ಹಿಂದುತ್ವ ಬಿಜೆಪಿಯವರ ಅಪ್ಪನ ಮನೆಯ ಆಸ್ತಿಯಾ?: ಡಿ.ಕೆ.ಶಿವಕುಮಾರ್ ಆಕ್ರೋಶ
ನಾನು ಸಂಪುಟದಲ್ಲಿದ್ದಾಗ ಪ್ರತ್ಯೇಕ ಧರ್ಮ ವಿರೋಧಿಸಿದ್ದೆ
Team Udayavani, Aug 20, 2022, 4:07 PM IST
ಬೆಂಗಳೂರು: ”ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂದು ಬಿಜೆಪಿಯವರು ಹೇಳುವುದಕ್ಕೆ ಹಿಂದುತ್ವ ಅವರಪ್ಪನ ಮನೆಯ ಆಸ್ತಿಯಾ..? ನಾವೇನು ಹಿಂದೂ ಅಲ್ವೇನ್ರಿ”ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, 25 ವರ್ಷದ ಹಿಂದೆ ಸೋನಿಯಾ ಗಾಂಧಿ ಮನೆಗೆ ಹೋಗಿದ್ದೆವು. ಅಂದು ಸೋನಿಯಾ ಗಾಂಧಿ ಅವರು ಯುಗಾದಿ ಹಬ್ಬ ಮಾಡುತ್ತಿದ್ದರು. ನನಗೆ ಶಿವನ ಮಗ ಶಿವಕುಮಾರ ಎಂದು ಹೆಸರಿಟ್ಟಿದ್ದಾರೆ. ಸಿದ್ಧರಾಮಯ್ಯಗೆ ರಾಮ ಎಂಬ ಹೆಸರಿಟ್ಟಿದ್ದಾರೆ. ನಾವು ಏನಾದರೂ ಕಲ್ಲು ಮಣ್ಣು ಅಂತಾ ಹೆಸರು ಇಟ್ಟಿಕೊಂಡಿದ್ದೇವಾ ಎಂದು ಪ್ರಶ್ನಿಸಿದರು.
ರಂಭಾಪುರಿ ಮಠದಲ್ಲಿ ಸಿದ್ಧರಾಮಯ್ಯ ಪಶ್ಚಾತ್ತಾಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಶ್ರೀಗಳ ಜತೆಗೆ ನಡೆದ ಸಂಭಾಷಣೆ ಬಗ್ಗೆ ನನಗೇನು ಗೊತ್ತಿಲ್ಲ. ಮನುಷ್ಯ ತಪ್ಪು ಮಾಡಿದರೆ ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾವ್ಯಾರು ದೇವರು ಅಲ್ಲ. ತಪ್ಪು ಮಾಡಿದ್ದಾಗ ದೇವರು ಕೂಡ ಒಪ್ಪಿಕೊಂಡಿದ್ದಾರೆ. ನಾನು ಸಂಪುಟದಲ್ಲಿದ್ದಾಗ ಪ್ರತ್ಯೇಕ ಧರ್ಮ ವಿರೋಧಿಸಿದ್ದೆ. ಧರ್ಮದ ವಿಚಾರದಲ್ಲಿ ಕೈ ಹಾಕಬಾರದು ಅಂದಿದ್ದೆ. ಬಳಿಕ ಕ್ಷಮೆಯೂ ಕೇಳಿದ್ದೆ. ನಿನ್ನೆ ಶ್ರೀಗಳು ಮತ್ತು ಸಿದ್ಧರಾಮಯ್ಯ ನಡುವಿನ ಸಂಭಾಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್ ಖರ್ಗೆ
PSI Exam ರಾಜ್ಯದ 402 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್ನಲ್ಲಿ ಪರೀಕ್ಷೆ
Prajwal Revanna Case ವೀಡಿಯೋ ಹಂಚಿದವರು ಜಾಮೀನಿಗಾಗಿ ಹೈಕೋರ್ಟ್ಗೆ
Prajwal Revanna Case ಅಶ್ಲೀಲ ವಿಡಿಯೋ: ಸಹಾಯವಾಣಿಗೆ ಕರೆ ಬಂದರೂ ದೂರು ನೀಡದ ಸ್ತ್ರೀಯರು
Prajwal ಪ್ರಚಾರಕ್ಕೆ ಹೋದಾಗ ಬಂಧಿಸದೇ ಕತ್ತೆ ಕಾಯುತ್ತಿದ್ದರಾ?: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Devaraje Gowda ನ್ಯಾಯಾಂಗ ಬಂಧನ ಜೂ.7ರವರೆಗೆ ವಿಸ್ತರಣೆ
Prajwal Revanna ವಿರುದ್ಧ ಕ್ರಮಕ್ಕೆ ಜೋಷಿ ಒತ್ತಾಯಿಸಿದ್ದರಾ?: ಪ್ರಿಯಾಂಕ್ ಖರ್ಗೆ
PSI Exam ರಾಜ್ಯದ 402 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ: ಸೆಪ್ಟಂಬರ್ನಲ್ಲಿ ಪರೀಕ್ಷೆ
Prajwal Revanna Case ವೀಡಿಯೋ ಹಂಚಿದವರು ಜಾಮೀನಿಗಾಗಿ ಹೈಕೋರ್ಟ್ಗೆ
Prajwal Revanna Case ಅಶ್ಲೀಲ ವಿಡಿಯೋ: ಸಹಾಯವಾಣಿಗೆ ಕರೆ ಬಂದರೂ ದೂರು ನೀಡದ ಸ್ತ್ರೀಯರು