ಮುಂಬೈನಲ್ಲಿ ಮಹಿಳೆಯ ಅತ್ಯಾಚಾರವೆಸಗಿದ ಆಟೋ ಚಾಲಕ; ಉ.ಪ್ರದೇಶದಲ್ಲಿ ಬಂಧನ
Team Udayavani, Jul 10, 2023, 11:29 AM IST
ಮುಂಬೈ: 20 ವರ್ಷ ಪ್ರಾಯದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಮುಂಬೈನ ಆಟೋ ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಆರೆ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋ ರಿಕ್ಷಾ ಚಾಲಕನನ್ನು ಇಂದ್ರಜಿತ್ ಸಿಂಗ್ ಎಂದು ಹೆಸರಿಸಲಾಗಿದೆ. ಈತ ಯುವತಿಯ ಮೇಲೆ ಹಲ್ಲೆ ನಡೆಸಿ ಆಕೆಯ ಮೇಲೆರಗಿದ್ದ.
ಸಂತ್ರಸ್ತ ಮಹಿಳೆಗೆ ಕೆಲವೇ ತಿಂಗಳ ಹಿಂದೆ ಹೆರಿಗೆಯಾಗಿತ್ತು. ಆಕೆಯ ಕಿಬ್ಬೊಟ್ಟೆಯಲ್ಲಿ ರಕ್ತಸ್ರಾವ ಆರಂಭವಾದ ಕಾರಣದಿಂದ ಆಕೆ ತನ್ನ ಹೆರಿಗೆಯಾದ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಅಲ್ಲಿ ಆಕೆಯ ದೇಹದ ಮೇಲಿದ್ದ ಗಾಯವನ್ನು ಗಮನಿಸಿದ ವೈದ್ಯರು ಪ್ರಶ್ನಿಸಿದಾಗ ಆಕೆ ತನಗಾದ ಘಟನೆಯನ್ನು ವಿವಿರಿಸಿದ್ದಾಳೆ.
ಆಸ್ಪತ್ರೆ ಸಿಬ್ಬಂದಿ ಆಕೆಯ ಮನೆಯವರಿಗೆ ವಿಚಾರ ತಿಳಿಸಿದ್ದು, ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ ಚಿಕ್ಕಮ್ಮನನ್ನು ಭೇಟಿ ಮಾಡಲು ನವಿ ಮುಂಬೈನ ಸಿಬಿಡಿ ಬೇಲಾಪುರಕ್ಕೆ ಪ್ರಯಾಣ ಬೆಳೆಸಿದ್ದಳು. ಮುಂಬೈಗೆ ಹಿಂತಿರುಗಲು ಆಕೆ ಆಟೋ ರಿಕ್ಷಾವನ್ನು ಬುಕ್ ಮಾಡಿದಾಗ, ಆಕೆ ಆರೋಪಿಯನ್ನು ಭೇಟಿಯಾದಳು. ಆರೋಪಿಯು ಮಹಿಳಯೆ ಹೇಳಿದಂತೆ ನೇರವಾಗಿ ಗೋರೆಗಾಂವ್ ಗೆ ಕರೆದುಕೊಂಡು ಹೋಗುವ ಬದಲು ಆರೆ ಕಾಲೋನಿಯ ಏಕಾಂತ ಸ್ಥಳಕ್ಕೆ ರಿಕ್ಷಾ ತಿರುಗಿಸಿದ. ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದು, ಸುಮ್ಮನಿರಲು ಬೆದರಿಕೆ ಹಾಕಿದ್ದ. ಕೃತ್ಯದ ನಂತರ ಆರೋಪಿಯು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ.
ತಮ್ಮ ತನಿಖೆಯ ಸಮಯದಲ್ಲಿ, ಪೊಲೀಸರು ಆಟೋರಿಕ್ಷಾದ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದರು. ಅಪರಾಧದ ದಿನದಂದು ಬೇರೆ ಚಾಲಕನು ವಾಹನವನ್ನು ಚಲಾಯಿಸುತ್ತಿದ್ದನು. ಇದರಿಂದ ಪೊಲೀಸರು ಇಂದ್ರಜಿತ್ ಸಿಂಗ್ ಅವರನ್ನು ಉತ್ತರ ಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಯನ್ನು ಭಾನುವಾರ ಬಂಧಿಸಿ ನಂತರ ಮುಂಬೈಗೆ ಕರೆತರಲಾಯಿತು. ಸೋಮವಾರ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್ ಕಿಡಿ
Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ
Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್
CPM ನಾಯಕನ ಹತ್ಯೆ ಸಂಚು: ಕಾಂಗ್ರೆಸ್ನ ಸುಧಾಕರನ್ಗೆ ರಿಲೀಫ್
BJP: ಪ್ರಚಾರಕ್ಕೆ ಬರದ, ವೋಟ್ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್
MUST WATCH
ಹೊಸ ಸೇರ್ಪಡೆ
Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್ ಕಿಡಿ
Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ
Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ
Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್
Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ