ಯುದ್ಧಕ್ಕೂ ಮುನ್ನ ಸೂತ್ರಾಭ್ಯಾಸ: ಗೆಳತಿ ಜತೆ ವಾದ ನಿಲ್ಲಿಸಲು 5 ಸೂತ್ರ


Team Udayavani, Aug 1, 2017, 12:22 PM IST

01-JOSH-2.jpg

ಒಬ್ಬರು ವೃದ್ಧ ದಂಪತಿಗೆ, “ನಿಮ್ಮ ದೀರ್ಘ‌ ಕಾಲದ ದಾಂಪತ್ಯದ ಗುಟ್ಟೇನು?’ ಎಂದು ಪ್ರಶ್ನಿಸಿದಾಗ ತಾತ, “ನನಗೆ ಕಿವಿ ಕೇಳುವುದಿಲ್ಲ’ ಎಂದರಂತೆ! ಆದರೆ, ಇಂದಿನ ಯುವಜೋಡಿಗಳಿಗೆ ಕಿವಿ ಮತ್ತು ಬಾಯಿ ಸ್ವಲ್ಪ$ಜಾಸ್ತಿ ಕೆಲಸ ಮಾಡುತ್ತದೆ! ಪರಿಣಾಮವಾಗಿ, ವಾಗ್ವಾದ, ಜಗಳ, ಬ್ರೇಕಪ್‌ ಎಲ್ಲವೂ ತೀರಾ ಸಾಮಾನ್ಯ ಎನ್ನುವಂತೆ ಕಂಡುಬರುತ್ತವೆ.

ಬಹಳಷ್ಟು ಸಲ ಹುಡುಗರು ದುಡುಕಿ ಸುಖಾಸುಮ್ಮನೆ ಜಗಳವಾಡಿ ಆಮೇಲೆ ಒಬ್ಬರೇ ಕುಳಿತು ಹಣೆ ಹಣೆ ಚಚ್ಚಿಕೊಳ್ಳುತ್ತಾರೆ. ನಂತರ ಥತ್‌, ನಾನು ಆವೇಶದಲ್ಲಿ ಮಾತಾಡಿಬಿಟ್ಟೆ ಎಂದುಕೊಂಡು ಅದೇ ಬೇಸರದಲ್ಲಿ ಗುಂಡುಹಾಕಿ ಪಶ್ಚಾತ್ತಾಪ ಪಡುತ್ತಾರೆ. ಎಲ್ಲ ಸಮಸ್ಯೆಗಳಿಗೂ ಬಗೆಬಗೆಯ ಸೂತ್ರಗಳಿರುವ ಈ ದಿನಗಳಲ್ಲಿ, ಗೆಳತಿಯೊಂದಿಗಿನ ವಾದ ನಿಲ್ಲಿಸಲು ಕೆಲವು ಜಾಣ ಸಲಹೆಗಳು ಇಲಿವೆ…

1. ಯಾವುದೇ ಚಿಕ್ಕ ವಿಷಯಕ್ಕೆ ನಿಮ್ಮ ಹುಡುಗಿ ಬೇಸರಿಸಿಕೊಂಡು ಸಿಟ್ಟಾದರೆ, ನೀವು ಪ್ರತಿಯಾಗಿ ಸಿಟ್ಟು ಮಾಡಿಕೊಳ್ಳದಿರಿ. ಶಾಂತತೆಯನ್ನು ಕಾಪಾಡಿಕೊಳ್ಳಿ. ಗೆಳತಿಯ ಸಿಟ್ಟಿಗೆ ಮೂಲ ಕಾರಣವನ್ನು ಹುಡುಕುವ ಪ್ರಯತ್ನ ಮಾಡಿ.

2. ಜಗಳ, ವಾದಗಳೆಂದರೆ ಅಲ್ಲಿ ಕೆಟ್ಟಪದ ಬಯುಳಗಳದ್ದೇ ಕಾರುಬಾರು. ನೀವು ಕೆಟ್ಟ ಪದ ಬಳಸಿ ವಾದಿಸಿದರೆ ಅವರೂ ಅದೇ ದಾರಿ ಹಿಡಿಯಬಹುದು ಅಥವಾ ಆ ಹುಡುಗಿ ಬಹಳ ಸೂಕ್ಷ್ಮ ಮನಸ್ಸಿನವಳಾಗಿದ್ದರೆ, ನಿಮ್ಮ ಒರಟು ಮಾತನ್ನು ಕೇಳಿ ಶಾಕ್‌ ಆಗಿ, ಎದ್ದು ಹೋಗಿಬಿಡಬಹುದು. ಹಾಗಾಗಿ, ಜಗಳದ ಸಂದರ್ಭದಲ್ಲಿ ಆದಷ್ಟೂ ಸಂಭಾವಿತ ಭಾಷೆ ಬಳಸಿ.

3. ಹುಡುಗಿಯರು ಹುಡುಗರಿಗಿಂತ ಕೋಮಲ ದನಿಯುಳ್ಳವರು. ತಮ್ಮ ಹುಡುಗನೂ ತಮ್ಮಂತೆಯೇ ಮಾತಾಡಲಿ ಎಂದೇ ಅವರು ಆಸೆ ಪಡುತ್ತಾರೆ. ಆದರೆ, ಕೆಲವೊಂದು ಸನ್ನಿವೇಶದಲ್ಲಿ ಹುಡುಗರು ಸಾರ್ವಜನಿಕವಾಗಿ ಗೆಳತಿಗೆ ಏರು ಧ್ವನಿಯಲ್ಲಿ ಏಕವಚನ ಬಳಕೆ ಮಾಡಿ ಬಿಡುವುದುಂಟು. ಇದರಿಂದ ಸಂಬಂಧ ಶಾಶ್ವತವಾಗಿ ಹದಗೆಡಬಹುದು. ಹಾಗಾಗಿ, ಎಚ್ಚರಿಕೆಯಿಂದ ವ್ಯವಹರಿಸಿ. 

4. ಕೆಲ ಹುಡುಗರು ಗೆಳತಿಯರಿಗೆ ಮಾತಾಡುವ ಅವಕಾಶವನ್ನೇ ನೀಡುವುದಿಲ್ಲ. ಅವರ ಬೇಕು ಬೇಡಗಳಿಗೆ ಕಿವಿಯಾಗುವುದಿಲ್ಲ. ತಮ್ಮ ಬಗ್ಗೆಯೇ ಕೊಚ್ಚಿಕೊಳ್ಳುತ್ತಿರುತ್ತಾರೆ. ಅದರ ಬದಲಿಗೆ ಅವರಿಗೂ ಮಾತಾಡಲು ಅವಕಾಶ ನೀಡಿ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ, ಸಣ್ಣಪುಟ್ಟ ವ್ಯತ್ಯಾಸಗಳು ಮಾಯವಾಗಿ ಸ್ನೇಹ ಗಾಢವಾಗುವುದು.

5. ನಿಮ್ಮ ಕಡೆಯಿಂದ ಆಕಸ್ಮಿಕವಾಗಿ ತಪ್ಪು ಆಗಿರುತ್ತದೆ. ಅದು ಸಹಜವೇ… ಆದರೆ, ತಪ್ಪು$ಮಾಡಿದಾಗ, “ನಾನು ಗಂಡಸು. ನನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ’ ಎಂಬ ಅಹಂ ಒಳ್ಳೆಯದಲ್ಲ. ನಿಮ್ಮ ತಪ್ಪನ್ನು ನಿಮ್ಮ ಗೆಳತಿಗೆ ಹೇಳಿದರೆ, ಕ್ಷಮಾಯಾಧರಿತ್ರಿ ಗುಣದ ಹುಡುಗಿಯರು ಖಂಡಿತವಾಗಿಯೂ ಕ್ಷಮಿಸುವರು. ಆಗ ವಾಗ್ವಾದ, ಜಗಳಕ್ಕೆ ಆಸ್ಪದವಿರುವುದಿಲ್ಲ .

ಸಿ.ಜಿ. ವೆಂಕಟೇಶ್ವರ, ಗೌರಿಬಿದನೂರು

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.