ಕಲಾಸಾಧನಾ ಪ್ರಶಸ್ತಿಗೆ  ರೆಂಜಾಳ ರಾಮಕೃಷ್ಣ ರಾವ್‌


Team Udayavani, Sep 23, 2017, 12:20 PM IST

23-Kalavihara9.jpg

ಯಕ್ಷಗಾನ ಕಲಾವಿದರಲ್ಲಿ ಎರಡು ಬಗೆ. ಕೆಲವು ಕಲಾವಿದರು ಒಂದೊಂದು ಪಾತ್ರಗಳಲ್ಲಿ ಮಿಂಚುತ್ತಾರೆ. ಎಲ್ಲ ಪಾತ್ರಗಳಲ್ಲಿಯೂ ರಂಗವನ್ನು ರಂಗೇರಿಸಬಲ್ಲ ಕಲಾವಿದರೂ ಇದ್ದಾರೆ. ಎರಡನೇ ವರ್ಗಕ್ಕೆ ಸೇರಿದವರು ಕಟೀಲು ಮೇಳದ ಪ್ರಸಿದ್ಧ ವೇಷಧಾರಿ ರೆಂಜಾಳ ರಾಮಕೃಷ್ಣ ರಾವ್‌. 

ರೆಂಜಾಳ ರಾಮಕೃಷ್ಣ ರಾವ್‌ ಅಭಿಜಾತ ಕಲಾವಿದ. ಯಕ್ಷಗಾನ ಕಂಡ ಸವ್ಯಸಾಚಿಗಳಲ್ಲೊಬ್ಬರು. ಬಾಲ್ಯದಿಂದಲೇ ಇವರ ಆಸಕ್ತಿ, ಒಲವು ಯಕ್ಷಗಾನ. ಜೀವನ ಅದಕ್ಕೆ ಮುಡಿಪಾಗಿಡಲು ಅಂತರಂಗ ಪ್ರಚೋದಿಸಿರಬೇಕು. ಕುಡ್ಕಾ ಡಿ ವಿಶ್ವನಾಥ ರೈ ಅವರಲ್ಲಿ ಭರತನಾಟ್ಯದ ಬಾಲಾಭ್ಯಾಸ ಪಡೆದರು. ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದೊಂದಿಗೆ ಕೂಡ್ಲು ಮೇಳದಲ್ಲಿ ತಿರುಗಾಟ ಆರಂಭಿಸಿದರು. ಅಡ್ಕಸ್ಥಳ ನಾರಾಯಣ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್‌, ಕೊಕ್ಕಡ ಈಶ್ವರ ಭಟ್‌ ಅವರ ಪಾತ್ರನಿರ್ವಹಣೆಯನ್ನು ಗಮನಿಸಿ, ಯಕ್ಷಗಾನದ ಸರ್ವಾಂಗಗಳನ್ನೂ ಅಭ್ಯಸಿಸಿದರು.

ಮುಂದೆ ಕಡಂದೇಲು ಪುರುಷೋತ್ತಮ ಭಟ್‌, ನೆಡ್ಲೆ ನರಸಿಂಹ ಭಟ್‌, ದಿವಾಣ ಭೀಮ ಭಟ್‌ ಅವರು ರಾಮಕೃಷ್ಣ ರಾವ್‌ ಅವರನ್ನು ತಿದ್ದಿತೀಡಿ ಬೆಳೆಸಿದರು. ಯಕ್ಷ ದಿಗ್ಗಜರಾದ ಬಣ್ಣದ ಕುಟ್ಯಪ್ಪು, ಬಣ್ಣದ ಮಾಲಿಂಗ, ಕುಂಞಿರಾಮ ಮಣಿಯಾಣಿ, ದೇಲಂಪಾಡಿ ಗುಡ್ಡಪ್ಪ ಗೌಡ, ಪೆರುವಾಯಿ ನಾರಾಯಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ ಮಾರ್ಗದರ್ಶನ ಸಿಕ್ಕಿತು. ಕಲ್ಲಾಡಿ ವಿಠಲ ಶೆಟ್ಟಿ ಮತ್ತು ಬಲಿಪ ನಾರಾಯಣ ಭಾಗವತರ ಕೊಡುಗೆ ಮಹತ್ವಪೂರ್ಣವಾಗಿತ್ತು. 

ಮಡಿಕೇರಿ ಚೌಡೇಶ್ವರೀ ಮೇಳ, ಕೂಡ್ಲು ಮೇಳಗಳಲ್ಲಿ ತಿರುಗಾಟದ ಬಳಿಕ  ಕಟೀಲು ಮೇಳ ಒಂದರಲ್ಲೇ ಕಳೆದ 40 ವರ್ಷಗಳ ಕಲಾಸೇವೆಯನ್ನು ಸಲ್ಲಿಸಿದ ರಾಮಕೃಷ್ಣ ರಾವ್‌ ಅವರು ಪ್ರಕೃತ ಹವ್ಯಾಸಿಯಾಗಿ ಕಲಾ ಸೇವೆ ಸಲ್ಲಿಸುತ್ತಿದ್ದಾರೆ.

ಪುರಾಣದ ಆಳ ಅನುಭವವಿದ್ದರೂ ಹಿತಮಿತ ಮಾತುಗಾರಿಕೆ, ಹಾಗೆಯೇ ನಾಟ್ಯಮುಖೇನ ಇಡೀ ರಂಗಸ್ಥಳ ತುಂಬಿಬಿಡುವ ಅವರ ಚಾತುರ್ಯ ಅನನ್ಯ. ಸ್ಪಷ್ಟ ಬಣ್ಣಗಾರಿಕೆ, ಲಾಲಿತ್ಯಪೂರ್ಣ ಹಾವಭಾವ, ನಾಟ್ಯಾಭಿನಯ ಆಕರ್ಷಣೀಯವಾದುದು. ಸರ್ವಾಂಗ ಸುಂದರ ವೇಷಧಾರಿಯಾಗಿ ಇವರು ರಂಗದಲ್ಲಿ ಪಾತ್ರಚಿತ್ರಣ ಮನಮೋಹಕವಾದುದು.

ವಿಟ್ಲ ಸಮೀಪದ ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾನ ಯಕ್ಷಕಲಾ ವಿಶ್ವಸ್ಥ ಮಂಡಳಿ ವತಿಯಿಂದ ನೀಡುವ ಶ್ರೀ ವೀರಾಂಜನೇಯ ಸ್ವಾಮಿ ಕಲಾಸಾಧನಾ ಪ್ರಶಸ್ತಿಯನ್ನು ರೆಂಜಾಳ ರಾಮಕೃಷ್ಣ ರಾವ್‌ ಅವರಿಗೆ ಘೋಷಿಸಲಾಗಿದೆ. ನಾಳೆ, ಸೆ.23ರಂದು ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.