ನಿನ್ನ ಕೆಲಸ ಉಳೀಬೇಕಂದ್ರೆ ಅವನ ಕೆಲಸ ಕಿತ್ತುಕೋ!


Team Udayavani, Jun 3, 2017, 3:45 AM IST

IT-compay-02.jpg

ಬೆಂಗಳೂರು: ತಮಗಾಗುತ್ತಿರುವ ನಷ್ಟ ತಗ್ಗಿಸಿಕೊಳ್ಳಲು ಐಟಿ ಕಂಪನಿಗಳು ಈಗ ಉದ್ಯೋಗಿಗಳ ನಡುವೆಯೇ ವೈಮನಸ್ಸು ತಂದಿಡುವ ಕೆಲಸಕ್ಕೆ ಕೈಹಾಕಿವೆ ಎಂಬ ಆರೋಪಗಳು ಕೇಳಿಬರುತ್ತಿವೆ!

ಸಾಮಾನ್ಯವಾಗಿ ನಷ್ಟ ಸರಿದೂಗಿಸಿಕೊಳ್ಳಲು ಉದ್ಯೋಗಿಗಳನ್ನು ಬೇರೆ ಬೇರೆ ಕಾರಣ ನೀಡಿ ಮನೆಗೆ ಕಳಿಸಲಾಗುತ್ತದೆ. ಇಲ್ಲಿ ಅದೇ ಪ್ರಕ್ರಿಯೆ ನಡೆಯುತ್ತಿವೆಯಾದರೂ, ಒಬ್ಬ ಉದ್ಯೋಗಿ ತನ್ನ ಕೆಲಸ ಉಳಿಸಿಕೊಳ್ಳಬೇಕೆಂದರೆ ಮತ್ತೂಬ್ಬ ಸಹೋದ್ಯೋಗಿಯ ಕೆಲಸ ಕಿತ್ತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಐಟಿ ಕಂಪನಿಗಳಲ್ಲಿ ನಿರ್ಮಾಣವಾಗಿವೆ. ಈ ಬಗ್ಗೆ ಸ್ವತಃ ಉದ್ಯೋಗಿಗಳೇ ಹೇಳಿಕೊಂಡಿದ್ದಾರೆ. ಐಟಿ ಸಂಸ್ಥೆಗಳು ಈ ಮೂಲಕ ತಮಾಷೆ ನೋಡುತ್ತಿವೆ ಎಂದು ಆರೋಪಿಸಿದ್ದಾರೆ.

ಕೆಲ ಕಂಪನಿಗಳಲ್ಲಿ ಉದ್ಯೋಗಿಗೆ ನೇರವಾಗಿ ಕರೆ ಮಾಡುವ ಎಚ್‌ಆರ್‌, “”ನಿಮ್ಮ ವೇತನ ಕಂಪನಿಗೆ ಭಾರವಾಗಿದೆ. ಒಂದೋ ನೀವು ಕೆಲಸ ತೊರೆಯಿರಿ, ಇಲ್ಲವೇ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೆಂದು ರೆಫ‌ರ್‌ ಮಾಡಿ,’ ಎಂಬ ನಂಬಲಸಾಧ್ಯ ಆಫ‌ರ್‌ಗಳನ್ನು ನೀಡುತ್ತಿದ್ದಾರೆ ಎಂದು ನ್ಯೂಸ್‌-18 ವರದಿ ಮಾಡಿದೆ.

ಐಟಿ ಕಂಪನಿಗಳು ತಮ್ಮಲ್ಲಿನ ವೃತ್ತಿಪರರ ಜತೆ ಆಡುತ್ತಿರುವ ಈ ಮ್ಯೂಜಿಕಲ್‌ ಚೇರ್‌ ಆಟಕ್ಕೆ ಮಧ್ಯವರ್ತಿಯಾಗಿ ಬಳಕೆಯಾಗಿರುವುದು ಕಂಪನಿಗಳ ಎಚ್‌ಆರ್‌ ಮ್ಯಾನೇಜರ್‌ಗಳು. ಕಂಪನಿಗೆ ಹೆಚ್ಚು ವೆಚ್ಚದಾಯಕ ಎನಿಸಿರುವ ಉದ್ಯೋಗಿಗಳನ್ನು ಗುರುತಿಸಿ, ಮೇಲಿನವರ ಆದೇಶದಂತೆ ಮನೆಗೆ ಕಳುಹಿಸುವ ಧಾವಂತದಲ್ಲಿ ಅತ್ಯಂತ ಕಡಿಮೆ ವೇತನ (ಪೇ ಆಫ್) ಪಡೆದು ಕೆಲಸ ತೊರೆಯಲು ಹೇಳುತ್ತಿದ್ದಾರೆ. ಎಚ್‌ಆರ್‌ಗಳನ್ನು ಮುಂದಿಟ್ಟುಕೊಂಡು ಐಟಿ ಕಂಪನಿಗಳು ನಡೆಸುತ್ತಿರುವ ಈ ಕಣ್ಣಾ ಮುಚ್ಚಾಲೆ ಆಟದಿಂದ ನೊಂದಿರುವ ಉದ್ಯೋಗಿಗಳೇ ಈ ಕುರಿತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತಿದ್ದಾರೆ.

“ಕಳೆದ ತಿಂಗಳ 23ರಂದು ಎಚ್‌ಆರ್‌ ಮ್ಯಾನೇಜರ್‌ ಕರೆ ಮಾಡಿ ಭೇಟಿಯಾಗಲು ತಿಳಿಸಿದರು. ಅದರಂತೆ ಹೈದರಾಬಾದ್‌ನಲ್ಲಿದ್ದ ಎಚ್‌.ಆರ್‌. ಮುಖ್ಯಸ್ಥರ ಜತೆ ವೀಡಿಯೋ ಚಾಟ್‌ ಮಾಡುವಾಗ, ನಿನಗೆ 2 ವಾರ‌ ಕಾಲಾವಕಾಶ ಮತ್ತು 2 ತಿಂಗಳ ಮೂಲ ವೇತನ ಕೊಡುತ್ತೇವೆ. ಕೆಲಸ ಬಿಟ್ಟುಬಿಡು ಎಂದರು,’ ಎಂದು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯ ಹಿರಿಯ ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

“29ರಂದು ಮತ್ತೂಮ್ಮೆ ಕರೆ ಮಾಡಿ ನೀವೇಕೆ ಇನ್ನೂ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದರು. ರಾಜೀನಾಮೆ ಕೊಡುವುದಿಲ್ಲ ಎಂದೆ. ಹಾಗಾದರೆ ನಿಮ್ಮ ಕಾಂಟ್ರಾಕ್ಟ್ ಟರ್ಮಿನೇಟ್‌ ಮಾಡುತ್ತೇವೆ. ಆಗ ನಿಮಗೆ ಬೇರಾವ ಕಂಪನಿಯಲ್ಲೂ ಕೆಲಸ ಸಿಗುವುದಿಲ್ಲ ಎಂದು ಬೆದರಿಸಿದರು. 31ರಂದು ಮತ್ತೂಮ್ಮೆ ಕರೆ ಮಾಡಿ, “ನೀನು ನಿನ್ನ ಬದಲಿಗೆ ಮತ್ತೂಬ್ಬ ಉದ್ಯೋಗಿಯ ಹೆಸರು ಸೂಚಿಸಿದರೆ ಆತನನ್ನು ಕೆಲಸದಿಂದ ಕಿತ್ತೆಸೆದು, ನಿನ್ನನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚಿಸುತ್ತೇವೆ’ ಎಂಬ ವಿಚಿತ್ರ ಆಫ‌ರ್‌ ಕೊಟ್ಟರು! ಅದೇ ದಿನ ನನಗೆ ಆಟೋಮೇಟೆಡ್‌ ಇಮೇಲ್‌ ಒಂದು ಬಂತು. “ಕಂಪನಿಯಲ್ಲಿ ಇದು ನಿನ್ನ ಕೊನೆಯ ದಿನ. ಇಂದಿನಿಂದ ನಿನಗೆ ನೀಡಿರುವ ಕಂಪನಿ ಇಮೇಲ್‌ ಐಡಿ ಹಾಗೂ ಇತರ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ,’ ಎಂದು ಮೇಲ್‌ನಲ್ಲಿ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಎಚ್‌.ಆರ್‌. ವಿಭಾಗದಿಂದ ಯಾವುದೇ ಅಧಿಕೃತ ಕರೆ ಬರಲಿಲ್ಲ,’ ಎಂದು ನೊಂದ ಉದ್ಯೋಗಿ ಆರೋಪಿಸಿದ್ದಾರೆ.

ಕಾರ್ಮಿಕ ಆಯುಕ್ತರ ಮೊರೆ
ಹೀಗೆ ಕಂಪನಿ ವಿರುದ್ಧ ಆರೋಪ ಮಾಡಿರುವ ಅನಾಮಧೇಯ ವ್ಯಕ್ತಿ, ಇತರ ಪ್ರತಿಷ್ಠಿತ ಕಂಪನಿಗಳ ಮೂವರು ಉದ್ಯೋಗಿಗಳೊಂದಿಗೆ, ರಾಜ್ಯ ಸರ್ಕಾರದ ಕಾರ್ಮಿಕ ಆಯುಕ್ತರ ಮೊರೆ ಹೋಗಿ, ನ್ಯಾಯ ಕೇಳಲು ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಐಟಿ ಉದ್ಯೋಗಿಗಳ ಒಕ್ಕೂಟದ (ಎಫ್ಐಟಿಇ) ಸಂಯೋಜಕ ರಾಜೇಶ್‌, “ಯಾವುದೇ ಕಾರಣವಿಲ್ಲದೇ ಉದ್ಯೋಗದಿಂದ ತೆಗೆಯಲಾಗಿದೆ ಎಂಬ ದೂರು ಹೇಳಿಕೊಂಡು ದಿನಕ್ಕೆ 10ಕ್ಕೂ ಹೆಚ್ಚು ಮಂದಿ ಕರೆ ಮಾಡುತ್ತಿದ್ದಾರೆ. ಉದ್ಯೋಗಿಗಳನ್ನು ಕರೆದು, ರಾಜೀನಾಮೆ ನೀಡುವಂತೆ ಕೇಳುವ ಹಂತಕ್ಕೆ ಐಟಿ ಕಂಪನಿಗಳು ಇಳಿದಿವೆ,’ ಎಂದಿದ್ದಾರೆ.

ಅಲ್ಲದೆ ಈವರೆಗೆ “ಪ್ರತ್ಯೇಕ ಸಂಘಟನೆ’ ಬಗ್ಗೆ ಆಲೋಚನೆ ಕೂಡ ಮಾಡಿರದ ಐಟಿ ಉದ್ಯೋಗಿಗಳು, ತಮ್ಮ ವೃತ್ತಿಗೆ ಕಂಟಕ ಬಂದಿರುವ ಈ ಸಂದರ್ಭದಲ್ಲಿ ಸಂಘಟನೆ ಹುಟ್ಟುಹಾಕುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ಕೆಲ ಉದ್ಯೋಗಿಗಳು ಎಚ್‌ಆರ್‌ಗಳ ಸಲಹೆ ಮೇರೆಗೆ, ಕೆಲಸದಿಂದ ಕಿತ್ತೆಸೆಯಲು ಇತರ ಸಹೋದ್ಯೋಗಿಗಳ ಹೆಸರು ಸೂಚಿಸಿ ತಮ್ಮ ಕೆಲಸ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್

ಸಚಿವ ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋಸ್ಟೋನ್‌! : ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋಸ್ಟೋನ್‌! : ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

11

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

New laws: “ಜುಲೈ 1ರಿಂದ ಐಪಿಸಿ ಕಾಯ್ದೆ ಇರಲ್ಲ, ಬದಲಿಗೆ ಬಿಎನ್‌ಎಸ್‌ ಕಾಯ್ದೆ ಜಾರಿ’

Congress ಮೇಲ್ಮನೆ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು

Congress ಮೇಲ್ಮನೆ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

ರಾಜೀನಾಮೆ ಮಾತೇ ಇಲ್ಲ: ಸಚಿವ ನಾಗೇಂದ್ರ

ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ: ರಾಜೀನಾಮೆ ಮಾತೇ ಇಲ್ಲ; ಸಚಿವ ನಾಗೇಂದ್ರ

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

11-

First Rain: ರಂಗು ರಂಗಿನ ಮೊದಲ ಮಳೆ

10-ramana-avathara

Movie Review: ಸಿನೆರಂಗ; ರಾಮನ ಅವತಾರ

ಸಚಿವ ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋಸ್ಟೋನ್‌! : ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋಸ್ಟೋನ್‌! : ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.