Zareen Khan: ಆ ನಟಿಯೊಂದಿಗಿನ ಹೋಲಿಕೆಯಿಂದ ನನ್ನ ವೃತ್ತಿ ಜೀವನವೇ ಮುಳುವಾಯಿತು; ಜರೀನ್
ನನ್ನ ವ್ಯಕ್ತಿತ್ವ ಸಾಬೀತಿಗೆ ಇಂಡಸ್ಟ್ರಿ ಅವಕಾಶವೇ ನೀಡಿಲ್ಲ..
Team Udayavani, Jul 27, 2023, 1:32 PM IST
ಮುಂಬಯಿ: ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಮಾದಕ ನೋಟದಿಂದ ಗಮನ ಸೆಳೆದಿದ್ದ ನಟಿ ಜರೀನ್ ಖಾನ್ ಬಹು ಸಮಯದಿಂದ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ದಕ್ಷಿಣದ ಕೆಲ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅವರು ಇಂಡಸ್ಟ್ರಿಯಲ್ಲಿನ ಅವಕಾಶ ಕೊರತೆ ಬಗ್ಗೆ ಮಾತನಾಡಿದ್ದಾರೆ.
2010 ರಲ್ಲಿ ಬಂದ ‘ವೀರ್’ ಸಿನಿಮಾದ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಜರೀನ್ ಖಾನ್ ಆರಂಭದಲ್ಲಿ ತನ್ನ ನಟನೆ ಹಾಗೂ ಮಾದಕ ನೋಟದಿಂದ ಗಮನ ಸೆಳೆದಿದ್ದರು. ಆ ವೇಳೆ ಅವರನ್ನು ಕತ್ರೀನಾ ಕೈಫ್ ಅವರಿಗೆ ಹೋಲಿಸಲಾಗುತ್ತಿತ್ತು. ಆದರೆ ಆ ಬಳಿಕ ಅವರ ಸಿನಿ ಕೆರಿಯರ್ ಗೆ ಇದೇ ವಿಚಾರ ಹಿನ್ನೆಡೆಯಾಗಿ ಪರಿಣಮಿಸಿತು.
ರೆಡ್ಡಿಟ್ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ನಲ್ಲಿ ಬಳಕೆದಾರರೊಬ್ಬರು “ಜರೀನ್ ಖಾನ್ ನಿಮ್ಮನ್ನು ಆರಂಭಿಕ ದಿನಗಳಲ್ಲಿ ಕತ್ರೀನಾ ಅವರಿಗೆ ಹೋಲಿಸಲಾಗುತ್ತಿತ್ತು. ಅದು ನಿಮಗೆ ಹೇಗೆ ಅನಿಸುತ್ತಿತ್ತು ಹಾಗೂ ನಿಮ್ಮ ಕೆರಿಯರ್ ಮೇಲೆ ಹೇಗೆ ಪರಿಣಾಮ ಬೀರಿತು?” ಎಂದು ಕೇಳಿದ್ದಾರೆ.
ಇದನ್ನೂ ಓದಿ: Amitabh Bachchan: ಮಹಿಳೆಯರ ಒಳಉಡುಪಿನ ಬಗ್ಗೆ ಟ್ವೀಟ್; ಟ್ರೋಲಾದ ಬಿಗ್ ಬಿ ಅಮಿತಾಭ್
“ನಾನು ಇಂಡಸ್ಟಿಗೆ ಬಂದ ವೇಳೆ. ಕಳೆದುಕೊಂಡ ಮಗುವಿನಂತೆ ನನ್ನ ಸ್ಥಿತಿ ಇತ್ತು. ನಾನು ಫಿಲ್ಮಿ ಹಿನ್ನೆಲೆಯಿಂದ ಬರದ ಕಾರಣ. ನನ್ನನು ಕತ್ರೀನಾ ಅವರೊಂದಿಗೆ ಹೋಲಿಸಿ ಮಾತನಾಡುವಾಗ ತುಂಬಾ ಸಂತೋಷವಾಗುತ್ತಿತ್ತು. ನಾನು ಕತ್ರೀನಾ ಅವರ ಅಭಿಮಾನಿಯೂ ಆಗಿದ್ದೆ. ಅವರು ನೋಡಲು ಸುಂದರವಾಗಿದ್ದರು. ಆದರೆ ಇದೇ ನನಗೆ ಹಿನ್ನೆಡೆ ಆಯಿತು. ನನ್ನ ವ್ಯಕ್ತಿತ್ವವನ್ನು ಸಾಬೀತು ಪಡಿಸಲು ಇಂಡಸ್ಟ್ರಿ ಅವರು ನನಗೆ ಅವಕಾಶವೇ ನೀಡಿಲ್ಲ. ಇದು ನನ್ನ ವೃತ್ತಿಜೀವನಕ್ಕೆ ಹಿನ್ನಡೆಯಾಯಿತು” ಎಂದು ಪ್ರಶ್ನೆಗೆ ಜರೀನ್ ಉತ್ತರಿಸಿದ್ದಾರೆ.
ಜರೀನ್ ಖಾನ್ ‘ವೀರ್’ ನಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಸಲ್ಮಾನ್ ಖಾನ್ ನಿರ್ಮಿಸಿದ್ದರು. ಸಲ್ಮಾನ್ ಖಾನ್ ಕತ್ರಿನಾ ಅವರೊಂದಿಗೆ ‘ಮೈನೆ ಪ್ಯಾರ್ ಕ್ಯುನ್ ಕಿಯಾ’ (2005) ಮತ್ತು ‘ ಪಾರ್ಟ್ ನರ್’ (2007) ನಲ್ಲಿ ನಟಿಸಿದ್ದರು. ಕತ್ರೀನಾ ಅವರೊಂದಿಗೆ ಜರೀನ್ ಅವರ ಹೋಲಿಕೆ. ಅಂತಿಮವಾಗಿ ಜರೀನ್ ಅವರಿಗೆ ಮುಳುವಾಗಿ ಪರಿಣಮಿಸಿತು. ಇದು ಜರೀನ್ ಅವರ ವೃತ್ತಿ ಜೀವನದ ಬೆಳವಣಿಗೆಗೆ ಅಡ್ಡಿಯಾಯಿತು. ಇಂಡಸ್ಟ್ರಿಯಲ್ಲಿ ಜರೀನ್ ಅವರ ಗುರುತು ಸ್ಥಾಪಿಸಲು, ಇದರಿಂದ ಕಷ್ಟವಾಯಿತು.
ಜರೀನ್ ಖಾನ್ ಹಿಂದಿ, ಪಂಜಾಬಿ, ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್ ಪ್ರಶಸ್ತಿ ಗೌರವ!
ಹಾರ್ದಿಕ್ ಜತೆ ವಿಚ್ಚೇದನದ ಸುದ್ದಿ ಬೆನ್ನಲ್ಲೇ ದಿಶಾ ಪಟಾನಿ ಗೆಳೆಯನ ಜತೆ ಕಾಣಿಸಿಕೊಂಡ ನತಾಶಾ
Director: ಬಾಲಿವುಡ್ ನಿರ್ದೇಶಕ ಸಿಕಂದರ್ ಭಾರ್ತಿ ನಿಧನ
Bollywood: ಮತ್ತೆ ನಿರ್ದೇಶನದತ್ತ ಕರಣ್ ಜೋಹರ್: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
UAE ಗೋಲ್ಡನ್ ವೀಸಾ : ಅಬುಧಾಬಿ ಮಂದಿರಕ್ಕೆ ರಜನಿಕಾಂತ್ ಭೇಟಿ
MUST WATCH
ಹೊಸ ಸೇರ್ಪಡೆ
ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ: ಸಿಎಂ
Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್
ಎಸ್ಐಟಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಿಎಂ ಗಮನಕ್ಕೆ ಬಂದಿಲ್ಲವೇ?: ಎಚ್ಡಿಕೆ
16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು
Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್!