ಸೌಂದರ್ಯ ಲಹರಿ: ಕೊಬ್ಬರಿ ಎಣ್ಣೆ ಸೌಂದರ್ಯ ಪ್ರಸಾಧನಗಳು


Team Udayavani, Mar 24, 2017, 3:50 AM IST

24MAHILA-SAMPADA-4.jpg

ಮನೆಯಲ್ಲಿಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಆಧುನಿಕ ವಿಧದ ಸೌಂದರ್ಯ ಪ್ರಸಾಧನಗಳನ್ನು ಹಾಗೂ ಪಾರಂಪರಿಕ ವಿಧಾನದ ಸೌಂದರ್ಯ ಪ್ರಸಾಧನ ಹಾಗೂ ಸೌಂದರ್ಯ ರಕ್ಷಕಗಳನ್ನು ತಯಾರಿಸಬಹುದು.

ಕೊಬ್ಬರಿ ಎಣ್ಣೆಯ ಬಾಡಿಲೋಶನ್‌
ಕೊಬ್ಬರಿ ಎಣ್ಣೆ 2 ಭಾಗ, ಆಲಿವ್‌ ತೈಲ 1 ಭಾಗ, ಎಲೋವೆರಾ ಅಥವಾ ಕುಮಾರೀ ಗಿಡದ ಎಲೆಯ ತಿರುಳು- ಇವೆಲ್ಲವನ್ನೂ ಬೆರೆಸಿ ಮಿಕ್ಸರ್‌ನಲ್ಲಿ ಹಾಕಿ ಬೀಟ್‌ ಮಾಡಬೇಕು. ತದನಂತರ ಸ್ನಾನಕ್ಕೆ 1/4 ಗಂಟೆ ಮೊದಲು ದೇಹ, ಮುಖ, ಕೈಕಾಲುಗಳಿಗೆ ಲೇಪಿಸಿ ಮಾಲೀಶು ಮಾಡಬೇಕು. ಬಳಿಕ ಸ್ನಾನ ಮಾಡಿದರೆ ದೇಹ ಹಾಗೂ ಮೊಗದ ಚರ್ಮ ಮೃದು, ಸ್ನಿಗ್ಧ ಹಾಗೂ ಕಾಂತಿಯುತವಾಗುತ್ತದೆ.

ಕೊಬ್ಬರಿ ಎಣ್ಣೆಯ ಹ್ಯಾಂಡ್‌ ಸ್ಕ್ರಬ್‌
ಕೊಬ್ಬರಿ ಎಣ್ಣೆ  1 ಚಮಚ, 2 ಚಮಚ ಶುದ್ಧ ಜೇನು, 2 ಚಿಟಿಕೆ ಉಪ್ಪು , 1 ಚಮಚ ಸಕ್ಕರೆ, 1 ಚಮಚ ನಿಂಬೆರಸ.
ಇವೆಲ್ಲವುಗಳನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು ಚೆನ್ನಾಗಿ ಕಲಕಬೇಕು. ತದನಂತರ ಕೈಗಳಿಗೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು. 10-15 ನಿಮಿಷದ ಬಳಿಕ ತೊಳೆದರೆ, ಕೈಗಳ ಒರಟು ಒಣಗಿದ ಚರ್ಮ ಮೃದುವಾಗಿ, ಕೈಗಳು ಸುಂದರವಾಗುತ್ತವೆ.

ಮನೆಯಲ್ಲೇ ತಯಾರಿಸಬಹುದಾದ ಹಲ್ಲುಜ್ಜುವ ಪೇಸ್ಟ್‌
ಕೊಬ್ಬರಿ ಎಣ್ಣೆ 1 ಚಮಚ, ಅಷ್ಟೇ ಪ್ರಮಾಣದ ಬೇಕಿಂಗ್‌ ಸೋಡಾ ಬೆರೆಸಬೇಕು. ಇದಕ್ಕೆ 4 ಹನಿ ಪೆಪ್ಪರ್‌ಮಿಂಟ್‌ ತೈಲ ಬೆರೆಸಬೇಕು. ಇದರಿಂದ ಹಲ್ಲುಜ್ಜಿದರೆ ಹಲ್ಲು ಹಾಗೂ ಒಸಡುಗಳು ಆರೋಗ್ಯಕರವೂ ಸುಂದರವೂ ಶುಭ್ರವೂ ಆಗುವುದು.

ಕೊಬ್ಬರಿ ಎಣ್ಣೆಯಿಂದ ಸನ್‌ಸ್ಕ್ರೀನ್‌ ಲೋಶನ್‌
ಸೂರ್ಯನ ಬಿಸಿಲಿಗೆ ಹೋಗುವ ಮೊದಲು ಕೊಬ್ಬರಿ ಎಣ್ಣೆಯಿಂದ ಮುಖವನ್ನು ಚೆನ್ನಾಗಿ ಮಾಲೀಶು ಮಾಡಿ. ತದನಂತರ ಚಂದನದ ಪೌಡರನ್ನು ಲೇಪಿಸಿದರೆ ಬಲು ಪರಿಣಾಮಕಾರಿ.

ಬಿಸಿಲುಗಂದು ಉಂಟಾದಾಗ ಕೊಬ್ಬರಿ ಎಣ್ಣೆಯಲ್ಲಿ ಮುಲ್ತಾನಿ ಮಿಟ್ಟಿ ಬೆರೆಸಿ ಲೇಪಿಸಿ ಮಾಲೀಶು ಮಾಡಿ. 20 ನಿಮಿಷ ಬಿಡಬೇಕು. ತದನಂತರ ತೊಳೆದು ಕೊಬ್ಬರಿ ಎಣ್ಣೆ 1 ಚಮಚ, 2 ಚಮಚ ಸೌತೆಕಾಯಿ ತಿರುಳಿನ ರಸ ಬೆರೆಸಿ ಲೇಪಿಸಿದರೆ ಬಿಸಿಲುಗಂದು ನಿವಾರಣೆಯಾಗುತ್ತದೆ.

ಮಸಾಜ್‌ತೈಲ ಅಥವಾ ಅಭ್ಯಂಗಕ್ಕಾಗಿ ಕೊಬ್ಬರಿ ಎಣ್ಣೆ
ನಿತ್ಯ ಅಥವಾ ವಾರಕ್ಕೊಮ್ಮೆಯಾದರೂ ಎಣ್ಣೆಯಿಂದ ಮಾಲೀಶು ಮಾಡಿ ಸ್ನಾನ ಮಾಡುವ “ಅಭ್ಯಂಗ’ಕ್ಕೆ ಪಾರಂಪರಿಕ ಮಹತ್ವವಿದೆ.

ಅಭ್ಯಂಗಕ್ಕಾಗಿ ಎರಡು ಬಗೆಯ ತೈಲಗಳನ್ನು ಮನೆಯಲ್ಲೇ ತಯಾರಿಸಬಹುದು.
ಕೊಬ್ಬರಿ ಎಣ್ಣೆ 1/4 ಕಪ್‌, ಎಳ್ಳೆಣ್ಣೆ 1/4 ಕಪ್‌, 10 ಚಮಚ ಹಾಲು- ಇವೆಲ್ಲವನ್ನು ಬೆರೆಸಿ ಚೆನ್ನಾಗಿ ಕುದಿಸಬೇಕು. ತದನಂತರ ಬೆಚ್ಚಗಿರುವಾಗಲೇ ಈ ತೈಲದಿಂದ ಮಾಲೀಶು ಮಾಡಬೇಕು. ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ಮಾಂಸಖಂಡಗಳು ಬಲಯುತವಾಗುತ್ತವೆ, ಕೂದಲಿನ ಕಾಂತಿ ವರ್ಧಿಸುತ್ತದೆ. ಚರ್ಮವೂ ತಾಜಾ ಆಗಿ ಸ್ನಿಗ್ಧವಾಗಿ ಹೊಳೆಯುತ್ತದೆ. ಈ ಬಗೆಯ ತೈಲವನ್ನು ಅಭ್ಯಂಗಕ್ಕಾಗಿ ಎಲ್ಲರೂ ಸಾಮಾನ್ಯವಾಗಿ ಬಳಸಬಹುದು.

ಇದಲ್ಲದೆ ನೋವಿರುವ ಸಮಯದಲ್ಲಿ ಕೊಬ್ಬರಿ ಎಣ್ಣೆಗೆ (1/4 ಕಪ್‌), 1/4 ಕಪ್‌ ಎಳ್ಳೆಣ್ಣೆ ಬೆರೆಸಿ ಬೆಚ್ಚಗೆ ಮಾಡಿ, ಒಲೆಯಿಂದ ಕೆಳಗಿಳಿಸಿದ ಬಳಿಕ ಆರತಿ ಕರ್ಪೂರ ಅಥವಾ ಪಚ್ಚ ಕರ್ಪೂರ ಹುಡಿ 1/2 ಚಮಚ ಬೆರೆಸಿ ಇಡಬೇಕು. ಇದನ್ನು ಮೈಕೈ ನೋವಿಗೆ, ಗುಂಟು ನೋವಿರುವಾಗ ಹಚ್ಚಿ ಲೇಪಿಸಿ ಮಾಲೀಶು ಮಾಡಿ ಸ್ನಾನ ಮಾಡಿದರೆ, ಈ ಬಗೆಯ ಅಭ್ಯಂಗದಿಂದ ನೋವು ನಿವಾರಣೆಯಾಗುತ್ತದೆ.

ವಿಧಾನ 2: ಕೊಬ್ಬರಿ ಎಣ್ಣೆ 1/2 ಕಪ್‌ಗೆ 5-6 ಹನಿ ಲ್ಯಾವೆಂಡರ್‌ ತೈಲ ಅಥವಾ ಪೆಪ್ಪರ್‌ಮಿಂಟ್‌ ತೈಲ ಬೆರೆಸಿ ಮಾಲೀಶು ಮಾಡಬೇಕು. ಇದು ಪರಿಮಳಯುಕ್ತವಾದ ತೈಲ. ಇದರಿಂದ ಮಾಂಸಖಂಡಗಳ ನೋವು ಶಮನವಾಗುತ್ತದೆ ಹಾಗೂ ಮನಸ್ಸು ಸಹ ಪ್ರಫ‌ುಲ್ಲವಾಗುತ್ತದೆ.

ಕೊಬ್ಬರಿ ಎಣ್ಣೆ 1/4 ಕಪ್‌ಗೆ 1/4 ಕಪ್‌ ಒಂದೆಲಗ ಅಥವಾ ಉರಗ/ಬ್ರಾಹ್ಮಿà ಎಲೆಯ ರಸ ಬೆರೆಸಿ ಚೆನ್ನಾಗಿ ಕುದಿಸಿ ಆರಿದ ಬಳಿಕ ಬಾಟಲಲ್ಲಿ ಸಂಗ್ರಹಿಸಿಡಬೇಕು. ಇದರಿಂದ ಚೆನ್ನಾಗಿ ತಲೆಕೂದಲಿಗೆ ಮಾಲೀಶು ಮಾಡಿ ಅರ್ಧ-ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ನಿದ್ರಾಕಾರಕ, ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ, ಒತ್ತಡ ನಿವಾರಕ ಹಾಗೂ ತಂಪು.

ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.