ಮತ್ತೆ ಬೈಕ್‌ ಏರಿ ರಾಜ್ಯ ಸುತ್ತಲು ಹೊರಟ ಸಾಕ್ಷಿ!

ಕ್ಲೀನ್‌ ಕರ್ನಾಟಕ, ಗ್ರೀನ್‌ ಕರ್ನಾಟಕ ಧ್ಯೇಯ; ಪ್ರಕೃತಿಯ ಉಳಿವಿಗಾಗಿ ಒಂಟಿ ಯಾತ್ರೆ

Team Udayavani, Oct 13, 2022, 1:00 PM IST

10

ಕುಂದಾಪುರ: ಭಂಡಾರ್‌ಕಾರ್ಸ್‌ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ಸಾಕ್ಷಿ ಹೆಗಡೆ ಕೆಲವೇ ತಿಂಗಳ ಹಿಂದೆ ಕುಂಭಾಶಿಯಿಂದ ಕಾಶ್ಮೀರದವರೆಗೆ ಬೈಕ್‌ ರೈಡ್‌ ಮಾಡಿ ಸುದ್ದಿಯಾದವರು ಈಗ ಮತ್ತೆ ಬೈಕೇರಿ ರಾಜ್ಯ ಸುತ್ತಲು ಹೊರಟಿದ್ದಾರೆ. ಸಾಕ್ಷಿ ಹೆಗಡೆ ಮೂಲತಃ ಶಿರಸಿಯ ಇಡಗುಂಜಿಯವರು. ಈಗ ಕುಂದಾಪುರದ ಕುಂಭಾಶಿಯಲ್ಲಿ ವಾಸ.

ಯಾವಾಗ, ಎಲ್ಲಿಗೆಲ್ಲ

ಅ.16ರಿಂದ ಹೊರಟು ನ. 17ರ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಸುತ್ತಲಿದ್ದಾರೆ. ಅ. 16 ರಂದು ಉಡುಪಿ ಜಿಲ್ಲೆಯಿಂದ ಉತ್ತರಕನ್ನಡ, ಮರುದಿನ ಹಾವೇರಿ, ಅನಂತರ ದಿನಗಳಲ್ಲಿ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ದ.ಕ.ಕ್ಕೆ ನ.16ರಂದು ತಲುಪಿ ನ. 17ರಂದು ಉಡುಪಿಗೆ. ಸುಮಾರು 4 ಸಾವಿರ ಕಿ.ಮೀ.ಗಳ ಪಯಣ.

ಉದ್ದೇಶ

ಕುಂಭಾಶಿಯಿಂದ ಕಾಶ್ಮೀರಕ್ಕೆ 12 ದಿನಗಳಲ್ಲಿ 6 ಸಾವಿರ ಕಿ.ಮೀ. ಒಂಟಿ ಪ್ರಯಾಣದ ಸಾಹಸ ಮಾಡಿದ್ದು ಮೇ 25ರಿಂದ, ತಲುಪಿದ್ದು ಜೂ. 6. ಪ್ರತಿದಿನ 500-600 ಕಿ.ಮೀ. ಸಾಗಿ ಒಟ್ಟು 6 ಸಾವಿರ ಕಿಮೀ. ಪ್ರಯಾಣಿಸಿದ್ದರು. ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಸುದೀರ್ಘ‌ ಪ್ರಯಾಣ. ಮಹಿಳಾ ಸಶಕ್ತೀಕರಣ ಪ್ರಮುಖ ಉದ್ದೇಶ. ಉದ್ಯೋಗ, ಉನ್ನತ ವ್ಯಾಸಂಗ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಗೆ ಅಡ್ಡಿ ಆತಂಕ ಇರುತ್ತದೆ. ಆಗ ನಾನು ಹೋಗಿ ಬಂದ ಉದಾಹರಣೆ ಮೂಲಕ ಒಂಟಿ ಯುವತಿಯ ಪ್ರಯಾಣದ ಕಥನ ಹೇಳುವ ಮೂಲಕ ಧೈರ್ಯ ತುಂಬಿಸಲಿ ಎನ್ನುವುದು ಉದ್ದೇಶ. ಈ ಬಾರಿ ಕ್ಲೀನ್‌ ಕರ್ನಾಟಕ, ಗ್ರೀನ್‌ ಕರ್ನಾಟಕ ಎಂಬ ಧ್ಯೇಯದೊಂದಿಗೆ ಹೊರಟಿದ್ದಾರೆ. ಪ್ರಕೃತಿಯ ಉಳಿವಿಗಾಗಿ ಒಂಟಿ ಯಾತ್ರೆ.

ಸ್ವಂತ ಬೈಕ್‌

ಕಲಿಕೆಯ ಜತೆ ಸಂಪಾದನೆ ಎಂಬಂತೆ ಮನೆ ಸಮೀಪದ ವೈದ್ಯಕೀಯ ಕ್ಲಿನಿಕ್‌ನಲ್ಲಿ ಅರೆಕಾಲಿಕ ಕೆಲಸ. ಕಾಲೇಜು ಖರ್ಚಿಗೆ ಮನೆಯಿಂದ ಹಣ ದೊರೆಯುತ್ತಿದ್ದ ಕಾರಣ ಕ್ಲಿನಿಕ್‌ನಲ್ಲಿ ದೊರೆತ ಸಂಬಳದಲ್ಲಿ ಬೈಕ್‌ ಕೊಳ್ಳುವ ಕನಸು ಕಂಡರು. ಸ್ವಲ್ಪ ಹಣ ಒಟ್ಟು ಮಾಡಿ ಸಾಲ ಮಾಡಿ ಬೈಕ್‌ ತಂದರು. 125 ಸಿಸಿ ಪಲ್ಸರ್‌ ಬೈಕ್‌ನಲ್ಲಿ ಕುಂದಾಪುರ ಪೇಟೆಗೆ ಹೊರಟರು. ಬೈಕ್‌ನಲ್ಲಿ ಕೂತರೆ ಸರಿಯಾಗಿ ಏಕಕಾಲದಲ್ಲಿ ಎರಡೂ ಕಾಲು ನೆಲಕ್ಕೆ ತಾಗುತ್ತಿರಲಿಲ್ಲ. ಹಂಪ್‌ನಲ್ಲಿ ಎಂಜಿನ್‌ ಬಂದ್‌ ಬೀಳುತ್ತಿತ್ತು. ಇತರ ವಾಹನ ಸವಾರರು ತಮಾಷೆ ಮಾಡಿದರು. ಇಷ್ಟೇ ಅವಮಾನ ಸಾಕಾಯಿತು. ಸಾಕ್ಷಿಗೆ ಹಠ ಹುಟ್ಟಿತು. ಬೈಕ್‌ನಲ್ಲೇ ಸಾವಿರಾರು ಕಿ.ಮೀ. ಹೋಗಬೇಕೆಂದು ವಾಂಛೆಯಾಯಿತು. ಹಾಗೆ ಹೋಗಲು ನೆನಪಾಗಿದ್ದು ಕಾಶ್ಮೀರ. ಕಾರಣ ಕಾಶ್ಮೀರ ಫೈಲ್ಸ್‌ ಸಿನೆಮಾ. ಬೈಕ್‌ ತಗೊಂಡು 1 ತಿಂಗಳಾಗುತ್ತಲೇ 12 ದಿನಗಳಲ್ಲಿ 6 ಸಾವಿರ ಕಿಮೀ. ದೂರ ಒಂಟಿಯಾಗಿ ಬೈಕ್‌ ಓಡಿಸಿದ ಸಾಕ್ಷಿ ಈಗ ಮತ್ತೆ ಬೈಕೇರಿ ಕರ್ನಾಟಕ ತಿರುಗಲು ಬೈಕ್‌ಗೆ ಇಂಧನ ತುಂಬಿಸುತ್ತಿದ್ದಾರೆ. ದಾರಿ ಖರ್ಚಿಗೆ ಧನ ತುಂಬಿಸುವ ಕೆಲಸ ಆಗಬೇಕಿದೆ.

ಧೈರ್ಯಂ ಸರ್ವತ್ರ ಸಾಧನಂ

ಹೆಣ್ಣು ಮಕ್ಕಳಿಗೆ ಧೈರ್ಯ ಬೇಕು. ಪ್ರೋತ್ಸಾಹಿಸುವ ಮನೆ ಮಂದಿ ಬೇಕು. ಹಾಗಿದ್ದರೆ ಬೈಕ್‌ ಪ್ರಯಾಣ ಕಷ್ಟವಲ್ಲ. ನನ್ನ ಹಿಂದಿನ ಬೈಕ್‌ ಯಾತ್ರೆಯ ಉದ್ದೇಶವೇ ಅದಾಗಿತ್ತು. ಮನೆಯಲ್ಲಿ ನಂಬಿಕೆಯೇ ಬಂದಿರಲಿಲ್ಲ. ಹೊಸ ಬೈಕ್‌ ತಗೊಂಡು 1 ತಿಂಗಳಲ್ಲಿ ಕಾಶ್ಮೀರ ಪ್ರಯಾಣದ ನಿರ್ಧಾರ. ದಿನವೊಂದಕ್ಕೆ ನೂರಿನ್ನೂರು ಕಿ.ಮೀ. ಬೈಕ್‌ ಓಡಿಸಬಲ್ಲೆ ಎಂಬುದೇ ಮನೆಯವರಿಗೆ ತಿಳಿದಿರಲಿಲ್ಲ. ಹಾಗಿರುವಾಗ ಕಾಶ್ಮೀರ ಎಂದು ಹೇಳುತ್ತಿದ್ದಂತೆಯೇ ಮನೆಯಲ್ಲೇ ಹಿಮಪಾತ! ಅಪ್ಪ ಅಮ್ಮನಿಗೆ ಆ ಗಂಭೀರತೆ ತಿಳಿದಿರಲಿಲ್ಲ. ಆದರೆ ಅಕ್ಕ, ಅಪ್ಪ, ಅಮ್ಮನನ್ನು ಒಪ್ಪಿಸಿದಳು. ನನ್ನ ಉದ್ದೇಶ ತಿಳಿಸಿದಳು. ಮೊದಮೊದಲು 35 ಕಿ.ಮೀ. ಉಡುಪಿಗೆ ಹೋಗಿ ಬರುವುದೇ ಅಯ್ಯೋ ಅಷ್ಟು ದೂರ ಎಂದಾಗುತ್ತಿತ್ತು. ಹಾಗಾಗಿ ದೂರ ಪ್ರಯಾಣದ ಕನಸೂ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಕಾಡತೊಡಗಿದ್ದು ಕಾಶ್ಮೀರ. ಒಂದಷ್ಟು ಮಾಹಿತಿ ಕಲೆ ಹಾಕಿ ಹೊರಟೇಬಿಟ್ಟಿದ್ದೆ. ಮೇ 25ಕ್ಕೆ ಪ್ರಯಾಣ ಆರಂಭ. 15 ದಿನಗಳ ಅವಧಿ ನಿಗದಿಪಡಿಸಿದ್ದು 12 ದಿನಗಳಲ್ಲಿ ಹೋಗಿ ಬಂದೆ. 6 ದಿನ ಹೋಗೋಕೆ 6 ದಿನ ಬರೋಕೆ. ಬಂದ ಕೂಡಲೇ ಕರ್ನಾಟಕ ತಿರುಗುವ ಯೋಚನೆ, ನಿರ್ಧಾರ ಮಾಡಿಬಿಟ್ಟಿದ್ದೆ. ಈಗ ಕಾಲ ಕೂಡಿ ಬಂದಿದೆ.

ಉದ್ದೇಶ ಇಟ್ಟು ಸುತ್ತಾಟ: ಕ್ಲೀನ್‌ ಕರ್ನಾಟಕ, ಗ್ರೀನ್‌ ಕರ್ನಾಟಕ ಧ್ಯೇಯ ಇಟ್ಟುಕೊಂಡು ರಾಜ್ಯದ 31 ಜಿಲ್ಲೆಗಳಿಗೂ ಒಂಟಿಯಾಗಿ ಬೈಕ್‌ನಲ್ಲಿ ತಿರುಗಾಟ ಮಾಡಲಿದ್ದೇನೆ. ಬರಿಯ ಯಾತ್ರೆಯ ಬದಲು ಸಂದೇಶ ಕೊಡುವುದು ಉದ್ದೇಶ. -ಸಾಕ್ಷಿ ಹೆಗಡೆ ಕುಂಭಾಶಿ

ವಿಶೇಷ ವರದಿ

ಟಾಪ್ ನ್ಯೂಸ್

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Innanje Railway Station; A gold chain was stolen from a woman who was traveling from Madurai to Mumbai

Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು

IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

panaji

Panaji: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ

Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kollur ಹಾಲ್ಕಲ್‌: ಬಸ್‌ ಢಿಕ್ಕಿ; ಕಾರಿಗೆ ಹಾನಿ

Kollur ಹಾಲ್ಕಲ್‌: ಬಸ್‌ ಢಿಕ್ಕಿ; ಕಾರಿಗೆ ಹಾನಿ

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

Kundapura ಪ್ಲಾಸ್ಟಿಕ್‌ ಅಕ್ಕಿ ವದಂತಿಗೆ ಆಹಾರ ನಿರೀಕ್ಷಕರ ವಿವರಣೆ

Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!

Udayavani campaign; ಬ್ರಹ್ಮಾವರ-ಇಲ್ಲಿ ನೇತಾಡ್ಕೊಂಡು ಹೋಗಲೂ ಬಸ್‌ ಇಲ್ಲ!

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

MUST WATCH

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

ಹೊಸ ಸೇರ್ಪಡೆ

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Innanje Railway Station; A gold chain was stolen from a woman who was traveling from Madurai to Mumbai

Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು

IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

panaji

Panaji: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.