ಸ್ವಗ್ರಾಮದಲ್ಲೇ ಕೆಲಸ ಕೊಡಿ
Team Udayavani, Jul 18, 2017, 3:10 PM IST
ಗೊರೇಬಾಳ: ನರೇಗಾ ಯೋಜನೆಯಡಿ ತಮ್ಮ ಗ್ರಾಮದಲ್ಲಿಯೇ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ತಿಮ್ಮಾಪುರ ಗ್ರಾಮದ ಕೂಲಿಕಾರರು ಬಾದರ್ಲಿ ಗ್ರಾಪಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.
ಬಾದರ್ಲಿ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ ಗ್ರಾಮದ ಕೂಲಿಕಾರರಿಗೆ ಸ್ವಗ್ರಾಮ ಬಿಟ್ಟು ಆರ್.ಎಚ್.ನಂ-5ರಲ್ಲಿ ನರೇಗಾ ಯೋಜನೆಯಡಿ ಸ್ಮಶಾನದ ಕೆಲಸ ನೀಡಲಾಗಿದೆ. ನಮ್ಮೂರಿನಲ್ಲೇ ಕೆಲಸ ಮಾಡಲು ಅವಕಾಶಗಳಿವೆ. ಆದರೆ ಅಧಿಕಾರಿಗಳು ನಮ್ಮೂರು ಬಿಟ್ಟು ಬೇರೆ ಊರಿನಲ್ಲಿ ಕೆಲಸ ನೀಡುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಗ್ರಾಪಂ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೂಲಿಕಾರರ ಸಂಘದ ಮುಖಂಡ ಹುಲಿಗೆಯ್ಯ ಮಾತನಾಡಿ, ನಮ್ಮೂರಿನಲ್ಲಿ ಕೆಲಸ ಮಾಡಲಿಕ್ಕೆ ಅವಕಾಶವಿದೆ. ಜೆಇ ಹಾಗೂ ಪಿಡಿಒ ಅವರು ಬಾದರ್ಲಿ ಗ್ರಾಮದ ಕೂಲಿಕಾರರನ್ನು ತಿಮ್ಮಾಪುರಕ್ಕೆ ಹಾಕಿದ್ದಾರೆ. ತಿಮ್ಮಾಪುರ ಗ್ರಾಮದವರಿಗೆ ಆರ್.ಎಚ್.ನಂ-5ರ ಸ್ಮಶಾನದ ಕೆಲಸ ನೀಡಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆಯಾಗಿದೆ. ನಮ್ಮೂರಿನಲ್ಲಿಯೇ ನಮಗೆ ಕೂಲಿ ಕೆಲಸ ನೀಡಿದರೆ ಮಾತ್ರ ನಮಗೆ ಒಳ್ಳೆಯ ಕೂಲಿ ಸಿಗುತ್ತದೆ. ಬೇರೆ ಊರಿಗೆ ಬಂದು ಕೆಲಸ ಮಾಡುವುದರಿಂದ ಕೂಲಿಯೂ ಕಡಿಮೆ ಬಿದ್ದಿದೆ
ಎಂದು ಆರೋಪಿಸಿದರು.
ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿ, ನರೇಗಾ ಯೋಜನೆಯಡಿ ನಿಯಮಗಳನ್ನು ಮೀರಿ ಬೇರೆ ಕಡೆ ಕೆಲಸ ನೀಡಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಸಿಎಸ್ಎಫ್ ಕ್ಯಾಂಪಿನಲ್ಲಿ ಕೆಲಸ ಮಾಡಲು ಕಳುಹಿಸಿದ ಸಂದರ್ಭದಲ್ಲಿ ನಡೆದ ಟ್ರ್ಯಾಕ್ಟರ್ ದುರಂತದಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದರು. ಇದಕ್ಕೆ ಜಿಪಂ ಸಿಇಒ, ತಾಪಂ ಇಒ ನೇರ ಹೊಣೆ ಆಗಿದ್ದಾರೆ ಎಂದು
ಆರೋಪಿಸಿದರು. ಕೂಲಿಕಾರರಿಗೆ ಸ್ವಗ್ರಾಮದಲ್ಲೇ ಕೆಲಸ ನೀಡಬೇಕು. ಶಾಸಕರು ಹೇಳಿದಲ್ಲಿ ಮಾತ್ರ ಹೆಚ್ಚಿಗೆ ಕೂಲಿ ಹಣ
ನೀಡಲಾಗುತ್ತಿದೆ. ಬೇರೆ ಪಕ್ಷದವರಿದ್ದರೆ ಅವರಿಗೆ ಕಡಿಮೆ ಕೂಲಿ ಹಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ
ಜೆಡಿಎಸ್ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯ ಸೋಮಶೇಖರಗೌಡ, ಮುಖಂಡರಾದ ಉಪ್ಪಳಪ್ಪ ಗಿಣಿವಾರ, ಪಂಪಾಪತಿ, ಮಂಜುನಾಥ, ಕನಕಪ್ಪ,
ಪಾಲಮ್ಮ, ಪಾರ್ವತೆಮ್ಮ, ಹುಲಿಗೆಮ್ಮ, ಮಂಜುನಾಥ, ಶ್ರೀದೇವಿ, ಯಂಕಮ್ಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur : ರಾಷ್ಟ್ರಗೀತೆಗೆ ಗೌರವ ಸಲ್ಲಿಸಿ ನಿಂತ ಚಿಂದಿ ಆಯುವ ಬಾಲಕ; ವಿಡಿಯೋ ವೈರಲ್
ಪ್ರೇರಣೆ ನೀಡಿದ ಪ್ರವಚನ-ಆನ್ಲೈನ್ನಿಂದ ಗಡಿ ದಾಟಿದ ರಾಯಚೂರು ಮಾವು!
C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್
Raichur: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಅಂಗಡಿ… ಲಕ್ಷಾಂತರ ರೂ. ನಷ್ಟ
K Annamalai; ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಅಣ್ಣಾಮಲೈ
MUST WATCH
ಹೊಸ ಸೇರ್ಪಡೆ
Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ
Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ
Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ
TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್