ಸೇಮ್‌ ಪಿಂಚ್‌: ಸೋಲ್‌ಮೇಟ್‌; ಮನಸ್ಸು- ಮನಸ್ಸು ಒಂದೇ ಡ್ರೆಸ್ಸು! 


Team Udayavani, Aug 23, 2017, 9:21 AM IST

23-AVALU-5.jpg

ಜಗತ್ತಿನಲ್ಲಿ ಒಂದೇ ರೀತಿ ಏಳು ಮಂದಿ ಇರುತ್ತಾರಂತೆ. ಅಂಥವರು ಒಬ್ಬರಿಗೊಬ್ಬರು ಸಿಕ್ಕಾಗ ಮೂಕವಿಸ್ಮಿತರಾಗುತ್ತಾರಂತೆ. ಆದರೆ, ಒಂದೇ ರೀತಿಯ ಮನಸ್ಸು, ಆಲೋಚನೆ, ಅಭಿರುಚಿ ಇದ್ದವರು ಎದುರು- ಬದರಾಗುವುದು, ಬಾಳಿನ ಪಯಣದಲ್ಲಿ ಜತೆಗಾರರಾಗುವುದು ಅಪರೂಪ. ಅವರೇ “ಸೋಲ್‌ ಮೇಟ್‌’!

ಆಫೀಸಿನಲ್ಲಿ ಆಕೆ ಕೆಲಸದಲ್ಲಿ ಮುಳುಗಿದ್ದಳು. ಥಟ್ಟನೆ ಫೋನ್‌ ರಿಂಗಣಿಸಿತು. ಅತ್ತ ಕಡೆಯಿಂದ ದುಂಬಿಯ ದನಿ; “ನಾಳೆ ಸಿಗ್ತಿàರಾ? ಒಮ್ಮೆ ಮಾತಾಡ್ಬೇಕು’. ಇವಳು “ಸರಿ’ ಎಂದಳು. ಫೋನಿನಲ್ಲೇ ಮುಹೂರ್ತವೂ ಫಿಕ್ಸ್‌. “ನಿಮ್ಮ ಆಫೀಸಿಗೆ ಹತ್ತಿರವೇ, ನಿಮಗೆ ಹೆಚ್ಚು ತೊಂದರೆ ಕೊಡಲ್ಲ’ ಎನ್ನುತ್ತಾ ಭೇಟಿಯಾಗಬೇಕಾದ ಸ್ಥಳವನ್ನೂ ಆತ ಹೇಳಿದ. “ಬರಿ¤àರಾ? ಖಂಡಿತವಾಗಿ…’, ಅವನ ದನಿಯಲ್ಲಿ ಅದೇನೋ ಗೋಗರೆತ. ಇನ್ನಾéರೋ ಆಗಿದ್ದರೆ ಸತಾಯಿಸುತ್ತಿದ್ದಳೇನೋ! ಆ ದನಿಯಲ್ಲಿದ್ದ ಆದ್ರìತೆಗೆ ಈಕೆಯ ಮನಸ್ಸು ಮೆತ್ತಗಾಯಿತು. “ಆಗಲಿ ಬರ್ತೇನೆ, ನಾಳೆ ಸಂಜೆ ಆರೂವರೆಗೆ ಅಲ್ಲಿರ್ತೇನೆ, ಪಕ್ಕಾ’ ಎಂದುಬಿಟ್ಟಳು.

ಮಾರನೇ ದಿನ ಸಂಜೆ ಆರು ಗಂಟೆಯ ಮುಂಚೆ ಒಂದು ಮೆಸೇಜು; “ಬರ್ತಾ ಇದ್ದೀರಾ, ಅಲ್ವಾ?’. ಇದನ್ನು ನೋಡಿ, ಈಕೆಯ ಮೊಗದಲ್ಲಿ ಮುಗುಳು. “ಬರ್ತಾ ಇದ್ದೀನಿ’, ಅವಳ ಚುಟುಕು ಉತ್ತರ. ಕೆಲಸಗಳೆಲ್ಲ ಬೇಗ ಮುಗಿಸಿ, ತಲೆಕೂದಲಿಗೆ ಬಾಚಣಿಗೆಯಾಡಿಸಿ, ಸೀರೆಯ ನೆರಿಗೆ ಸರಿಪಡಿಸಿಕೊಂಡು, ಲಗುಬಗೆಯಿಂದ ಆರಕ್ಕೆ ಕಚೇರಿಯಿಂದ ಹೊರಟಳು. ಅವರು ಹೇಳಿದ ವಿಳಾಸ, ಅಷ್ಟೇನೂ ದೂರವಿರಲಿಲ್ಲ. ಆಟೋ ಬೇಡವೆನಿಸಿ, ನಡೆದೇ ಹೊರಟಳು. ಸಂಜೆಯ ತಂಗಾಳಿ, ಆಕೆಯ ಹೆಜ್ಜೆಗಳ ಆಯಾಸಕ್ಕೆ ಹಿತ ತುಂಬಿದ್ದವು. ಇಬ್ಬರ ನಡುವಿನ ಪರಿಚಯಕ್ಕೆ ದೊಡ್ಡ ಇತಿಹಾಸವೇನಿಲ್ಲ. ಒಂದು ಆಕಸ್ಮಿಕ ಸನ್ನಿವೇಶದಲ್ಲಿ, ಚಿಗುರಿದ ನಂಟು. ಇಬ್ಬರೂ ಸಾಹಿತ್ಯ ಪ್ರಿಯರು. ಕ್ಲಾಸಿಕ್‌ ಸಿನಿಮಾ ಅಂದ್ರೆ ಇಬ್ಬರಿಗೂ ಇಷ್ಟ. ಅವನು ಮಾತಿಗೆ ಕುಳಿತರೆ, ಈಕೆ ಮೈಮರೆತು ಕೇಳುತ್ತಿದ್ದಳು. ಇವಳ ನವಿರು ಮಾತು, ಮಾರ್ದವತೆ, ಮೌನಭಾಷೆ ಆತನಿಗೂ ಅದೇನೋ ಹಿತ. ಒಂದೇ ವಿಚಾರಧಾರೆ ಇರುವವರ ಮಧ್ಯೆ ಸ್ನೇಹವಾಗಲು ಎಷ್ಟು ಹೊತ್ತು ಬೇಕು?

ವೈಯುಕ್ತಿಕ ವಿಚಾರಗಳನ್ನು ಅವರೆಂದೂ ಮಾತಾಡಲಿಲ್ಲ. ಗಾಳಿ- ಮಳೆ, ಇಷ್ಟದ ಸಿನಿಮಾ, ಇತ್ತೀಚೆಗೆ ಓದಿದ ಒಂದು ಕತೆ, ಕಿವಿತುಂಬಿದ ಗಝಲ್‌… ಇವಿಷ್ಟೇ ಅವರ ಮಾತುಕತೆಯಲ್ಲಿ ಗಸ್ತು. ಕೆಲ ದಿನಗಳ ಸ್ನೇಹ, ಆತ್ಮೀಯತೆಗೆ ತಿರುಗಿತ್ತು. ಆಕೆ ಯಾವ ಪುಸ್ತಕ ಓದಿದರೂ, ಆ ಬಗ್ಗೆ ಆತನಲ್ಲಿ ಹೇಳಿಕೊಳ್ಳಬೇಕೆನಿಸುತ್ತಿತ್ತು. ಹಾಗಂತ ಅವರು ಎದುರಾ ಎದುರು ಕುಳಿತು ಚರ್ಚಿಸುತ್ತಿರಲಿಲ್ಲ. ಫೋನು ಇಲ್ಲವೇ ಮೆಸೇಜಿನಲ್ಲಿ ಈ ಸಂಭಾಷಣೆ. ಯಾವುದೇ ಕಳಂಕವಿಲ್ಲದ, ನಿರ್ಮಲ ಶುದ್ಧ ಸ್ನೇಹ. ಆಗ ತಾನೇ ಅರಳಿದ ಹೂವಿನಂಥ ಘಮ ಆ ಸ್ನೇಹದ್ದು. ಇಬ್ಬರಿಗೂ ಪರಸ್ಪರರ ಬಗ್ಗೆ ಅಪಾರ ಗೌರವ. ಇಬ್ಬರೂ ಪ್ರಬುದ್ಧರಾದ್ದರಿಂದ ವೈಯಕ್ತಿಕ ಬದುಕು ಈ ಸ್ನೇಹಕ್ಕೆ ಅಡ್ಡ ಬರುತ್ತಿರಲಿಲ್ಲ. ವೈಯಕ್ತಿಕ ಬದುಕನ್ನೂ, ಈ ಸ್ನೇಹವನ್ನು ಬೇರೆಯಾಗಿ ನೋಡುವ ಪ್ರಬುದ್ಧತೆ ಇಬ್ಬರಿಗೂ ಇತ್ತು. ಈ ಸ್ನೇಹದ ಪಯಣವನ್ನು ನೆನೆಯುತ್ತಾ ಹೆಜ್ಜೆ ಇಡುವಾಗ, ಆಕೆಗೆ ದಾರಿ ಮುಗಿದಿದ್ದೇ ತಿಳಿಯಲಿಲ್ಲ.

ಅವರು ಹೇಳಿದ ಜಾಗ ತಲುಪಿದ ಈಕೆ, “ಹೆಲೋ… ನಾನು ಇಲ್ಲಿದ್ದೇನೆ. ನೀವು ಎಲ್ಲಿದ್ದೀರಿ?’ ಎಂದು ಮೊಬೈಲಿನಲ್ಲಿ ಕೇಳಿದ್ದಳು. “ನಾನು ಇಲ್ಲೇ ಇದ್ದೇನೆ, ನೋಡಿ…’ ಎಂದು ಕೈ ತೋರಿಸುತ್ತಾ, ಆತ ಹೇಳಿದ. ತಿರುಗಿ ನೋಡಿದಾಕೆಗೆ ಕಂಡದ್ದು, ನೀಲಿ ಚೌಕಳಿ ಅಂಗಿಯಲ್ಲಿ ನಿಂತಿದ್ದ ಆತ. ಅವಳಿಗೆ ಗುರುತು ಸಿಗಲಿ ಎಂದು ಕೈ ವೇವ್‌ ಮಾಡಿದ. ತಾನು ಆ ಕಡೆ ಗಮನಿಸದೆ, ಫೋನಾಯಿಸಿದ್ದಕ್ಕೆ ಅವಳಿಗೆ ನಾಚಿಕೆಯಾಗಿತ್ತು. ತನ್ನೊಳಗೇ ನಗುತ್ತಾ ರಸ್ತೆ ಅವನತ್ತ ನಡೆದಳು. ಎರಡೂ ಕೈ ಜೋಡಿಸಿ ನಮಸ್ಕರಿಸಿದ ಆತ, “ಬನ್ನಿ’ ಎಂದು ಮುಂದೆ ನಡೆದಿದ್ದ. ಈಕೆ ತಲೆ ಎತ್ತಿ ನೋಡಿದಳು. ಈಗ ಕಂಡದ್ದು, ಜಗಮಗಿಸುತ್ತಿದ್ದ ಲೈಟಿನ ಬೆಳಕಲ್ಲಿ ಚಿತ್ತಾರವಾಗಿ ಬಿಡಿಸಿದ್ದ “ಸೋಲ್‌ ಮೇಟ್‌’ ಎಂಬ ಫ‌ಲಕ.

“ಸೋಲ್‌ ಮೇಟ್‌’ ಒಂದು ರೆಸ್ಟೋರೆಂಟ್‌. ಬ್ರಿಟಿಷರ ಕಾಲದ ಕಟ್ಟಡ. ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಂಡಿದ್ದ, ಗತಕಾಲದ ನೆನಪುಗಳನ್ನು ಕಟ್ಟಿ ಕೊಡುವಂತಿದ್ದ ರೆಸ್ಟೋರೆಂಟ್‌. ದೊಡ್ಡ ದೊಡ್ಡ ಕಿಟಕಿಗಳು, ಮರದ ಪೀಠೊಪಕರಣಗಳು… ಆ ರೆಸ್ಟೋರೆಂಟಿನ ಅಂದ ಹೆಚ್ಚಿಸಿದ್ದವು. ಒಳಗಿದ್ದ ಶಾಂತ ವಾತಾವರಣ ಮನಸ್ಸನ್ನು ಇನ್ನಷ್ಟು ಆಹ್ಲಾದಕ್ಕೆ ಏರಿಸಿತ್ತು. ಹೆಚ್ಚು ಗೌಜು ಗದ್ದಲ ಇಲ್ಲದೇ, ನೆಮ್ಮದಿಯಾಗಿ ಕುಳಿತು ಮಾತಾಡಲು ಅದೊಂದು ಅದ್ಭುತ ತಾಣವೇ. ಅಲ್ಲಿನ ಕಾಫಿಯ ಘಮಕ್ಕೆ ಮೂಗಷ್ಟೇ ಅಲ್ಲ, ಹೃದಯವೂ ಅರಳುವಂಥದ್ದು. “ನೀವು ಯಾವಾಗ್ಲೂ ವಾಟ್ಸಾéಪಿನಲ್ಲಿ ಕಾಫಿ ಕುಡಿಸ್ತೀರಲ್ಲ, ಅದಕ್ಕೇ ಇಲ್ಲಿ ನಿಜವಾದ ಕಾಫಿ ಕುಡಿಸೋಣ ಅಂತ ಕರಕೊಂಡು ಬಂದೆ’ ಎಂದ ಆತ. ಈಕೆ ಬಿಡುವಿಲ್ಲದೆ ನಗತೊಡಗಿದಳು. ಆತನೂ ನಕ್ಕ. “ಏನು ತಗೋತೀರಿ ತಿಂಡಿ?’, ಕೇಳಿದ. “ಏನಾದ್ರೂ ಸರಿ, ಎನಿಥಿಂಗ್‌ ವೆಜ್‌…’ ಎಂದಳು ಈಕೆ. ಮತ್ತೆ ಮಾತು ಶುರು. ಫೇಸ್‌ಬುಕ್‌, ಪ್ರಸಕ್ತ ವಿದ್ಯಮಾನ, ಇತ್ತೀಚೆಗೆ ಕಾಡಿದ ಪುಸ್ತಕ… ಮತ್ತೆ ಮಾತಿನ ಬಸ್ಸನ್ನೇರಿ ಬಂದವು. ಅವಳಿಗಾಗಿ ದೆಹಲಿಯ ಚಾಂದ್ನಿಚೌಕ್‌ನಲ್ಲಿ ಖರೀದಿಸಿದ್ದ ಚೆಂದದ ಶಾಲನ್ನು ತನ್ನ ಬ್ಯಾಗ್‌ನಿಂದ ತೆಗೆದುಕೊಟ್ಟ. ಕಡುಗೆಂಪು ವರ್ಣದ ಹಕ್ಕಿಯ ತುಪ್ಪಳದಂತೆ ಮೃದುವಾಗಿದ್ದ ಶಾಲು ಅದು. ಒಂದು ಥ್ಯಾಂಕ್ಸ್‌ ಹೇಳಿ, ಶಾಲನ್ನು ಮೇಲಿಂದ ಕೆಳಗಿನ ತನಕ ಮುಟ್ಟಿ, ಅದರ ಅಂದ ಹೊಗಳುತ್ತಾ, ಹ್ಯಾಂಡ್‌ಬ್ಯಾಗಿನಲ್ಲಿ ಜೋಪಾನವಾಗಿಟ್ಟಳು ಈ ಜಾಣೆ. ಮತ್ತೆ ಆತ್ಮೀಯ ಮಾತುಕತೆಯ ಹಿಮ್ಮೇಳ.

ಕುಳಿತಲ್ಲೇ ಈಕೆ ತನ್ನ ಸುತ್ತ ನೋಡಿದಳು. ಅಲ್ಲಿ ತನ್ನಂತೆಯೇ ಒಬ್ಬೊಬ್ಬರು ಸಂಗಾತಿಯ, ಗೆಳೆಯರ ಜತೆ ಕಾಫೀ ಹೀರುತ್ತಿದ್ದರು. ತನ್ನಂತೆ ಒಂದೇ ಟೇಸ್ಟು, ಒಂದೇ ರೀತಿಯ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಯೇ ಅವರಿಗೆಲ್ಲ ಗೆಳೆಯ/ ಗೆಳತಿಯರಾಗಿ ಸಿಕ್ಕಿದ್ದಾರಾ? ಎಂಬ ಪ್ರಶ್ನೆ ಈಕೆಯ ಕಣ್ಣಂಚಲ್ಲಿ. ಜಗತ್ತಿನಲ್ಲಿ ಒಂದೇ ರೀತಿ ಏಳು ಮಂದಿ ಇರುತ್ತಾರಂತೆ. ಅಂಥವರು ಒಬ್ಬರಿಗೊಬ್ಬರು ಸಿಕ್ಕಾಗ ಮೂಕವಿಸ್ಮಿತರಾಗುತ್ತಾರಂತೆ. ಆದರೆ, ಒಂದೇ ರೀತಿಯ ಮನಸ್ಸು, ಆಲೋಚನೆ, ಅಭಿರುಚಿ ಇದ್ದವರು ಎದುರು- ಬದರಾಗುವುದು, ಬಾಳಿನ ಪಯಣದಲ್ಲಿ ಜತೆಗಾರರಾಗುವುದು ಅಪರೂಪ. 

ಅವನ ಕಣ್ಣಲ್ಲಿ ಕಣ್ಣಿಟ್ಟು ಆಕೆ ಗುನುಗಿದಳು… “ನೀನು ಸೋಲ್‌ಮೇಟ್‌’!

ವೀಣಾ ರಾವ್‌

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.