UV Fusion: ನೀರಿನಾಳ ಬಲ್ಲದೇನು ತೇಲೋ ದೋಣಿಯು?


Team Udayavani, Feb 21, 2024, 12:48 PM IST

10-uv-fusion

ಮನಸಿನಲ್ಲಿ ಭಾವನೆಗಳ ಮೆರವಣಿಗೆ ಎಂದರೆ ಬದುಕಿನಲ್ಲಿ ಅದೆಷ್ಟು ಚಂದದ ಅನುಭೂತಿ ಅಲ್ಲವೇ? ಆದರೆ ಭಾವನೆಗಳು ಬರೀ ಸಂಭ್ರಮವನ್ನಷ್ಟೇ ತುಂಬಿಕೊಂಡು ಬರುವುದಿಲ್ಲ. ಕೆಲವೊಮ್ಮೆ ಹೇಳತೀರದ ದುಃಖ, ಮೌನದ ಕಟ್ಟೆ ಒಳಗೆ ಅಡಗಿ ಕುಳಿತ ಹತಾಶೆ, ನಿಗ್ರಹಿಸಿಕೊಂಡ ಕೋಪ – ಮುನಿಸು, ಹೇಳದೇ ಉಳಿದ ಮಾತಿನ ತೊಳಲಾಟ, ದ್ವೇಷ ಎಲ್ಲವನ್ನು ಹೊತ್ತು ತರುತ್ತವೆ.ಆದರೆ ಇದೇ ಭಾವನೆಗಳ ಕೈಗೆ ನಮ್ಮ ಮನಸನ್ನು ಕೊಟ್ಟರೆ ಎದ್ದು ನಿಲ್ಲಬೇಕಾದ ಬದುಕು ಕ್ಷಣ ಮಾತ್ರದಲ್ಲಿ ಕುಗ್ಗಿ ಮುನ್ನಡೆಯುವ ಭರವಸೆಯನ್ನೇ ಕಳೆದುಕೊಂಡು ಬಿಡುತ್ತದೆ. ಇದು ಪ್ರತಿಯೊಬ್ಬರ ಬದುಕಿನ ನೈಜ ಸತ್ಯ.

ಬಾಲ್ಯದಿಂದ “ಬದುಕು ಒಂದು ಚಲಿಸುವ ದೋಣಿ ಇದ್ದಂತೆ “ಎಂದು ಹೇಳಿ ಬೆಳೆಸುವ ನಮ್ಮ ಹಿರಿಯರು ಅದರ ಅರ್ಥ ತಿಳಿಸಿ ಹೇಳುವುದರಲ್ಲಿ ಬಹಳಷ್ಟು ಸಲ ಸೋತು ಬಿಡುತ್ತಾರೆ.  ಕೆಲವೊಮ್ಮೆ ನಾವೆಷ್ಟೋ ಮಾತುಗಳನ್ನು ನುಂಗಿ ಬಿಟ್ಟಿರುತ್ತೇವೆ. ಯಾರೋ ಏನೋ ಹೇಳಿದರೆಂದು ತಲೆ ಕೆಡಿಸಿಕೊಂಡು ನಮ್ಮ ಕನಸುಗಳನ್ನೇ ಬಲಿ ಕೊಟ್ಟಿರುತ್ತೇವೆ. ತಿರುಗಿ ಬಿದ್ದರೆ ಅಪಮಾನವಾದೀತು ಎಂಬ ಭಯಕ್ಕೆ ಅವ್ಯಕ್ತ ಭಾವದ ಬಣ್ಣ ಬಳಿಯುತ್ತೇವೆ.ಎಲ್ಲರೂ ನಮ್ಮವರು ಎಂಬ ಪರಿಕಲ್ಪನೆಯಲ್ಲಿ ಅವರು ನಮ್ಮಲ್ಲಿ ಬೆರಳು ಮಾಡಿ ತೋರಿಸಿದ ಅಷ್ಟು ತಪ್ಪುಗಳು ನಮ್ಮ ನ್ಯೂನ್ಯತೆಗಳೆಂದು ಭಾವಿಸಿ ನಮ್ಮನ್ನೇ ನಾವು ತಿರಸ್ಕರಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿ ಬಿಡುತ್ತೇವೆ.

ನಮ್ಮಲ್ಲಿನ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ನಮ್ಮ ವಿಚಾರಧಾರೆಯ ಕುರಿತು ನಾವು ಧ್ವನಿ ಎತ್ತಲೇ ಬೇಕು. ಇದು ಖಂಡಿತವಾಗಿಯೂ ಅಹಂಕಾರ ಎನಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ನಮ್ಮವರು ಎನ್ನುವ ಭಾವನೆಗಳಿಗಿಂತ ನಾನು ಎಂಬುದರ ಮೇಲಿನ ನಂಬಿಕೆ ಗುರಿ ಮುಟ್ಟಲು ಸಹಾಯಕಬಲ್ಲದು.

ಹಾಗಾದರೆ ಭಾವನೆಗಳು ತಪ್ಪೇ? ಎಂಬ ಪ್ರಶ್ನೆ ಹುಟ್ಟಬಹುದು.ಅಲ್ಲವೇ ಅಲ್ಲ.ಜಗತ್ತು ನಿಂತಿರುವುದೇ ಭಾವನೆಗಳ ಮೇಲೆ.ಬದುಕ ಜಾತ್ರೆಗೆ ಮನಸೇ ದೋಣಿ.ಆದರೆ ಚಲಿಸುವ ದೋಣಿಗೆ ನೀರಿನ ಆಳ ಅಗಲ ಹೇಗೆ ಎತ್ತ ಚಲಿಸಬೇಕು ಒಂದೂ ತಿಳಿದಿರುವುದಿಲ್ಲ.ಭಾವನೆಗಳ ಗಾಳಿ ಬಂದ ದಿಕ್ಕಿಗೆ ಮುಖ ಮಾಡಿ ನಡೆದು ಬಿಡುತ್ತದೆ.ಆದರೆ ಅದನ್ನು ನಿಯಂತ್ರಿಸುವ ಶಕ್ತಿ ನಾವಿಕನಿಗಿದೆ.ಆತ ಇತರರಿಂದ ಬರುವ ಋಣಾತ್ಮಕ ಅಂಶಗಳ ನೀರನ್ನು ಹಿಂದೆ ತಳ್ಳಿದರೆ ಮಾತ್ರ ದೋಣಿ ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗಬಲ್ಲದು.ದಡ ಮುಟ್ಟುವವರೆಗೂ ಅವನಿಗೆ ಈ ಕ್ರಿಯೆ ಅನಿವಾರ್ಯ.ದೋಣಿ ಎಂಬ ಮನಸು ನಮ್ಮ ಹಿಡಿತದಲ್ಲಿರಬೇಕೇ ಹೊರತು ಅದರ ಹಿಡಿತದಲ್ಲಿ ನಾವಿರಬಾರದು.

ಇದು ನಮ್ಮ ಬದುಕು ಎಂದ ಮೇಲೆ ಇದನ್ನು ಮುನ್ನಡೆಸುವಷ್ಟು ಶಕ್ತಿ ಸಾಮರ್ಥ್ಯ ನಮಗೆ ಖಂಡಿತ ಬೇಕು. ಯಾರೋ ಒಬ್ಬರು ಬಂದು ಕೊಂಕು ನುಡಿದ ಮಾತ್ರಕ್ಕೆ ಅವರು ಸರಿ ಎಂದು ಖಂಡಿತ ಅಲ್ಲ.ನಡೆವ ಹಾದಿಯಲ್ಲಿ ಬಿದ್ದೆ ಎಂದ ಮಾತ್ರಕ್ಕೆ ನಡಿಗೆಯ ವೇಗ ಬದಲಿಸಬೇಕೇ ಹೊರತು ದಾರಿ ಬದಲಿಸಬಾರದು.ಏಳು ಬೀಳು ಭಗವಂತನನ್ನೇ ಬಿಟ್ಟಿಲ್ಲ. ನಾವು ನೀವು ಯಾವ ಲೆಕ್ಕ.ಸಮಸ್ಯೆ ಬಂದಾಗ ಸಾವು ನೋವುಗಳೇ ಪರಿಹಾರವಲ್ಲ. ಏಕೆಂದರೆ ಬದುಕು ದೊಡ್ಡದು ನೋವಿಗಿಂತಲೂ..ಸಾವಿಗಿಂತಲೂ…

 -ಶಿಲ್ಪಾ ಪೂಜಾರಿ
ಎಂಇಎಸ್‌ ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Balagopal

Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.