ವಿರಾಟನ ಆಶ್ರಯ


Team Udayavani, Jul 20, 2017, 5:20 AM IST

purana2.jpg

ಪಾಂಡವರ ವನವಾಸದ ಅವಧಿ ಹನ್ನೆರಡು ವರ್ಷಗಳು ಕಳೆದವು. ಅವರು ವೇಷ ಮರೆಸಿಕೊಂಡು ಯಾರಿಗೂ ಗುರುತು ತಿಳಿಯದಂತೆ ಒಂದು ವರ್ಷವನ್ನು ಕಳೆಯಬೇಕಾಗಿತ್ತು. ಯುಧಿಷ್ಠಿರನು ಒಂದು ದಿನ ತಮ್ಮಂದಿರನ್ನು ಕರೆದು, ತಾವು ಅಜ್ಞಾತವಾಸದ ಅವಧಿಯನ್ನು ಎಲ್ಲಿ ಕಳೆಯಬೇಕು? ಯಾರು ಯಾರು ಯಾವ ವೇಷಗಳನ್ನು ಧರಿಸಬೇಕು? ಎಂದು ಸಮಾಲೋಚಿಸಿದ. ಮತ್ಸé ದೇಶದ ರಾಜ ವಿರಾಟ. ಅವನು ಶೂರ, ಧರ್ಮಿಷ್ಠ, ಉದಾರಿ. ಆದ್ದರಿಂದ ಅವನ ರಾಜ್ಯದಲ್ಲಿರುವುದೇ ಕ್ಷೇಮ ಎಂದು ತೀರ್ಮಾನಿಸಿದರು. ಯುಧಿಷ್ಠಿರನು ತಾನು ಬ್ರಾಹ್ಮಣನ ವೇಷವನ್ನು ಧರಿಸಿ, ಕಂಕನೆಂಬ ಹೆಸರಿನಿಂದ, ರಾಜನ ಆಸ್ಥಾನವನ್ನು ಸೇರುವೆನೆಂದನು. ಭೀಮನು ತಾನು ಅರಮನೆಯಲ್ಲಿ ಅಡುಗೆಯವನಾಗಿ “ಬಲ್ಲವ’ ಎಂಬ ಹೆಸರನ್ನು ಇಟ್ಟುಕೊಳ್ಳುವುದಾಗಿ ಹೇಳಿದ. ಅರ್ಜುನನು “ಬೃಹನ್ನಳೆ’ ಎಂಬ ಹೆಸರಿಟ್ಟುಕೊಂಡು ಹೆಂಗಸಿನ ವೇಷದಲ್ಲಿ ಅರಮನೆಯಲ್ಲಿ ಸಂಗೀತ, ನೃತ್ಯಗಳನ್ನು ಹೇಳಿಕೊಡುವೆನೆಂದ. ನಕುಲನಿಗೆ ಅಶ್ವವಿದ್ಯೆ ಚೆನ್ನಾಗಿ ತಿಳಿದಿತ್ತು. ಅವನು “ಗ್ರಂಥಿಕ’ ಎಂಬ ಹೆಸರಿನಿಂದ ವಿರಾಟ ರಾಜನ ಕುದುರೆಗಳನ್ನು ನೋಡಿಕೊಳ್ಳಲು ನಿರ್ಧರಿಸಿದ. ಸಹದೇವನು “ತಂತ್ರಿಪಾಲ’ ಎಂದು ಹೆಸರಿಟ್ಟುಕೊಂಡು ವಿರಾಟನ ಗೋರಕ್ಷಕನಾಗುತ್ತೇನೆ ಎಂದ. ದ್ರೌಪದಿಯು “ಸೈರಂಧ್ರಿ’ ಎಂದು ಹೆಸರಿಟ್ಟುಕೊಂಡು ವಿರಾಟ ರಾಜನ ಹೆಂಡತಿ ಸುದೇಷ್ಣೆಯ ಸಖೀಯಾಗುವುದಾಗಿ ಹೇಳಿದಳು.

ಪಾಂಡವರು ತಮ್ಮೊಡನೆ ಇದ್ದವರನ್ನೆಲ್ಲ ಕಳುಹಿಸಿಬಿಟ್ಟರು. ಋಷಿಗಳಿಗೆ ಮತ್ತು ತಪಸ್ವಿಗಳಾದ ಬ್ರಾಹ್ಮಣರಿಗೆ ನಮಸ್ಕಾರ ಮಾಡಿ ತಾವಷ್ಟೇ ಜನ ಮುಂದಕ್ಕೆ ಹೊರಟರು. ವಿರಾಟನಗರದ ಸ್ಮಶಾನದ ಹತ್ತಿರಕ್ಕೆ ಬಂದಾಗ ದೊಡ್ಡದೊಂದು ಬನ್ನಿ ಮರ ಕಂಡಿತು. ತಮ್ಮ ಶಸ್ತ್ರಾಸ್ತ್ರಗಳನ್ನು ಮೂಟೆ ಕಟ್ಟಿ ಅದಕ್ಕೆ ತೂಗು ಹಾಕಿದರು. ಅಲ್ಲಿದ್ದ ದನಕಾಯುವ ಹುಡುಗರಿಗೆ, “ನಮ್ಮ ತಾಯಿ ಸತ್ತುಹೋದಳು. ಸತ್ತವರ ಹೆಣವನ್ನು ಮರಕ್ಕೆ ತೂಗು ಹಾಕುವುದು ನಮ್ಮ ಸಂಪ್ರಾದಯ’ ಎಂದು ಹೇಳಿದರು. ತಮ್ಮ ತಮ್ಮಲ್ಲಿ ಕ್ರಮವಾಗಿ ಜಯ, ಜಯಂತ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎನ್ನುವ ಹೆಸರುಗಳನ್ನಿಟ್ಟುಕೊಂಡರು. ಅನಂತರ ವಿರಾಟನಗರವನ್ನು ಪ್ರವೇಶಿಸಿದರು.

ಒಬ್ಬೊಬ್ಬರಾಗಿ ವಿರಾಟನ ಆಸ್ಥಾನಕ್ಕೆ ಮತ್ತು ಅರಮನೆಗೆ ಬಂದರು. ಅವರು ತೀರ್ಮಾನಿಸಿದ್ದಂತೆಯೇ ಅವನ ಆಶ್ರಯದಲ್ಲಿ ಕೆಲಸಕ್ಕೆ ಸೇರಿದರು. ಸುದೇಷ್ಣೆಗೆ ದ್ರೌಪದಿಯನ್ನು ಕಂಡು ಆಶ್ಚರ್ಯವಾಯಿತು. “ನೀನು ಅಪ್ರತಿಮ ಸುಂದರಿ. ನಿನ್ನನ್ನು ಕಂಡರೆ ಅರಸನೂ ಮೋಹಿಸಿಯಾನು. ಇತರ ಗಂಡಸರೂ ನಿನ್ನನ್ನು ಮೋಹಿಸಬಹುದು’ ಎಂದು ಹೇಳಿ ಅವಳನ್ನು ತನ್ನ ಪರಿವಾರಕ್ಕೆ ಸೇರಿಸಿಕೊಳ್ಳಲು ಹಿಂಜರಿದಳು. ಆದರೆ ದ್ರೌಪದಿ, “ನನಗೆ ಐದು ಜನ ಗಂಧರ್ವರು ಪತಿಗಳು ಅವರು ಸದಾ ನನ್ನ ರಕ್ಷಣೆಗಿರುತ್ತಾರೆ. ಯಾರಾದರೂ ನನಗೆ ಅಪಚಾರ ಮಾಡಿದರೆ ಅವರ ಸಾವು ಖಂಡಿತ. ನನ್ನನ್ನು ಆದರದಿಂದ ನೋಡಿಕೊಂಡವರಿಗೆ ಒಳಿತನ್ನು ಮಾಡುತ್ತಾರೆ’ ಎಂದಳು. ಸುದೇಷ್ಣೆಯು ಅವಳನ್ನು ತನ್ನ ಪರಿವಾರದಲ್ಲಿ ಸೇರಿಸಿಕೊಂಡಳು. ಅವರೆಲ್ಲರೂ ತಾವು ಯುಧಿಷ್ಠಿರನ ಸೇವೆಯಲ್ಲಿ ಅವನ ಅರಮನೆಯಲ್ಲಿ ಇದ್ದವರು ಎಂದು ಹೇಳಿಕೊಂಡರು. ಹೀಗೆ ಪಾಂಡವರ ಆಜ್ಞಾತವಾಸ ಪ್ರಾರಂಭವಾಯಿತು.

ಹತ್ತು ತಿಂಗಳ ಕಾಲವನ್ನು ಅವರು ಹೀಗೆ ಕಳೆದರು. ಒಬ್ಬರಿಗೊಬ್ಬರು ಆಧಾರವಾಗಿ ಸಾಧ್ಯವಾದಾಗ ತಮ್ಮ ತಮ್ಮಲ್ಲಿ ಮಾತನಾಡಿಕೊಂಡು ಕಾಲ ಕಳೆದರು.

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌
ಅವರ “ಕಿರಿಯರ ಭಾಗವತ’ ಪುಸ್ತಕದಿಂದ

ಟಾಪ್ ನ್ಯೂಸ್

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.