Sabarimala; ಭಕ್ತಿ ಭಾವದ ಮಕರ ಸಂಕ್ರಾಂತಿ ಆಚರಣೆ: ಲಕ್ಷಾಂತರ ಭಕ್ತರು ಭಾಗಿ
Team Udayavani, Jan 15, 2024, 8:06 PM IST
ಪತ್ತನಂತಿಟ್ಟ : ಲಕ್ಷಕ್ಕೂ ಅಧಿಕ ಭಕ್ತರು, ಹಲವಾರು ಗಂಟೆಗಳ ಕಾಲ ಬೃಹತ್ ಸರತಿ ಸಾಲಿನಲ್ಲಿ ನಿಂತು ಸೋಮವಾರ ಇಲ್ಲಿನ ಅಯ್ಯಪ್ಪನ ಬೆಟ್ಟದ ದೇಗುಲದಲ್ಲಿ ಮಕರ ಸಂಕ್ರಾಂತಿ (ಮಕರವಿಳಕ್ಕು) ಆಚರಣೆಯ ದಿನದಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತಿಂಗಳ ಅವಧಿಯ ವಾರ್ಷಿಕ ತೀರ್ಥಯಾತ್ರೆಯ ಋತು ಇದಾಗಿದ್ದು ಸಾಂಪ್ರದಾಯಿಕ ಕಪ್ಪು ಉಡುಪುಗಳನ್ನು ಧರಿಸಿದ ಭಕ್ತರ ದಂಡು ಮತ್ತು ತಮ್ಮ ತಲೆಯ ಮೇಲೆ ‘ಇರುಮುಡಿ’ ಹೊತ್ತುಕೊಂಡು ದೀಪಾರತಿ ಗಾಗಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಬೆಳಗ್ಗೆಯಿಂದಲೇ ಕಾಯುತ್ತಿದ್ದರು.ದೇವಸ್ವಂ ಅಧಿಕಾರಿಗಳು, ಪೊಲೀಸ್ ಸಿಬಂದಿ ಮತ್ತು ಅರ್ಚಕರು ವಿಶೇಷ ಸಿದ್ದತೆಗಳನ್ನು ಕೈಗೊಂಡಿದ್ದರು.
ಸಂಜೆ 6.30 ರ ಸುಮಾರಿಗೆ, ಅಯ್ಯಪ್ಪ ಜನಿಸಿದ ಪಂದಳಂ ಅರಮನೆಯಿಂದ ಪವಿತ್ರ ಆಭರಣಗಳನ್ನು ತರಲಾಯಿತು, ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ಪಂದಳಂ ಅರಮನೆಯಿಂದ ಎರಡು ದಿನಗಳ ಹಿಂದೆ ವಿಧ್ಯುಕ್ತ ಮೆರವಣಿಗೆ ಆರಂಭವಾಗಿತ್ತು. ಅಯ್ಯಪ್ಪನ ವಿಗ್ರಹವನ್ನು ಪವಿತ್ರ ಆಭರಣಗಳಿಂದ ಅಲಂಕರಿಸಿದ ನಂತರ ದೀಪಾರಾಧನೆ ನಡೆಸಲಾಯಿತು.
ದೇಗುಲದ ಹೊರಗೆ ಅಪಾರ ಭಕ್ತಗಡಣವು ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು, ಭಕ್ತರು ಪವಿತ್ರ ಆಭರಣಗಳಿಂದ ಅಲಂಕರಿಸಲ್ಪಟ್ಟ ಭಗವಾನ್ ಅಯ್ಯಪ್ಪನ ನೋಡಲು ಮುಗುಬಿದ್ದರು. ದೇಗುಲದ ಹೆಬ್ಬಾಗಿಲು ತೆರೆದಾಗ ‘ಶರಣಂ ಅಯ್ಯಪ್ಪ’ ಘೋಷಣೆಗಳು ಮತ್ತು ಸ್ತೋತ್ರಗಳು ಮುಗಿಲು ಮುಟ್ಟಿದ್ದವು.
ದೇವಾಲಯದ ಸಂಕೀರ್ಣದಿಂದ ಎಂಟು ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪೊನ್ನಂಬಲಮೇಡು ಮೇಲಿನ ಪೂರ್ವ ಆಗಸದಲ್ಲಿ ಕೆಲವು ನಿಮಿಷಗಳ ನಂತರ ‘ಮಕರ ಜ್ಯೋತಿ’ ಮಿನುಗಿತು. ದೈವಿಕ ಬೆಳಕು ಎಂದು ಪರಿಗಣಿಸಲ್ಪಟ್ಟ ‘ಮಕರ ಜ್ಯೋತಿ’ ಕಂಡಾಗ ಭಕ್ತರಿಂದ ಶರಣಂ ಅಯ್ಯಪ್ಪ ಘೋಷಗಳು ಮತ್ತಷ್ಟು ತೀವ್ರಗೊಂಡವು.
ಹಿನ್ನೆಲೆ ಗಾಯಕ ವೀರಮಣಿದಾಸನ್ಗೆ ಪ್ರಶಸ್ತಿ
ತಮಿಳು ಹಿನ್ನೆಲೆ ಗಾಯಕ ಪಿ.ಕೆ. ವೀರಮಣಿದಾಸನ್ ಅವರಿಗೆ ಪ್ರಸಕ್ತ ವರ್ಷದ ಪ್ರತಿಷ್ಠಿತ ಹರಿವರಾಸನಮ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಬರಿಮಲೆಯ ಸನ್ನಿಧಾನಂನಲ್ಲಿ ಕೇರಳ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರು ಸೋಮವಾರ ವೀರಮಣಿದಾಸನ್ರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಇದು ಒಂದು ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇವರ ಕಂಠಸಿರಿಯಲ್ಲಿ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ 6 ಸಾವಿರಕ್ಕೂ ಅಧಿಕ ಭಕ್ತಿಗೀತೆಗಳು ಹೊರಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್
Sandeshkhali ಪ್ರಕರಣಕ್ಕೆ ದಿಢೀರ್ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್!
BJP ನಾಯಕಿ ವಿವಾದ: ಒವೈಸಿಗೆ 15 ನಿಮಿಷ ಬೇಕು,ನಮಗಾದ್ರೆ 15 ಸೆಕೆಂಡ್
MUST WATCH
ಹೊಸ ಸೇರ್ಪಡೆ
Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶುಕ್ತಿಜಾ
KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್
Rank: ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಪ್ರತ್ವಿತಾ ಪಿ.ಶೆಟ್ಟಿ; ಐ.ಎ.ಎಸ್ ಅಧಿಕಾರಿಯಾಗುವ ಆಸೆ