ಹೆಲಿಪ್ಯಾಡ್ ನಲ್ಲಿ ಗೋಣಿಚೀಲಗಳ ರಾಶಿ; ಬಿಎಸ್ ವೈ ಹೆಲಿಕಾಪ್ಟರ್ ಇಳಿಯಲು ಹರಸಾಹಸ
Team Udayavani, Mar 6, 2023, 2:28 PM IST
ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜಿಲ್ಲೆಯ ಜೇವರ್ಗಿ ಬಳಿಯ ಹೆಲಿಪ್ಯಾಡ್ ನಲ್ಲಿ ಇಳಿಯಲು ಸಾಕಷ್ಟು ಹರಸಾಹಸ ಪಟ್ಟಿರುವ ಘಟನೆ ನಡೆಯಿತು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಜೇವರ್ಗಿಗೆ ಆಗಮಿಸುವ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಯಮಿತವಾಗಿ ಇಳಿಯದೇ ನಾಲ್ಕೈದು ಸುತ್ತು ಹೊಡೆಯಿತು.
ಕಾಪ್ಟರ್ ಹೆಲಿಪ್ಯಾಡ್ ದಲ್ಲಿ ಇಳಿಯಲು ಮುಂದಾದಾಗ ಹೆಲಿಪ್ಯಾಡಕ್ಕೆ ಹತ್ತಿಕೊಂಡಂತಿರುವ ಗುಡಿಸಲು ಮೇಲೆ ಹಾಕಲಾದ ತಾಡಪತ್ರಿ ಜತೆಗೆ ಹತ್ತಿ ಮೇಲೆ ಹಾಕಲಾಗಿದ್ದ ಪ್ಲಾಸ್ಟಿಕ್ ಚೀಲಗಳು ಹಾರಾಡಲು ಮುಂದಾದವು. ಒಂದು ಹಂತದಲ್ಲಿ ಪ್ಲಾಸ್ಟಿಕ್ ಚೀಲಗಳು ಹೆಲಿಕ್ಯಾಪ್ಟರ್ ಗೆ ಇಳಿಯಲು ಅಡ್ಡಿ ಮಾಡಿದವು. ಇದೇ ಕಾರಣಕ್ಕೆ ಹೆಲಿಕ್ಯಾಪ್ಟರ್ ಕೆಳಗಿಳಿಯುವ ಬದಲು ಮತ್ತೆ ಮೇಲಕ್ಕೇರಿತು.
ಎರಡ್ಮೂರು ಸಲ ಸುತ್ತು ಹಾಕಿ, ನಂತರ ಹೆಲಿಕಾಪ್ಟರ್ ಹರ ಸಾಹಸ ಪಟ್ಟು ಕೆಳಗಿಳಿತು. ಮಾಜಿ ಮುಖ್ಯ ಮಂತ್ರಿ ಕೆಳಗಿಳಿಯುವ ನಿಟ್ಟಿನಲ್ಲಿ ಯಾವುದೇ ಮುಂಜಾಗ್ರತಾ ವಹಿಸದಿರುವುದು ಈ ಸಂದರ್ಭದಲ್ಲಿ ಕಂಡು ಬಂತು.