ಮುಗನೂರು ತ್ರಿವಳಿ ಕೊಲೆ: ಐವರ ಬಂಧನ
Team Udayavani, Jul 18, 2017, 12:32 PM IST
ಸೇಡಂ: ತಾಲೂಕಿನ ಮುಗನೂರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ತ್ರಿವಳಿ ಕೊಲೆ ಪ್ರಕರಣ ಸೋಮವಾರ ತೀವ್ರ ಸ್ವರೂಪ ಪಡೆದಿತ್ತು.
ಸೋಮವಾರ ಮಧ್ಯಾಹ್ನ ಮೃತರ ದೇಹ ಪಟ್ಟಣಕ್ಕೆ ಆಗಮಿಸುತ್ತಲೇ ಕಲಬುರಗಿ-ಚಿಂಚೋಳಿ ಕ್ರಾಸ್ ಬಳಿ ಜಮಾಯಿಸಿದ್ದ ಕೋಲಿ ಸಮಾಜದ ನೂರಾರು ಜನ ಗಂಟೆಗಟ್ಟಲೇ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕೊಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಕೊಲೆಗೆ ಪ್ರೋತ್ಸಾಹಿಸಿದವರನ್ನು ಗಡಿಪಾರು ಮಾಡಬೇಕು ಮತ್ತು ಮರಣದಂಡನೆ ವಿಧಿ ಸಬೇಕು. ಕೊಲೆಯಾದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಾಜಿ ಜಿಪಂ ಸದಸ್ಯೆ ಶೋಭಾ ಬಾಣಿ ಮಾತನಾಡಿ, ಕೊಲೆಗಡುಕರು ಮುಗನೂರ ಈ ಪರಿಸರದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರು. ಆದರೂ ಪೊಲೀಸರು ಗಮನಹರಿಸಿಲ್ಲ. ಇಂತಹ ಚಟುವಟಿಕೆ ಮುಂದೆ ದೊಡ್ಡ ಪ್ರಕರಣವಾಗಬಲ್ಲವು ಎನ್ನುವ ಪರಿವೆಯೂ ಅವರಿಗಿರಲಿಲ್ಲವೇ? ಕೂಡಲೇ ಅನ್ಯಾಯ ಮಾಡಿದವರಿಗೆ ಮರಣದಂಡನೆ ವಿಧಿಸಬೇಕು, ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು
ಎಚ್ಚರಿಸಿದರು.
ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡ ಶರಣಪ್ಪ
ತಳವಾರ, ಕೋಲಿ ಸಮಾಜ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ಯಾದಗಿರಿ ಅಧ್ಯಕ್ಷ ಉಮೇಶ ಮುದ್ನಾಳ, ಮುಕ್ರಂಖಾನ್, ಮಾಜಿ ಜಿಪಂ ಸದಸ್ಯ ಶ್ರೀನಾಥ ಪಿಲ್ಲಿ, ರಾಜಗೋಪಾಲರೆಡ್ಡಿ, ಸಿದ್ದು ಬಾನಾರ, ಜಗನ್ನಾಥ ಪಾಟೀಲ, ತಾಲೂಕಾಧ್ಯಕ್ಷ ಭೀಮರಾವ ಅಳ್ಳೊಳ್ಳಿ, ಯುವ ಸೇನೆ ಅಧ್ಯಕ್ಷ ರುದ್ರು ಪಿಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಿಗಿ ಬಂದೋಬಸ್ತ್
ಮುಗನೂರ ತ್ರಿವಳಿ ಕೊಲೆ ಪ್ರಕರಣದಿಂದಾಗಿ ಸೋಮವಾರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಐಜಿಪಿ ಅಲೋಕಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಎಸ್ಪಿ ಶಶಿಕುಮಾರ ಗ್ರಾಮದಲ್ಲೇ ಬಿಡಾರ ಹೂಡಿದ್ದಾರೆ. ಸಿಪಿಐ ಪಂಚಾಕ್ಷರಿ ಸಾಲಿಮಠ, ತಮ್ಮಾರಾಯ ಪಾಟೀಲ, ಪ್ರಭು ದುಧಗಿ, ಪಿಎಸ್ಐಗಳಾದ ನಟರಾಜ ಲಾಡೆ, ಪಟೇಲ,
ಸಂತೋಷ ರಾಠೊಡ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhu Bangarappa ಬಿಜೆಪಿಯವರು ಕಲಾಂ ಹೇರ್ಕಟ್ ಬಗ್ಗೆ ಮಾತನಾಡುವರೇ?
Bantwala: ಪದ್ಮನಾಭ ಸಾಮಂತ್ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ
Bengaluru ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರ ಬಂಧನ
Shivamogga; ಚಂದ್ರಶೇಖರ ನಿವಾಸದಲ್ಲಿ ಸಿಐಡಿ ತಂಡ ತನಿಖೆ: ಪೆನ್ ಡ್ರೈವ್ ವಶಕ್ಕೆ
Kaup: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿ