Tree: ಮಾವು ಬಿತ್ತಿದರೆ ಮಾವು ಬೇವು ಬಿತ್ತಿದರೆ ಬೇವು


Team Udayavani, Feb 26, 2024, 10:03 AM IST

4-mango-tree

ಒಂದು ಕಥೆಯಲ್ಲಿ ಓದಿದ ನೆನಪು ತರುಣಿಯೊಬ್ಬಳು ಊಟಕ್ಕೆ ಕುಳಿತಿದ್ದಾಗ ಭಿಕ್ಷೆ ಬೇಡುತ್ತ ಬಂದ ಸನ್ಯಾಸಿಯೊಬ್ಬರು ಹಸಿವು ಎಂದು ಅವಳ ಮುಂದೆ ಕೈ ಒಡ್ಡಿದರಂತೆ. ಸಹೃದಯಿಯಾದ ಆ ತರುಣಿ ತನ್ನ ಪಾಲಿನ ಊಟವನ್ನು ಆ ಸನ್ಯಾಸಿಗೆ ನೀಡಿ ಅವರನ್ನ ಸತ್ಕರಿಸಿದಳಂತೆ. ಅಸಲಿಗೆ ಆ ಸನ್ಯಾಸಿ ಒಬ್ಬರು ದೈವೀ ಪುರುಷರಾಗಿದ್ದರು.ಅವಳ ಉಪಚಾರಕ್ಕೆ ಮಾರುವೇಷದಲ್ಲಿದ್ದ ಆ ಸನ್ಯಾಸಿ ಪ್ರಫ‌ುಲ್ಲರಾಗಿ ತನ್ನ ನಿಜ ರೂಪವನ್ನ ತೋರಿಸಿ ಅವಳಿಗೆ ವರ ಒಂದನ್ನು ಕೊಟ್ಟು ಆಶೀರ್ವಾದ ಮಾಡಿ ಹೊರಟು ಹೋದರಂತೆ. ಮರುದಿನ ಅದೇ ಜಾಗದಲ್ಲಿ ಮತ್ತೂಬ್ಬಳು ತರುಣಿ ಊಟಕ್ಕೆ ಕುಳಿತಿದ್ದಳಂತೆ. ಅದೇ ಸಮಯಕ್ಕೆ ಹಿಂದಿನ ದಿನ ಮಾರುವೇಷದಲ್ಲಿ ಬಂದಿದ್ದ ಆ ಸನ್ಯಾಸಿ ಅವಳ ಬಳಿಯೂ ಬಂದು ಹಸಿವು ಎಂದು ಕೈ ಒಡ್ಡಿದರಂತೆ. ಆದರೆ ದುರಹಂಕಾರಿಯಾದ ಆ ತರುಣಿ ತನ್ನ ಮುಂದೆ ಭಿಕ್ಷೆ ಬೇಡಿದ ಸನ್ಯಾಸಿಗೆ ಅವಾಚ್ಯ ಶಬ್ದಗಳಿಂದ ಬೈದಳಂತೆ. ಇದರಿಂದ ಕುಪಿತಗೊಂಡ ಆ ಸನ್ಯಾಸಿ ಅವಳಿಗೆ ಬಾಯಿಯೇ ಬಾರದ ಹಾಗೇ ಶಾಪವನ್ನಿತ್ತು ಅಲ್ಲಿಂದ ಹೊರಟು ಹೋದರಂತೆ. ಈ ಸಣ್ಣ ಕಥೆಯಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಷ್ಟೇ.ನಾವು ಇತರರಿಗೆ ಏನನ್ನು ನೀಡುತ್ತೇವೋ ಅದೇ  ನಮಗೆ ಹಿಂದಿರುಗಿ ಬರುತ್ತದೆ ಎಂದು. ನಾವು ಬೇರೆಯವರಿಗೆ ಒಳ್ಳೆಯದನ್ನ ಬಯಸಿದರೆ ಅದು ಯಾವುದಾದರೊಂದು ರೂಪದಲ್ಲಿ ನಮಗೆ ಹಿಂದಿರುಗಿ ಬರುತ್ತದೆ. ಅದೇ ನಾವು ಇತರರಿಗೆ ಕೆಟ್ಟದನ್ನ ಬಯಸಿದರೆ ಕೆಟ್ಟದ್ದೇ ನಮಗೆ ಆಗುತ್ತದೆ.

ಮಾವು ಬಿತ್ತಿದರೆ ಮಾವು. ಬೇವು ಬಿತ್ತಿದರೆ ಬೇವು.! ಬೇವಿನ ಬೀಜ ಬಿತ್ತಿ ಮಾವನ್ನ ಪಡೆಯಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇತರರಿಗೆ ಕೆಡುಕನ್ನ ಬಯಸಿ ದೇವರ ಮುಂದೆ ನಿಂತು ಭಕ್ತಿಯಿಂದ ಕೈ ಮುಗಿದು ಬೇಡಿಕೊಂಡರೆ ನಮಗೆ ಒಳಿತಾಗುವುದಿಲ್ಲ.

ಕರ್ಮ ಹಿಂದಿರುಗುತ್ತದೆ  ಎಂಬ ಮಾತಿದೆ. ಅದು ಇಂದಿಗೂ ಅಕ್ಷರಶಃ ನಿಜ. ನಮ್ಮನ್ನ ಯಾವುದು ಬಿಟ್ಟು ಹೋದರೂ ನಮ್ಮ ಕರ್ಮಫ‌ಲ ನಮ್ಮನ್ನ ಎಂದಿಗೂ ಬಿಟ್ಟು ಹೋಗುವುದಿಲ್ಲ. ಕೆಲವೊಂದು ಬಾರಿ ಸಿಟ್ಟು ಬಂದಾಗ  ಹಾಳಾಗಿ ಹೋಗಲಿ ಎಂದು ನಾವು ಶಪಿಸುವುದಿದೆ. ಆದರೆ ನಮ್ಮನ್ನು ಕೂಡ ನಮ್ಮ ಹಿಂದೆ ಬೇರೆ ಯಾರೋ ಅವರು ಹಾಳಾಗಿ ಹೋಗಲಿ ಎಂದು ಶಪಿಸುತ್ತಾರೆ ಎನ್ನುವುದನ್ನ ನಾವು ಯಾವತ್ತೂ ಮರೆಯುವ ಹಾಗಿಲ್ಲ.

ಜೀವನ ಮೂರುದಿನದ ಬಾಳ ಸಂತೆ. ಈ ಮೂರು ದಿನಗಳಲ್ಲಿ ನಾವು ಹೇಗೆ ಬದುಕಿದ್ವಿ ಅನ್ನುವುದಕ್ಕಿಂತ ನಾವು ಹೇಗೆ ಇತರರೊಂದಿಗೆ ಬದುಕು ನಡೆಸಿದ್ವಿ ಅನ್ನುವುದು  ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಬದುಕಿನ ಕೊನೆಯ ಘಟ್ಟದಲ್ಲಿ ನಮ್ಮ ಜತೆ ಹಣ, ಅಧಿಕಾರ, ಸಂಬಂಧ, ಜನ ಬೆಂಬಲ ಆಸ್ತಿ ಪಾಸ್ತಿ ಯಾವುದು ಬರುವುದಿಲ್ಲ. ಇದಾವುದನ್ನೂ ನಾವು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮ ಜತೆ ಕೊನೆಯ ಕ್ಷಣದ ವರೆಗೂ ಬರುವುದು ಇತರರಿಗೆ ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ. ಅಂದರೆ ನಮ್ಮ ಪಾಪ ಪುಣ್ಯಗಳ ಲೆಕ್ಕಾಚಾರ. ಇದನ್ನ ಅರಿತು ಮಾನವ ಕುಲ ಬದುಕಿದರೆ ಎಲ್ಲವೂ ಸುಖಮಯ.

-ಸುಸ್ಮಿತಾ ಕೆ.ಎನ್‌.

ಅನಂತಾಡಿ ಬಂಟ್ವಾಳ

ಟಾಪ್ ನ್ಯೂಸ್

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Chabahar

Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ

Thumbe Vented Dam; ತುಂಬಿದ ತುಂಬೆ: ನೀರು ರೇಶನಿಂಗ್‌ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Chabahar

Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ

No more going to RTO office for driving license test!

RTO: ಇನ್ನು ಡ್ರೈವಿಂಗ್‌ ಲೈಸೆನ್ಸ್‌ ಟೆಸ್ಟ್‌ಗಾಗಿ ಆರ್‌ಟಿಒ ಕಚೇರಿಗೆ ಹೋಗ್ಬೇಕಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.