು. ಬ್ರಿಟಿಷರ ದಾಳಿಯ ಮಧ್ಯೆಯೂ ಕೊಟ್ನಾಳ ಕೋಟೆ ಜೀವಂತವಾಗಿದ್ದು, ಇದೀಗ ಅವಸಾನದ ಅಂಚಿಗೆ ಬಂದಿದೆ. ಜಂಬಗಿಯಲ್ಲಿ ಕೋಟೆ ಸಂಪೂರ್ಣ ನಾಶವಾಗಿ ಕುರುಹುಗಳು ಇಲ್ಲದಂತಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೊಟ್ನಾಳದ ಕೋಟೆ ಮತ್ತು ಜಂಬಗಿ ವಾಡೆಗಳಿಗೆ ಸರ್ಕಾರದಿಂದ ಕಾಯಕಲ್ಪ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಹುತಾತ್ಮ ನಮ್ಮ ಕುಟುಂಬದ ಬಲಿದಾನ ವೀರರ ಸಮಾಧಿಗಳು ಎಲ್ಲಿವೆ ಎಂದೇ ತಿಳಿದಿಲ್ಲ. ಅವರನ್ನು ಗಲ್ಲಿಗೇರಿಸಿದ ದಾಖಲೆಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ನಮ್ಮ ದೇಶಮುಖ ವಂಶಸ್ಥರಿಗೆ ಹಸ್ತಾಂತರಿಸಿಲ್ಲ. ಕೂಡಲೇ ಸಮಾಧಿಗಳನ್ನು ಹುಡಿಕಿ, ದಾಖಲೆಗಳನ್ನು ವಂಶಸ್ಥರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ದೇಶ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದಲ್ಲಾದರೂ ನಗರದಲ್ಲಿರುವ ಹುತಾತ್ಮ ವೃತ್ತವನ್ನು ನವೀಕರಿಸಿ, ದೇಶಮುಖ ಕುಟುಂಬದ ಹುತಾತ್ಮ ಬಸಲಿಂಗಪ್ಪ ಮತ್ತು ವೀರಸಂಗಪ್ಪ ಇವರ ಅಶ್ವಾರೂಢ ಪುತ್ಥಳಿ ಸ್ಥಾಪಿಸಬೇಕು. ದೇಶಮುಖರ ಎಲ್ಲ ಕಟ್ಟಡಗಳ ಸಂರಕ್ಷಣೆಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ವಿಜಯಪುರ ಜಿಲ್ಲೆಯಲ್ಲಿ ತಂದೆ-ಮಗ ಇಬ್ಬರೂ ಗಲ್ಲಿಗೇರಿದ ಏಕೈಕ ಬಲಿದಾನ ಪ್ರಕರಣದ ಈ ಕ್ರಾಂತಿವೀರರ ಚರಿತ್ರೆಯ ಪುಸ್ತಕ ಹೊರ ತರಬೇಕು ಎಂದು ಆಗ್ರಹಿಸಿದರು.

ಕೊಟ್ನಾಳ-ಜಂಬಗಿ ದೇಶಮುಖ ಹುತಾತ್ಮರ ವಂಶಸ್ಥರಾದ ಬಸವರಾಜ ದೇಶಮುಖ, ಬಸವಂತ್ರಾಯ ದೇಶಮುಖ, ಸಿದ್ದಲಿಂಗಪ್ಪ ದೇಶಮುಖ, ಸಂಗರಾಜ್‌ ದೇಶಮುಖ ಸೇರಿದಂತೆ ಇತರರು ನಿಯೋಗದಲ್ಲಿದ್ದರು.

ಟಾಪ್ ನ್ಯೂಸ್

rahul gandhi

BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್‌

kejriwal

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

1-asasa

842 ರೈತರ ಆತ್ಮಹತ್ಯೆ: ಅಧ್ಯಯನಕ್ಕೆ ಮುಖ್ಯಮಂತ್ರಿ ಸೂಚನೆ

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

Minchu

Belagavi; ಸಿಡಿಲು ಬಡಿದು ಇಬ್ಬರು ಸಾವು: ಐವರಿಗೆ ಗಾಯ

Preetismita Bhoi: ಕ್ಲೀನ್‌ ಆ್ಯಂಡ್‌ ಜರ್ಕ್‌: ಪ್ರೀತಿಸ್ಮಿತಾಗೆ ವಿಶ್ವ ದಾಖಲೆಯ ಚಿನ್ನ

Preetismita Bhoi: ಕ್ಲೀನ್‌ ಆ್ಯಂಡ್‌ ಜರ್ಕ್‌: ಪ್ರೀತಿಸ್ಮಿತಾಗೆ ವಿಶ್ವ ದಾಖಲೆಯ ಚಿನ್ನ

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌

M K Stalin: ತಮಿಳುನಾಡಲ್ಲಿ ಗೂಗಲ್‌ ಪಿಕ್ಸೆಲ್‌ ಫೋನ್‌ ತಯಾರಿಕೆ ಆರಂಭ: ಸ್ಟಾಲಿನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Vijayapura ಜಿಲ್ಲೆಯ ವೈದ್ಯ ಸೇರಿ ಇಬ್ಬರಿಗೆ ಆನ್‍ಲೈನ್ ವಂಚನೆ : 68.77 ಲಕ್ಷ ರೂ. ಪಂಗನಾಮ

15-indi

Indi: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತ್ಯು

1-wqewewqe

Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

Vijayapura; ಕಚೇರಿ ಆವರಣದಲ್ಲೇ ಮದ್ಯ ಸೇವಿಸಿದ ಹೆಸ್ಕಾಂ ಜೆಇ ವಿಡಿಯೋ ವೈರಲ್

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

rahul gandhi

BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್‌

kejriwal

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

1-wqewqewqe

Byndoor: ಗಾಳಿ- ಮಳೆಯಿಂದ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟ

1-up

Uppinangady ಟ್ರಾಫಿಕ್‌ ಜಾಮ್‌ : 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ

siddanna

HDK ಆರೋಪಕ್ಕೆ ಸಿಎಂ ತಿರುಗೇಟು; ಯಾವತ್ತೂ ದೂರವಾಣಿ ಕದ್ದಾಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.