ರಣಜಿ ಪಂದ್ಯ: ರವಿಕುಮಾರ್‌ ಸಮರ್ಥ್ ಶತಕ; ಕರ್ನಾಟಕಕ್ಕೆ ಮುನ್ನಡೆ


Team Udayavani, Dec 21, 2022, 11:05 PM IST

ರಣಜಿ ಪಂದ್ಯ: ರವಿಕುಮಾರ್‌ ಸಮರ್ಥ್ ಶತಕ; ಕರ್ನಾಟಕಕ್ಕೆ ಮುನ್ನಡೆ

ಬೆಂಗಳೂರು: ರವಿಕುಮಾರ್‌ ಸಮರ್ಥ್ ಅವರ ಅಮೋಘ ಶತಕ ಸಾಹಸದಿಂದ ಪುದುಚೇರಿ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 134 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಪುದುಚೇರಿ 58ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದು, ಇನ್ನೂ 76 ರನ್‌ ಹಿನ್ನಡೆಯಲ್ಲಿದೆ.

ಎಡಗೈ ಸ್ಪಿನ್ನರ್‌ ಅಂಕಿತ್‌ ಶರ್ಮ 6 ವಿಕೆಟ್‌ ಉರುಳಿಸಿ ಕರ್ನಾಟಕವನ್ನು ಕಾಡಿದರು. ಆದರೂ ಈಗಿನ ಸ್ಥಿತಿ ಯಲ್ಲಿ ಈ ಪಂದ್ಯ ಮೂರೇ ದಿನ ಗಳಲ್ಲಿ ಮುಗಿಯುವ ಸಾಧ್ಯತೆ ಇದ್ದು, ಕರ್ನಾಟಕ ಸ್ಪಷ್ಟ ಗೆಲುವು ಸಾಧಿಸು ವುದರಲ್ಲಿ ಅನುಮಾನ ಉಳಿದಿಲ್ಲ.

ದ್ವಿತೀಯ ದಿನದಾಟದಲ್ಲಿ ತೀವ್ರ ಕುಸಿತ ಕಂಡ ಕರ್ನಾಟಕ, ಆರ್‌. ಸಮರ್ಥ್ ಸಾಹಸದಿಂದ ಮುನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. 59 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದ ಸಮರ್ಥ್ ಇದೇ ಲಯದಲ್ಲಿ ಸಾಗಿ 137 ರನ್‌ ಕೊಡುಗೆ ಸಲ್ಲಿಸಿದರು. 242 ಎಸೆತಗಳ ಈ ಅಮೋಘ ಆಟದಲ್ಲಿ 17 ಬೌಂಡರಿ ಒಳಗೊಂಡಿತ್ತು.

ಒಂದಕ್ಕೆ 111 ರನ್‌ ಮಾಡಿದಲ್ಲಿಂದ ಆಟ ಮುಂದುವರಿಸಿದ ಕರ್ನಾಟಕಕ್ಕೆ ಪುದುಚೇರಿ ಬೌಲರ್ ಕಂಟಕವಾಗಿ ಕಾಡಿದರು. ರೋನಿತ್‌ ಮೋರೆ ಸೊನ್ನೆಗೆ ವಾಪಸಾದರೆ, ವಿಶಾಲ್‌ ಓನತ್‌ ನಾಲ್ಕೇ ರನ್ನಿಗೆ ಆಟ ಮುಗಿಸಿದರು. ಸಮರ್ಥ್ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸತೊಡಗಿ ದರು. ಅವರಿಗೆ ನಿಕಿನ್‌ ಜೋಸ್‌ (30) ಅವರಿಂದ ಒಂದಿಷ್ಟು ಬೆಂಬಲ ಲಭಿಸಿತು. 4ನೇ ವಿಕೆಟಿಗೆ 63 ರನ್‌ ಒಟ್ಟುಗೂಡಿತು.

ಸಮರ್ಥ್ 5ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರುವಾಗ ಕರ್ನಾಟಕ 249 ರನ್‌ ಗಳಿಸಿತ್ತು. 55 ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿತು. 6ನೇ ಕ್ರಮಾಂಕದಲ್ಲಿ ಆಡಲಿಳಿದ ಮನೀಷ್‌ ಪಾಂಡೆ 45 ರನ್‌ ಮಾಡಿದರು.

ದ್ವಿತೀಯ ಸರದಿಯಲ್ಲಿ ಪುದುಚೇರಿ ಕುಸಿತ ಕಂಡಿದೆ. ಮೋರೆ, ವೈಶಾಖ್‌, ಗೌತಮ್‌ ತಲಾ ಒಂದು ವಿಕೆಟ್‌ ಉರುಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಪುದುಚೇರಿ-170 ಮತ್ತು 3 ವಿಕೆಟಿಗೆ 58 (ಜಯ್‌ ಪಾಂಡೆ ಬ್ಯಾಟಿಂಗ್‌, ನಯನ್‌ ಶ್ಯಾಮ್‌ 24, ಮೋರೆ 9ಕ್ಕೆ 1, ವೈಶಾಖ್‌ 13ಕ್ಕೆ 1, ಗೌತಮ್‌ 21ಕ್ಕೆ 1). ಕರ್ನಾಟಕ-304 (ಸಮರ್ಥ್ 137, ಅಗರ್ವಾಲ್‌ 51, ಪಾಂಡೆ 45, ಜೋಸ್‌ 30, ಅಂಕಿತ್‌ ಶರ್ಮ 60ಕ್ಕೆ 6, ವಿ. ಮಾರಿಮುತ್ತು 32ಕ್ಕೆ 2).

ಟಾಪ್ ನ್ಯೂಸ್

1-KKAAD

IPL Final; ಕೆಕೆಆರ್ ಬೌಲರ್ ಗಳ ಕೇಕೆ; ಹೈದರಾಬಾದ್ ಆಟ ಮುಗಿಸಿತು 113 ಕ್ಕೆ!!

1-aaaa

Delhi ಹಸುಗೂಸುಗಳ ದುರಂತ: ಆಸ್ಪತ್ರೆಯ ಮಾಲಕ, ವೈದ್ಯ ಬಂಧನ

1-sdsaas

Wadi; ಮರದ ಆಸರೆಗೆ ನಿಂತ ಇಬ್ಬರು ಸಿಡಿಲಿಗೆ ಬಲಿ

1-qwe-wqewqewq

Shivamogga;ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

1—wqe-wqewqe

Maharashtra ಸರಕಾರದಿಂದ ರಾಜ್ಯಕ್ಕೆ ಬರುತ್ತಿದ್ದ ನೀರಿಗೆ ತಡೆ: ಬೆಳಗಾವಿಯಲ್ಲಿ ಆಕ್ರೋಶ

18

Actress: 42ನೇ ವಯಸ್ಸಿನಲ್ಲಿ ತನಗಿಂತ 6 ವರ್ಷ ಚಿಕ್ಕವನೊಂದಿಗೆ 3ನೇ ಮದುವೆಯಾದ ಖ್ಯಾತ ನಟಿ

1-rrwwqewqe

I miss you, Baba; ತಂದೆಯ 25 ನೇ ಪುಣ್ಯತಿಥಿ: ತೆಂಡೂಲ್ಕರ್ ಭಾವಪೂರ್ಣ ಬರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-KKAAD

IPL Final; ಕೆಕೆಆರ್ ಬೌಲರ್ ಗಳ ಕೇಕೆ; ಹೈದರಾಬಾದ್ ಆಟ ಮುಗಿಸಿತು 113 ಕ್ಕೆ!!

1-rrwwqewqe

I miss you, Baba; ತಂದೆಯ 25 ನೇ ಪುಣ್ಯತಿಥಿ: ತೆಂಡೂಲ್ಕರ್ ಭಾವಪೂರ್ಣ ಬರಹ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-KKAAD

IPL Final; ಕೆಕೆಆರ್ ಬೌಲರ್ ಗಳ ಕೇಕೆ; ಹೈದರಾಬಾದ್ ಆಟ ಮುಗಿಸಿತು 113 ಕ್ಕೆ!!

1-aaaa

Delhi ಹಸುಗೂಸುಗಳ ದುರಂತ: ಆಸ್ಪತ್ರೆಯ ಮಾಲಕ, ವೈದ್ಯ ಬಂಧನ

1-qwewqe

Yadgir; ಭಾರೀ ಬಿರುಗಾಳಿ ಸಹಿತ ಮಳೆ: ಭೀತರಾದ ಜನರು

1-sdsaas

Wadi; ಮರದ ಆಸರೆಗೆ ನಿಂತ ಇಬ್ಬರು ಸಿಡಿಲಿಗೆ ಬಲಿ

1-qwe-wqewqewq

Shivamogga;ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.